AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗಾಂಡಾದಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೊಟೆಲ್​ ಬಳಿ ಅವಳಿ ಬಾಂಬ್​ ಸ್ಫೋಟ; ಆಟಗಾರರು ಸುರಕ್ಷಿತ

ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್​ ತಂಡಗಳು ಉಗಾಂಡಾಕ್ಕೆ ತೆರಳಿವೆ. ಅದರಲ್ಲಿ ಭಾರತ ತಂಡ ಆಫ್ರಿಕನ್​ ಲಿಮಿಟೆಡ್​ ಕನ್ವೆನ್ಷನ್​ ಸೆಂಟರ್​​ನಲ್ಲಿ ತಂಗಿತ್ತು. ಇದೇ ಹೋಟೆಲ್​ ಬಳಿಯೇ ಸ್ಫೋಟ ಉಂಟಾಗಿದೆ.

ಉಗಾಂಡಾದಲ್ಲಿ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಉಳಿದುಕೊಂಡಿರುವ ಹೊಟೆಲ್​ ಬಳಿ ಅವಳಿ ಬಾಂಬ್​ ಸ್ಫೋಟ; ಆಟಗಾರರು ಸುರಕ್ಷಿತ
ಉಗಾಂಡಾದಲ್ಲಿ ಅವಳಿ ಸ್ಫೋಟ
TV9 Web
| Edited By: |

Updated on:Nov 17, 2021 | 8:09 AM

Share

ಇಂಟರ್​​ನ್ಯಾಷನಲ್​ ಪ್ಯಾರಾ ಬ್ಯಾಡ್ಮಿಂಟನ್​ 2021 ಟೂರ್ನಿಯಲ್ಲಿ ಪಾಲ್ಗೊಳ್ಳಲು ಉಗಾಂಡಾಕ್ಕೆ ತೆರಳಿರುವ ಭಾರತೀಯ ಪ್ಯಾರಾ ಬ್ಯಾಡ್ಮಿಂಟನ್ (Para Badminton)​ ತಂಡ ಉಳಿದುಕೊಂಡಿರುವ ಹೋಟೆಲ್​ ಸಮೀಪವೇ ಎರಡು ಬಾಂಬ್ ಸ್ಫೋಟ (Bomb Blast) ಆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈ ಪ್ಯಾರಾ ಬ್ಯಾಡ್ಮಿಂಟನ್​ ತಂಡದಲ್ಲಿ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಪ್ರಮೋದ್ ಭಗತ್ (Pramod Bhagat)​, ಕಂಚಿನ ಪದಕ ವಿಜೇತ ಮನೋಜ್​ ಸರ್ಕಾರ್​ ಮತ್ತು ಹಾಲಿ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಮಾನಸಿ ಜೋಶಿ ಇದ್ದಾರೆ. ಈ ಬಾಂಬ್​ ಸ್ಫೋಟದಿಂತ ಭಾರತದ ಪ್ಯಾರಾ ಬ್ಯಾಡ್ಮಿಂಟನ್​ ತಂಡದ ಆಟಗಾರರಿಗಾಗಲಿ, ಕೋಚ್​ಗಾಗಲಿ ಯಾವುದೇ ತೊಂದರೆ ಆಗಿಲ್ಲ, ನಾವೆಲ್ಲ ಸುರಕ್ಷಿತರಾಗಿದ್ದೇವೆ ಎಂದು ಪ್ರಮೋದ್​ ಭಗತ್​ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. 

ಅಂದಹಾಗೆ ಈ ಪ್ಯಾರಾ ಬ್ಯಾಡ್ಮಿಂಟನ್​ ಟೂರ್ನಿ ನವೆಂಬರ್​ 16ರಿಂದ ಪ್ರಾರಂಭವಾಗಿದ್ದು 21ರವರೆಗೆ ನಡೆಯಲಿದೆ. ತನ್ನಿಮಿತ್ತ ಉಗಾಂಡಾದ ಕಂಪಾಲಕ್ಕೆ ತೆರಳಿರುವ ಭಾರತೀಯ ಆಟಗಾರರು, ಇನ್ನಿತರ ಸದಸ್ಯರು ಸೇರಿ 40 ಮಂದಿಯನ್ನು ಒಳಗೊಂಡ ತಂಡ ಅಲ್ಲಿನ ಹೋಟೆಲ್​​ನಲ್ಲಿ ಆಶ್ರಯ ಪಡೆದಿತ್ತು.  ಆ ಹೋಟೆಲ್​​ಗಿಂತ ಸುಮಾರು 100 ಮೀಟರ್​​ ಅಂತರದಲ್ಲಿ ಅವಳಿ ಸ್ಫೋಟ ಉಂಟಾಗಿದೆ. ಇದು ಆತ್ಮಾಹುತಿ ಬಾಂಬ್​ ಸ್ಫೋಟ ಎಂದೂ ಹೇಳಲಾಗಿದೆ. ಈ ಬಗ್ಗೆ ಪ್ಯಾರಾ ಬ್ಯಾಡ್ಮಿಂಟನ್​ ತಂಡ ಕೂಡ ಟ್ವೀಟ್ ಮಾಡಿದೆ.

ಭಾರತ ಸೇರಿ ಇನ್ನೂ ಕೆಲವು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್​ ತಂಡಗಳು ಉಗಾಂಡಾಕ್ಕೆ ತೆರಳಿವೆ. ಅದರಲ್ಲಿ ಭಾರತ ತಂಡ ಆಫ್ರಿಕನ್​ ಲಿಮಿಟೆಡ್​ ಕನ್ವೆನ್ಷನ್​ ಸೆಂಟರ್​​ನಲ್ಲಿ ತಂಗಿತ್ತು. ಇದೇ ಹೋಟೆಲ್​ ಬಳಿಯೇ ಸ್ಫೋಟ ಉಂಟಾಗಿದೆ. ಇನ್ನೂ ಕೆಲವು ದೇಶಗಳ ಆಟಗಾರರು ಸಿಟಿ ಸೆಂಟರ್​ ಬಳಿಕ ಮೋಜ್​ ಚೆಕರ್ಸ್​ ಹಾಲಿಡೇ ಇನ್​​ ಎಂಬ ಹೋಟೆಲ್​​ನಲ್ಲಿ ಉಳಿದುಕೊಂಡಿದ್ದಾರೆ.  ಟೂರ್ನಿಮೆಂಟ್​​ನ ಮೊದಲ ಪಂದ್ಯ ನಿನ್ನೆ (ನವೆಂಬರ್​ 16) ಇತ್ತು. ಪಂದ್ಯಕ್ಕೆಂದು ಕ್ರೀಡಾಂಗಣಕ್ಕೆ ತೆರಳಲು ಟೂರ್ನಿಮೆಂಟ್​ ಬಸ್​ ಹತ್ತಲೆಂದು ಭಾರತೀಯ ಆಟಗಾರರು ತಮ್ಮ ಸಹ ಸ್ಪರ್ಧಿಗಳೊಟ್ಟಿಗೆ ಹೊರಗೆ ಬಂದ ಸಂದರ್ಭದಲ್ಲಿ ದೊಡ್ಡದಾದ ಶಬ್ದ ಕೇಳಿದೆ ಎಂದು ಹೇಳಲಾಗಿದೆ.  ಈ ಸ್ಫೋಟದಿಂದ ಸ್ಥಳೀಯರು ತುಂಬ ಕಂಗಾಲಾಗಿದ್ದಾರೆ. ಇವರಿದ್ದ ವಸತಿಗೃಹದ ಸಮೀಪದ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿಯಾಗಿಲ್ಲ. ಅಂದಹಾಗೆ ಈ ಸ್ಫೋಟದಲ್ಲಿ ಉಂಟಾಗಿರುವ ಸಾವಿನ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯ; ಶಾಲಾ-ಕಾಲೇಜು ಮುಚ್ಚಲು, ಕಚೇರಿಗಳಿಗೆ ಶೇ.50ರಷ್ಟು ಉದ್ಯೋಗಿಗಳು ಬರಲು ಸೂಚನೆ

Published On - 8:08 am, Wed, 17 November 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ