AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಚೆನ್ನೈಗೆ ಗೆಲುವಿನ ಆಸೆ ಉಳಿಸಿದ್ದು ಆ ಒಂದು ಬಾಲ್; ಕ್ರಿಕೆಟ್ ದೈತ್ಯ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್, ವಿಡಿಯೋ ನೋಡಿ

ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್​ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

IPL 2021: ಚೆನ್ನೈಗೆ ಗೆಲುವಿನ ಆಸೆ ಉಳಿಸಿದ್ದು ಆ ಒಂದು ಬಾಲ್; ಕ್ರಿಕೆಟ್ ದೈತ್ಯ ಆಂಡ್ರೆ ರಸ್ಸೆಲ್ ಕ್ಲೀನ್ ಬೌಲ್ಡ್, ವಿಡಿಯೋ ನೋಡಿ
ರಸ್ಸೆಲ್ ವಿಕೆಟ್ ಕಿತ್ತ ಕುರ್ರನ್
TV9 Web
| Edited By: |

Updated on:Nov 30, 2021 | 12:15 PM

Share

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ನಿನ್ನೆಯ (ಏಪ್ರಿಲ್ 21) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 18 ರನ್​ಗಳ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 220 ರನ್​ಗಳಿಸಿ ಕೋಲ್ಕತ್ತಾಗೆ ಬೃಹತ್ ಮೊತ್ತದ ಸವಾಲು ಹಾಕಿತ್ತು. ಕಳೆದೆರಡು ಪಂದ್ಯಗಳಲ್ಲಿ ಕೋಲ್ಕತ್ತಾ ಪ್ರದರ್ಶನ ನೋಡಿದ್ದ ಕ್ರಿಕೆಟ್ ಅಭಿಮಾನಿಗಳು, ನಿನ್ನೆಯೂ ಬಹುತೇಕ ಚೆನ್ನೈ ತಂಡವೇ ಗೆಲ್ಲುತ್ತದೆ ಎಂದು ಊಹಿಸಿದ್ದರು. ಅದಕ್ಕೆ ಸರಿಹೊಂದುವಂತೆ ಕೋಲ್ಕತ್ತಾ ಕೂಡ ಇನ್ನಿಂಗ್ಸ್ ಆರಂಭಿಸಿತ್ತು.

ಕೋಲ್ಕತ್ತಾ ತಂಡದ ಪರ ಬ್ಯಾಟ್ಸ್​ಮನ್​ಗಳು ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ತಂಡದ ಮೊತ್ತ 50 ರನ್ ದಾಟುವ ಮುನ್ನವೇ ಮುಖ್ಯ 5 ವಿಕೆಟ್ ಕಳೆದುಕೊಂಡು ಕೋಲ್ಕತ್ತಾ ಸೊರಗಿತ್ತು. ಕೆಕೆಆರ್​ಗೆ ಸೋಲೇ ಗತಿ ಎಂಬಂತಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಪರ ಚಹರ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಐದು ವಿಕೆಟ್​ಗೆ ಕ್ರಿಸ್​ಗೆ ಇಳಿದಿದ್ದ ದಾಂಡಿಗರು 10 ರನ್ ಕೂಡ ದಾಟಲಾಗದೇ ಪರದಾಡಿದ್ದರು. ಆದರೆ, ನಂತರ ಪಂದ್ಯ ಪಡೆದ ತಿರುವು ರೋಚಕವಾಗಿತ್ತು.

5 ವಿಕೆಟ್ ಬಳಿಕ ಕ್ರೀಸ್​ನಲ್ಲಿ ಜೊತೆಯಾದ ಆಂಡ್ರ್ಯೂ ರಸ್ಸೆಲ್ ಹಾಗೂ ದಿನೇಶ್ ಕಾರ್ತಿಕ್ ಚೆನ್ನೈ ಗೆಲುವಿನ ಧೈರ್ಯವನ್ನು ಅಲುಗಾಡಿಸಿಬಿಟ್ಟರು. ರಸ್ಸೆಲ್ ಈ ಟೂರ್ನಿಯ ಎರಡನೇ ಅತಿ ವೇಗದ ಅರ್ಧಶತಕವನ್ನೂ ದಾಖಲಿಸಿದರು. ದಿನೇಶ್ ಕಾರ್ತಿಕ್ ಕೂಡ ಮಿಂಚಿದರು. ದಿನೇಶ್ ಕಾರ್ತಿಕ್ 24 ಬಾಲ್​ಗೆ 40 ರನ್ ಗಳಿಸಿರೆ, ರಸ್ಸೆಲ್ 22 ಬಾಲ್​ಗೆ 6 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 54 ರನ್ ದಾಖಲಿಸಿದರು.

ಪಂದ್ಯ ಕೊಂಚವೇ ಕೋಲ್ಕತ್ತಾ ಗೆಲ್ಲುವತ್ತ ತಿರುವು ಪಡೆಯುತ್ತಿತ್ತು. ರಸ್ಸೆಲ್ ಕಣದಲ್ಲಿದ್ದರೆ ಕೋಲ್ಕತ್ತಾ ಗೆಲ್ಲುವುದು ಖಂಡಿತಾ ಎಂಬಂತಾಗಿತ್ತು. ಚೆನ್ನೈಗೆ ಅಗತ್ಯವಿದ್ದ ವಿಕೆಟ್ ರಸ್ಸೆಲ್​ದು. ಹೇಗಾದರೂ ರಸ್ಸೆಲ್ ಎಂಬ ವೆಸ್ಟ್ ಇಂಡೀಸ್​ನ ದೈತ್ಯ ದಾಂಡಿಗನನ್ನು ಕಟ್ಟಿಹಾಕುವ ಹೊಣೆಗಾರಿಕೆ ಚೆನ್ನೈ ಬೌಲರ್​ಗಳಿಗೆ ಇತ್ತು. ಹಾಗಿರುವಂತೆಯೇ 54 ರನ್ ಗಳಿಸಿದ್ದ ರಸ್ಸೆಲ್​ನನ್ನು ಔಟ್ ಮಾಡಿದ್ದು ಸ್ಯಾಮ್ ಕುರ್ರನ್. ಸ್ಯಾಮ್ ಕುರ್ರನ್ ರಸ್ಸೆಲ್​ನ್ನು ಕ್ಲೀನ್ ಬೌಲ್ಡ್ ಮಾಡಿದರು. ಕುರ್ರನ್ ಬೌಲಿಂಗ್ ಕೌಶಲ್ಯದಿಂದ ಬ್ಯಾಟ್ಸ್ಮನ್​ಗೆ ಅರಿವಿಗೆ ಬಾರದಂತೆ ವಿಕೆಟ್ ಉರುಳಿಸಿದ ರೀತಿ ವಿಶೇಷವಾಗಿತ್ತು. ಜೊತೆಗೆ, ಆ ಬಳಿಕ ಕುರ್ರನ್ ಸಂಭ್ರಮಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಸ್ಸೆಲ್ ಆರ್ಭಟ ಬಗ್ಗುಬಡಿದ ಕುರ್ರನ್ ಬೌಲಿಂಗ್ ಹೀಗಿತ್ತು.

ರಸ್ಸೆಲ್ ಬಳಿಕ ಕಮ್ಮಿನ್ಸ್ ಬ್ಯಾಟಿಂಗ್ (34 ಬಾಲ್​ಗೆ 66 ರನ್) ಕೂಡ ಭರ್ಜರಿಯಗಿತ್ತು. ಬಹುತೇಕ ಕೊನೆಯ ಹಂತದವರೆಗೂ ಯಾರು ಗೆಲ್ಲುತ್ತಾರೆ? ಎಂಬ ರೋಚಕತೆಯಲ್ಲಿ ಸಾಗಿದ್ದ ಪಂದ್ಯದಲ್ಲಿ ಕೊನೆಗೆ ಚೆನ್ನೈ ತಂಡ 18 ರನ್​ಗಳಿಂದ ಗೆಲುವು ಕಂಡಿತು.

ಇದನ್ನೂ ಓದಿ: IPL 2021: ತಂಡಕ್ಕೆ ರಸ್ಸೆಲ್ ನೀಡುವ ಕಾಣಿಕೆಗಳನ್ನು ಕೊಂಡಾಡಿದ ಕೆಕೆಆರ್ ನಾಯಕ ಮಾರ್ಗನ್

(IPL 2021 CSK Andre Russell clean bowled for Sam Curran bowling watch video)

Published On - 4:58 pm, Thu, 22 April 21

Follow Us
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ