AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಂಕ್​ ಬಾಲ್​ ಕಂಡ್ರೆ ಕೊರೊನಾ ಬಾಲ್​ ಕಂಡಂತೆ ಹೆದರುವುದೇಕೆ ಟೀಂ ಇಂಡಿಯಾ ಆಟಗಾರರು?

ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಅತೀವ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ ಗಳಿಕೆ ಮಾಡಿತು. ಕೆಲ ಕಾರ್ಟೂನ್​ ಮಂದಿ ಟೀಂ ಇಂಡಿಯಾ ಸೋಲನ್ನು ಭಿನ್ನವಾಗಿ ಚಿತ್ರಿಸಿದ್ದಾರೆ.

ಪಿಂಕ್​ ಬಾಲ್​ ಕಂಡ್ರೆ ಕೊರೊನಾ ಬಾಲ್​ ಕಂಡಂತೆ ಹೆದರುವುದೇಕೆ ಟೀಂ ಇಂಡಿಯಾ ಆಟಗಾರರು?
ಕಾರ್ಟೂನ್​
ರಾಜೇಶ್ ದುಗ್ಗುಮನೆ
|

Updated on:Dec 20, 2020 | 4:15 PM

Share

ಅಡಿಲೇಡ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕೇವಲ 36 ರನ್ ಕಲೆ ಹಾಕುವ ಮೂಲಕ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೋರ್​ ಗಳಿಸಿದ ಕುಖ್ಯಾತಿ ಪಾತ್ರವಾಯಿತು. ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಅನೇಕರು ಅಪಸ್ವರ ತೆಗೆದರೆ, ಇನ್ನೂ ಕೆಲವರು ಒಟ್ಟಾರಿ ಟೀಂ ಇಂಡಿಯಾವನ್ನು ಶಪಿಸಿದ್ದಾರೆ. ಈ ಮಧ್ಯೆ ಟ್ವಿಟರ್​ನಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಹೀಗಿರುವಾಗ ಕೆಲ ಕಾರ್ಟೂನ್​ ಮಂದಿ ಟೀಂ ಇಂಡಿಯಾ ಸೋಲನ್ನು ಭಿನ್ನವಾಗಿ ಚಿತ್ರಿಸಿದ್ದಾರೆ.

ಮೊದಲನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ಸಾಧಾರಣ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಅತೀವ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ ಗಳಿಕೆ ಮಾಡಿತು. ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ಒಂದಕಿ ದಾಟಿಲ್ಲ! ಎರಡನೇ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಕೆ ಮಾಡಿದ್ದು ಮಯಾಂಕ್​ ಅಗರ್​ವಾಲ್​. ಅವರು ಬಾರಿಸಿದ್ದು 9 ರನ್​ ಮಾತ್ರ!

ಮೊದಲ ಇನ್ನಿಂಗ್ಸ್​ನಲ್ಲಿ 244 ರನ್​ ಬಾರಿಸಿದ್ದ ಭಾರತ, ಆಸ್ಟ್ರೇಲಿಯಾವನ್ನು ಕೇವಲ 191ರನ್​ಗಳಿಗೆ ಕಟ್ಟಿ ಹಾಕಿತ್ತು. ಈ ಮೂಲಕ 53 ರನ್​ಗಳ ಲೀಡ್​ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಓಪನರ್​ಗಳಾಗಿ ಇಳಿದ ಪೃಥ್ವಿ ಶಾ ಹಾಗೂ ಮಯಾಂಕ್​ ಅನುಕ್ರಮವಾಗಿ ನಾಲ್ಕು ಹಾಗೂ ಒಂಭತ್ತು ರನ್​ ಗಳಿಸಿದರು. ಶಾ ಔಟ್​ ಆದ ನಂತರ ಬಂದ ಬೂಮ್ರಾ ಎರಡು ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಪೂಜಾರ ಡಕ್​ಔಟ್​ ಆದರೆ, ನಾಯಕ ಕೊಹ್ಲಿ ನಾಲ್ಕು ರನ್​ ಬಾರಿಸಿ ಪೆವಿಲಿಯನ್​ ಸೇರಿದರು. ಉಪನಾಯಕ ರಹಾನೆ ಶೂನ್ಯ ಸುತ್ತಿದರೆ, ಹನುಮ ವಿಹಾರಿ 8 ರನ್​ ಗಳಿಸಲು ಪರದಾಡಿದರು. ಅಶ್ವಿನ್​ ಸೊನ್ನೆ ಸುತ್ತಿದರು. ಕೊನೆಯ ವಿಕೆಟ್​ನಲ್ಲಿ ಆಡುತ್ತಿದ್ದ ಉಮೇಶ್​ ನಾಲ್ಕು ರನ್​ ಗಳಿಸಿದರು. 1 ರನ್​ ಬಾರಿಸಿದ್ದ ಶಮಿ ಗಾಯಗೊಂಡು ಪೆವಿಲಿಯನ್​ ಸೇರಿದರು. ಕೊನೆಗೆ ಭಾರತ 36 ರನ್​ ಗಳಿಸಲಷ್ಟೇ ಶಕ್ತವಾಯಿತು.

ಈ ಬಗ್ಗೆ ಕಾರ್ಟೂನ್​ ಬಿಡಿಸಿರುವ ವ್ಯಂಗ್ಯ ಚಿತ್ರಕಾರ ವಿವೇಕ ಜಿ. ಸಿದ್ದಾಪುರ​, ಇದು ಪಿಂಕ್​ ಬಾಲ್​ ಅಲ್ಲ ಕೊರೊನಾ ಬಾಲ್​ ಎಂದು ವರ್ಣಿಸಿದ್ದಾರೆ. ಅವರು ಹೀಗೆ ಹೇಳೋಕೆ ಕಾರಣ ಕೂಡ ಇದೆ. ಕೊರೊನಾ ಎಂದರೆ ಸಾಕು ಎಲ್ಲರೂ ಮಾರುದ್ದ ಹೋಗಿ ನಿಲ್ಲುತ್ತಾರೆ. ಅದೇ ರೀತಿ, ನಿನ್ನೆಯ ಪಂದ್ಯದಲ್ಲಿ ಎಲ್ಲರೂ ಬೇಗ ಬೇಗ ಔಟ್​ ಆದರು. ಎಲ್ಲ ಆಟಗಾರರು ಬಾಲ್​ಅನ್ನು ಕೊರೊನಾ ಬಾಲ್​ ಅಂತೆ ನೋಡಿದ್ದರು! ಇದಕ್ಕಾಗಿಯೇ ಅದನ್ನು ಮುಟ್ಟುವ ಪ್ರಯತ್ನ ಮಾಡದೆ ಔಟ್​ ಆದರು ಎಂದು ವ್ಯಂಗ್ಯ ಚಿತ್ರದ ಮೂಲಕ ಹೇಳಿದ್ದಾರೆ. ಈ ವ್ಯಂಗ್ಯ ಚಿತ್ರ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

India vs Australia 2020: ಈ ಸೋಲು ಸುಲಭಕ್ಕೆ ಮರೆತು ಹೋಗುವಂಥದಲ್ಲ!

Published On - 2:59 pm, Sun, 20 December 20

Follow Us
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ