AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafael Nadal: ಇಂಜುರಿ ಸಮಸ್ಯೆ.. ಯುಎಸ್ ಓಪನ್​ಗೆ ಗೈರಾಗಲಿದ್ದಾರೆ ರಾಫೆಲ್ ನಡಾಲ್! 2021ರ ಕ್ರೀಡಾ ಋತುವೂ ಅಂತ್ಯ

Rafael Nadal: ಒಂದು ವರ್ಷದಿಂದ ಕಾಲಿನ ಗಾಯದಿಂದ ಬಳಲುತ್ತಿರುವ ಸ್ಪೇನಿಯಾರ್ಡ್ ರಾಫೆಲ್ ನಡಾಲ್ ತನ್ನ 2021 ರ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಶುಕ್ರವಾರ ಹೇಳಿದ್ದಾರೆ.

Rafael Nadal: ಇಂಜುರಿ ಸಮಸ್ಯೆ.. ಯುಎಸ್ ಓಪನ್​ಗೆ ಗೈರಾಗಲಿದ್ದಾರೆ ರಾಫೆಲ್ ನಡಾಲ್! 2021ರ ಕ್ರೀಡಾ ಋತುವೂ ಅಂತ್ಯ
ರಾಫೆನ್ ನಡಾಲ್
TV9 Web
| Edited By: |

Updated on: Aug 20, 2021 | 4:55 PM

Share

ಒಂದು ವರ್ಷದಿಂದ ಕಾಲಿನ ಗಾಯದಿಂದ ಬಳಲುತ್ತಿರುವ ಸ್ಪೇನಿಯಾರ್ಡ್ ರಾಫೆಲ್ ನಡಾಲ್ ತನ್ನ 2021 ರ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಶುಕ್ರವಾರ ಹೇಳಿದ್ದಾರೆ. ಇದರರ್ಥ ಆಗಸ್ಟ್ 30 ರಿಂದ ಆರಂಭವಾಗುವ 2021 ಯುಎಸ್ ಓಪನ್‌ನಲ್ಲಿ ನಡಾಲ್ ಭಾಗವಹಿಸುವುದಿಲ್ಲ.ದುರದೃಷ್ಟವಶಾತ್ ನಾನು 2021 ರ ಋತುವನ್ನು ಕೊನೆಗೊಳಿಸುತ್ತಿದ್ದೇನೆ ಎಂಬುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಪ್ರಾಮಾಣಿಕವಾಗಿ, ನಾನು ಒಂದು ವರ್ಷದಿಂದ ನನ್ನ ಕಾಲಿನ ನೋವಿನಿಂದ ಹೆಚ್ಚು ಬಳಲುತ್ತಿದ್ದೇನೆ. ಹೀಗಾಗಿ ನಾನು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಶ್ವದ ನಾಲ್ಕನೇ ಶ್ರೇಯಾಂಕದ ನಡಾಲ್ ಟ್ವೀಟ್ ಮಾಡಿದ್ದಾರೆ.

20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತರಾದ ನಡಾಲ್ ಅವರನ್ನು ಕಾಡುತ್ತಿರುವ ಗಾಯ ಕಳೆದ ವಾರ ಸಿನ್ಸಿನಾಟಿ ಮಾಸ್ಟರ್ಸ್ ಮತ್ತು ಕೆನಡಿಯನ್ ಓಪನ್ ನಿಂದ ಹಿಂದೆ ಸರಿಯುವಂತೆ ಮಾಡಿತು. ಪ್ರಕಟಣೆಯೊಂದಿಗೆ, ರೋಜರ್ ಫೆಡರರ್ ಮತ್ತು ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ನಂತರ ನಡಾಲ್ ಯುಎಸ್ ಓಪನ್‌ನಿಂದ ಹೊರಬಂದ ಮೂರನೇ ದೊಡ್ಡ ಟೆನಿಸ್ ಆಟಗಾರ ಆಗಿದ್ದಾರೆ.

ಕಳೆದ ಶನಿವಾರ, ಫೆಡರರ್ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ಮತ್ತು ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಆದರೆ ಮಣಿಕಟ್ಟಿನ ಗಾಯದಿಂದಾಗಿ ಥೀಮ್ ಯುಎಸ್ ಓಪನ್‌ನಿಂದ ಹೊರನಡೆದಿದ್ದರು ಮತ್ತು ವರ್ಷದ ಋತುವನ್ನು ಅವಧಿಗೂ ಮುಂಚಿತವಾಗಿ ಕೊನೆಗೊಳಿಸುವುದಾಗಿ ಹೇಳಿದ್ದರು. ಜೂನ್ ನಲ್ಲಿ ನಡೆದ ಮಲ್ಲೋರ್ಕಾ ಓಪನ್​ನಲ್ಲಿ ಆಡುವಾಗ ಅವರು ಗಾಯಗೊಂಡಿದ್ದರು.

ಇದನ್ನೂ ಓದಿ:Tokyo Olympics: ರಾಫೆಲ್ ನಡಾಲ್, ಡೊಮಿನಿಕ್ ಥೀಮ್ ನಂತರ ಒಲಿಂಪಿಕ್ಸ್‌ನಲ್ಲಿ ಆಡದಿರಲು ಸೆರೆನಾ ವಿಲಿಯಮ್ಸ್ ನಿರ್ಧಾರ

Follow Us
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಪಶ್ಚಿಮ ಬಂಗಾಳದಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳದಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ
ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ
ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ
ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರೋ ಸುಳಿವು
ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರೋ ಸುಳಿವು
ರಾಜ್​​ಕುಮಾರ್ 97ನೇ ಜನ್ಮದಿನ; ಆಚರಣೆಯಲ್ಲಿ ಸಿಎಂ, ಡಿಸಿಎಂ ಕೂಡ ಭಾಗಿ
ರಾಜ್​​ಕುಮಾರ್ 97ನೇ ಜನ್ಮದಿನ; ಆಚರಣೆಯಲ್ಲಿ ಸಿಎಂ, ಡಿಸಿಎಂ ಕೂಡ ಭಾಗಿ