AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಚೆನ್ನೈಗೆ ಗೆಲುವಿನ ಆಸೆ ಉಳಿಸಿದ್ದು ಆ ಒಂದು ಬಾಲ್; ಕ್ರಿಕೆಟ್ ದೈತ್ಯ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್, ವಿಡಿಯೋ ನೋಡಿ

ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್​ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IPL 2021: ಚೆನ್ನೈಗೆ ಗೆಲುವಿನ ಆಸೆ ಉಳಿಸಿದ್ದು ಆ ಒಂದು ಬಾಲ್; ಕ್ರಿಕೆಟ್ ದೈತ್ಯ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್, ವಿಡಿಯೋ ನೋಡಿ
ರಸ್ಸೆಲ್ ವಿಕೆಟ್ ಕಿತ್ತ ಕುರ್ರನ್
TV9 Web
| Edited By: |

Updated on:Nov 30, 2021 | 12:15 PM

Share

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ನಿನ್ನೆಯ (ಏಪ್ರಿಲ್ 21) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 18 ರನ್​ಗಳ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 220 ರನ್​ಗಳಿಸಿ ಕೋಲ್ಕತ್ತಾಗೆ ಬೃಹತ್ ಮೊತ್ತದ ಸವಾಲು ಹಾಕಿತ್ತು. ಕಳೆದೆರಡು ಪಂದ್ಯಗಳಲ್ಲಿ ಕೋಲ್ಕತ್ತಾ ಪ್ರದರ್ಶನ ನೋಡಿದ್ದ ಕ್ರಿಕೆಟ್ ಅಭಿಮಾನಿಗಳು, ನಿನ್ನೆಯೂ ಬಹುತೇಕ ಚೆನ್ನೈ ತಂಡವೇ ಗೆಲ್ಲುತ್ತದೆ ಎಂದು ಊಹಿಸಿದ್ದರು. ಅದಕ್ಕೆ ಸರಿಹೊಂದುವಂತೆ ಕೋಲ್ಕತ್ತಾ ಕೂಡ ಇನ್ನಿಂಗ್ಸ್ ಆರಂಭಿಸಿತ್ತು.

ಕೋಲ್ಕತ್ತಾ ತಂಡದ ಪರ ಬ್ಯಾಟ್ಸ್​ಮನ್​ಗಳು ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ತಂಡದ ಮೊತ್ತ 50 ರನ್ ದಾಟುವ ಮುನ್ನವೇ ಮುಖ್ಯ 5 ವಿಕೆಟ್ ಕಳೆದುಕೊಂಡು ಕೋಲ್ಕತ್ತಾ ಸೊರಗಿತ್ತು. ಕೆಕೆಆರ್​ಗೆ ಸೋಲೇ ಗತಿ ಎಂಬಂತಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಐದು ವಿಕೆಟ್​ಗೆ ಕ್ರಿಸ್​ಗೆ ಇಳಿದಿದ್ದ ದಾಂಡಿಗರು 10 ರನ್ ಕೂಡ ದಾಟಲಾಗದೇ ಪರದಾಡಿದ್ದರು. ಆದರೆ, ನಂತರ ಪಂದ್ಯ ಪಡೆದ ತಿರುವು ರೋಚಕವಾಗಿತ್ತು.

5 ವಿಕೆಟ್ ಬಳಿಕ ಕ್ರೀಸ್​ನಲ್ಲಿ ಜೊತೆಯಾದ ಆಂಡ್ರ್ಯೂ ರಸ್ಸೆಲ್ ಹಾಗೂ ದಿನೇಶ್ ಕಾರ್ತಿಕ್ ಚೆನ್ನೈ ಗೆಲುವಿನ ಧೈರ್ಯವನ್ನು ಅಲುಗಾಡಿಸಿಬಿಟ್ಟರು. ರಸ್ಸೆಲ್ ಈ ಟೂರ್ನಿಯ ಎರಡನೇ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು. ದಿನೇಶ್ ಕಾರ್ತಿಕ್ ಕೂಡ ಮಿಂಚಿದರು. ದಿನೇಶ್ ಕಾರ್ತಿಕ್ 24 ಬಾಲ್​ಗೆ 40 ರನ್ ಗಳಿಸಿರೆ, ರಸ್ಸೆಲ್ 22 ಬಾಲ್​ಗೆ 6 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 54 ರನ್ ದಾಖಲಿಸಿದರು.

ಪಂದ್ಯ ಕೊಂಚವೇ ಕೋಲ್ಕತ್ತಾ ಗೆಲ್ಲುವತ್ತ ತಿರುವು ಪಡೆಯುತ್ತಿತ್ತು. ರಸ್ಸೆಲ್ ಕಣದಲ್ಲಿದ್ದರೆ ಕೋಲ್ಕತ್ತಾ ಗೆಲ್ಲುವುದು ಖಂಡಿತಾ ಎಂಬಂತಾಗಿತ್ತು. ಚೆನ್ನೈಗೆ ಅಗತ್ಯವಿದ್ದ ವಿಕೆಟ್ ರಸ್ಸೆಲ್​ದು. ಹೇಗಾದರೂ ರಸ್ಸೆಲ್ ಎಂಬ ವೆಸ್ಟ್ ಇಂಡೀಸ್​ನ ದೈತ್ಯ ದಾಂಡಿಗನನ್ನು ಕಟ್ಟಿಹಾಕುವ ಹೊಣೆಗಾರಿಕೆ ಚೆನ್ನೈ ಬೌಲರ್​ಗಳಿಗೆ ಇತ್ತು. ಹಾಗಿರುವಂತೆಯೇ 54 ರನ್ ಗಳಿಸಿದ್ದ ರಸ್ಸೆಲ್​ನನ್ನು ಔಟ್ ಮಾಡಿದ್ದು ಸ್ಯಾಮ್ ಕುರ್ರನ್. ಸ್ಯಾಮ್ ಕುರ್ರನ್ ರಸ್ಸೆಲ್​ನ್ನು ಕ್ಲೀನ್ ಬೌಲ್ಡ್ ಮಾಡಿದರು. ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್​ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಸ್ಸೆಲ್ ಆರ್ಭಟ ಬಗ್ಗುಬಡಿದ ಕುರ್ರನ್ ಬೌಲಿಂಗ್ ಹೀಗಿತ್ತು.

ರಸ್ಸೆಲ್ ಬಳಿಕ ಕಮ್ಮಿನ್ಸ್ ಬ್ಯಾಟಿಂಗ್ (34 ಬಾಲ್​ಗೆ 66 ರನ್) ಕೂಡ ಭರ್ಜರಿಯಗಿತ್ತು. ಬಹುತೇಕ ಕೊನೆಯ ಹಂತದವರೆಗೂ ಯಾರು ಗೆಲ್ಲುತ್ತಾರೆ? ಎಂಬ ರೋಚಕತೆಯಲ್ಲಿ ಸಾಗಿದ್ದ ಪಂದ್ಯದಲ್ಲಿ ಕೊನೆಗೆ ಚೆನ್ನೈ ತಂಡ 18 ರನ್​ಗಳಿಂದ ಗೆಲುವು ಕಂಡಿತು.

ಇದನ್ನೂ ಓದಿ: IPL 2021: ತಂಡಕ್ಕೆ ರಸ್ಸೆಲ್ ನೀಡುವ ಕಾಣಿಕೆಗಳನ್ನು ಕೊಂಡಾಡಿದ ಕೆಕೆಆರ್ ನಾಯಕ ಮಾರ್ಗನ್

(IPL 2021 CSK Andre Russell clean bowled for Sam Curran bowling watch video)

Published On - 4:58 pm, Thu, 22 April 21

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ