AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ರಾಹುಲ್​ ಶೂನ್ಯಕ್ಕೆ ಔಟ್​! 2016 ರಲ್ಲಿ ನಡೆದಿದ್ದ ಆ ಘಟನೆ, ನಿನ್ನೆಯ ಪಂದ್ಯದಲ್ಲೂ ಮರುಕಳಿಸಿತು..!

India vs England: 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ 20 ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಮಂದೀಪ್ ಸಿಂಗ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದು ಮಂದೀಪ್ ಅವರ ಮೊದಲ ಪಂದ್ಯವಾಗಿತ್ತು. ಆಗಲೂ ರಾಹುಲ್ ಖಾತೆ ತೆರೆಯದೆ ಔಟ್ ಆಗಿದ್ದರು.

India vs England: ರಾಹುಲ್​ ಶೂನ್ಯಕ್ಕೆ ಔಟ್​! 2016 ರಲ್ಲಿ ನಡೆದಿದ್ದ ಆ ಘಟನೆ, ನಿನ್ನೆಯ ಪಂದ್ಯದಲ್ಲೂ ಮರುಕಳಿಸಿತು..!
ಕೆ. ಎಲ್ ರಾಹುಲ್
ಪೃಥ್ವಿಶಂಕರ
|

Updated on: Mar 15, 2021 | 1:28 PM

Share

ಅಹಮದಾಬಾದ್‌: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಏಕೈಕ ಆಟಗಾರ ಕನ್ನಡಿಗ ಕೆ ಎಲ್​ ರಾಹುಲ್​ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ನಾಯಕನಾಗಿರುವ ರಾಹುಲ್​, ಕಳೆದ ಆವೃತ್ತಿಯಲ್ಲಿ ತಾವು ತೋರಿದ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇತ್ತೀಚೆಗೆ ಅದ್ಯಾಕೋ ರಾಹುಲ್​ ಅವರ ನಸೀಬು ಸರಿ ಇಲ್ಲ ಎಂದು ಕಾಣುತ್ತದೆ. ಟೀಂ ಇಂಡಿಯಾ ಪರ ಆರಂಭಿಕನಾಗಿ ಬ್ಯಾಟಿಂಗ್​ಗೆ ಇಳಿಯುವ ರಾಹುಲ್​ ಎರಡಂಕಿ  ದಾಟಲಾಗದೆ ಬೇಗನೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ತೆರಳುತ್ತಿದ್ದಾರೆ. ಇದಕ್ಕೆ ರಾಹುಲ್​ ಅವರ ಕಳೆದ 3 ಇನ್ನಿಂಗ್ಸ್​ಗಳೇ ಸಾಕ್ಷಿ ಆಗಿವೆ. ರಾಹುಲ್​ ಕಳೆದ 3 ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 0,1,0 ರನ್​ ಗಳಿಸಿದ್ದಾರೆ.

ರಾಹುಲ್​ ಬ್ಯಾಟ್ ಸದ್ದು ಮಾಡಲಿಲ್ಲ.. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ರಾಹುಲ್​ ಬ್ಯಾಟ್ ಸದ್ದು ಮಾಡಲಿಲ್ಲ. ಕೆ. ಎಲ್ ರಾಹುಲ್ ಮತ್ತೊಮ್ಮೆ ಎರಡು ಅಂಕಿಗಳನ್ನು ದಾಟಲು ವಿಫಲರಾದರು. ಎರಡನೇ ಟಿ20 ಪಂದ್ಯದಲ್ಲಿ ರಾಹುಲ್​ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಈ ರೀತಿಯಾಗಿ, ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ರಾಹುಲ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಅವರು ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ 0,1 ಮತ್ತು 0 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ರಾಹುಲ್ ಕೇವಲ 1 ರನ್​ಗೆ ಸುಸ್ತಾದರು.

ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.. ಎರಡನೇ ಟಿ20 ಪಂದ್ಯದಲ್ಲಿ ಕೆ. ಎಲ್ ರಾಹುಲ್ ಅವರನ್ನು ಮೊದಲ ಓವರ್‌ನ ಐದು ಎಸೆತಗಳಲ್ಲಿ ಸ್ಯಾಮ್ ಕರನ್ ರನ್​ ನೀಡದೆ ಕಟ್ಟಿಹಾಕಿದರು. ಮೊದಲ ಐದು ಎಸೆತಗಳನ್ನು ಇನ್​ಸ್ವಿಂಗ್​ ಬೌಲಿಂಗ್​ ಮಾಡಿದ ಕರನ್ ಕೊನೆಯ ಎಸೆತವನ್ನು ಔಟ್​ಸ್ವಿಂಗ್​ ಮಾಡಿದರು. ಕರನ್​ ಅವರ ಈ ತಂತ್ರವನ್ನು ಅರಿಯದ ರಾಹುಲ್​, ಬಾಲನ್ನು ಡಿಫೆಂಡ್​ ಮಾಡಲು ಹೋಗಿ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು. ತಮ್ಮ ಕಳಪೆ ಆಟದಿಂದ ತೀರ ನೋವಿಗೊಳಗಾದ ರಾಹುಲ್​ ಪೆವಿಲಿಯನ್​ಗೆ ತೆರಳುವವರೆಗೂ ತಮ್ಮ ತಲೆಯನ್ನು ಅಲ್ಲಾಡಿಸುತ್ತಾ ನಡೆದು ಸಾಗಿದರು. ರಾಹುಲ್ ತಮ್ಮ ವೃತ್ತಿಜೀವನದ ಮೊದಲ 40 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ ಈಗ ಅವರ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯದೆ ಎರಡು ಬಾರಿ ಔಟಾಗಿದ್ದಾರೆ.

ರಾಹುಲ್ ಶೂನ್ಯ ಸಂಪಾದನೆ ಹಿಂದಿರುವ ಅದ್ಭುತ ಕಥೆ ಶೂನ್ಯಕ್ಕೆ ಔಟಾದ ನಂತರ ರಾಹುಲ್ ಕಳಪೆ ದಾಖಲೆ ನಿರ್ಮಿಸಿದರು. ಆರು ಎಸೆತಗಳನ್ನು ಆಡಿದ ನಂತರವೂ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಅತಿ ಹೆಚ್ಚು ಬಾಲ್​ಗಳನ್ನು ಎದುರಿಸಿ ರನ್​ ಗಳಿಸದೆ ಔಟಾದ ಆಟಗಾರನೆಂಬ ಕುಖ್ಯಾತಿಗೆ ರಾಹುಲ್​ ಭಾಜನರಾದರು. ರಾಹುಲ್​ ಹಿಂದೆ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆಶಿಶ್ ನೆಹ್ರಾ ಮತ್ತು ರೋಹಿತ್ ಶರ್ಮಾ ಈ ದಾಖಲೆ ಮಾಡಿದ್ದಾರೆ.

ಒಂದು ಕುತೂಹಲಕಾರಿ ಸಂಗತಿ ಎಂದರೆ, 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ 20 ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಮಂದೀಪ್ ಸಿಂಗ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದು ಮಂದೀಪ್ ಅವರ ಮೊದಲ ಪಂದ್ಯವಾಗಿತ್ತು. ಆಗಲೂ ರಾಹುಲ್ ಖಾತೆ ತೆರೆಯದೆ ಔಟ್ ಆಗಿದ್ದರು. ಈಗ ಇಶಾನ್ ಕಿಶನ್ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿ, ರಾಹುಲ್​ ಜೊತೆ ಇನ್ನಿಂಗ್ಸ್ ಪ್ರಾರಂಭಿಸಿದರು. ಇಲ್ಲಿಯೂ ರಾಹುಲ್ ಶೂನ್ಯ ಸುತ್ತಿದರು.

ಇದನ್ನೂ ಓದಿ:India vs England: ಕಿಂಗ್​ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ.. T20 ಯಲ್ಲಿ 3000 ರನ್​ ಬಾರಿಸಿದ ಮೊದಲ ಆಟಗಾರ ನಮ್ಮ ವಿರಾಟ್​!

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು