AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಗವಾಸ್ಕರ್ ಮಾತು ಕೇಳದೆ ಮಣ್ಣುಮುಕ್ಕಿದ ಭಾರತ; ಕೊಹ್ಲಿ ಪಡೆ ತಪ್ಪಿನ ಬಗ್ಗೆ ಮೊದಲೇ ಎಚ್ಚರಿಸಿದ್ದ ತಜ್ಞರು

WTC Final: ಹವಾಮಾನದ ಪ್ರಕಾರ ಭಾರತ ತಂಡವು ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಕಣಕ್ಕಿಳಿಸಬೇಕು. ಏಕೆಂದರೆ ನ್ಯೂಜಿಲೆಂಡ್ ಬೌಲರ್‌ಗಳಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಿದೆ ಎಂದಿದ್ದರು.

WTC Final: ಗವಾಸ್ಕರ್ ಮಾತು ಕೇಳದೆ ಮಣ್ಣುಮುಕ್ಕಿದ ಭಾರತ; ಕೊಹ್ಲಿ ಪಡೆ ತಪ್ಪಿನ ಬಗ್ಗೆ ಮೊದಲೇ ಎಚ್ಚರಿಸಿದ್ದ ತಜ್ಞರು
ವಿಕೆಟ್ ಪಡೆದ ಸಂತಸದಲ್ಲಿ ಟೀಂ ಇಂಡಿಯಾ ಆಟಗಾರರು
ಪೃಥ್ವಿಶಂಕರ
| Edited By: |

Updated on: Jun 24, 2021 | 9:52 AM

Share

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್​ನಲ್ಲಿ ಭಾರತ ಕಿವೀಸ್ ವಿರುದ್ಧ ಹೀನಾಯವಾಗಿ ಸೋತು ಚೊಚ್ಚಲ ಟೆಸ್ಟ್ ಚಾಂಪಿಯನ್ ಆಗುವುದನ್ನು ತಪ್ಪಿಸಿಕೊಂಡಿದೆ. ಆದರೆ ಈಗ ಟೀಂ ಇಂಡಿಯಾ ಸುದ್ದಿಯಲ್ಲಿರುವುದು ಗೊತ್ತಿದ್ದೂ ಮಾಡಿಕೊಂಡ ಯಡವಟ್ಟಿನಿಂದ. ಅದೇನೆಂದರೆ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ನೀಡಿದ್ದ ಸಲಹೆಯನ್ನು ಟೀಂ ಇಂಡಿಯಾ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸದೇ ಇದ್ದದ್ದು. ಅಷ್ಟಕ್ಕೂ ಗವಾಸ್ಕರ್ ನೀಡಿದ್ದ ಸಲಹೆ ಏನು? ಇಲ್ಲಿದೆ ನೋಡಿ

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಒಳಗೊಂಡ ತಂಡವನ್ನು ಟೀಂ ಇಂಡಿಯಾ ಘೋಷಿಸಿತ್ತು. ಆದರೆ ಸೌತಾಂಪ್ಟನ್‌ನಲ್ಲಿ ನಿರಂತರ ಮಳೆಯ ನಂತರ ಪರಿಸ್ಥಿತಿ ಬದಲಾಗಿತ್ತು. ಈ ಬಗ್ಗೆ ಮುನ್ಸೂಚನೆ ನೀಡಿದ ಗವಾಸ್ಕರ್, ಹವಾಮಾನದ ಪ್ರಕಾರ ಭಾರತ ತಂಡವು ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಕಣಕ್ಕಿಳಿಸಬೇಕು. ಏಕೆಂದರೆ ನ್ಯೂಜಿಲೆಂಡ್ ಬೌಲರ್‌ಗಳಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಿದೆ ಎಂದಿದ್ದರು.

ಸ್ಪಿನ್ನರ್ ಅನ್ನು ಹೊರಗಿಡಬಹುದು ಆಜ್ ತಕ್​ನೊಂದಿಗಿನ ಸಂಭಾಷಣೆಯಲ್ಲಿ ಸುನಿಲ್ ಗವಾಸ್ಕರ್, ಪ್ರಸ್ತುತ ರಿಷಭ್ ಪಂತ್ ಆರನೇ ಸ್ಥಾನದಲ್ಲಿದ್ದಾರೆ ಆದರೆ ಅವರನ್ನು ಏಳನೇ ಸ್ಥಾನಕ್ಕೆ ವರ್ಗಾಯಿಸಬೇಕು ಮತ್ತು ಹೆಚ್ಚುವರಿ ಬ್ಯಾಟ್ಸ್‌ಮನ್‌ಗೆ ಅವಕಾಶ ನೀಡಬೇಕು. ಹವಾಮಾನಕ್ಕೆ ಅನುಗುಣವಾಗಿ, ಸ್ಪಿನ್ನರ್ ಅನ್ನು ತಂಡದಿಂದ ಕೈಬಿಡಬಹುದು. ಅಲ್ಲದೆ, ಪರಿಸ್ಥಿತಿಯ ಲಾಭ ಪಡೆಯಲು, ಟಾಸ್ ಗೆದ್ದ ನಂತರ, ಅವರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಬೇಕು ಎಂದು ಗವಾಸ್ಕರ್ ಹೇಳಿದ್ದರು. ಉದಾಹರಣೆಯನ್ನು ನೀಡುತ್ತಾ ಸುನಿಲ್ ಗವಾಸ್ಕರ್, ಕ್ಯಾಪ್ಟನ್ ಆಗಿ ನಾನು ಸ್ಪಿನ್ನರ್​ಗೆ ಅವಕಾಶ ನೀಡಬೇಕೆ ಅಥವಾ ಬ್ಯಾಟ್ಸ್‌ಮನ್​ಗೆ ಅವಕಾಶ ನೀಡಬೇಕೆ ಎಂದು ನಾನು ಗೊಂದಲಕ್ಕೊಳಗಾದಾಗ, ನಾನು ಎದುರಾಳಿ ತಂಡದ ನಾಯಕನ ಆಡುವ ಇಲೆವೆನ್ ಅನ್ನು ನೋಡುತ್ತಿದ್ದೆ ಮತ್ತು ಟಾಸ್ ಮಾಡುವ ಮೊದಲು ನಾನು ಅವನ ತಂತ್ರವನ್ನು ಬಳಸುತ್ತಿದೆ ಮತ್ತು ತಂಡದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದಿದ್ದರು.

ಟೀಂ ಇಂಡಿಯಾ ಆಲ್​ರೌಂಡರ್ಸ್​ ಕಳಪೆ ಪ್ರದರ್ಶನ ಗವಾಸ್ಕರ್ ಮಾತಿನಂತೆಯೇ ಈ ಪಂದ್ಯದಲ್ಲಿ ಮಿಂಚಿದ್ದು ಕೇವಲ ವೇಗಿಗಳು ಅಷ್ಟೇ. ಉಭಯ ತಂಡಗಳಲ್ಲು ವೇಗದ ಬೌಲರ್​ಗಳು ರನ್​ಗಳಿಗೆ ಕಡಿವಾಣ ಹಾಕುವುದರಿಂದ ಹಿಡಿದು ವಿಕೆಟ್ ತೆಗೆಯುವುದರಲ್ಲೂ ಯಶಸ್ವಿಯಾದರು. ಆದರೆ ಟೀಂ ಇಂಡಿಯಾದಲ್ಲಿ ಬಳಸಿಕೊಂಡ ಸ್ಪಿನ್ನರ್​ಗಳಲ್ಲಿ ಅಶ್ವಿನ್​ ಕೊಂಚ ತಂಡಕ್ಕೆ ಬೌಲಿಂಗ್​ನಲ್ಲಿ ಯಶಸ್ವಿಯಾದರೆ ಹೊರತು ಬ್ಯಾಟಿಂಗ್​ನಲ್ಲಿ ಮಿಂಚಲಿಲ್ಲ. ಹಾಗೆಯೇ ಮತ್ತೊಬ್ಬ ಆಲ್​ರೌಂಡರ್​ ಆಗಿ ಕಣಕ್ಕಿಳಿದಿದ್ದ ಜಡೇಜಾ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರಸ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ:

WTC Final : ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು; ಸೋಲಿನ ಬೆನ್ನಲ್ಲೇ ಕೊಹ್ಲಿ ಹೀಗಂದಿದ್ದು ಯಾರಿಗೆ?

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ