AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ. ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ […]

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​
ಎಂ ಎಸ್ ಧೋನಿ
ಸಾಧು ಶ್ರೀನಾಥ್​
|

Updated on: Sep 16, 2020 | 1:36 PM

Share

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ.

ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ ರೈನಾ ಕ್ರೀಸ್​ಗಿಳಿಯುತ್ತಿದ್ದ ನಂಬರ್ 3ನಲ್ಲಿ ಧೋನಿ ಬ್ಯಾಟಿಂಗ್ ಮಾಡೋದಕ್ಕೆ ಮನಸ್ಸು ಮಾಡಿದ್ದಾರೆ.

ಒಂದು ವೇಳೆ ಧೋನಿ ನಂಬರ್ 3ನಲ್ಲಿ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿದ್ರೆ, ನಂ.4ನಲ್ಲಿ ಕಣಕ್ಕಿಳಿದೇ ಇಳೀತಾರೆ. ರೈನಾ ಅನುಪಸ್ಥಿತಿಯಿಂದ ಧೋನಿ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಹೀಗಾಗಿ ಧೋನಿ ಅಪ್ಪರ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಬೇಕಿದೆ.

ಧೋನಿ ನಂ.3ನಲ್ಲಿ ಕಣಕ್ಕಿಳಿದ್ರೆ ಚೆನ್ನೈಗೆ ಬಲ! ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ, ಧೋನಿ ಈ ಸೀಸನ್​ನಲ್ಲಿ ನಂಬರ್ 3ನಲ್ಲೇ ಬ್ಯಾಟಿಂಗ್ ಮಾಡಿದ್ರೆ, ಉತ್ತಮ ಎಂದು ಸಲಹೆ ನೀಡಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಧೋನಿ, ಮೇಲಿನ ಕ್ರಮಾಂಕದಲ್ಲೇ ಕಣಕ್ಕಿಳಿದ್ರೆ, ಚೆನ್ನೈ ತಂಡ ಇನ್ನು ಹೆಚ್ಚಿನ ರನ್​ಗಳಿಸಲಿದೆ ಎಂದಿದ್ದಾರೆ.

ಸದ್ಯ ರೈನಾ ಅಲಭ್ಯತೆಯಿಂದಾಗಿ.. ಚೆನ್ನೈ ತಂಡದ ಬ್ಯಾಟಿಂಗ್ ಆರ್ಡರ್ ಚೇಂಜ್ ಆಗಲಿದೆ. ಹೀಗಾಗಿ ಧೋನಿ ಕ್ಲೈಮ್ಯಾಕ್ಸ್​ನಲ್ಲಿ ಬಂದು ಅಬ್ಬರಿಸೋದಕ್ಕಿಂತ, ನಂ.ತ್ರೀ ಇಲ್ಲಾ ನಂ.ಫೋರ್​ನಲ್ಲೂ ಬಂದು ಅಬ್ಬರಿಸಿದ್ರೆ, ಚೆನ್ನೈ ತಂಡದ ಬ್ಯಾಟಿಂಗ್ ಡಿಪಾರ್ಟ್​ಮೆಂಟ್ ಇನ್ನು ಸ್ಟ್ರಾಂಗ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ