Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs KKR, IPL 2021 Match 21 Result: ಸುಲಭವಾಗಿ ಗೆದ್ದ ಕೋಲ್ಕತ್ತಾ; ಸೋಲಿನ ಸುಳಿಗೆ ಮತ್ತೆ ಸಿಲುಕಿದ ಪಂಜಾಬ್

TV9 Web
| Updated By: ganapathi bhat

Updated on:Sep 05, 2021 | 10:45 PM

PBKS vs KKR Live Score in Kannada: ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

PBKS vs KKR, IPL 2021 Match 21 Result: ಸುಲಭವಾಗಿ ಗೆದ್ದ ಕೋಲ್ಕತ್ತಾ; ಸೋಲಿನ ಸುಳಿಗೆ ಮತ್ತೆ ಸಿಲುಕಿದ ಪಂಜಾಬ್
ಸುಲಭವಾಗಿ ಗೆದ್ದ ಕೋಲ್ಕತ್ತಾ

ಅಹಮದಾಬಾದ್: ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯವು ಇಂದು ಅಹಮದಾಬಾದ್​ನಲ್ಲಿ ನಡೆಯಿತು. ಸೋಲಿನ ಸುಳಿಗೆ ಸಿಲುಕಿದ ಕೋಲ್ಕತ್ತಾ ಪಂಜಾಬ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕನ ಆಟವಾಡಿದ ಮೋರ್ಗನ್ ಅಜೇಯ 47 ರನ್​ಗಳ ಆಟ ಆಡಿದರು. ಇದರ ಫಲವಾಗಿ ಕೋಲ್ಕತ್ತಾ 5 ವಿಕೆಟ್​ ಕಳೆದುಕೊಂಡು ಗೆಲುವಿನ ಕೆಕೆ ಹಾಕಿತು. ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಕೋಲ್ಕತ್ತಾ ಆರಂಭದಿಂದಲೂ ಪಂಜಾಬ್ ದಾಂಡಿಗರ ಮೇಲೆ ಸವಾರಿ ಮಾಡಿತು. ಪಂಜಾಬ್ ಪರ ಯಾವೊಬ್ಬ ಆಟಗಾರನೂ ಸಹ ನಿಂತು ಆಡುವ ತಾಳ್ಮೆ ತೋರಲಿಲ್ಲ. ಆರಂಭದಲ್ಲಿ ಮಾಯಾಂಕ್​ ಸಿಡಿಸಿದ 31 ರನ್​ಗಳನ್ನು ಬಿಟ್ಟರೆ, ಕೊನೆಯಲ್ಲಿ ಬಂದ ಜೋರ್ಡಾನ್ ಗಳಿಸಿದ 30 ರನ್​ಗಳೇ ತಂಡದ ಸಹಾಯಕ್ಕೆ ಬಂದವು. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡ ಪಂಜಾಬ್ 124 ರನ್​ಗಳ ಅಲ್ಪ ಮೊತ್ತ ಕಲೆಹಾಕಿತು.

124 ರನ್​ಗಳ ಬೆನ್ನತ್ತಿದ ಕೋಲ್ಕತ್ತಾಕ್ಕೆ ಆರಂಭದಲ್ಲೇ ಪಂಜಾಬ್ ವೇಗಿಗಳು ಶಾಕ್​ ಮೇಲೆ ಶಾಕ್​ ನೀಡಿದರು. ಪ್ರಮುಖ 3 ವಿಕೆಟ್​ಗಳು ಬಹುಬೇಗನೇ ಉರುಳಿದವು. ಆದರೆ ನಂತರ ಜೊತೆಗೂಡಿದ ನಾಯಕ ಮೋರ್ಗನ್ ಹಾಗೂ ರಾಹುಲ್ ತ್ರಿಪಾಠಿ ಪಂಜಾಬ್​ ತಂಡದಿಂದ ಗೆಲುವನ್ನ ಕಿತ್ತುಕೊಳ್ಳಲು ಆರಂಭಿಸಿದರು. ತ್ರಿಪಾಠಿ 41 ರನ್​ಗಳಿಸಿ ಔಟಾದರೆ, ಮೋರ್ಗನ್ 47 ರನ್​ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

LIVE NEWS & UPDATES

The liveblog has ended.
  • 26 Apr 2021 11:06 PM (IST)

    ಸುಲಭವಾಗಿ ಗೆದ್ದ ಕೋಲ್ಕತ್ತಾ

    ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 21ನೇ ಪಂದ್ಯವು ಇಂದು ಅಹಮದಾಬಾದ್​ನಲ್ಲಿ ನಡೆಯಿತು. ಸೋಲಿನ ಸುಳಿಗೆ ಸಿಲುಕಿದ ಕೋಲ್ಕತ್ತಾ ಪಂಜಾಬ್ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

  • 26 Apr 2021 10:53 PM (IST)

    ರಸೆಲ್ ಔಟ್, ಕೆಕೆಆರ್ 98/5

    ಗೆಲುವಿನ ಸನಿಹದಲ್ಲಿ ಕೆಕೆಆರ್​ ಆಟಗಾರರು ಎಡವುದಿದ್ದಾರೆ. ಪಂದ್ಯವನ್ನು ಸುಲಭವಾಗಿ ಗೆಲ್ಲುವ ಅವಕಾಶವಿದ್ದರು ಕೋಲ್ಕತ್ತಾ ಆಟಗಾರರು ಇಲ್ಲದ ರನ್ ಕದಿಯಲು ಹೋಗಿ ರನ್​ಔಟ್​ ಆಗಿದ್ದಾರೆ.

  • 26 Apr 2021 10:49 PM (IST)

    ರಸೆಲ್ ಬೌಂಡರಿ

    14ನೇ ಓವರ್ ಎಸೆಯುತ್ತಿರುವ ಜೋರ್ಡಾನ್ ಅವರ 4ನೇ ಎಸೆತವನ್ನು ರಸೆಲ್ ಕೀಪರ್​ ಹಿಂದೆ ಬೌಂಡರಿ ಬಾರಿಸಿದ್ದಾರೆ. ಪಂಜಾಬ್ ನಾಯಕ ರಾಹುಲ್​ಗೆ ಕೆಕೆಆರ್​ ಆಟಗಾರರ ರನ್​ ವೇಗಕ್ಕೆ ಕಡಿವಾಣ ಹಾಕುವುದು ದೊಡ್ಡ ತಲೆನೋವಾಗಿದೆ.

  • 26 Apr 2021 10:34 PM (IST)

    ತ್ರಿಪಾಠಿ ಔಟ್

    ಮೋರ್ಗನ್ ಜೊತೆ ಗೆಲುವಿನ ಆಟ ಆಡುತ್ತಿದ್ದ ತ್ರಿಪಾಠಿ 41 ರನ್​ ಗಳಿಸಿ ಔಟಾಗಿದ್ದಾರೆ. ಆದರೆ ಗೆಲುವಿನ ಲೆಕ್ಕಾಚಾರ ಈಗ ಕೋಲ್ಕತ್ತಾ ಪರವಾಗಿದೆ. ನಾಯಕ ಮೋರ್ಗನ್ ಜೊತೆ ಈಗ ರಸೆಲ್ ಜೊತೆಯಾಗಿದ್ದಾರೆ

  • 26 Apr 2021 10:28 PM (IST)

    10 ಓವರ್ ಮುಕ್ತಾಯ, ಕೆಕೆಆರ್ 77/3

    ಮೋರ್ಗನ್ ಹಾಗೂ ರಾಹುಲ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಈ ಜೋಡಿ 50 ರನ್​ಗಳ ಜೊತೆಯಾಟ ಸಹ ಆಡಿದೆ. ಈಗಾಗಲೇ ಗೆಲುವಿನ ಸನಿಹಕ್ಕೆ ತಂಡ ಬಂದು ನಿಂತಿದೆ. ವಿಕೆಟ್​ ತೆಗೆಯದೆ ಹೋದರೆ ಪಂಜಾಬ್​​ಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

  • 26 Apr 2021 10:16 PM (IST)

    8ನೇ ಓವರ್ ಮುಕ್ತಾಯ, ಕೆಕೆಆರ್ 59/3

    ಆರಂಭದಲ್ಲಿ ವಿಕೆಟ್​ ಕಳೆದುಕೊಂಡಿದ್ದರು ಸಹ ಕೆಕೆಆರ್​ ನಂತರದಲ್ಲಿ ಉತ್ತಮ ಬ್ಯಾಟಿಂಗ್ ಆಡುತ್ತಿದೆ. ನಾಯಕ ಮೋರ್ಗನ್​ ಜೊತೆಗೂಡಿರುವ ತ್ರಿಪಾಠಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ತಂಡವನ್ನು 50 ರನ್​ಗಳ ಗಡಿ ಸಹ ದಾಟಿಸಿದೆ.

  • 26 Apr 2021 10:02 PM (IST)

    ತ್ರಿಪಾಠಿ ಬ್ಯಾಟಿಂಗ್ ಅಬ್ಬರ

    ಪ್ರಮುಖ 3 ವಿಕೆಟ್​ ಕಳೆದುಕೊಂಡಿದ್ದರು ಸಹ ರಾಹುಲ್ ತ್ರಿಪಾಠಿ ತಮ್ಮ ನೈಜ ಆಟವನ್ನು ಮುಂದುವರೆಸಿದ್ದಾರೆ. ಹರ್ಷ್​ದೀಪ್​ ಓವರ್​ನಲ್ಲಿ ರಾಹುಲ್​ ಬೌಂಡರಿ ಬಾರಿಸಿದರು. ಅದ್ಭುತ ಕ್ಯಾಚ್ ಹಿಡಿದಿದ್ದ ಬಿಷ್ಣೋಯಿ, ಕಳಪೆ ಫಿಲ್ಡಿಂಗ್​ನಿಂದಾಗಿ ಬೌಂಡರಿ ಗಳಿಸಿದರು.

  • 26 Apr 2021 09:54 PM (IST)

    ಸಿಕ್ಸ್​ ಮೂಲಕ ಖಾತೆ ತೆರೆದ ಮೋರ್ಗನ್

    ಪ್ರಮುಖ 3 ವಿಕೆಟ್​ ಕಳೆದುಕೊಂಡ ಬಳಿಕ ಬ್ಯಾಟಿಂಗ್​ಗೆ ಇಳಿದಿರುವ ನಾಯಕ ಮೋರ್ಗನ್​ ತಮ್ಮ ಖಾತೆಯನ್ನು ರನ್ ಮೂಲಕ ತೆರೆದಿದ್ದಾರೆ. ಶಮಿ ಎಸೆತವನ್ನು ಮೋರ್ಗನ್​ ಸಿಕ್ಸರ್​ಗೆ ಅಟ್ಟಿದರು.

  • 26 Apr 2021 09:50 PM (IST)

    3ನೇ ವಿಕೆಟ್ ಪತನ

    ಕೋಲ್ಕತ್ತಾ ಕತೆ ಸಹ ಪಂಜಾಬ್ ಹೊರತಾಗಿಲ್ಲ. ಆರಂಭದಿಂದಲೇ ಕೋಲ್ಕತ್ತಾ ಸಹ ವಿಕೆಟ್​ ಕಳೆದುಕೊಳ್ಳಲು ಆರಂಭಿಸಿದೆ. ಈಗಾಗಲೇ ರಾಣಾ, ಗಿಲ್ ಕಳೆದುಕೊಂಡಿದ್ದ ತಂಡಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಯಾವುದೇ ರನ್ ಗಳಿಸದೆ ನರೈನ್ ವಿಕೆಟ್​ ಒಪ್ಪಿಸಿದ್ದಾರೆ. ರವಿ ಬಿಷ್ಣೋಯಿ ಅದ್ಭುತ ಕ್ಯಾಚ್​ ಹಿಡಿದು ನರೈನ್​ ಬಲಿಗೆ ಕಾರಣರಾದರು.

  • 26 Apr 2021 09:42 PM (IST)

    ಗಿಲ್ ಔಟ್

    ಪಂಜಾಬ್ ಬೌಲರ್​ಗಳು ಕರಾರುವಕ್ಕಾದ ಬೌಲಿಂಗ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ ರಾಣಾ ಶೂನ್ಯಕ್ಕೆ ಔಟಾದರೆ, 2ನೇ ಓವರ್​ನಲ್ಲಿ ಗಿಲ್​ ಅವರನ್ನು ಶಮಿ ಕ್ಲಿನ್​ ಎಲ್​ಬಿಡ್ಬ್ಲ್ಯೂ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ಕೆಕೆಆರ್​ನ 2ನೇ ವಿಕೆಟ್​ ಉರುಳಿದೆ.

  • 26 Apr 2021 09:35 PM (IST)

    ರಾಣಾ ಶೂನ್ಯಕ್ಕೆ ಔಟ್, ಕೋಲ್ಕತ್ತಾ 5/1

    ಬ್ಯಾಟಿಂಗ್ ಆರಂಭಿಸಿರುವ ಕೋಲ್ಕತ್ತಾಗೆ ಆಘಾತ ಎದುರಾಗಿದೆ. ಹೆನ್ರಿಕ್ಸ್​ ಎಸೆದ ಮೊದಲ ಓವರ್​ನಲ್ಲಿ ಖಾತೆ ತೆರೆಯದೆ ಕೋಲ್ಕತ್ತಾದ ಆರಂಭಿಕ ಆಟಗಾರ ರಾಣಾ ಔಟಾಗಿದ್ದಾರೆ.

  • 26 Apr 2021 09:33 PM (IST)

    ಬ್ಯಾಟಿಂಗ್ ಆರಂಭಿಸಿದ ಕೆಕೆಆರ್

    ಪಂಜಾಬ್ ನೀಡಿರುವ ಅಲ್ಪಮೊತ್ತವನ್ನು ಬೆನ್ನಟ್ಟಿರುವ ಕೆಕೆಆರ್​ ತಂಡದ ಗಿಲ್ ಹಾಗೂ ರಾಣಾ ಉತ್ತಮ ಆರಂಭ ಪಡೆದಿದ್ದಾರೆ. ತಾವು ಎದುರಿಸಿದ ಮೊದಲ ಎಸೆತವನ್ನೇ ಗಿಲ್ ಬೌಂಡರಿಗಟ್ಟಿದ್ದಾರೆ.

  • 26 Apr 2021 09:17 PM (IST)

    ಪಂಜಾಬ್ 124 ರನ್​

    ತನ್ನ ಇನ್ನಿಂಗ್ಸ್​ನ ಎಲ್ಲಾ ಓವರ್​ಗಳನ್ನು ಮುಗಿಸಿರುವ ಪಂಜಾಬ್ ಕೋಲ್ಕತ್ತಾಕ್ಕೆ ಗೆಲ್ಲಲು 124 ರನ್​ಗಳ ಗುರಿ ನೀಡಿದೆ. ಅಂತಿಮ ಓವರ್​ಗಳಲ್ಲಿ ಜೋರ್ಡಾನ್ ಅವರ ಪ್ರಮುಖ 2 ಸಿಕ್ಸರ್​ಗಳ ನೆರವಿನಿಂದಾಗಿ ಪಂಜಾಬ್ ಶತಕ ಪೂರ್ಣಗೊಳಿಸಲು ಕಾರಣವಾಯ್ತು.

  • 26 Apr 2021 09:12 PM (IST)

    ಜೋರ್ಡಾನ್ ಸಿಕ್ಸರ್

    ಅಂತಿಮ ಓವರ್​ಗಳಲ್ಲಿ ಪಂಜಾಬ್​ ತಂಡ ಕೊಂಚ ಲಯಕ್ಕೆ ಮರಳಿದೆ. ತಂಡದ ಆಲ್​ರೌಂಡರ್​ ಜೋರ್ಡಾನ್ ಅಂತಿಮ ಓವರ್​ಗಳಲ್ಲಿ ಸಿಕ್ಸರ್​ ಸಿಡಿಸಲು ಆರಂಭಿಸಿದ್ದಾರೆ. ಅಂತಿಮ ಓವರ್​ ಬ್ಯಾಟಿಂಗ್ ಮಾಡುತ್ತಿರುವ ಜೋರ್ಡಾನ್ ಮೊದಲ ಎಸೆತದಲ್ಲೆ ಸಿಕ್ಸರ್ ಸಿಡಿಸಿದ್ದಾರೆ.

  • 26 Apr 2021 09:08 PM (IST)

    ಶತಕ ಪೂರೈಸಿದ ಪಂಜಾಬ್

    8 ವಿಕೆಟ್​ ಕಳೆದುಕೊಂಡು ಅಲ್ಪ ರನ್​ಗಳಿಗೆ ಸೊರಗುತ್ತಿರುವ ಪಂಜಾಬ್ 100 ರನ್​ ಪೂರ್ಣಗೊಳಿಸಿದೆ. ಆದರೆ ಈಗಾಗಲೆ ಪ್ರಮುಖ ವಿಕೆಟ್​ಗಳು ಉರುಳಿದ್ದು, 19ನೇ ಓವರ್​ ಚಾಲ್ತಿಯಲ್ಲಿದೆ.

  • 26 Apr 2021 09:01 PM (IST)

    ಶಾರುಖ್ ಔಟ್, ಪಂಜಾಬ್ 96/7

    ಒಂದು ಭರ್ಜರಿ ಸಿಕ್ಸರ್ ಸಿಡಿಸಿ ತಂಡಕ್ಕೆ ರನ್ ಹೆಚ್ಚಿಸುತ್ತಿದ್ದ ಶಾರುಖ್ ಖಾನ್, ಕನ್ನಡಿಗ ಪ್ರಸಿದ್ದ್ ಕೃಷ್ಣ ಬೌಲಿಂಗ್​ನಲ್ಲಿ ಬಿಗ್​ ಶಾಟ್​ಗೆ ಯತ್ನಿಸಿ ವಿಕೆಟ್ ಕೈಚೆಲ್ಲಿದ್ದಾರೆ.ವಿಕೆಟ್​ಗೂ ಮುನ್ನ ಶಾರುಖ್ 13 ರನ್​ ಗಳಿಸಿದ್ದರು.

  • 26 Apr 2021 08:47 PM (IST)

    ಪೂರನ್ ಔಟ್, ಪಂಜಾಬ್ 80/6

    ಆರಂಭದಿಂದಲೂ ಪೆವಿಲಿಯನ್ ಪರೆಡ್​ ನಡೆಸುತ್ತಿರುವ ಪಂಜಾಬ್ ದಾಂಡಿಗರು ತಾವು ಬ್ಯಾಟಿಂಗ್​ಗೆ ಬಂದಷ್ಟೇ ವೇಗವಾಗಿ ಕ್ರಿಸ್​ಗೆ ಮರಳುತ್ತಿದ್ದಾರೆ. ಪಂಜಾಬ್​ ತಂಡದ ಬ್ಯಾಟಿಂಗ್​ ಆಧಾರವಾಗಿದ್ದ ಪೂರನ್​ ವರುಣ್​ ಬೌಲಿಂಗ್​ನಲ್ಲಿ ಕ್ಲಿನ್​ ಬೌಲ್ಡ್​ ಆಗಿದ್ದಾರೆ. ಔಟಾಗುವುದಕ್ಕೂ ಮುನ್ನ ಪೂರನ್ 19 ರನ್ ಗಳಿಸಿದ್ದರು.

  • 26 Apr 2021 08:41 PM (IST)

    5ನೇ ವಿಕೆಟ್ ಪತನ, ಪಂಜಾಬ್ 77/5

    ತಂಡ ಕೊಂಚ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಪಂಜಾಬ್​ಗೆ ನರೈನ್ ಶಾಕ್​ ನೀಡಿದ್ದಾರೆ. ಪೂರನ್ ಜೊತೆಯಾಗಿದ್ದ ಹೆನ್ರಿಕ್ಸ್​ ಅವರನ್ನು ನರೈನ್​ ತಮ್ಮ ಗೂಗ್ಲಿ ಇಂದ ಕ್ಲೀನ್ ಬೌಲ್ಡ್​ ಮಾಡಿದ್ದಾರೆ.

  • 26 Apr 2021 08:38 PM (IST)

    ಪೂರನ್ ಸಿಕ್ಸರ್

    4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿರುವ ಪಂಜಾಬ್​ಗೆ ಪೂರನ್ ಆಸರೆಯಾಗಿದ್ದಾರೆ. 13ನೇ ಓವರ್ ಎಸೆಯಲು ಬಂದ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ತಂಡದ ರನ್ ಹೆಚ್ಚಿಸಿದ್ದಾರೆ.

  • 26 Apr 2021 08:33 PM (IST)

    ಮಾಯಾಂಕ್ ಔಟ್, ಪಂಜಾಬ್ 60/4

    31 ರನ್ ಗಳಿಸಿದ್ದ ಕನ್ನಡಿಗ ಮಾಯಾಂಕ್​ ಪಂಜಾಬ್​ ತಂಡದ ಬ್ಯಾಟಿಂಗ್ ಆದಾರವಾಗಿದ್ದರು. ಆದರೆ ರನ್​ ಕೊರೆತಯಿದ್ದುದ್ದರಿಂದ ರನ್​ ವೇಗ ಹೆಚ್ಚಿಸಲು ಹೋದ ಮಾಯಾಂಕ್ ನರೈನ್ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸಲು ಯತ್ನಿಸಿ ಸೀದಾ ರಾಹುಲ್ ತ್ರಿಪಾಠಿ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:25 PM (IST)

    ಕೆಕೆಆರ್ ಮೇಲುಗೈ

    ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಕೆಕೆಆರ್​, ಪಂಜಾಬ್​ ಬ್ಯಾಟಿಂಗ್​ ಪಡೆಯ ಮೇಲೆ ಪ್ರಬಲ ದಾಳಿ ನಡೆಸುತ್ತಿದ್ದಾರೆ. ಈಗಾಗಲೇ 10 ಓವರ್ ಮುಗಿಸಿರುವ ಕೋಲ್ಕತ್ತಾ ಕೇವಲ 55 ರನ್ ನೀಡಿದೆ. ಮಾಯಾಂಕ್ ಹಾಗೂ ಪೂರನ್ ಬ್ಯಾಟಿಂಗ್​ನಲ್ಲಿದ್ದಾರೆ.

  • 26 Apr 2021 08:12 PM (IST)

    3ನೇ ವಿಕೆಟ್ ಪತನ

    ಪಂಜಾಬ್ ಪಾಳಯದ ದಾಂಡಿಗರು ಪೆವಿಲಿಯನ್ ಪರೆಡ್​ ಆರಂಭಿಸಿದ್ದಾರೆ. ಗೇಲ್​ ಶೂನ್ಯಕ್ಕೆ ಔಟಾದ ಬಳಿಕ ಮೈದಾನಕ್ಕೆ ಬಂದಿದ್ದ ದೀಪಕ್ ಹೂಡ ಕೂಡ ಗೇಲ್ ದಾರಿ ಹಿಡಿದಿದ್ದಾರೆ. ಕೇವಲ ಒಂದು ರನ್ ಗಳಿಸಿದ್ದ ಹೂಡ ಕನ್ನಡಿಗ ಪ್ರಸಿದ್ದ್ ಕೃಷ್ಣ ಬೌಲಿಂಗ್​ನಲ್ಲಿ ಮೋರ್ಗನ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:05 PM (IST)

    ಪಂಜಾಬ್​ಗೆ 2ನೇ ಆಘಾತ ಗೇಲ್ ಔಟ್, 39/2

    ನಾಯಕ ರಾಹುಲ್ ವಿಕೆಟ್​ ಬಳಿಕ ಬ್ಯಾಟಿಂಗ್​ಗೆ ಬಂದಿದ್ದ ಗೇಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಮಾವಿ ಎಸೆದ ಎಸೆತವನ್ನು ಡಿಫೆಂಡ್ ಮಾಡಲು ಹೋದ ಗೇಲ್ ಕೀಪರ್​ ಕೈಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Apr 2021 08:01 PM (IST)

    ಪಂಜಾಬ್ ಮೊದಲ ವಿಕೆಟ್ ಪತನ

    ಉತ್ತಮವಾಗಿ ಆಡುತ್ತಿದ್ದ ರಾಹುಲ್ ಪ್ಯಾಟ್ ಕಮಿನ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕಮಿನ್ಸ್ ಎಸೆತವನ್ನು ಬಾರಿಸಲು ಯತ್ನಿಸಿದ ರಾಹುಲ್ ನರೈನ್​ಗೆ ಕ್ಯಾಚಿತ್ತು ಔಟಾಗಿದ್ದಾರೆ. ಔಟಾಗುವುದಕ್ಕೂ ಮುನ್ನ ರಾಹುಲ್ 19 ರನ್ ಗಳಿಸಿದ್ದರು.

  • 26 Apr 2021 07:50 PM (IST)

    ಪಂಜಾಬ್ ಉತ್ತಮ ಆರಂಭ

    ಇನ್ನಿಂಗ್ಸ್ ಆರಂಭಿಸಿರುವ ರಾಹುಲ್ ಹಾಗೂ ಮಾಯಾಂಕ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಈಗಾಗಲೇ 4 ಓವರ್ ಆಡಿರುವ ಈ ಜೋಡಿ 27 ರನ್ ಗಳಿಸಿದೆ. ರಾಹುಲ್, ಮಾಯಾಂಕ್​ಗೆ ಉತ್ತಮ ಸಾಥ್​ ನೀಡುತ್ತಿದ್ದಾರೆ. ಮಾಯಾಂಕ್ 13 ರನ್​ ಗಳಿಸಿದ್ದರೆ ರಾಹುಲ್ 12 ರನ್ ಗಳಿಸಿದ್ದಾರೆ.

  • 26 Apr 2021 07:39 PM (IST)

    ಮಾಯಾಂಕ್ ಸಿಕ್ಸರ್, ಪಂಜಾಬ್ 10/0

    ಇನ್ನಿಂಗ್ಸ್​ನ ಮೊದಲ ಸಿಕ್ಸರ್​ ಮಾಯಾಂಕ್ ಅವರ ಬ್ಯಾಟ್​ನಿಂದ ಬಂದಿದೆ. 2ನೇ ಓವರ್​ ಎಸೆದ ಕಮಿನ್ಸ್ ಅವರ ಮೊದಲ ಎಸೆತವನ್ನು ಕೀಪರ್​ ತಲೆ ಮೇಲೆ ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ತಂಡಕ್ಕೆ ಮೊದಲ ಸಿಕ್ಸರ್ ತಂದುಕೊಟ್ಟಿದ್ದಾರೆ.

  • 26 Apr 2021 07:31 PM (IST)

    ಬೌಲಿಂಗ್ ಆರಂಭಿಸಿದ ಕೋಲ್ಕತ್ತಾ

    ಟಾಸ್ ಗೆದ್ದ ಕೋಲ್ಕತ್ತಾ ಬೌಲಿಂಗ್ ಆಯ್ದುಕೊಂಡಿದ್ದು, ಇದರ ಫಲವಾಗಿ ವೇಗದ ಬೌಲರ್​ ಶಿವಂ ಮಾವಿ ಬೌಲಿಂಗ್ ಆರಂಬಿಸಿದ್ದಾರೆ. ಪಂಜಾಬ್ ಪರ ರಾಹುಲ್ ಹಾಗೂ ಮಾಯಾಂಕ್ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 26 Apr 2021 07:20 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್

    ನಿತೀಶ್ ರಾಣಾ, ಶುಬ್​ಮನ್ ಗಿಲ್, ರಾಹುಲ್ ತ್ರಿಪಾಠಿ, ಸುನಿಲ್ ನರೈನ್, ಇಯೊನ್ ಮೋರ್ಗಾನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ

  • 26 Apr 2021 07:15 PM (IST)

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಕೆ.ಎಲ್. ರಾಹುಲ್ (ನಾಯಕ/ ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಕ್ರಿಸ್ ಜೋರ್ಡಾನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್

  • 26 Apr 2021 07:07 PM (IST)

    ನಿಮ್ಮ ಕರ್ತವ್ಯ ಮರೆಯಬೇಡಿ!

    ಕೊರೊನಾ ವಿರುದ್ಧ ಗೆಲ್ಲಲು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಲಸಿಕೆ ಪಡೆದುಕೊಳ್ಳಿ.

  • 26 Apr 2021 07:05 PM (IST)

    ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್

    ಕೋಲ್ಕತ್ತಾ ನೈಟ್ ರೈಡರ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 26,2021 11:06 PM

Follow us
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ