AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಪ್ರಮುಖ ಲೀಗ್​ಗಳಲ್ಲಿ ಆಡುತ್ತಿರುವ RCB ತಂಡದ ನೆಟ್ ಬೌಲರ್..!

Royal Challengers Bangalore: ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್​ನನ್ನು ರಾಯಲ್ ಚಾಲೆಂಜರ್ಸ್​ ಫ್ರಾಂಚೈಸಿಯೇ  ಖರೀದಿಸಲಿದೆಯಾ ಕಾದು ನೋಡಬೇಕಿದೆ.

ವಿಶ್ವದ ಪ್ರಮುಖ ಲೀಗ್​ಗಳಲ್ಲಿ ಆಡುತ್ತಿರುವ RCB ತಂಡದ ನೆಟ್ ಬೌಲರ್..!
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on: Aug 30, 2022 | 8:55 PM

Share

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೆಟ್ ಬೌಲರ್ ಆಗಿದ್ದ ಯುವ ಆಟಗಾರನ ಅದೃಷ್ಟ ಖುಲಾಯಿಸಿದೆ. ಒಂದೇ ಒಂದು ಸೀಸನ್​ ಐಪಿಎಲ್​​ನಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ಯುವ ಸ್ಪಿನ್ನರ್ ಇಝ್ರಾಉಲ್​ ಹಕ್ ನವೀದ್​ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶಗಳು ದೊರೆಯುತ್ತಿದೆ. ಅಫ್ಘಾನಿಸ್ತಾನದ 18 ವರ್ಷದ ನವೀದ್  ಐಪಿಎಲ್​ 2022 ರಲ್ಲಿ ಆರ್​ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಯುವ ಸ್ಪಿನ್ನರ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿದ್ದವು.

ಅದರಂತೆ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸೇಂಟ್ ಕಿಟ್ಸ್ ಮತ್ತು ಪೇಟ್ರಿಯಾಟ್ಸ್‌ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್​ ಲೀಗ್​ನಲ್ಲೂ ಅವಕಾಶ ಪಡೆದಿದ್ದಾರೆ. ಬಿಬಿಎಲ್ 2022 ರ ಡ್ರಾಫ್ಟ್ ಆಯ್ಕೆಗಳ ಮೂಲಕ ಅಫ್ಘಾನಿಸ್ತಾನದ ಯುವ ಸ್ಪಿನ್ನರ್​ ಅನ್ನು ಸಿಡ್ನಿ ಸಿಕ್ಸರ್ಸ್​ ತಂಡವು ಖರೀದಿಸಿದೆ. ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್​ನಂತಹ ಸ್ಟಾರ್ ಆಟಗಾರರಿಗೆ ಅಭ್ಯಾಸದ ವೇಳೆ ಸ್ಪಿನ್ ಮೋಡಿದ್ದ ನವೀದ್​ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶ ದೊರೆಯಲಾರಂಭಿಸಿದೆ.

ವಿಶೇಷ ಎಂದರೆ ಇಝ್ರಾಉಲ್​ ಹಕ್ ನವೀದ್ ಇನ್ನೂ ಕೂಡ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅಂದರೆ ಕೇವಲ ಅಫ್ಘಾನಿಸ್ತಾನ್ ಅಂಡರ್ 19 ಟೀಮ್ ಮತ್ತು ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿಯೇ ಹೆಸರು ಮಾಡಿದ್ದಾರೆ. ಇದರ ಫಲವಾಗಿ ಇದೀಗ ಯುವ ಸ್ಪಿನ್ನರ್​ಗೆ ಟಿ20 ಲೀಗ್​ನ ಪ್ರಮುಖ ಫ್ರಾಂಚೈಸಿಗಳು ಮಣೆಹಾಕುತ್ತಿದ್ದಾರೆ. ಹೀಗಾಗಿಯೇ ಮುಂಬರುವ ಐಪಿಎಲ್​ ಹರಾಜಿಗೂ ಇಝ್ರಾಉಲ್​ ಹಕ್ ನವೀದ್ ಹೆಸರು ನೀಡುವುದರಲ್ಲಿ ಅನುಮಾನವೇ ಇಲ್ಲ.

ಇತ್ತ ಈಗಾಗಲೇ ಆರ್​ಸಿಬಿ ತಂಡದ ನೆಟ್ ಬೌಲರ್​ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್​ನನ್ನು ರಾಯಲ್ ಚಾಲೆಂಜರ್ಸ್​ ಫ್ರಾಂಚೈಸಿಯೇ  ಖರೀದಿಸಲಿದೆಯಾ ಕಾದು ನೋಡಬೇಕಿದೆ.

Follow Us
‘ಅಮೆರಿಕಾ ಅಮೆರಿಕಾ 2’ ವೇದಿಕೆ ಮೇಲೆ ‘ಯಾವ ಮೋಹನ’ ಬಗ್ಗೆ ನಾಗತಿಹಳ್ಳಿ ಮಾತು
‘ಅಮೆರಿಕಾ ಅಮೆರಿಕಾ 2’ ವೇದಿಕೆ ಮೇಲೆ ‘ಯಾವ ಮೋಹನ’ ಬಗ್ಗೆ ನಾಗತಿಹಳ್ಳಿ ಮಾತು
ಶುಕ್ರವಾರದ ಚಂದ್ರ ದರ್ಶನ ಹಾಗೂ ಮಹಾಲಕ್ಷ್ಮಿ ಯೋಗ
ಶುಕ್ರವಾರದ ಚಂದ್ರ ದರ್ಶನ ಹಾಗೂ ಮಹಾಲಕ್ಷ್ಮಿ ಯೋಗ
ಕಾರಾಗೃಹ ಅಧಿಕಾರಿಗಳ ದೂರಿನಂತೆ ಮತ್ತೊಂದು ಎಫ್‌ಐಆರ್ ದಾಖಲು
ಕಾರಾಗೃಹ ಅಧಿಕಾರಿಗಳ ದೂರಿನಂತೆ ಮತ್ತೊಂದು ಎಫ್‌ಐಆರ್ ದಾಖಲು
ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು
ಶ್ರೀನಗರ-ಲೇಹ್ ಹೈವೇಯಲ್ಲಿ ಭಾರಿ ಮೇಘಸ್ಫೋಟ; ಭೂಕುಸಿತದ ಭೀಕರತೆ ಹೀಗಿತ್ತು
ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಮಾಡ್ಬೇಕು: ಸಿಎಂ
ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆದೇ ಕಾರ್ಯಕ್ರಮ ಮಾಡ್ಬೇಕು: ಸಿಎಂ
ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ಉತ್ತರಾಖಂಡದ ಚಮೋಲಿಯಲ್ಲಿ ಟನಲ್ ಕುಸಿತ; 16 ಕಾರ್ಮಿಕರ ರಕ್ಷಣೆ
ಉತ್ತರಾಖಂಡದ ಚಮೋಲಿಯಲ್ಲಿ ಟನಲ್ ಕುಸಿತ; 16 ಕಾರ್ಮಿಕರ ರಕ್ಷಣೆ
‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಇಲ್ಲಿದೆ ಉತ್ತರ
‘ಲವ್ ಯೂ ಗಿಲ್ಲಿ’ ಚಿತ್ರ ಸೆಟ್ಟೇರುವುದು ತಡ ಆಗಿದ್ದು ಏಕೆ? ಇಲ್ಲಿದೆ ಉತ್ತರ
‘ಅಯೋಗ್ಯ 2’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ ನಟ ಶರಣ್
‘ಅಯೋಗ್ಯ 2’ ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ ನಟ ಶರಣ್
ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಕಾರಣವೇನು?
ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಕಾರಣವೇನು?