AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mission World Cup Conclave: ಫುಟ್​ಬಾಲ್ ಪ್ರತಿಭಾನ್ವೇಷಣೆಗೆ ಟಿವಿ9 ಮರಾಠಿಯ ಮಹಾರಾಷ್ಟ್ರ ಮಹಾಸಂಕಲ್ಪ; 20 ಬಾಲಕರಿಗೆ ತರಬೇತಿ

ವಿಶ್ವಕಪ್ ಅಥವಾ ಒಲಿಂಪಿಕ್ಸ್‌ನಂತಹ ಕ್ರೀಡಾ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ಭಾರತ ಶ್ರೇಷ್ಠವಾಗಿ ಹೊರಹೊಮ್ಮುವ ದಿನ ಹೆಚ್ಚು ದೂರವಿಲ್ಲ ಎಂಬುದು ಖಾತರಿ ಇದೆ ಎಂದು ‘ಟಿವಿ9’ ನೆಟ್​​ವರ್ಕ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಬರುಣ್ ದಾಸ್ ಹೇಳಿದ್ದಾರೆ.

Mission World Cup Conclave: ಫುಟ್​ಬಾಲ್ ಪ್ರತಿಭಾನ್ವೇಷಣೆಗೆ ಟಿವಿ9 ಮರಾಠಿಯ ಮಹಾರಾಷ್ಟ್ರ ಮಹಾಸಂಕಲ್ಪ; 20 ಬಾಲಕರಿಗೆ ತರಬೇತಿ
ಎಫ್​ಸಿ ಬಾಯರ್ನ್ ಮಹಾರಾಷ್ಟ್ರ ಕಪ್​​ಗೆ ಆಯ್ಕೆಯಾದ 20 ಮಂದಿ ಬಾಲಕರನ್ನು ಮಹಾರಾಷ್ಟ್ರದ ಕ್ರೀಡಾ ಸಚಿವ ಗಿರೀಶ್ ಮಹಾಜನ್ ಅಭಿನಂದಿಸಿದರು. ‘ಟಿವಿ9’ ನೆಟ್​​ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ಹಾಗೂ ಇತರರು ಇದ್ದರು
ಗಣಪತಿ ಶರ್ಮಾ
|

Updated on:Mar 17, 2023 | 11:20 PM

Share

ಮುಂಬೈ: ಮರಾಠಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಟಿವಿ9 ಮರಾಠಿ’ಯು ಭಾರತಕ್ಕೆ ಫುಟ್​ಬಾಲ್ ವಿಶ್ವಕಪ್​ ಗೆಲುವಿನ ಕನಸು (World Cup Football chance) ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಮಹಾರಾಷ್ಟ್ರ ಮಹಾಸಂಕಲ್ಪ (Maharashtracha Mahasankalp) ಮಿಷನ್ ವರ್ಲ್ಡ್ ಕಪ್’ ಸಮಾವೇಶವನ್ನು ಮಾರ್ಚ್​ 14ರಂದು ಮುಂಬೈಯಲ್ಲಿ ಆಯೋಜಿಸಿತ್ತು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸಾಕ್ಷಿಯಾಗಿದ್ದು, ದೇಶದ ಅತಿದೊಡ್ಡ ದೂರದರ್ಶನ ಜಾಲವಾದ ‘ಟಿವಿ9’ ಜತೆ ಜಾಗತಿಕ ಮಟ್ಟದ ಫುಟ್​​ಬಾಲ್ ಕ್ಲಬ್ ಎಫ್​ಸಿ ಬಾಯರ್ನ್​ (FC Bayern) ಮ್ಯೂನಿಚ್ ಕ್ಲಬ್ ಕೈಜೋಡಿಸಿತು. ಮೂಲಸೌಕರ್ಯ ಅಭಿವೃದ್ಧಿ, ವ್ಯಾಪಾರ, ಕ್ರೀಡೆ ಮತ್ತು ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಮಹಾರಾಷ್ಟ್ರವು ದಾಪುಗಾಲಿಕ್ಕುತ್ತಿರುವುದನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ‘ಟಿವಿ9 ಮರಾಠಿ’ ಕೈಗೊಂಡ ಪ್ರಮುಖ ನಿರ್ಣಯದ ಅಂಗವಾಗಿ ಸಮಾವೇಶ ನೆರವೇರಿತು. ಇದರಲ್ಲಿ ದಿಗ್ಗಜರ ಸಮಾಗಮದೊಂದಿಗೆ ಫುಟ್‌ಬಾಲ್ ವಿಶ್ವಕಪ್‌ಗೆ ಭಾರತದ ಮಾರ್ಗಸೂಚಿಯನ್ನು ಪಟ್ಟಿಮಾಡಲಾಯಿತು. ಜತೆಗೆಮ ವಿಶ್ವದ ಪ್ರಮುಖ ಫುಟ್‌ಬಾಲ್ ಕ್ಲಬ್ ಎಂದೇ ಪರಿಗಣಿಸಲಾಗಿರುವ ಎಫ್​ಸಿ ಬಾಯರ್ನ್ ಭಾರತೀಯ ಆಯಾಮಕ್ಕನುಗುಣವಾಗಿ ಫುಟ್​​ಬಾಲ್ ಕುರಿತಾದ ತನ್ನ ತತ್ವವನ್ನು ಹಂಚಿಕೊಂಡಿತು.

ಎಫ್​ಸಿ ಬಾಯರ್ನ್ ತನ್ನ ‘ಮಿಯಾ ಸಾನ್ ಮಿಯಾ’ ಕಾರ್ಯಕ್ರಮದ ಮೂಲಕ ಜಾಗತಿಕವಾಗಿ ಯುವಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗೌರವ, ಮಹತ್ವಾಕಾಂಕ್ಷೆ, ನ್ಯಾಯಯುತ ಆಟ ಮತ್ತು ಟೀಮ್​ ಸ್ಪಿರಿಟ್​​ನೊಂದಿಗೆ ಆಡುವಂಥ ಮೌಲ್ಯಗಳ ಜತೆಗೆ ತರಬೇತಿ ನೀಡುತ್ತಿದೆ. ಪ್ರಸ್ತುತ ಹೊಂದಿರುವ ಸಹಭಾಗಿತ್ವದ ಅಡಿಯಲ್ಲಿ ಜ್ಞಾನ, ಸಂಪ್ರದಾಯ ಮತ್ತು ತರಬೇತಿ ವಿಧಾನಗಳ ನಿರಂತರ ವಿನಿಮಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ.

ಎಫ್​ಸಿ ಬಾಯರ್ನ್ ಮಹಾರಾಷ್ಟ್ರ ಕಪ್​​ಗೆ ಆಯ್ಕೆಯಾದ 20 ಮಂದಿ ಬಾಲಕರನ್ನು ಮಹಾರಾಷ್ಟ್ರದ ಕ್ರೀಡಾ ಸಚಿವ ಗಿರೀಶ್ ಮಹಾಜನ್ ಅಭಿನಂದಿಸಿದರು. ಈ ಬಾಲಕರು ತರಬೇತಿಗಾಗಿ ಜರ್ಮನಿಗೆ ತೆರಳಲಿದ್ದಾರೆ.

ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆಯತ್ತ ಭಾರತ; ಬರುಣ್ ದಾಸ್

ಭಾರತವು ವೈವಿಧ್ಯಮಯ ಕ್ಷೇತ್ರಗಳಲ್ಲಿ ಜಾಗತಿಕ ಕಾರ್ಯಸೂಚಿಯೊಂದಿಗೆ ಮುನ್ನಡೆಯುತ್ತಿದೆ. ಅರ್ಥಶಾಸ್ತ್ರ, ರಾಜಕೀಯದಿಂದ ತೊಡಗಿ ಇದೀಗ ಆಸ್ಕರ್​​ ವಿಭಾಗದಲ್ಲಿಯೂ ಜಾಗತಿಕವಾಗಿ ಪ್ರಭಾವ ಬೀರಲು ಆರಂಭಿಸಿದೆ. ವಿಶ್ವಕಪ್ ಅಥವಾ ಒಲಿಂಪಿಕ್ಸ್‌ನಂತಹ ಕ್ರೀಡಾ ಕ್ಷೇತ್ರದಲ್ಲಿಯೂ ಜಾಗತಿಕ ಮಟ್ಟದಲ್ಲಿ ಶ್ರೇಷ್ಠವಾಗಿ ಹೊರಹೊಮ್ಮುವ ದಿನ ಹೆಚ್ಚು ದೂರವಿಲ್ಲ ಎಂಬುದು ಖಾತರಿ ಇದೆ ಎಂದು ‘ಟಿವಿ9’ ನೆಟ್​​ವರ್ಕ್​ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಹಾಗೂ ಸಿಇಒ ಬರುಣ್ ದಾಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮತ್ತು ಎಫ್​ಸಿ ಬಾಯರ್ನ್ ಮ್ಯೂನಿಚ್ ಕ್ಲಬ್ ಜತೆಗೂಡಿ ಕಾರ್ಯನಿರ್ವಹಿಸಲು ಟಿವಿ9 ನೆಟ್​ವರ್ಕ್ ಉತ್ಸುಕವಾಗಿದೆ. ವಿಶ್ವಕಪ್ ಫುಟ್ಬಾಲ್ ಕನಸನ್ನು ನನಸಾಗಿಸಲು ಹಾಗೂ ಭಾರತದಲ್ಲಿರುವ ಫುಟ್ಬಾಲ್ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಅವಕಾಶಗಳನ್ನು ಒದಗಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಬರುಣ್ ದಾಸ್ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ರಂಜಿತ್ ಸಿಂಗ್ ಡಿಯೋಲ್, ಸ್ಪೋರ್ಟ್ಸ್ ಕಮಿಷನರ್ ಮತ್ತು ಯುವಜನ ಸೇವೆಯ ಸುಹಾಸ್ ದಿವಾಸೆ ಹಾಗೂ ಇತರರು ಹಾಜರಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Fri, 17 March 23

Follow Us
ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ
ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ
ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ, ಹಲ್ಲೆ!
ಪಂಚಮಸಾಲಿ ಪೀಠದ ಲೆಕ್ಕಪತ್ರ ಮಂಡನೆ ವೇಳೆ ಗಲಾಟೆ, ಹಲ್ಲೆ!
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್