AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಐಪಿಎಲ್​ನಲ್ಲಿ ಕಳ್ಳಾಟಕ್ಕೆ ಬ್ರೇಕ್​ ಹಾಕಲು ಬಿಸಿಸಿಐ ಬಿಗ್ ಪ್ಲಾನ್! ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಮಾಜಿ ಗುಜರಾತ್ ಡಿಜಿಪಿ ಉಸ್ತುವಾರಿ

IPL 2021: ಖಂಡ್ವಾಲಾ ಡಿಸೆಂಬರ್ 2010 ರಲ್ಲಿ ಗುಜರಾತ್‌ನ ಡಿಜಿಪಿ ಹುದ್ದೆಯಿಂದ ನಿವೃತ್ತರಾದರು. ನಂತರ ಹತ್ತು ವರ್ಷಗಳ ಕಾಲ ಎಸ್ಸಾರ್ ಗ್ರೂಪ್‌ನ ಸಲಹೆಗಾರರಾಗಿದ್ದರು ಅವರು ಕೇಂದ್ರ ಸರ್ಕಾರದ ಲೋಕಪಾಲ್ ಶೋಧನಾ ಸಮಿತಿಯ ಸದಸ್ಯರೂ ಆಗಿದ್ದರು.

IPL 2021: ಐಪಿಎಲ್​ನಲ್ಲಿ ಕಳ್ಳಾಟಕ್ಕೆ ಬ್ರೇಕ್​ ಹಾಕಲು ಬಿಸಿಸಿಐ ಬಿಗ್ ಪ್ಲಾನ್! ಭ್ರಷ್ಟಾಚಾರ ವಿರೋಧಿ ಘಟಕಕ್ಕೆ ಮಾಜಿ ಗುಜರಾತ್ ಡಿಜಿಪಿ ಉಸ್ತುವಾರಿ
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Apr 05, 2021 | 4:38 PM

Share

ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಹಳ ಗಂಭೀರವಾಗಿದೆ. ಅವರ ಭ್ರಷ್ಟಾಚಾರ-ವಿರೋಧಿ ಘಟಕವು ನಿರಂತರವಾಗಿ ಸಕ್ರಿಯವಾಗಿದೆ ಮತ್ತು ಅಗತ್ಯವಿರುವ ಪ್ರತಿಯೊಂದು ಹೆಜ್ಜೆಯನ್ನೂ ತೆಗೆದುಕೊಳ್ಳುತ್ತದೆ. ಈ ಘಟಕದ ಉಸ್ತುವಾರಿ ಇದುವರೆಗು ಅಜಿತ್ ಸಿಂಗ್ ಅವರ ಕೈಯಲ್ಲಿತ್ತು. ಬಿಸಿಸಿಐ ಈಗ ತನ್ನ ಭ್ರಷ್ಟಾಚಾರ ನಿಗ್ರಹ ಘಟಕದ ಉಸ್ತುವಾರಿಯನ್ನು ಮಾಜಿ ಗುಜರಾತ್ ಡಿಜಿಪಿ ಶಬ್ಬೀರ್ ಹುಸೇನ್ ಎಸ್. ಖಂಡವಾವಾಲಾ ಅವರಿಗೆ ಹಸ್ತಾಂತರಿಸಿದೆ. ಅವರು ಈಗ ಘಟಕದ ಹೊಸ ಮುಖ್ಯಸ್ಥರಾಗಲಿದ್ದಾರೆ.

ರಾಜಸ್ಥಾನದ ಮಾಜಿ ಡಿಜಿಪಿ ಅಜಿತ್ ಸಿಂಗ್ ಅವರು 2018 ರ ಏಪ್ರಿಲ್‌ನಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದರು ಮತ್ತು ಅವರ ಅವಧಿ ಮಾರ್ಚ್ 31 ಕ್ಕೆ ಕೊನೆಗೊಂಡಿತು. ಮುಂದಿನ ಮುಖ್ಯಸ್ಥರಿಗೆ ಸಹಾಯ ಮಾಡಲು ಕೆಲವು ದಿನಗಳವರೆಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಅವರು ಪಿಟಿಐಗೆ ದೃಢಪಡಿಸಿದರು. ಅದೇ ಸಮಯದಲ್ಲಿ, ಏಪ್ರಿಲ್ 9 ರಿಂದ ಐಪಿಎಲ್ ಪ್ರಾರಂಭವಾಗುವ ಮೊದಲು 1973 ರ ಬ್ಯಾಚ್ ಐಪಿಎಸ್ ಅಧಿಕಾರಿ ಖಂಡ್ವಾವಾಲಾ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ.

ಅನುಭವ ಹೆಚ್ಚಾಗಿ ನೆರವಿಗೆ ಬರಲಿದೆ ಖಂಡ್ವಾಲಾ ಅವರು ತಮ್ಮ ಅನುಭವದಿಂದ ಪ್ರಯೋಜನ ಪಡೆಯಲಿದ್ದಾರೆ ಮತ್ತು ಅವರು ಬಿಸಿಸಿಐಗೆ ಉತ್ತಮವಾಗಿ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ನಾನು ವಿಶ್ವದ ಅತ್ಯುತ್ತಮ ಕ್ರಿಕೆಟ್ ಸಂಘಟನೆಯಾಗಿರುವ ಬಿಸಿಸಿಐನ ಭಾಗವಾಗುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. ಈ ಕೆಲಸದಲ್ಲಿ ಭದ್ರತಾ ವಿಷಯಗಳ ಕುರಿತು ನನ್ನ ಅನುಭವದ ಲಾಭವನ್ನು ನಾನು ಪಡೆಯುತ್ತೇನೆ.

ಖಂಡ್ವಾಲಾ ಡಿಸೆಂಬರ್ 2010 ರಲ್ಲಿ ಗುಜರಾತ್‌ನ ಡಿಜಿಪಿ ಹುದ್ದೆಯಿಂದ ನಿವೃತ್ತರಾದರು. ನಂತರ ಹತ್ತು ವರ್ಷಗಳ ಕಾಲ ಎಸ್ಸಾರ್ ಗ್ರೂಪ್‌ನ ಸಲಹೆಗಾರರಾಗಿದ್ದರು ಅವರು ಕೇಂದ್ರ ಸರ್ಕಾರದ ಲೋಕಪಾಲ್ ಶೋಧನಾ ಸಮಿತಿಯ ಸದಸ್ಯರೂ ಆಗಿದ್ದರು.

ಕಳ್ಳಾಟಕ್ಕೆ ಬ್ರೇಕ್​ ಬೀಳಲಿದೆ ಐಪಿಎಲ್ ನಂತಹ ದೊಡ್ಡ ಪಂದ್ಯಾವಳಿಯ ಮೊದಲು ಖಾಂಡ್ವಾಲಾ ಅವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಐಪಿಎಲ್ ಬಂದ ಕೂಡಲೇ ವಿಶ್ವದಾದ್ಯಂತ ಊಹಾಪೋಹಗಳು ಸಕ್ರಿಯವಾಗುತ್ತವೆ. ಈ ಹಿಂದೆ ಐಪಿಎಲ್‌ನಲ್ಲಿ ಫಿಕ್ಸಿಂಗ್ ಮಾಡುವ ಕರಿನೆರಳು ಕೂಡ ಇದೆ. ಈ ಪಂದ್ಯಾವಳಿಯನ್ನು ಬುಕ್ಕಿಗಳು ನಿರಂತರವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ಲೀಗ್ ಅನ್ನು ಭ್ರಷ್ಟಾಚಾರದಿಂದ ದೂರವಿಡುವುದು ಹೊಸ ಮುಖ್ಯಸ್ಥರ ಪ್ರಯತ್ನವಾಗಿರುತ್ತದೆ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ