AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರಹಂಕಾರದ ರೈನಾ ಜಾಗಕ್ಕೆ ಬರ್ತಿದ್ದಾನೆ ವಿಶ್ವದ ನಂ.1 ಟಿ-20 ಬ್ಯಾಟ್ಸ್​ಮನ್​​

ಚೆನ್ನೈ ಫ್ರಾಂಚೈಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ತವರಿಗೆ ವಾಪಸ್ ಬಂದಿರೋ ಸುರೇಶ್ ರೈನಾಗೆ, ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿನ ಅರಿವಾಗಿ ರೈನಾ, ಮತ್ತೆ ಚೆನ್ನೈ ತಂಡವನ್ನ ಸೇರಿಕೊಳ್ಳೋ ಆಸೆಯಿಂದ ಅಭ್ಯಾಸ ಮಾಡ್ತಿದ್ದಾರೆ. ಆದ್ರೀಗ ರೈನಾಗೆ ಚೆನ್ನೈ ತಂಡದ ಬಾಗಿಲು ಬಹುತೇಕ ಮುಚ್ಚೋದು ಖಚಿತವಾಗಿದೆ. ಬಾಲ್ಕನಿ ರೂಮ್ ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ, ಅರ್ಧಕ್ಕೆ ಚೆನ್ನೈ ತಂಡವನ್ನ ಬಿಟ್ಟು ಬಂದಿದ್ದ ರೈನಾ ಈಗ ತಮ್ಮ ತಪ್ಪಿಗೆ ಪಶ್ಚಾತಾಪ ಪಡ್ತಿದ್ದಾರೆ. ಆದ್ರೆ ಇದನ್ನ ಗಂಭೀರವಾಗಿ ಪರಿಗಣಿಸಿರೋ ಚೆನ್ನೈ ಫ್ರಾಂಚೈಸಿ, […]

ದುರಹಂಕಾರದ ರೈನಾ ಜಾಗಕ್ಕೆ ಬರ್ತಿದ್ದಾನೆ ವಿಶ್ವದ ನಂ.1 ಟಿ-20 ಬ್ಯಾಟ್ಸ್​ಮನ್​​
ಧೋನಿ. ರೈನಾ
ಸಾಧು ಶ್ರೀನಾಥ್​
|

Updated on:Sep 17, 2020 | 2:21 PM

Share

ಚೆನ್ನೈ ಫ್ರಾಂಚೈಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ತವರಿಗೆ ವಾಪಸ್ ಬಂದಿರೋ ಸುರೇಶ್ ರೈನಾಗೆ, ತನ್ನ ತಪ್ಪಿನ ಅರಿವಾಗಿದೆ. ತನ್ನ ತಪ್ಪಿನ ಅರಿವಾಗಿ ರೈನಾ, ಮತ್ತೆ ಚೆನ್ನೈ ತಂಡವನ್ನ ಸೇರಿಕೊಳ್ಳೋ ಆಸೆಯಿಂದ ಅಭ್ಯಾಸ ಮಾಡ್ತಿದ್ದಾರೆ. ಆದ್ರೀಗ ರೈನಾಗೆ ಚೆನ್ನೈ ತಂಡದ ಬಾಗಿಲು ಬಹುತೇಕ ಮುಚ್ಚೋದು ಖಚಿತವಾಗಿದೆ.

ಬಾಲ್ಕನಿ ರೂಮ್ ಸಿಗಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ, ಅರ್ಧಕ್ಕೆ ಚೆನ್ನೈ ತಂಡವನ್ನ ಬಿಟ್ಟು ಬಂದಿದ್ದ ರೈನಾ ಈಗ ತಮ್ಮ ತಪ್ಪಿಗೆ ಪಶ್ಚಾತಾಪ ಪಡ್ತಿದ್ದಾರೆ. ಆದ್ರೆ ಇದನ್ನ ಗಂಭೀರವಾಗಿ ಪರಿಗಣಿಸಿರೋ ಚೆನ್ನೈ ಫ್ರಾಂಚೈಸಿ, ರೈನಾ ಪ್ಲೇಸ್, ರಿಪ್ಲೇಸ್ ಮಾಡೋದಕ್ಕೆ ಮುಂದಾಗಿದೆ.

ಡೇವಿಡ್ ಮಲನ್ ವಿಶ್ವದ ನಂ.1 T20 ಬ್ಯಾಟ್ಸ್​ಮನ್​​.. ಚೆನ್ನೈ ಫ್ರಾಂಚೈಸಿ ರೈನಾ ವಿಚಾರದಲ್ಲಿ ಮನಸ್ಸು ಮುರಿದುಕೊಂಡಿದೆ. ಹೀಗಾಗಿ ರೈನಾ ಸ್ಥಾನಕ್ಕೆ ಅಂತಿಂಥ ಆಟಗಾರನಲ್ಲ.. ವಿಶ್ವದ ನಂಬರ್ ಒನ್ ಬ್ಯಾಟ್ಸ್​ಮನ್​ನನ್ನ ತರೋದಕ್ಕೆ ಮುಂದಾಗಿದೆ. ಆತ ಬೇರ್ಯಾರೂ ಅಲ್ಲ.. ಇಂಗ್ಲೆಂಡ್ ತಂಡದ ಡೇವಿಡ್ ಮಲನ್.

ಡೇವಿಡ್ ಮಲನ್.. ಇಂಗ್ಲೆಂಡ್ ತಂಡದ ಡೈನಾಮಿಕ್ ಬ್ಯಾಟ್ಸ್​ಮನ್. ಅದ್ರಲ್ಲೂ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಮಲನ್, ಇಡೀ ಕ್ರಿಕೆಟ್ ಜಗತ್ತೇ ಹೌಹಾರುವಂತಹ ಪ್ರದರ್ಶನ ನೀಡ್ತಿದ್ದಾನೆ. ಸದ್ಯ ಐಸಿಸಿ ಟಿಟ್ವೆಂಟಿ ರ್ಯಾಂಕಿಂಗ್​ನಲ್ಲಿ ಮಲನ್, ನಂಬರ್ ವನ್ ಬ್ಯಾಟ್ಸ್​ಮನ್.

ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ 15 ಪಂದ್ಯಗಳನ್ನಾಡಿರುವ ಡೇವಿಡ್ ಮಲನ್, 682 ರನ್​ಗಳಿಸಿದ್ದಾರೆ. ಇದ್ರಲ್ಲಿ ಅಜೇಯ 103 ರನ್ ಗರಿಷ್ಠ ಮೊತ್ತವಾಗಿದ್ರೆ, 7 ಅರ್ಧಶತಕ ಸಿಡಿಸಿದ್ದಾನೆ. ಇಲ್ಲೇ ಗೊತ್ತಾಗುತ್ತೆ.. ಮಲನ್ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಎಂತ ಡೆಡ್ಲಿ ಬ್ಯಾಟ್ಸ್​ಮನ್ ಅನ್ನೋದು.

ಧೋನಿ ಕಣ್ಣು ಡೇವಿಡ್ ಮಲನ್ ಮೇಲೆ ಬಿದ್ದಿದ್ದೇಕೆ? ನಾಯಕ ಮಹೇಂದ್ರ ಸಿಂಗ್ ಧೋನಿ, ಇಂಗ್ಲೆಂಡ್​ನ ಡೇವಿಡ್ ಮಲನ್​ನನ್ನೇ ರೈನಾ ಪ್ಲೇಸ್​ಗೆ ಕರೆತರೋದಕ್ಕೆ ಒಂದು ಕಾರಣವಿದೆ. ರೈನಾರಂತೆ ಮಲನ್, ಎಡಗೈ ಬ್ಯಾಟ್ಸ್​ಮನ್ ಆಗಿದ್ದು, ರೈನಾರಂತೆ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡ್ತಾನೆ. ಹೀಗಾಗೇ ಧೋನಿ ಕಣ್ಣು ಮಲನ್ ಮೇಲೆ ಬಿದ್ದಿದೆ.

ಸದ್ಯ ಚೆನ್ನೈ ಫ್ರಾಂಚೈಸಿ ಡೇವಿಡ್ ಮಲನ್​ನನ್ನ ರೈನಾ ಪ್ಲೇಸ್​ಗೆ ರಿಪ್ಲೇಸ್ ಮಾಡೋದಕ್ಕೆ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ಈ ಬಗ್ಗೆ ಚೆನ್ನೈ ತಂಡದ ಶೇನ್ ವ್ಯಾಟ್ಸನ್ ಕೂಡ ನಾಯಕ ಧೋನಿಗೆ, ಮಲನ್ ಆಯ್ಕೆ ಅದ್ಭುತ ಎಂದು ಸಲಹೆ ನೀಡಿದ್ದಾರೆ.

ರೈನಾ ಮೇಲೆ ಸಹಜವಾಗೇ ಮಾಹಿಗೆ ಮುನಿಸಿದೆ.. ಚೆನ್ನೈ ತಂಡ ಡೇವಿಡ್ ಮಲನ್​ಗೆ ಮಣೆ ಹಾಕೋದಕ್ಕೆ ಮುಂದಾಗಿರೋದ್ರ ಹಿಂದೆ, ನಾಯಕ ಧೋನಿಯಿದ್ದಾರೆ. ಯಾಕಂದ್ರೆ ತನ್ನ ಮಾತನ್ನ ಮೀರಿ ಚೆನ್ನೈ ತಂಡವನ್ನ ತೊರೆದ ರೈನಾ ಮೇಲೆ, ಸಹಜವಾಗೇ ಮಾಹಿಗೆ ಮುನಿಸಿದೆ. ಇದೇ ಕಾರಣಕ್ಕೆ ಚೆನ್ನೈ ಫ್ರಾಂಚೈಸಿ ರೈನಾ ಬದಲಿ ಆಟಗಾರನ ಆಯ್ಕೆಗೆ ಮುಂದಾಗಿದೆ.

ಸದ್ಯ ಚೆನ್ನೈ ತಂಡದಲ್ಲಾಗಿರೋ ಬೆಳವಣಿಗೆಯನ್ನ ನೋಡಿದ್ರೆ, ರೈನಾಗೆ ದುಬೈ ಐಪಿಎಲ್ ಬಾಗಿಲು ಬಹುತೇಕ ಮುಚ್ಚಿದೆ. ರೈನಾ ದುರಹಂಕಾರದಿಂದಾಗಿ ಐಪಿಎಲ್​ಗೆ ವಿಶ್ವದ ನಂ.1 ಟಿಟ್ವೆಂಟಿ ಬ್ಯಾಟ್ಸ್​ಮನ್ ಡೇವಿಡ್ ಮಲನ್​ಗೆ, ಭಾಗ್ಯದ ಬಾಗಿಲು ತೆರೆದಂತಾಗಿದೆ.

Published On - 10:33 am, Sat, 12 September 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ