AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!

ಹಾಗೆ ನೋಡಿದರೆ, ಪಿಚ್​ ಬ್ಯಾಟ್ ಮಾಡಲಾರದಷ್ಟು ಅಪಾಯಕಾರಿಯೇನೂ ಅಗಿರಲಿಲ್ಲ, ಆದರೆ, ರೂಟ್ ಅವರ ವಿಕೆಟ್ ಪತನ ಇಂಗ್ಲೆಂಡ್​ ಆಟಗಾರರಲ್ಲಿ ಭೀತಿ ಹುಟ್ಟಿಸಿದ್ದು ನಿಜ.

India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!
ಅಕ್ಷರ್​ ಪಟೇಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Feb 24, 2021 | 11:05 PM

Share

ಅಹಮದಾಬಾದ್: ಭಾರತದ ಸ್ಪಿನ್ನರ್​ಗಳು ಇಂಗ್ಲೆಂಡಿನ ಬ್ಯಾಟ್ಸ್​ಮನ್​ಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದನ್ನು ಮುಂದುವರೆಸಿದ್ದಾರೆ. ವಿಶ್ವದ ಅತಿದೊಡ್ಡ ಸ್ಟೇಡಿಯಂ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ಫೆ.24) ಆರಂಭಗೊಂಡ ಮೂರನೇ ಟೆಸ್ಟ್​ ಪಂದ್ಯದ ಮೊದಲ ದಿನವಾಗಿದ್ದ ಇಂದು ಪ್ರವಾಸಿ ತಂಡದ ಬ್ಯಾಟ್ಸ್​ಮನ್​ಗಳು ಭಾರತದ ಸ್ಪಿನ್ ಜೋಡಿ ಆಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಕರಾರವಾಕ್ ದಾಳಿಗೆ ತರಗೆಲೆಗಳಂತೆ ಉದುರಿ ಡಿನ್ನರ್ ವಿರಾಮಕ್ಕೆ ಸ್ವಲ್ಪ ಮೊದಲು 112 ರನ್​ಗಳಿಗೆ ಆಲೌಟ್​ ಆದರು.

ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ ನೀಳಕಾಯದ ಪಟೇಲ್ 38 ರನ್​ಗಳಿಗೆ 6 ವಿಕೆಟ್​ ಪಡೆದರೆ, ಅಶ್ವಿನ್ 26ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಪರ ಸರಣಿಯಲ್ಲಿ ಮೊದಲ ಟೆಸ್ಟ್​ ಅಡುತ್ತಿರುವ ಜಕ್​ ಕ್ರಾಲೀ ಮಾತ್ರ ಭಾರತದ ಬೌಲರ್​ಗಳನ್ನು ವಿಶ್ವಾಸದಿಂದ ಎದುರಿಸಿ 53 ರನ್ ಬಾರಿಸಿದರು.

ಟೀ ವಿರಾಮಕ್ಕೆ (ದಿನದಾಟದ ಮೊದಲ ಸೆಷನ್) ಸ್ವಲ್ಪ ಮೊದಲು ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಅಶ್ವಿನ್ ಔಟ್​ ಮಾಡಿದಾಗ ಪ್ರವಾಸಿ ತಂಡದ ಸ್ಕೋರು 3/74 ಅಗಿತ್ತು. ಆದರೆ ವಿರಾಮದ ನಂತರ ಭಾರತದ ಸ್ಪಿನ್ ಜೋಡಿಯು ತನ್ನ ಕೈಚಳಕ ಮೆರೆಯಿತು. ಹಾಗೆ ನೋಡಿದರೆ, ಪಿಚ್​ ಬ್ಯಾಟ್ ಮಾಡಲಾರದಷ್ಟು ಅಪಾಯಕಾರಿಯೇನೂ ಅಗಿರಲಿಲ್ಲ, ಆದರೆ, ರೂಟ್ ಅವರ ವಿಕೆಟ್ ಪತನ ಇಂಗ್ಲೆಂಡ್​ ಆಟಗಾರರಲ್ಲಿ ಭೀತಿ ಹುಟ್ಟಿಸಿದ್ದು ನಿಜ. ಟೀ ವಿರಾಮದ ನಂತರ ಪ್ರವಾಸಿಗರು ಕೇವಲ 38 ರನ್​ಗಳಿಗೆ 7 ವಿಕೆಟ್​ಗಳನ್ನು ಕಳೆದುಕೊಂಡರು. ಅವರು ಬ್ಯಾಟ್​ ಮಾಡಿದ ಪರಿ ನೋಡಿದರೆ, ಪಿಂಕ್-ಬಾಲ್ ಟೆಸ್ಟ್​​ ಕ್ರಿಕೆಟ್​ಗೆ ಇನ್ನೂ ಒಗ್ಗಿಕೊಳ್ಳಬೇಕಿದೆ ಎನ್ನುವುದು ಸ್ಪಷ್ಟವಾಯಿತು.

ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸ್ಟೇಡಿಯಂ ಅನ್ನು ಉದ್ಘಾಟಿಸಿದ ನಂತರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೂಟ್ ತಮ್ಮ ನಿರ್ಧಾರಕ್ಕೆ ಪರಿತಪಿಸಿರುತ್ತಾರೆ. ಟೆಸ್ಟ್​ ಕರೀಯರ್​ನ 100ನೇ ಪಂದ್ಯವನ್ನು ಇಂದು ಆಡುತ್ತಿರುವ ಇಶಾಂತ್​ ಶರ್ಮ ತಮ್ಮ ಎರಡನೇ ಓವರಿನಲ್ಲೇ ಅರಂಭ ಆಟಗಾರ ಡಾಮಿನಿಕ್ ಸಿಬ್ಲೀ ಅವರನ್ನು ಖಾತೆ ತೆರೆಯುವ ಅವಕಾಶವನ್ನೂ ನೀಡದೆ ಪೆವಲಿಯನ್​ಗೆ ಕಳಿಸಿದರು. ಸ್ಲಿಪ್ಸ್​ನಲ್ಲಿ ಅವರು ನೀಡಿದ ಕ್ಯಾಚನ್ನು ರೋಹಿತ್ ಶರ್ಮ ಹಿಡಿದರು.

Ravichandran Ashwin

ರವಿಚಂದ್ರನ್ ಅಶ್ವಿನ್

ಅವರ ಸ್ಥಾನದಲ್ಲಿ ಆಡಲು ಬಂದ ಜಾನಿ ಬೇರ್​ಸ್ಟೋ ಸಹ ರನ್ ಗಳಿಸದೆ ಪಟೇಲ್​ಗೆ ಮೊದಲ ಬಲಿಯಾದರು. ಮತ್ತೊಂದೆಡೆ ಕ್ರಾಲೀ ಆಕರ್ಷಕ ಬೌಂಡರಿಗಳನ್ನು ಬಾರಿಸುತ್ತಾ ವಿಶ್ವಾಸದ ಪ್ರತಿರೂಪದಂತೆ ಗೋಚರಿಸಿದರು. ರೂಟ್​ರೊಂದಿಗೆ 3ನೇ ವಿಕೆಟ್​ಗೆ ಅವರು 47 ರನ್​ ಸೇರಿಸಿದರು. ಏತನ್ಮಧ್ಯೆ, ಕ್ರಾಲೀ ತಮ್ಮ ಟೆಸ್ಟ್​ ಕರೀಯರ್​ನ 4ನೇ ಅರ್ಧ ಶತಕ ಪೂರೈಸಿದರು. ಅವರ ಡ್ರೈವ್ ಮತ್ತು ಲೆಗ್​ ಸೈಡ್​ನಲ್ಲಿ ಆಡಿದ ಫ್ಲಿಕ್​ಗಳು ಮನಮೋಹಕವಾಗಿದ್ದವು. ರೂಟ್​ ಸಹ ಆತ್ಮವಿಶ್ವಾಸದಿಂದ ಆಡುತ್ತಿದ್ದರಾದರೂ ಅಶ್ವಿನ್ ಅವರ ಎಸೆತವೊಂದು ಅವರನ್ನು ಎಲ್​ಬಿ ಬಲೆಗೆ ಕೆಡವಿತು.

ಟೀ ವಿರಾಮದ ನಂತರ ಮೊದಲು ಔಟಾಗಿದ್ದು ಕ್ರಾಲೀ. 84 ಎಸೆತಗಳಲ್ಲಿ 53 ರನ್ ಬಾರಿಸಿದ (10 ಬೌಂಡರಿಗಳು) ಅವರು ಪಟೇಲ್​ಗೆ ಎರಡನೇ ಬಲಿಯಾದರು. ಅದಾದ ನಂತರ ಇಂಗ್ಲೆಂಡ್​ ಆಟಗಾರರ ಮೆರವಣಿಗೆ ಶುರುವಾಯಿತು. ಪಟೇಲ್ ಮತ್ತು ಆಶ್ವಿನ್ ಹೆಣೆದ ಬಲೆಯಲ್ಲಿ ಒಬ್ಬರಾದ ನಂತರ ಒಬ್ಬರು ಬಿದ್ದರು. ಯಾರಿಂದಲೂ ಉಲ್ಲೇಖಿಸುವಂಥ ಕಾಣಿಕೆ ಬರಲಿಲ್ಲ. ಕೆಲವು ಬ್ಯಾಟ್ಸ್​ಮನ್​ಗಳು ಸ್ಪಿನರ್​ಗಳ ಎಸೆತಗಳನ್ನು ಮೈದಾನದಿಂದ ಆಚೆ ಬಾರಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು.

ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ ಎಡಗೈ ಸ್ಪಿನ್ನರ್ ಪಟೇಲ್ ಎರಡನೇ ಬಾರಿ 5 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಪಟೇಲ್ ಮತ್ತು ಅಶ್ವಿನ್ ತಮ್ಮ ನಡುವೆ 37.4 ಓವರ್​ಗಳನ್ನು ಬೌಲ್​ ಮಾಡಿ 64 ರನ್​ಗಳನ್ನು ನೀಡಿ 9 ವಿಕೆಟ್​ ಪಡೆದರು. ಡಿನ್ನರ್ ಅವಧಿಗೆ ಕೊಂಚ ಮೊದಲು ಭಾರತದ ಪರ ಬ್ಯಾಟಿಂಗ್ ಆರಂಭಿಸಿದ ಭಾರತೀಯರು ಯಾವುದೇ ಅತಂಕವಿಲ್ಲದೆ ಇಂಗ್ಲೆಂಡ್ ಬೌಲರ್​ಗಳನ್ನು ಎದುರಿಸಿದರು.

ಈವರೆಗಿನ ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ (ಪ್ರಥಮ ಇನ್ನಿಂಗ್ಸ್) 112, (ಜ್ಯಾಕ್ ಕ್ರಾಲೀ 53, ಜೋ ರೂಟ್ 17ಮ ಅಕ್ಷರ್ ಪಟೇಲ್ 6/38 ರವಿಚಂದ್ರನ್ ಅಶ್ವಿನ್ 3/26)

ಇದನ್ನೂ ಓದಿIndia vs England: ಮೊದಲ ಇನ್ನಿಂಗ್ಸ್‌ನಲ್ಲಿ.. ಟೀಂ ಇಂಡಿಯಾ ಇಂದೇ ಮುನ್ನಡೆ ಸಾಧಿಸಲಿದೆಯಾ!?

Published On - 10:15 pm, Wed, 24 February 21

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ