AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿಯಲ್ಲ! ಅದರ ಕ್ರೆಡಿಟ್ ಏನಿದ್ದರೂ ಈ ಸವ್ಯಸಾಚಿಗೆ ಸಲ್ಲಬೇಕು: ಸುರೇಶ್ ರೈನಾ

ದಾದಾ ಈ ತಂಡವನ್ನು ಕಟ್ಟಿದ್ದಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ಅವರು ಮತ್ತು ಧೋನಿ ತಂಡದ ನಾಯಕತ್ವ ವಹಿಸಿ ಪ್ರಭಾವ ಬೀರಿದರು, ಅದು ನಿಜ. ಆದರೆ ತಂಡವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ನಿರ್ಮಿಸಿದ ಶ್ರೇಯಸ್ಸು ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು.

ಟೀಂ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿಯಲ್ಲ! ಅದರ ಕ್ರೆಡಿಟ್ ಏನಿದ್ದರೂ ಈ ಸವ್ಯಸಾಚಿಗೆ ಸಲ್ಲಬೇಕು: ಸುರೇಶ್ ರೈನಾ
ಸುರೇಶ್ ರೈನಾ
ಪೃಥ್ವಿಶಂಕರ
|

Updated on: Jun 13, 2021 | 4:21 PM

Share

ಇಂದು ಭಾರತೀಯ ಕ್ರಿಕೆಟ್ ತಂಡವು ಇರುವ ಸ್ಥಿತಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಕಾರಣ ಎಂದು ಅನೇಕರು ಹೇಳುತ್ತಾರೆ. ಅವರು ಈ ತಂಡಕ್ಕೆ ಅಡಿಪಾಯ ಹಾಕಿದರು ಮತ್ತು ವಿದೇಶದಲ್ಲಿ ಸರಣಿಗಳನ್ನು ಗೆಲ್ಲುವ ಅಭ್ಯಾಸವನ್ನು ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ಭಾರತದ ವಿಶ್ವಕಪ್ -2011ರ ಗೆಲುವಿನ ಭಾಗವಾಗಿದ್ದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಈ ಮಾತನ್ನು ತಳ್ಳಿ ಹಾಕಿದ್ದಾರೆ. ಭಾರತೀಯ ತಂಡದ ಈ ಸ್ಥಿತಿಗೆ ಗಂಗೂಲಿ ಎಂಬ ಮಾತಿಗೆ ರೈನಾ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ತಂಡವನ್ನು ಗಂಗೂಲಿ ಅಲ್ಲ ರಾಹುಲ್ ದ್ರಾವಿಡ್ ಕಟ್ಟಿದ್ದಾರೆ ಎಂದು ಮುಂಬರುವ ತಮ್ಮ ಪುಸ್ತಕದಲ್ಲಿ ರೈನಾ ಈ ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ.

ಕಿರಿಯ ಆಟಗಾರರ ಹಕ್ಕುಗಳಿಗಾಗಿ ರಾಹುಲ್ ಹೋರಾಡುತ್ತಿದ್ದರು ಎಂದು ರೈನಾ ಹೇಳಿದ್ದಾರೆ. ರೈನಾ ಅವರ ಮುಂಬರುವ ಪುಸ್ತಕದ ಆಯ್ದ ಭಾಗಗಳನ್ನು ಪ್ರಿಂಟ್ ಪ್ರಕಟಿಸಿದೆ. ರಾಹುಲ್ ಭಾಯ್ ಯಾವಾಗಲೂ ಕುಟುಂಬದಂತೆಯೇ ಇದ್ದರು. ಅವರು ಕಿರಿಯ ಆಟಗಾರರಿಗಾಗಿ ಹೋರಾಡುತ್ತಿದ್ದರು. ಈ ಹೆಚ್ಚುವರಿ ಪ್ರಯತ್ನಗಳು ಯಾವಾಗಲೂ ಫಲ ನೀಡುತ್ತಿದ್ದವು. ಯುವ ಆಟಗಾರರು ಅವರಿಗೆ ಸಾಕಷ್ಟು ಅರ್ಥವಾಗಿದ್ದರು. ಅವರ ಅಡಿಯಲ್ಲಿ ಎಷ್ಟು ಆಟಗಾರರು ಪ್ರಬುದ್ಧರಾಗಿದ್ದಾರೆಂದು ನೀವು ನೋಡಿದ್ದೀರಿ, ಅದಕ್ಕೆ ಉದಾಹರಣೆ ಎಂಬಂತೆ ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಮುನಾಫ್ ಪಟೇಲ್, ಎಸ್. ಶ್ರೀಶಾಂತ್ ಮತ್ತು ನಾನು ಎಂದು ರೈನಾ ಬರೆದಿದ್ದಾರೆ.

ತಂಡವನ್ನು ರಚಿಸಿದ್ದು ರಾಹುಲ್ ಭಾಯ್ ಸಾಮಾನ್ಯವಾಗಿ, ಜನರು 10-15 ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಭಾರತೀಯ ತಂಡದ ಬಗ್ಗೆ ಮಾತನಾಡುವಾಗಲೆಲ್ಲಾ, ಧೋನಿ ಮತ್ತು ಈ ಮೊದಲು ತಂಡದ ನಾಯಕರಾಗಿದ್ದ ಗಂಗೂಲಿಯನ್ನ ನೆನಪಿಸಿಕೊಳ್ಳುತ್ತಾರೆ. ಇಬ್ಬರೂ ತಂಡವನ್ನು ಕಟ್ಟಿದರು ಮತ್ತು ಭಾರತೀಯ ತಂಡವನ್ನು ಮುಂದಕ್ಕೆ ಕರೆದೊಯ್ದರು ಎಂದು ಹೇಳುತ್ತಾರೆ. ಆದರೆ ನಾನು ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ದಾದಾ ಈ ತಂಡವನ್ನು ಕಟ್ಟಿದ್ದಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ಅವರು ಮತ್ತು ಧೋನಿ ತಂಡದ ನಾಯಕತ್ವ ವಹಿಸಿ ಪ್ರಭಾವ ಬೀರಿದರು, ಅದು ನಿಜ. ಆದರೆ ತಂಡವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ನಿರ್ಮಿಸಿದ ಶ್ರೇಯಸ್ಸು ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು ಎಂದಿದ್ದಾರೆ.

ರಾಹುಲ್ ಸೆಲೆಕ್ಟರ್‌ಗಳೊಂದಿಗೆ ಜಗಳವಾಡುತ್ತಿದ್ದರು ಯುವ ಆಟಗಾರರಿಗಾಗಿ ರಾಹುಲ್ ಸೆಲೆಕ್ಟರ್‌ಗಳೊಂದಿಗೆ ಜಗಳವಾಡುತ್ತಿದ್ದರು ಎಂದು ರೈನಾ ಹೇಳಿದ್ದಾರೆ. ರಾಹುಲ್ ಭಾಯ್ ಅವರು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಲು ಸೆಲೆಕ್ಟರ್‌ಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಅವರು ಯಾವಾಗಲೂ ನಮಗೆ ನೀಡಿದ ಒಂದು ಸಲಹೆಯೆಂದರೆ ರಣಜಿ ಟ್ರೋಫಿ ಸಾಧ್ಯವಾದಾಗಲೆಲ್ಲಾ ಆಡುವುದು, ಉತ್ತಮ ಪ್ರದರ್ಶನ ಮತ್ತು ಸಾಕಷ್ಟು ರನ್ ಗಳಿಸಿ ನಂತರ ಭಾರತಕ್ಕೆ ಹಿಂತಿರುಗಿ ಎಂದು ನಮಗೆ ಸಲಹೆ ನೀಡುತ್ತಿದ್ದರು ಎಂದು ರೈನಾ ಹೇಳಿಕೊಂಡಿದ್ದಾರೆ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ