AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಟ್ವಿಟರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು; Well Payed KKR ಎಂದ ಧೋನಿ ಟೀಂ!

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಅದ್ಭುತ ಆರಂಭ ಕಂಡಿತ್ತು. ತಮ್ಮ ಹೊಡಿಬಡಿ ಆಟದ ಮೂಲಕ ಚೆನ್ನೈ 220 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಕೆಕೆಆರ್​ಗೆ ಆರಂಭಿಕ ಆಘಾತ ಎದುರಾಗಿತ್ತು

IPL 2021: ಟ್ವಿಟರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಎಡವಟ್ಟು; Well Payed KKR ಎಂದ ಧೋನಿ ಟೀಂ!
ಧೋನಿ
Follow us
ರಾಜೇಶ್ ದುಗ್ಗುಮನೆ
| Updated By: ಪೃಥ್ವಿಶಂಕರ

Updated on: Apr 22, 2021 | 3:07 PM

ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ನಡುವೆ ನಡೆದ ಪಂದ್ಯ ರೋಚಕತೆ ಪಡೆದುಕೊಂಡಿತ್ತು. ಸೋಲುವ ಹಂತಕ್ಕೆ ತಲುಪಿದ್ದ ಪಂದ್ಯವನ್ನು ರಸೆಲ್​, ದಿನೇಶ್​ ಕಾರ್ತಿಕ್​ ಹಾಗೂ ಪ್ಯಾಟ್​ ಕಮ್ಮಿನ್ಸ್​ ಅದ್ಭುತ ಪ್ರದರ್ಶನದಿಂದ ಗೆಲುವಿನ ಹಂತಕ್ಕೆ ಹೋಗಿತ್ತು. ಆದರೆ, ಈ ಮೂವರ ಹೋರಾಟವೂ ವ್ಯರ್ಥವಾಗಿದ್ದು, ಕೆಕೆಆರ್​ 18 ರನ್​ಗಳಿಂದ ಸೋತಿತ್ತು. ಆದರೆ, ಅವರು ನೀಡಿದ ಅದ್ಭುತ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮಧ್ಯೆ ಚೆನ್ನೈ ಮಾಡಿದ ಟ್ವೀಟ್​ ಒಂದು ಸಾಕಷ್ಟು ವೈರಲ್​ ಆಗಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಅದ್ಭುತ ಆರಂಭ ಕಂಡಿತ್ತು. ತಮ್ಮ ಹೊಡಿಬಡಿ ಆಟದ ಮೂಲಕ ಚೆನ್ನೈ 220 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಕೆಕೆಆರ್​ಗೆ ಆರಂಭಿಕ ಆಘಾತ ಎದುರಾಗಿತ್ತು. ಶುಭ್​ಮನ್​ಗಿಲ್​ ಮೊದಲನೇ ಓವರ್​ನಲ್ಲಿ ಔಟ್​ ಆದರು. ನಿತೀಶ್​ ರಾಣಾ ಮೂರನೇ ಓವರ್​ಗೆ ಪೆವಿಲಿಯನ್​ ಸೇರಿದರು. ರಾಹುಲ್​ ತ್ರಿಪಾಟಿ, ಮೊರ್ಗನ್​, ಸುನೀಲ್​ ನರೇನ್​ ಕೂಡ ಬಹುಬೇಗ ಪೆವಿಲಿಯನ್​ ಹಾದಿ ಹಿಡಿದರು. ನಂತರ ದಿನೇಶ್​ ಕಾರ್ತಿಕ್​, ರಸೆಲ್​ ಹಾಗೂ ಕಮ್ಮಿನ್ಸ್ ಅದ್ಭುತ ಆಟ ತೋರಿದರು. ಈ ಮ್ಯಾಚ್​ ತುಂಬಾನೇ ಥ್ರಿಲ್​ ನೀಡಿತ್ತು.

ಪಂದ್ಯ ಮುಗಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್​ ಟ್ವೀಟ್ ಒಂದನ್ನು ಮಾಡಿದೆ. ಈ ಟ್ವೀಟ್​ ಮಾಡುವಾಗ ಎಡವಟ್ಟೊಂದು ಸಂಭವಿಸಿದೆ. ಉತ್ತಮವಾಗಿ ಆಡಿದ್ದೀರಿ ಎಂದು ಹೇಳುವ ಬದಲು ಉತ್ತಮವಾಗಿ ಪಾವತಿಸಿದ್ದೀರಿ ಎಂದು ಹೇಳುವ ಅರ್ಥದಲ್ಲಿ ಚೆನ್ನೈ ಟ್ವೀಟ್​ ಬಂದಿದೆ. Well payed KKR ಎಂದು ಟ್ವೀಟ್​ ಮಾಡಲಾಗಿದೆ.

ಆದರೆ, ಅದು Well played KKR ಎಂದಾಗಬೇಕಿತ್ತು. ಚೆನ್ನೈ ಸ್ಪಾಟ್​​ ಫಿಕ್ಸಿಂಗ್​ ಪ್ರಕರಣಕ್ಕೆ ಸಿಲುಕಿ ಎರಡು ವರ್ಷ ಬ್ಯಾನ್​ ಆಗಿತ್ತು. ಈ ಕಪ್ಪು ಚುಕ್ಕಿ ಇನ್ನೂ ಮಾಸಿಲ್ಲ. ಹೀಗಾಗಿ, ಅನೇಕರು ಈ ಟ್ವೀಟ್​ಅನ್ನು ಹಳೆಯ ಘಟನೆಗೆ ತಳುಕು ಹಾಕಿದ್ದಾರೆ.

ಇದನ್ನೂ ಓದಿ: IPL 2021: ಚೆನ್ನೈನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದೇವೆ, ಮುಂಬೈನಲ್ಲೂ ಕ್ಲೀನ್ ಸ್ವೀಪ್ ಮಾಡ್ತೀವಿ; ಗ್ಲೆನ್ ಮ್ಯಾಕ್ಸ್​ವೆಲ್

Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ
ಜೀವಂತ ಕ್ಷಿಪಣಿಯನ್ನು ಗಮನಿಸಿದ ಸ್ಥಳೀಯರಿಂದ ಸೇನೆಗೆ ಮಾಹಿತಿ