AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2021: ಸ್ವಜನ ಪಕ್ಷಪಾತ ಅಪವಾದ, ಅರ್ಜುನ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ ಫರ್ಹಾನ್ ಅಖ್ತರ್

ಅರ್ಜುನ್ ಫಿಟ್ನೆಸ್​​ಗಾಗಿ ಜಿಮ್​ನಲ್ಲಿ ಬೆವರು ಸುರಿಸುವುದನ್ನು ತಾನು ನೋಡಿರುವುದಾಗಿ ಹೇಳಿರುವ ಅಖ್ತರ್, ಆಟದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಲು ಅರ್ಜುನ್ ಬಹಳ ಕಷ್ಟಪಡುತ್ತಿದ್ದಾರೆ, ಅಂತ ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.

IPL Auction 2021: ಸ್ವಜನ ಪಕ್ಷಪಾತ ಅಪವಾದ, ಅರ್ಜುನ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟ ಫರ್ಹಾನ್ ಅಖ್ತರ್
ಅರ್ಜುನ್ ತೆಂಡೂಲ್ಕರ್
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 20, 2021 | 11:22 PM

Share

ಭಾರತದ ಲೆಜೆಂಡರಿ ಕ್ರಿಕೆಟರ್ ಸಚಿನ್​ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಇಂಡಿಯನ್ ಪ್ರಿಮೀಯರ್​ ಲೀಗ್​ ಟೂರ್ನಿಗೆ ಮುಂಬೈ ಇಂಡಿಯನ್ಸ್ ಪರ ಆಯ್ಕೆಯಾಗುತ್ತಿದ್ದಂತೆಯೇ ವಿವಾದಗಳು ಶುರವಿಟ್ಟುಕೊಂಡಿವೆ. ಅರ್ಜುನ್, ಮುಂಬೈ ಇಂಡಿಯನ್ಸ್​ ಟೀಮಿಗೆ ಆಯ್ಕೆಯಾಗುವಷ್ಟು ಪ್ರತಿಭಾವಂತನಲ್ಲ, ತಂದೆಯ ವಶೀಲಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ, ಅರೆಬರೆ ಕ್ರಿಕೆಟ್​ ಜ್ಞಾನ ಇರುವವರು ಟ್ವೀಟ್​ಗಳನ್ನು ಮಾಡಿ ಇದು ಸ್ವಜನ ಪಕ್ಷಪಾತದ ಪರಮಾವಧಿ, ಅಪ್ಪನಿಂದಾಗೇ ಅರ್ಜುನ್​ಗೆ ಸ್ಥಾನ ಅಂತೆಲ್ಲ ಬರೆದು ತಮ್ಮ ಕ್ರಿಕೆಟ್ ಜ್ಞಾನದ ಪ್ರವರವನ್ನು ಹರಿಬಿಡುತ್ತಿದ್ದಾರೆ.

ಆದರೆ, ಬಾಲಿವುಡ್ ಮತ್ತು ಕ್ರೀಡೆಗಳ ಬಗ್ಗೆ ಅಪಾರ ಆಸಕ್ತಿಯಿಟ್ಟುಕೊಂಡಿರುವ ಮತ್ತು ಅವುಗಳನ್ನು ನಿಯಮಿತವಾಗಿ ಫಾಲೋ ಸಹ ಮಾಡುವ ಫರ್ಹಾನ್ ಆಖ್ತರ್ ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. ಫಿಟ್ನೆಸ್​ಗಾಗಿ ಅರ್ಜುನ್​ ಜಿಮ್​ನಲ್ಲಿ ಬೆವರು ಸುರಿಸುವುದನ್ನು ತಾನು ನೋಡಿರುವುದಾಗಿ ಹೇಳಿರುವ ಅಖ್ತರ್, ಆಟದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಲು ಅರ್ಜುನ್ ಬಹಳ ಕಷ್ಟಪಡುತ್ತಿದ್ದಾರೆ, ಅಂತ ತಮ್ಮ ಟ್ವೀಟೊಂದರಲ್ಲಿ ಹೇಳಿದ್ದಾರೆ.

‘ಅರ್ಜುನ್ ತೆಂಡೂಲ್ಕರ್ ಕುರಿತು ನನಗೆ ಇದನ್ನು ಹೇಳಬೇಕೆನಿಸುತ್ತಿದೆ. ಅವರು ಮತ್ತು ನಾನು ಒಂದೇ ಜಿಮ್​ಗೆ ಹೋಗೋದು, ತಮ್ಮ ಫಿಟ್ನೆಸ್​ಗಾಗಿ ಅವರ ಅಪಾರ ಶ್ರಮಪಡುವುದನ್ನು ನಾನು ನೋಡಿದ್ದೇನೆ ಮತ್ತು ಉತ್ತಮ ಕ್ರಿಕೆಟರ್ ಆಗಬೇಕೆನ್ನುವೆಡೆ ಅವರಲ್ಲಿರುವ ಸಂಕಲ್ಪವನ್ನೂ ನಾನು ಗಮನಿಸುತ್ತಿದ್ದೇನೆ. ಅವರ ಮೇಲೆ ಸ್ವಜನ ಪಕ್ಷಪಾತದಂಥ ಅಪವಾದಗಳನ್ನು ಹೇರುವುದು ಅನುಚಿತ ಮತ್ತು ಕ್ರೌರ್ಯವೂ ಅನಿಸುತ್ತಿದೆ. ಅವರಲ್ಲಿರುವ ಉತ್ಸಾಹವನ್ನು ಕೊಲ್ಲುವ ಪ್ರಯತ್ನ ಮಾಡಬೇಡಿ, ಅವರ ಕರೀಯರ್ ಶುರುವಾಗುವ ಮೊದಲೇ ಅವರ ಸಾಮರ್ಥ್ಯವನ್ನು ಅಳೆಯುವ ಪ್ರಯತ್ನ ಬೇಡ,’ ಎಂದು ಅಖ್ತರ್ ಟ್ವೀಟ್​ ಮಾಡಿದ್ದಾರೆ.

ಗುರುವಾರದಂದು ನಡೆದ ಐಪಿಎಲ್ 2021 ಸೀಸನ್ ಮಿನಿ-ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅರ್ಜುನ್​ರನ್ನು ಅವರಮೂಲಬೆಲೆಯಾಗಿದ್ದ ರೂ. 20 ಲಕ್ಷಗಳಿಗೆ ಖರೀದಿಸಿತು. ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿದವು. ಹಲವಾರು ಟೀಕಾಕಾರು ಇದು ಸ್ವಜನ ಪಕ್ಷಪಾತವಲ್ಲದೆ ಬೇರೇನೂ ಅಲ್ಲ ಅಂತ ಹೇಳಿದ್ದಾರೆ. ಗುರುವಾರದಂದು ಹರಾಜು ಪ್ರಕ್ರಿಯೆ ಮುಗಿದ ನಂತರ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕರಾಗಿರುವ ಜಹೀರ್ ಖಾನ್ ಮಾಧ್ಯಮದವರೊಂದಿಗೆ ಮಾತಾಡಿ, ಆಲ್-ರೌಂಡರ್ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ ಎಂದು ಹೇಳಿದರು.

Farhan Akhtar

ಫರ್ಹಾನ್ ಅಖ್ತರ್.

‘ನೆಟ್ಸ್​ನಲ್ಲಿ ನಾನು ಸಾಕಷ್ಟು ಸಮಯವನ್ನು ಅವರೊಂದಿಗೆ ಕಳೆದಿದ್ದೇನೆ ಮತ್ತು ವೇಗದ ಬೌಲಿಂಗ್​ನ ಕೆಲ ಟ್ರಿಕ್​ಗಳನ್ನು ಅವರಿಗೆ ಹೇಳಿಕೊಡುವ ಪ್ರಯತ್ನವನ್ನೂ ಮಾಡಿದ್ದೇನೆ. ನಿಸ್ಸಂದೇಹವಾಗಿ ಅವರು ಕಠಿಣ ಶ್ರಮಪಡುವ ಯುವಕನಾಗಿದ್ದಾರೆ, ಕಲಿಯಬೇಕೆನ್ನುವ ಉತ್ಸಾಹ ಮತ್ತು ಆಸಕ್ತಿ ಅವರಲ್ಲಿದೆ. ಸಚಿನ್ ತೆಂಡೂಲ್ಕರ್ ಮಗನೆಂಬ ಹೊರೆಯನ್ನು ಅವರು ತನ್ನ ಕರೀಯರ್​ನಿಡೀ ಹೊರಬೇಕಾಗುತ್ತದೆ. ಮುಂಬೈ ತಂಡದ ವಾತಾವರಣ ಅವರಿಗೆ ಉತ್ತಮ ಕ್ರಿಕೆಟರ್ ಆಗಲು ನೆರವು ನೀಡಲಿದೆ. ಯುವಕನೊಬ್ಬ ಹರಾಜಿನಲ್ಲಿ ಆಯ್ಕೆಯಾದ ಕೂಡಲೇ ಚರ್ಚೆಗೆ ಗ್ರಾಸವಾಗಿರುವುದು ಹಿಂದೆ ಎಷ್ಟು ಸಲ ನಡೆದಿದೆ? ಅವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತು ಮಾಡಲೇಬೇಕು ಮತ್ತು ತನ್ನಲ್ಲಿ ಪ್ರತಿಭೆ ಇದೆ ಎನ್ನುವುದನ್ನು ತೋರಿಸಬೇಕು,’ ಅಂತ ಜಹೀರ್ ಖಾನ್ ಹೇಳಿದರು.

ಮುಂಬೈ ಇಂಡಿಯನ್ಸ್ ಅರ್ಜುನ್ ಜೊತೆ ನೇಥನ್ ಕೌಲ್ಟರ್ ನೈಲ್, ಜಿಮ್ಮಿ ನೀಷಮ್, ಯುಧವೀರ್ ಚರಕ್, ಮ್ಯಾಕ್ರೊ ಜಾನ್ಸೆನ್ ಮತ್ತು ಪಿಯುಶ್ ಚಾವ್ಲಾ ಅವರನ್ನು ಖರೀದಿಸಿತು.

ಇದನ್ನೂ ಓದಿ: IPL Auction 2021: ಮುಂಬೈ ಇಂಡಿಯನ್ಸ್ ಅಂತಿಮ ತಂಡದಲ್ಲಿರುವ ಸದಸ್ಯರ ಸಂಕ್ಷಿಪ್ತ ವಿವರ

ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ