AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಹಳಿಯರ ಮಾನ ಬಾಂಗ್ಲಾದಲ್ಲಿ ಹರಾಜು; ಅನ್​ಫಿಟ್ ಶ್ರೀಲಂಕಾ ಕ್ರಿಕೆಟಿಗರು ಭಾರತದ ಯುವ ಸೇನೆಯೊಂದಿಗೆ ಸೆಣಸಲಿದ್ದಾರೆ

Fitness Test: 2 ಕಿ.ಮೀ. ದೂರವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಚಾಲೆಂಜ್ ನೀಡಿತ್ತು. ಆದರೆ ಈ ಪರೀಕ್ಷೆಯಲ್ಲಿ ಧನುಷ್ಕಾ ಗುಣತಿಲ್ಕೆ ಮತ್ತು ಧನಂಜಯ್ ಡಿ ಸಿಲ್ವಾ ಅವರು ಫೇಲ್ ಆಗಿದ್ದಾರೆ.

ಸಿಂಹಳಿಯರ ಮಾನ ಬಾಂಗ್ಲಾದಲ್ಲಿ ಹರಾಜು; ಅನ್​ಫಿಟ್ ಶ್ರೀಲಂಕಾ ಕ್ರಿಕೆಟಿಗರು ಭಾರತದ ಯುವ ಸೇನೆಯೊಂದಿಗೆ ಸೆಣಸಲಿದ್ದಾರೆ
ಶ್ರೀಲಂಕಾ ಆಟಗಾರರು
ಪೃಥ್ವಿಶಂಕರ
|

Updated on: May 22, 2021 | 3:39 PM

Share

ಶ್ರೀಲಂಕಾ ತಂಡ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ಜೊತೆಗೆ ತಂಡದಲ್ಲಿ ಹಿರಿಯ ಉಪನಾಯಕನಿದ್ದಾನೆ. ಆದರೆ ತಂಡದಿಂದ ಹಿರಿಯ ಆಟಗಾರರನ್ನು ಬಿಡುಗಡೆ ಮಾಡಿದ ಕಾರಣ ಟೀಂನಲ್ಲಿ ಮುಖಗಳು ಸಹ ಹೊಸದಾಗಿವೆ. ನಿಸ್ಸಂಶಯವಾಗಿ ಹೊಸ ಭರವಸೆ ಕೂಡ ಇರುತ್ತದೆ. ಆದರೆ, ನಿರೀಕ್ಷೆ ಸುಳ್ಳಾಗುವ ಎಲ್ಲಾ ಲಕ್ಷಣಗಳು ಪಂದ್ಯಕ್ಕಿಂತ ಮುಂಚೆಯೇ ಕಾಣಲಾರಂಭಿಸಿವೆ. ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಇಬ್ಬರು ಶ್ರೀಲಂಕಾದ ಆಟಗಾರರು ಫಿಟ್‌ನೆಸ್‌ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಧನುಷ್ಕಾ ಗುಣತಿಲಕೆ ಮತ್ತು ಧನಂಜಯ ಡಿ ಸಿಲ್ವಾ ಅವರ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ.

ಬಾಂಗ್ಲಾದೇಶ ಪ್ರವಾಸಕ್ಕಾಗಿ, ಶ್ರೀಲಂಕಾ ಕುಶಾಲ್ ಪೆರೆರಾ ಅವರನ್ನು ನಾಯಕನನ್ನಾಗಿ ಮಾಡಿದೆ ಮತ್ತು ಕುಸಲ್ ಮೆಂಡಿಸ್ ಅವರಿಗೆ ಉಪ-ನಾಯಕತ್ವವನ್ನು ನೀಡಲಾಗಿದೆ. ಆದರೆ, ಈ ನಾಯಕ ಮತ್ತು ಉಪನಾಯಕನ ತಂಡವು ಫಿಟ್‌ನೆಸ್‌ ಪರೀಕ್ಷೆಯಲ್ಲಿ ನಿರೀಕ್ಷೆಯ ಪ್ರದರ್ಶನ ತೋರಿಲ್ಲ. ಇದೇ ಶ್ರೀಲಂಕಾ ತಂಡ, ಜುಲೈನಲ್ಲಿ ಫಿಟ್ ಆಗಿರುವ ಟೀಮ್ ಇಂಡಿಯಾದ ಆಟಗಾರರೊಂದಿಗೆ ಸರಣಿ ಆಡಬೇಕಾಗಿದೆ.

2 ಕಿ.ಮೀ ಓಟದಲ್ಲಿ 2 ಶ್ರೀಲಂಕಾ ಕ್ರಿಕೆಟಿಗರು ವಿಫಲ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಪ್ರಾರಂಭವಾಗುವ ಮೊದಲು, ಶ್ರೀಲಂಕಾ ತಂಡದ ಆಡಳಿತ ಮಂಡಳಿ ತಮ್ಮ ಆಟಗಾರರ ಫಿಟ್‌ನೆಸ್ ಪರೀಕ್ಷಿಸಲು 2 ಕಿ.ಮೀ. ದೂರವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಚಾಲೆಂಜ್ ನೀಡಿತ್ತು. ಆದರೆ ಈ ಪರೀಕ್ಷೆಯಲ್ಲಿ ಧನುಷ್ಕಾ ಗುಣತಿಲ್ಕೆ ಮತ್ತು ಧನಂಜಯ್ ಡಿ ಸಿಲ್ವಾ ಅವರು ಫೇಲ್ ಆಗಿದ್ದಾರೆ. ಆದರೆ, ಅವರು ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿಯುವುದಿಲ್ಲ, ಅವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಅದರಲ್ಲೂ ಅವರು ವಿಫಲವಾದರೆ, ಬಾಂಗ್ಲಾದೇಶದ ನಂತರ ಇಂಗ್ಲೆಂಡ್‌ಗೆ ಹೋಗುವ ತಂಡದಲ್ಲಿ ಅವರಿಗೆ ಟಿಕೆಟ್ ನೀಡಲಾಗುವುದಿಲ್ಲ.

ಈ ಫಿಟ್‌ನೆಸ್ ಪರೀಕ್ಷೆಯನ್ನು ಪ್ರತಿ 40 ದಿನಗಳಿಗೊಮ್ಮೆ ಮಾಡಲಾಗುತ್ತದೆ ಶ್ರೀಲಂಕಾ ತಂಡದಲ್ಲಿ, 2 ಕಿಲೋಮೀಟರ್ ಓಟದ ಪರೀಕ್ಷೆಯನ್ನು ಪ್ರತಿ 40 ದಿನಗಳಿಗೊಮ್ಮೆ ನಡೆಸಲಾಗುತ್ತಿದೆ. ಅವರು ಈ ದೂರವನ್ನು 8 ನಿಮಿಷ 35 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಮುಂದಿನ 40 ದಿನಗಳಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಮತ್ತೊಮ್ಮೆ ಮತ್ತೊಂದು ಅವಕಾಶ ಸಿಗುತ್ತದೆ, ಅದು ಪೂರ್ಣಗೊಳ್ಳದಿದ್ದರೆ, ತಂಡದಿಂದ ಹೊರಬರುವ ಮಾರ್ಗವನ್ನು ತೋರಿಸಲಾಗುತ್ತದೆ.

ಜುಲೈನಲ್ಲಿ ಶ್ರೀಲಂಕಾ ಭಾರತವನ್ನು ಎದುರಿಸಲಿದೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯನ್ನು ಆಡಿದ ನಂತರ ಶ್ರೀಲಂಕಾ ತಂಡವೂ ಟಿ 20 ಸರಣಿಯನ್ನು ಆಡಬೇಕಾಗಿದೆ. ಬಾಂಗ್ಲಾದೇಶ ಪ್ರವಾಸವನ್ನು ಮುಗಿಸಿದ ನಂತರ, ಈ ತಂಡವು ಜೂನ್‌ನಲ್ಲಿ ವೈಟ್ ಬಾಲ್ ಕ್ರಿಕೆಟ್ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಭೇಟಿ ನೀಡಲಿದೆ. ಅದರ ನಂತರ, ಜುಲೈನಲ್ಲಿ, ಶ್ರೀಲಂಕಾ ತಂಡವು ಭಾರತದೊಂದಿಗೆ ಕ್ರಿಕೆಟ್ ಆಡಲಿದೆ. ಇದರಲ್ಲಿ 3 ಏಕದಿನ ಮತ್ತು 3 ಟಿ 20 ಸರಣಿಗಳು ನಡೆಯಲಿವೆ. ಹೀಗಾಗಿ ಫಿಟ್​ ಆಟಗಾರರನ್ನೇ ಹೊಂದಿರುವ ಟೀಂ ಇಂಡಿಯಾದ ಯುವ ಕ್ರಿಕೆಟಿಗರೊಂದಿಗೆ ಶ್ರೀಲಂಕಾದ ಆಟಗಾರರು ಹೇಗೆ ಕಣಕ್ಕಿಳಿಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು