AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು

IPL 2021: ವಿರಾಟ್ ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೇ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ.

IPL 2021: ಆರ್​ಸಿಬಿಗೆ ಹೆಚ್ಚಾಯ್ತು ನ್ಯಾಗ್ಸ್ ಕಾಟ; ಈತನನ್ನ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದ ಕೊಹ್ಲಿ! ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ ಆಟಗಾರರು
ವಿರಾಟ್ ಕೊಹ್ಲಿ, ನಾಗ್
ಪೃಥ್ವಿಶಂಕರ
| Edited By: |

Updated on: Apr 22, 2021 | 8:22 AM

Share

ಈ ಬಾರಿ ಐಪಿಎಲ್​ನ ಮೊದಲ ಮೂರು ಪಂದ್ಯಗಳಿಗಾಗಿ ಚೆನ್ನೈನಲ್ಲಿ ಬೀಡುಬಿಟ್ಟಿದ್ದ ಆರ್​ಸಿಬಿ ಆಟಗಾರರು ನಾಲ್ಕನೇ ಪಂದ್ಯಕ್ಕಾಗಿ ಫ್ಲೈಟ್​ ಹತ್ತಿ ಮುಂಬೈಗೆ ಪ್ರಯಾಣಿಸಿದ್ದಾರೆ. ಫ್ಲೈಟ್​​ನಲ್ಲಿ ಆರ್​ಸಿಬಿ ಆಟಗಾರರು, ಫುಲ್ ಜೋಷ್​ನಲ್ಲಿದ್ದರು. ಅದ್ರಲ್ಲೂ ಮಿಸ್ಟರ್ ನ್ಯಾಗ್ಸ್ ಎಂಟರ್​ಟೈನ್ಮೆಂಟ್, ಕೊಹ್ಲಿ ಹುಡುಗರ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಚೆನ್ನೈನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಆರ್​ಸಿಬಿ, ಐಪಿಎಲ್​ನಲ್ಲಿ ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆದಿದೆ. ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಕೊಹ್ಲಿ ಹುಡುಗರು, ಈಗ ಮುಂಬೈಗೆ ಪ್ರಯಾಣಿಸಿದ್ದಾರೆ. ವಾಂಖೆಡೆಯಲ್ಲಿ ಆರ್​ಸಿಬಿ ರಾಜಸ್ಥಾನ್ ಮತ್ತು ಚೆನ್ನೈ ವಿರುದ್ಧ ಪಂದ್ಯಗಳನ್ನಾಡಲಿದೆ.

ಸಾಕು ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದ ನ್ಯಾಗ್ಸ್! ಫ್ಲೈಟ್​​ನಲ್ಲಿ ಮಿಸ್ಟರ್ ನ್ಯಾಗ್ಸ್, ಹೇಗಿದ್ರೂ ನಾವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ಇಲ್ಲಿಗೆ ಟೂರ್ನಿಯನ್ನ ಮುಗಿಸಿ, ಬೆಂಗಳೂರಿಗೆ ಹೋಗೋಣ ಎಂದು ಪಟ್ಟು ಹಿಡಿದಿದ್ದ. ನ್ಯಾಗ್ಸ್ ಆಡಿದ ಈ ಮಾತಿಗೆ ಟೀಮ್ ಡೈರೆಕ್ಟರ್ ಮೈಕ್ ಹಸನ್, ನೀನ್ ಬೇಕಾದ್ರೆ ಹೋಗು. ನಾವು ಮುಂಬೈಗೆ ಹೋಗುತ್ತೇವೆ ಎಂದಿದ್ದಾರೆ.

ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ ಮುಂದುವರೆದು ಆಟಗಾರರನ್ನ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ಮೈಕ್, ಇಲ್ಲಿವರೆಗೆ ನಾನು ನೀಡಿದ ಎಲ್ಲಾ ಪ್ಲ್ಯಾನ್​ಗಳು ವರ್ಕ್ ಆಗಿದೆ. ನಾವು ಬೆಂಗಳೂರಿಗೆ ಹೋಗೋಣ. ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಈ ಟೂರ್ನಿಯನ್ನ ಇಲ್ಲಿಗೆ ಮರೆತು ಬಿಡೋಣ. ಇದಕ್ಕೆ ಪ್ರತಿಕ್ರಿಯಿಸಿದ ಮೈಕ್ ಹಸನ್ ಯಾಕೇ ನೀನು ಹೋಗ್ಬೇಕಾ? ನಾನು ಟೀಮ್ ಜೊತೆ ಮುಂಬೈಗೆ ಹೋಗುತ್ತೇನೆ ಎಂದರು. ಮೈಕ್ ಹಸನ್ ಒಪ್ಪದಿದ್ದಾಗ, ನ್ಯಾಗ್ಸ್ ವಿರಾಟ್ ಬೆನ್ನಿಂದೆ ಬಿದ್ದಿದ್ದಾನೆ. ವಿರಾಟ್ ಈ ರೀತಿ ಪದೇಪದೇ ಆಗೋದಿಲ್ಲ. ಹೇಗಿದ್ರೂ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಬೆಂಗಳೂರಿಗೆ ಹೋಗಿ ಬಿಡೋಣ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಕಾಲೆಳೆದ ಮಿಸ್ಟರ್ ನ್ಯಾಗ್ಸ್, ವಿರಾಟ್ ನಾವು ಬೆಂಗಳೂರಿಗೆ ಹೋಗೋಣ. ನಾವು ನಂಬರ್ ಒನ್​ ಸ್ಥಾನದಲ್ಲಿದ್ದೇವೆ. ಇಲ್ಲಿಗೆ ಮುಗಿಸಿಬಿಡೋಣ. ಈ ರೀತಿ ನಮಗೆ ಪದೇಪದೆ ಅವಕಾಶ ಸಿಗೋದಿಲ್ಲ. ಬಿಟ್ಟು ಬಿಡೋಣ ಎಂದಿದ್ದಾರೆ. ನ್ಯಾಗ್ಸ್ ಮಾತಿಗೆ ವಿರಾಟ್ ಚೆನ್ನಾಗೇ ನಕ್ಕಿದ್ದಾರೆ. ಅಷ್ಟೇ ಅಲ್ಲ.. ನ್ಯಾಗ್ಸ್ ಬಳಿ ಬಂದು, ಯಾರಾದ್ರೂ ಈತನನ್ನ ಎತ್ತಿ ಫ್ಲೈಟ್​ನಿಂದ ಆಚೆ ಎಸೆಯಿರಿ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿರಾಟ್, ನಾನು ಹೇಳಿದ ಮಾತುಗಳನ್ನ ಕಟ್ ಮಾಡ್ಬೇಡಿ. ಹಾಗೇ ಇಡಿ ಎಂದಿದ್ದಾರೆ. ಇನ್ನು ಫ್ಲೈಟ್​​ನಲ್ಲಿ ನ್ಯಾಗ್ಸ್​​ ಹಾವಳಿ ಜೋರಾಗ್ತಿದ್ದಂತೆ, ಆರ್​ಸಿಬಿ ಆಟಗಾರರು ನ್ಯಾಗ್ಸ್​​ನನ್ನು ಟಾಯ್ಲೆಟ್​ನಲ್ಲಿ ಲಾಕ್ ಮಾಡಿದ್ದಾರೆ.

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ