AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್- ಕೊಹ್ಲಿ, ಈ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಮೊಹಮ್ಮದ್ ಶಮಿ ಒಲವು ಯಾರ ಕಡೆಗೆ ಗೊತ್ತಾ?

ಬೌಲರ್ ಆಗಿ, ನಾನು ಯಾವಾಗಲೂ ಸಲಹೆಗಾಗಿ ರೋಹಿತ್ ಬಳಿ ಹೋಗುತ್ತೇನೆ, ಅವರು ಯಾವಾಗಲೂ ನನಗೆ ಸಕಾರಾತ್ಮಕ ಸಲಹೆಯನ್ನು ನೀಡುತ್ತಾರೆ. ರೋಹಿತ್ ಬೌಲರ್‌ಗಳ ಹಿಂದೆ ಸ್ಥಿರವಾಗಿ ನಿಲ್ಲುತ್ತಾರೆ.

ರೋಹಿತ್- ಕೊಹ್ಲಿ, ಈ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಮೊಹಮ್ಮದ್ ಶಮಿ ಒಲವು ಯಾರ ಕಡೆಗೆ ಗೊತ್ತಾ?
ಕೊಹ್ಲಿ, ರೋಹಿತ್, ಶಮಿ
ಪೃಥ್ವಿಶಂಕರ
|

Updated on: May 22, 2021 | 5:24 PM

Share

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಈ ಇಬ್ಬರಲ್ಲಿ ಅತ್ಯುತ್ತಮ ನಾಯಕರು ಯಾರು? ವಿರಾಟ್-ರೋಹಿತ್ ಅವರ ಅಭಿಮಾನಿಗಳು ಇದನ್ನು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುತ್ತಿರುತ್ತಾರೆ. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಲ್ಲಿ, ರೋಹಿತ್ ಮತ್ತು ವಿರಾಟ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಆದ್ದರಿಂದ ಇಬ್ಬರು ನಾಯಕತ್ವದ ನಡುವೆ ಯಾವಾಗಲೂ ಘರ್ಷಣೆ ನಡೆಯುತ್ತಲೆ ಇರುತ್ತದೆ. ಆದರೆ ಇದೇ ಪ್ರಶ್ನೆಗೆ ಹಿರಿಯ ಬೌಲರ್ ತನ್ನದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ವಿರಾಟ್ ಅಥವಾ ರೋಹಿತ್, ಇಬ್ಬರಲ್ಲಿ ಯಾರು ಉತ್ತಮ ನಾಯಕ? ಎಂಬ ಪ್ರಶ್ನೆಗೆ ಮೊಹಮ್ಮದ್ ಶಮಿ ಉತ್ತರಿಸಿದ್ದಾರೆ. ಈ ಬಾರಿ ಅವರು ರೋಹಿತ್ ಶರ್ಮಾ ಅವರಿಗೆ ಆದ್ಯತೆ ನೀಡುತ್ತಿದ್ದಾರೆ. ಅವರು ರೋಹಿತ್ ಶರ್ಮಾ ಅವರನ್ನು ನೇರವಾಗಿ ಹೆಸರಿಸದಿದ್ದರೂ, ರೋಹಿತ್ ಅವರ ಒಟ್ಟಾರೆ ಪ್ರಶಂಸೆಗೆ ಕಾರಣ ಎಂಬುದು ಸ್ಪಷ್ಟವಾಯಿತು, ಮತ್ತು ರೋಹಿತ್ ಉತ್ತಮ ನಾಯಕ ಎಂದು ಶಮಿ ಭಾವಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.

ರೋಹಿತ್ ಪ್ರಶಂಸಿದ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವೇಗದ ಬೌಲಿಂಗ್‌ಗೆ ಮುಂದಾಗಿರುವ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಶಮಿ, ಭಾರತದ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಅವರನ್ನು ಪ್ರಶಂಸಿಸಿದರು. ಬೌಲರ್ ಆಗಿ, ನಾನು ಯಾವಾಗಲೂ ಸಲಹೆಗಾಗಿ ರೋಹಿತ್ ಬಳಿ ಹೋಗುತ್ತೇನೆ, ಅವರು ಯಾವಾಗಲೂ ನನಗೆ ಸಕಾರಾತ್ಮಕ ಸಲಹೆಯನ್ನು ನೀಡುತ್ತಾರೆ. ರೋಹಿತ್ ಬೌಲರ್‌ಗಳ ಹಿಂದೆ ಸ್ಥಿರವಾಗಿ ನಿಲ್ಲುತ್ತಾರೆ. ಇದಕ್ಕಿಂತ ಬೌಲರ್‌ಗೆ ಇನ್ನೇನು ಬೇಕು? ರೋಹಿತ್ ಬೇರೆದೆ ತರನಾದ ವ್ಯಕ್ತಿ. ಅವರು ಯಾವಾಗಲೂ ಕೂಲ್ ಆಗಿರುತ್ತಾರೆ. ಎಂದು ಶಮಿ ಹೇಳಿಕೊಂಡಿದ್ದಾರೆ.

ವಿರಾಟ್ ಬಗ್ಗೆ ಮೊಹಮ್ಮದ್ ಶಮಿ ಹೇಳಿದ್ದೇನು? ವಿಶೇಷವಾಗಿ ವೇಗದ ಬೌಲರ್‌ಗಳು ಆಕ್ರಮಣಕಾರಿ ಆದರೆ ಭಾರತ ತಂಡವು ಇದಕ್ಕೆ ವಿರುದ್ಧವಾಗಿದೆ. ನಮ್ಮ ನಾಯಕ (ವಿರಾಟ್) ಹೆಚ್ಚು ಆಕ್ರಮಣಕಾರಿ. ನಾನು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಂದ್ಯದ ಫೋಟೋಗಳನ್ನು ನೋಡುತ್ತೇನೆ. ಆ ಸಮಯದಲ್ಲಿ, ವಿರಾಟ್ ಆಚರಣೆ ನೋಡುವ ನಾನು ಕೆಲವೊಮ್ಮೆ ವಿಕೆಟ್ ತೆಗೆದಿದ್ದು ನಾನಾ ಅಥವಾ ವಿರಾಟ್ ತೆಗೆದುಕೊಂಡಿದ್ದಾ ಎಂದು ಆಶ್ಚರ್ಯ ಪಡುತ್ತೇನೆ. ವಿರಾಟ್ ಬೌಲರ್‌ಗಳಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಸೆಲೆಬ್ರೆಷನ್ ಮಾಡುತ್ತಾರೆ. ಅವರು ಆಕ್ರಮಣಶೀಲತೆಯನ್ನು ಹೊಂದಿದ್ದಾರೆ, ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಾರೆ ಎಂದು ಶಮಿ ವಿರಾಟ್ ಬಗ್ಗೆ ಮಾತಾನಾಡಿದ್ದಾರೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ