AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್

ಹುರ್ಕಾಜ್ ಅವರಿಗೆ ಫೆಡರರ್ ನೇರ ಸೆಟ್​ಗಳಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಯಾಕೆಂದರೆ, 2002 ರಿಂದ ಈ ಟೂರ್ನಿಯಲ್ಲಿ ಅವರು ಯಾವತ್ತೂ ನೇರ ಸೆಟ್​ಗಳ ಪರಾಭವ ಕಂಡಿರಲಿಲ್ಲ. ವಿಂಬಲ್ಡನ್​ನಲ್ಲಿ ಅವರ ಇಂದಿನ ಸೋಲು ಒಂದು ಯುಗದ ಅಂತ್ಯದಂತೆ ಭಾಸವಾಯಿತು

ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್
ರೋಜರ್ ಫೆಡರರ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on:Jul 08, 2021 | 2:45 PM

Share

ವಿಂಬಲ್ಡನ್:  ಸುಮಾರು ಎರಡು ದಶಕಗಳಿಂದ ವಿಶ್ವದ ಆಗ್ರಮಾನ್ಯ ಟೆನಿಸ್ ಆಟಗಾರರಲ್ಲಿ ಒಬ್ಬರೆನಿಸಿಕೊಂಡು ತಮ್ಮ ಉತ್ಕೃಷ್ಟ ಕರೀಯರ್​ನಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಸ್ವಿಜರ್​ಲ್ಯಾಂಡ್​ನ ರೋಜರ್ ಫೆಡರರ್ ಅವರ ವಿಂಬಲ್ಡನ್ ಯಾತ್ರೆ ಕೇವಲ ಈ ವರ್ಷ ಮಾತ್ರವಲ್ಲ ಅವರು ಬದುಕಿನ ಉಳಿದ ಭಾಗಕ್ಕೂ ಕೊನೆಗೊಂಡಂತಾಗಿದೆ. 39 ವರ್ಷ ವಯಸ್ಸಿನ ಫೆಡರರ್ ಮುಂದಿನ ವರ್ಷ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಸಾಧ್ಯತೆ ಪ್ರಾಯಶಃ ಇಲ್ಲ. ಆದರೆ ಬ್ರಿಟನ್ನಿನ ಕ್ರಿಡಾಸಕ್ತರು ಈ ಲೆಜೆಂಡರಿ ಆಟಗಾರನ ಮನಮೋಹಕ ಅಟವನ್ನು ಬಹಳ ದಿನಗಳವರೆಗೆ ನೆನಪಿಲ್ಲಿಟ್ಟುಕೊಳ್ಳಲಿದ್ದಾರೆ. ವಿಂಬಲ್ಡನ್ ಗ್ರಾಸ್ ಕೋರ್ಟ್​ ಮೇಲೆ ಅವರು ನಿಜಕ್ಕೂ ಚಕ್ರಾಧಿಪತಿಯಂತೆ ಮೆರೆದರು. ಈ ವರ್ಷ ಅವರು ವಿಂಬಲ್ಡನ್ ಟ್ರೋಫಿ ಗೆದ್ದು ವೃತ್ತಪರ ಟೆನಿಸ್​ಗೆ ವಿದಾಯ ಹೇಳಬಹುದು ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರ ಆಸೆಯನ್ನು ಪೋಲೆಂಡ್​ ಯುವ ಆಟಗಾರ ಹ್ಯುಬರ್ಟ್ ಹರ್ಕಾಜ್ ಮಣ್ಣುಗೂಡಿಸಿದರು.

ಹರ್ಕಾಜ್ ಅವರಿಗೆ ಫೆಡರರ್ ನೇರ ಸೆಟ್​ಗಳಲ್ಲಿ ಸೋತಿದ್ದು ಅಚ್ಚರಿಯೇ ಸರಿ. ಯಾಕೆಂದರೆ, 2002 ರಿಂದ ಈ ಟೂರ್ನಿಯಲ್ಲಿ ಅವರು ಯಾವತ್ತೂ ನೇರ ಸೆಟ್​ಗಳ ಪರಾಭವ ಕಂಡಿರಲಿಲ್ಲ. ವಿಂಬಲ್ಡನ್​ನಲ್ಲಿ ಅವರ ಇಂದಿನ ಸೋಲು ಒಂದು ಯುಗದ ಅಂತ್ಯದಂತೆ ಭಾಸವಾಯಿತು. ಪಂದ್ಯವನ್ನು ನೋಡುತ್ತಿದ್ದವರ ಹೃದಯಗಳೂ ಭಾರವಾಗಿದ್ದವು.

ಬ್ರಿಟನ್ ಆಟಗಾರ ಆಂಡಿ ಮುರ್ರೆ ಮತ್ತು ಅಮೇರಿಕಾದ ವಿಲಿಯಮ್ಸ್ ಸಹೋದರಿಯರನ್ನು ಹಲವಾರು ವರ್ಷಗಳಿಂದ ವಿಂಬಲ್ಡನ್​ನಲ್ಲಿ ನೋಡುತ್ತಿರುವವರು, ಫೇಡರರ್​ ಇದೇ ಕೊನೆ ಬಾರಿ ಇಲ್ಲಿ ನೋಡಿದ್ದು ಅಂತ ಒಪ್ಪಿಕೊಳ್ಳಲು ತಯಾರಿಲ್ಲ. ತಮ್ಮ ನಿರ್ಣಯದ ಬಗ್ಗೆ ಅವರು ಇಷ್ಟರಲ್ಲೇ ಸುಳಿವು ನೀಡಬಹುದು. ಅವರ ಇತ್ತೀಚಿನ ಫಿಟ್​ನೆಸ್ ಗಮನಿಸುತ್ತಿದ್ದರೆ, ‘ಫೆಡ್ಡೀ ನಿಂಗೆ ವಯಸ್ಸಾಯ್ತೋ,’ ಅನ್ನಲೇಬೇಕಾಗಿದೆ.

ವಿಂಬಲ್ಡನ್ ಸೆಂಟರ್ ಕೋರ್ಟ್​ ಜೊತೆ ಫೆಡರರ್​ ಅವರದ್ದು ಅವಿನಾಭಾವ ಸಂಬಂಧ. ಇದೇ ಕೋರ್ಟ್​ನಲ್ಲಿ ಇಂದಿನ ಪಂದ್ಯ ಅವರು ನೇರ ಸೆಟ್​ಗಳಲ್ಲಿ ಸೋತಿದ್ದು ನಿಜವಾದರೂ, ಅದು ಹೀನಾಯ ಸೋಲೇನೂ ಅನಿಸಲಿಲ್ಲ. 6-3, 7-6 6-0 ಸ್ಕೋರ್​ಲೈನ್ ಪಂದ್ಯ ಏಕಪಕ್ಷೀಯವಾಗಿತ್ತು ಎಂಬ ಭಾವನೆ ಮೂಡಿಸುತ್ತದೆ. ಅದರೆ ಅವರ ಚಮತ್ಕಾರಿಕ ಮತ್ತು ನೋಡುಗರನ್ನು ಮಂತ್ರಮುಗ್ಧಗೊಳಿಸುವ ಆಟದ ಸೊಬಗು ಇಡೀ ಪಂದ್ಯದಲ್ಲಿ ಅಲ್ಲದಿದ್ದರೂ ಝಲಕ್​ಗಳಲ್ಲಿ ಕಂಡುಬಂತು. ಆರಡಿ ಐದಿಂಚು ಎತ್ತರದ ಹರ್ಕಾಜ್ ಇವತ್ತು ಮೈದಾನದಲ್ಲಿ ಆವೇಶಕ್ಕೊಳಗಾದವರಂತೆ ಆಡಿದರು. ಅವರಿಂದ ತಪ್ಪು ಘಟಿಸುವುದು ಸಾಧ್ಯವೇ ಇಲ್ಲವೇನೋ ಎಂಬ ಸನ್ನಿವೇಶ ಸೆಂಟರ್​ ಕೋರ್ಟ್​ನಲ್ಲಿತ್ತು.

ಎಂಟು ಬಾರಿ ವಿಂಬಲ್ಡನ್ ಚಾಂಪಿಯನ್​ಶಿಪ್​ ಗೆದ್ದಿರುವ ಫೆಡರರ್​ಗೆ ಈ ಟೂರ್ನಿಯಲ್ಲಿ ಇಂದಿನದು 119 ನೇ ಪಂದ್ಯವಾಗಿತ್ತು. ಅಷ್ಟು ಪಂದ್ಯಗಳಲ್ಲಿ ಸ್ವಿಸ್ ಆಟಗಾರ ಕೇವಲ 14 ಬಾರಿ ಮಾತ್ರ ಸೋಲು ಅನುಭವಿಸಿದ್ದಾರೆ ಅಂದರೆ ಅವರು ಯಾವ ಪರಿ ಇಲ್ಲಿ ಹೆಚ್ಚುಗಾರಿಕೆ ಮೆರೆದಿದ್ದಾರೆ ಅನ್ನೋದು ವೇದ್ಯವಾಗುತ್ತದೆ.

ಇದನ್ನೂ ಓದಿ: Wimbledon 2021: ಸುಲಭವಾಗಿ ಗೆದ್ದು, 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ ನೊವಾಕ್ ಜೊಕೊವಿಕ್

Published On - 12:34 am, Thu, 8 July 21

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ