IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ. ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ […]

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ
ಸಾಧು ಶ್ರೀನಾಥ್​

Updated on: Sep 12, 2020 | 9:51 AM

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ.

ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು!
ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ ಹೋಯ್ತು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಪ್ರಾಕ್ಟೀಸ್​ಗೆ ಹೊಸ ಬಾಲ್ ತಂದಿದ್ದಾರೆ.

ಇನ್ನು, ಧೋನಿ ಸಿಕ್ಸರ್ ಸಿಡಿಸಿ ಬಾಲ್ ಅನ್ನ ಮೈದಾನದಾಚೆ ಹೊರಗಟ್ಟಿದ್ದನ್ನ ನೋಡಿದ ಮುರಳಿ ವಿಜಯ್, ಚೆನ್ನೈ ಟೀಮ್ ಮ್ಯಾನೇಜರ್ ರಸ್ಸೆಲ್ ರಾಧಾಕೃಷ್ಣನ್ ಬಳಿ, ಇದು ಪವರ್ ಅಲ್ಲಾ.. ಟೈಮಿಂಗ್ಸ್ ಎಂದು ಕೊಂಡಾಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us