AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ದ್ವಿತೀಯಾರ್ಧದ ಐಪಿಎಲ್​ ವೇಳಾಪಟ್ಟಿಯಲ್ಲಿ ಬದಲಾವಣೆಗೆ ಮುಂದಾದ ಬಿಸಿಸಿಐ; ಕಾರಣವೇನು?

IPL 2021: ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ವಾತಾವರಣ ತುಂಬಾ ಬಿಸಿಯಾಗಿರುತ್ತದೆ. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆಯೋಜಿಸುವುದು ತೀರ ಕಷ್ಟಕರವಾಗಿದೆ.

IPL 2021: ದ್ವಿತೀಯಾರ್ಧದ ಐಪಿಎಲ್​ ವೇಳಾಪಟ್ಟಿಯಲ್ಲಿ ಬದಲಾವಣೆಗೆ ಮುಂದಾದ ಬಿಸಿಸಿಐ; ಕಾರಣವೇನು?
ಪ್ರಾತಿನಿಧಿಕ ಚಿತ್ರ
ಪೃಥ್ವಿಶಂಕರ
|

Updated on: Jun 05, 2021 | 3:37 PM

Share

ಐಪಿಎಲ್ 2021 ರ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಈ ಪಂದ್ಯವನ್ನು ಸೆಪ್ಟೆಂಬರ್‌ನಿಂದ ಅಕ್ಟೋಬರ್ ವರೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದಕ್ಕಾಗಿ ಬಿಸಿಸಿಐ ಪಂದ್ಯಾವಳಿಯ ಉಳಿದ 31 ಪಂದ್ಯಗಳ ವೇಳಾಪಟ್ಟಿಯ ತಯಾರಿಲು ಮೇಲೆ ಕೆಲಸ ಮಾಡುತ್ತಿದೆ. ಇದರ ಅಡಿಯಲ್ಲಿ, ಫೈನಲ್ ದಿನಾಂಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಡೆತಡೆಗಳಿವೆ. ಕೊರೊನಾ ಪ್ರಕರಣ ಹೆಚ್ಚಾದ ನಂತರ ಮೇ 5 ರಂದು ಐಪಿಎಲ್ 2021 ಅನ್ನು ಅಮಾನತುಗೊಳಿಸಲಾಗಿದೆ. ಪಂದ್ಯಾವಳಿಯ 29 ಪಂದ್ಯಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪಂದ್ಯಾವಳಿಯ ನಾಲ್ಕು ತಂಡಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. ಇದರ ನಂತರ, ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 10 ರ ನಡುವೆ ಪಂದ್ಯಾವಳಿಯನ್ನು ಪೂರ್ಣಗೊಳಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಮೇ 29 ರಂದು ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದರ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೇ ಷಾ ಯುಎಇಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಲು ತೆರಳಿದ್ದಾರೆ. ಈಗ ಸುದ್ದಿ ಏನೆಂದರೆ, ಅಕ್ಟೋಬರ್ 10 ರ ಬದಲು ಅಕ್ಟೋಬರ್ 18 ರಂದು ಬಿಸಿಸಿಐ ಐಪಿಎಲ್ 2021 ಫೈನಲ್ ಪಂದ್ಯವನ್ನು ನಡೆಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ವಾತಾವರಣ ತುಂಬಾ ಬಿಸಿಯಾಗಿರುತ್ತದೆ. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆಯೋಜಿಸುವುದು ತೀರ ಕಷ್ಟಕರವಾಗಿದೆ. ಬಿಸಿಲು ಹೆಚ್ಚಾಗಿರುವುದರಿಂದ ಆಟಗಾರರಿಗೆ ಸಾಕಷ್ಟು ತೊಂದರೆ ಉಂಟಾಗಬಹುದು. ಹೀಗಾಗಿ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಡಬಲ್ ಹೆಡರ್ ಪಂದ್ಯಗಳನ್ನು ನಡೆಸದಿರಲು ಚಿಂತನೆ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿರುವ ಡೈನಿಕ್ ಜಾಗ್ರನ್ ವರದಿ ಪ್ರಕಾರ, ನಾವು ಎಂಟು ದಿನಗಳ ಹೆಚ್ಚುವರಿ ಸಮಯ ತೆಗೆದುಕೊಂಡು ಡಬಲ್ ಹೆಡರ್​ ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ (ದಿನದಲ್ಲಿ ಎರಡು ಪಂದ್ಯಗಳು). ಯುಎಇಯಲ್ಲಿ ಆ ಸಮಯದಲ್ಲಿ ತುಂಬಾ ಬಿಸಿಲಿರುತ್ತದೆ. ಇದರಿಂದ ಕ್ರಿಕೆಟಿಗರು ಸಮಸ್ಯೆಗಳನ್ನು ಎದುರಿಸಬಹುದು. ಅದಕ್ಕಾಗಿಯೇ ಮಂಡಳಿಯು ಮಧ್ಯಾಹ್ನ ಕನಿಷ್ಠ ಒಂದು ಪಂದ್ಯವನ್ನಾದರೂ ನಡೆಸಲು ಪ್ರಯತ್ನಿಸುತ್ತಿದೆ. ಅಕ್ಟೋಬರ್ 18 ರಂದು ಫೈನಲ್ ನಡೆದರೆ, ಡಬಲ್-ಹೆಡರ್ ಪಂದ್ಯಗಳ ಸಂಖ್ಯೆಯನ್ನು ಎಂಟಕ್ಕೆ ಇಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೊಂದಿಗೆ ಚರ್ಚಿಸುತ್ತಿದ್ದೇವೆ. ನಮ್ಮ ಪ್ರಸ್ತಾಪವನ್ನು ಸ್ವೀಕರಿಸಲಾಗುವುದು ಎಂದು ಭಾವಿಸುತ್ತೇವೆ ಎಂದು ವರದಿಯಾಗಿದೆ.

ಟಿ 20 ವಿಶ್ವಕಪ್ ದಿನಾಂಕಗಳೂ ಬದಲಾಗುತ್ತವೆ ಈಗ ಐಪಿಎಲ್ 2021 ರ ಅಂತಿಮ ಪಂದ್ಯ ಅಕ್ಟೋಬರ್ 18 ರಂದು ನಡೆದರೆ, ಟಿ 20 ವಿಶ್ವಕಪ್ ದಿನಾಂಕಗಳಲ್ಲೂ ಬದಲಾವಣೆಯಾಗಬಹುದು. ಇದೀಗ ಈ ಪಂದ್ಯಾವಳಿ ಅಕ್ಟೋಬರ್-ನವೆಂಬರ್‌ನಲ್ಲಿ ಮಾತ್ರ ನಡೆಯಲಿದೆ. ಈ ಪಂದ್ಯಾವಳಿಯ ಆತಿಥ್ಯವನ್ನು ಭಾರತ ವಹಿಸಿಕೊಂಡಿದೆ. ಆದರೆ ಕೊರೊನಾದ ಕಾರಣದಿಂದಾಗಿ, ಭಾರತದಲ್ಲಿ ಟಿ20 ವಿಶ್ವಕಪ್ ನಡೆಯುವ ಬಗ್ಗೆ ಸಾಕಷ್ಟು ಗೊಂದಲಗಳೆದ್ದಿವೆ. ಆದರೆ, ಈ ಪಂದ್ಯಾವಳಿಯನ್ನು ಆಯೋಜಿಸುವ ನಿರ್ಧಾರಕ್ಕಾಗಿ ಐಸಿಸಿ ಬಿಸಿಸಿಐಗೆ ಒಂದು ತಿಂಗಳ ಕಾಲಾವಕಾಶ ನೀಡಲು ನಿರ್ಧರಿಸಿದೆ.

ಕಳೆದ ವರ್ಷದಂತೆಯೇ, ಶಾರ್ಜಾ, ಅಬುಧಾಬಿ ಮತ್ತು ದುಬೈ ಎಂಬ ಮೂರು ನಗರಗಳಲ್ಲಿ ಐಪಿಎಲ್ ಆಡಲಿದೆ. ಆದಾಗ್ಯೂ, ಬಿಸಿಸಿಐ ಕೊನೆಯ ಹಂತದ ಲೀಗ್ ಪಂದ್ಯಗಳನ್ನು ಮತ್ತು ಫೈನಲ್ ಸೇರಿದಂತೆ ನಾಕೌಟ್ ಸುತ್ತುಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸಲು ಯೋಜಿಸುತ್ತಿದೆ. ಐಪಿಎಲ್ 2020 ರಂತೆಯೇ ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಹೋಟೆಲ್ ಅನ್ನು ಅಲ್ಲಿಯೇ ಕಾಯ್ದಿರಿಸುವ ಸಾಧ್ಯತೆ ಇರುವುದರಿಂದ ದುಬೈ ಉನ್ನತ ಆಯ್ಕೆಯಾಗುವ ಸಾಧ್ಯತೆಯಿದೆ.

ಒಂದು ವೇಳೆ ಟಿ 20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಿದರೆ, ಅಕ್ಟೋಬರ್ 1 ರೊಳಗೆ ಐಸಿಸಿಗೆ ಸ್ಥಳಗಳನ್ನು ಹಸ್ತಾಂತರಿಸಲು ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯನ್ನು ಕೇಳಲಾಗುತ್ತದೆ. ಆದರೆ ಐಸಿಸಿಯಿಂದ 3 ಸ್ಥಳಗಳಲ್ಲಿ ಒಂದರಲ್ಲಿ ಪಂದ್ಯಗಳನ್ನು ಮುಂದುವರಿಸಲು ಬಿಸಿಸಿಐ ಅನೌಪಚಾರಿಕವಾಗಿ ಅನುಮತಿ ಪಡೆದಿದೆ ಎಂದು ಇನ್ಸೈಡ್ ಸ್ಪೋರ್ಟ್ ತಿಳಿದುಕೊಂಡಿದೆ. ಇದೇ ಕಾರಣ, ಮಂಡಳಿಯ ಸಭೆಯಲ್ಲಿ ಐಸಿಸಿ ಟಿ 20 ವಿಶ್ವಕಪ್‌ನ ಸ್ಟ್ಯಾಂಡ್‌ಬೈ ಸ್ಥಳಗಳಲ್ಲಿ ಒಮಾನ್ ಹೆಸರನ್ನು ಚರ್ಚಿಸಿದೆ.

ಪಂದ್ಯಗಳ ಸಮಯ ಯಾವುದು? ಬಿಸಿಸಿಐ ಕಳೆದ ವರ್ಷದಂತೆಯೇ ಅದೇ ಸಮಯವನ್ನು ಅನುಸರಿಸುವ ಸಾಧ್ಯತೆಯಿದೆ. ಐಪಿಎಲ್ 2020 ರಲ್ಲಿ, ಡಬಲ್-ಹೆಡರ್ಗಳನ್ನು ನಿಗದಿಪಡಿಸಿದ ದಿನ, ಮೊದಲ ಪಂದ್ಯವು ಮಧ್ಯಾಹ್ನ 3: 30 ಕ್ಕೆ ಪ್ರಾರಂಭವಾಗುತ್ತಿತ್ತು. ನಂತರ ಎರಡನೇ ಪಂದ್ಯವು ಸಂಜೆ 7: 30 ಕ್ಕೆ ಪ್ರಾರಂಭವಾಗುತ್ತಿತ್ತು.

ಯುಎಇಗೆ ಫ್ರಾಂಚೈಸಿಗಳು ಯಾವಾಗ ಹೊರಡುತ್ತವೆ? ಫ್ರಾಂಚೈಸಿಗಳು ಯುಎಇ ಹೋಟೆಲ್‌ಗಳೊಂದಿಗೆ ವ್ಯವಸ್ಥಾಪಕ ಸವಾಲುಗಳ ಬಗ್ಗೆ ಮಾತುಕತೆಯನ್ನು ಪ್ರಾರಂಭಿಸಿವೆ. ಪ್ರಯಾಣ ಯೋಜನೆಗಳ ಬಗ್ಗೆ ಮಾತನಾಡಿದ ಫ್ರ್ಯಾಂಚೈಸ್ ಅಧಿಕಾರಿಯೊಬ್ಬರು, ಇಸಿಬಿ ಮತ್ತು ಯುಎಇ ಸರ್ಕಾರದೊಂದಿಗಿನ ಸಭೆಗಳ ನಂತರ ತಂಡಗಳು ಯುಎಇ ತಲುಪಲು ಯಾವಾಗ ಪ್ರಾರಂಭಿಸಬಹುದು ಎಂಬುದರ ಕುರಿತು ಬಿಸಿಸಿಐ ಮತ್ತೊಮ್ಮೆ ಡೇಟಲೈನ್ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಮಂಡಳಿಯ ಅಧಿಕೃತ ಆದೇಶದ ನಂತರವೇ ಎಲ್ಲಾ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದಿದ್ದಾರೆ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?