AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಪಲ್​​ ಆಗಿ ಮದುವೆ ಆದ ಖ್ಯಾತ ಬೌಲರ್​: ವಿವಾಹ ಮಂಟಪದಲ್ಲಿ ಬೌಲಿಂಗ್​ ಪ್ರದರ್ಶನ!

ವರುಣ್​ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್​ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು.

ಸಿಂಪಲ್​​ ಆಗಿ ಮದುವೆ ಆದ ಖ್ಯಾತ ಬೌಲರ್​: ವಿವಾಹ ಮಂಟಪದಲ್ಲಿ ಬೌಲಿಂಗ್​ ಪ್ರದರ್ಶನ!
ವಿವಾಹವಾದ ವರುಣ್​ ಚಕ್ರವರ್ತಿ
ರಾಜೇಶ್ ದುಗ್ಗುಮನೆ
|

Updated on:Dec 13, 2020 | 3:37 PM

Share

ಕೊರೊನಾ ವೈರಸ್ ಮಧ್ಯೆಯೇ ಸಾಕಷ್ಟು ಜನರು ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಇದೇ ಅವಧಿಯಲ್ಲಿ ಹಸೆಮಣೆ ಏರಿದ್ದಾರೆ. ಈಗ, ಐಪಿಎಲ್​ನಲ್ಲಿ ಸದ್ದು ಮಾಡಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್​ ಬೌಲರ್​ ವರುಣ್​ ಚಕ್ರವರ್ತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರುಣ್​ ಚಕ್ರವರ್ತಿ ತಮ್ಮ ಬಹುಕಾಲದ ಗೆಳತಿ ನೇಹಾ ಖೇಡೇಕರ್​ ಜೊತೆ ಮದುವೆ ಆಗಿದ್ದಾರೆ. ತುಂಬಾನೇ ಖಾಸಗಿಯಾಗಿ ನಡೆದ ಈ ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿತ್ತು. ಅಚ್ಚರಿ ಎಂದರೆ, ವರುಣ್​ ವೇದಿಕೆಯ ಮೇಲೆ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ. ನೇಹಾ ಬ್ಯಾಟ್​ ಬೀಸಿದ್ದಾರೆ.

ಈ ವಿಡಿಯೋವನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಬರೆದುಕೊಂಡಿರುವ ಕೆಕೆಆರ್​, ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಹಾಗೂ ನೇಹಾಗೆ ಕೆಕೆಆರ್​ ಕಡೆಯಿಂದ ಅಭಿನಂದನೆಗಳು ಎಂದಿದೆ. ಅನೇಕರು ವರುಣ್​​ಗೆ ಅಭಿನಂದನೆ ಸಲ್ಲಿಸಿದ್ದಾರೆ.

2019ರಲ್ಲಿ ಕಿಂಗ್ಸ್​ ಇಲವೆನ್ ಪಂಜಾಬ್​ ತಂಡ ₹ 8.4 ಕೋಟಿಗೆ ವರುಣ್​ ಅವರನ್ನು ಖರೀದಿಸಿತ್ತು. ಮೊದಲ ಮ್ಯಾಚ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಅವರರಿಗೆ ಅವಕಾಶ ಸಿಕ್ಕಿರಲಿಲ್ಲ. ಕೆಕೆಆರ್​ ತಂಡ 2020ರಲ್ಲಿ ವರುಣ್​ ಅವರನ್ನು ₹ 4 ಕೋಟಿಗೆ ಖರೀದಿಸಿತ್ತು. 13 ಪಂದ್ಯಗಳಿಂದ 17 ವಿಕೆಟ್​ ಕಿತ್ತಿದ್ದ ವರುಣ್​ 6.84 ಎಕಾನಮಿ ರೇಟ್​ ಉಳಿಸಿಕೊಂಡಿದ್ದರು.

ಇವರ ಪರ್ಫಾರ್ಮೆನ್ಸ್​ ನೋಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವರುಣ್​ ಆಯ್ಕೆ ಆಗಿದ್ದರು. ಆದರೆ, ಅವರು ಗಾಯದ ಸಮಸ್ಯೆಯಿಂದ ಬಳಲಿದ ಕಾರಣ, ಅವರ ಬದಲು ನಟರಾಜನ್​ ಆಯ್ಕೆ ಮಾಡಲಾಗಿತ್ತು. ನಟರಾಜನ್​ ಈ ಬಾರಿ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ಫಿಟ್​​ ಆದರೂ ಫೈನಲ್​ ಆಗಿಲ್ಲ ರೋಹಿತ್​ ಎಂಟ್ರಿ: ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಹಿಟ್​ ಮ್ಯಾನ್

Published On - 3:28 pm, Sun, 13 December 20

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್