AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ. ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ […]

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​
ಎಂ ಎಸ್ ಧೋನಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 16, 2020 | 1:36 PM

Share

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ.

ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ ರೈನಾ ಕ್ರೀಸ್​ಗಿಳಿಯುತ್ತಿದ್ದ ನಂಬರ್ 3ನಲ್ಲಿ ಧೋನಿ ಬ್ಯಾಟಿಂಗ್ ಮಾಡೋದಕ್ಕೆ ಮನಸ್ಸು ಮಾಡಿದ್ದಾರೆ.

ಒಂದು ವೇಳೆ ಧೋನಿ ನಂಬರ್ 3ನಲ್ಲಿ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿದ್ರೆ, ನಂ.4ನಲ್ಲಿ ಕಣಕ್ಕಿಳಿದೇ ಇಳೀತಾರೆ. ರೈನಾ ಅನುಪಸ್ಥಿತಿಯಿಂದ ಧೋನಿ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಹೀಗಾಗಿ ಧೋನಿ ಅಪ್ಪರ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಬೇಕಿದೆ.

ಧೋನಿ ನಂ.3ನಲ್ಲಿ ಕಣಕ್ಕಿಳಿದ್ರೆ ಚೆನ್ನೈಗೆ ಬಲ! ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ, ಧೋನಿ ಈ ಸೀಸನ್​ನಲ್ಲಿ ನಂಬರ್ 3ನಲ್ಲೇ ಬ್ಯಾಟಿಂಗ್ ಮಾಡಿದ್ರೆ, ಉತ್ತಮ ಎಂದು ಸಲಹೆ ನೀಡಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಧೋನಿ, ಮೇಲಿನ ಕ್ರಮಾಂಕದಲ್ಲೇ ಕಣಕ್ಕಿಳಿದ್ರೆ, ಚೆನ್ನೈ ತಂಡ ಇನ್ನು ಹೆಚ್ಚಿನ ರನ್​ಗಳಿಸಲಿದೆ ಎಂದಿದ್ದಾರೆ.

ಸದ್ಯ ರೈನಾ ಅಲಭ್ಯತೆಯಿಂದಾಗಿ.. ಚೆನ್ನೈ ತಂಡದ ಬ್ಯಾಟಿಂಗ್ ಆರ್ಡರ್ ಚೇಂಜ್ ಆಗಲಿದೆ. ಹೀಗಾಗಿ ಧೋನಿ ಕ್ಲೈಮ್ಯಾಕ್ಸ್​ನಲ್ಲಿ ಬಂದು ಅಬ್ಬರಿಸೋದಕ್ಕಿಂತ, ನಂ.ತ್ರೀ ಇಲ್ಲಾ ನಂ.ಫೋರ್​ನಲ್ಲೂ ಬಂದು ಅಬ್ಬರಿಸಿದ್ರೆ, ಚೆನ್ನೈ ತಂಡದ ಬ್ಯಾಟಿಂಗ್ ಡಿಪಾರ್ಟ್​ಮೆಂಟ್ ಇನ್ನು ಸ್ಟ್ರಾಂಗ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

Follow Us
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ