AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್ 2021: ಸೀಸನ್​ನ ಮೊದಲ ಪಂದ್ಯದಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಎಮ್​ಐ ಮತ್ತು ಒಮ್ಮೆಯೂ ಗೆದ್ದಿರದ ಆರ್​ಸಿಬಿ ನಡುವೆ ಹಣಾಹಣಿ

ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್​ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.

ಐಪಿಎಲ್ 2021: ಸೀಸನ್​ನ ಮೊದಲ ಪಂದ್ಯದಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಎಮ್​ಐ ಮತ್ತು ಒಮ್ಮೆಯೂ ಗೆದ್ದಿರದ ಆರ್​ಸಿಬಿ ನಡುವೆ ಹಣಾಹಣಿ
ಎಮ್​ಐ vs ಆರ್​ಸಿಬಿ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಆಯೇಷಾ ಬಾನು

Updated on:Apr 09, 2021 | 6:49 AM

ಕ್ರೀಡಾಲೋಕದ ಅತ್ಯಂತ ಪ್ರಮುಖ ಮತ್ತು ಜನಪ್ರಿಯ ಈವೆಂಟ್​ಗಳಲ್ಲಿ ಒಂದಾಗಿರುವ ಇಂಡಿಯನ್ ಪ್ರಿಮೀಯರ್ ಲೀಗ್​ನ14 ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಸೀಸನ್ ಮೊದಲ ಪಂದ್ಯ ಶುಕ್ರವಾರ ಚೆನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ನಿಮಗೆ ಗೊತ್ತಿದೆ, ಭಾರತದಲ್ಲಿ ಕೊವಿಡ್-19 ಪಾಸಿಟಿವ್ ಪ್ರಕರಣಗಳು ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ 13ನೇ ಸಿಸನ್​ನಂತೆ ಈ ಸೀಸನ್ ಪಂದ್ಯಗಳು ಸಹ ಖಾಲಿ ಮೈದಾನದಲ್ಲಿ ನಡೆಯಲಿವೆ. ಸೀಸನ್ನಿನ ಮೊದಲ ಪಂದ್ಯ 5 ಬಾರಿ ಚಾಂಪಿಯನ್​ಶಿಪ್​ ಗೆದ್ದಿರುವ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಇನ್ನೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.

ಕ್ರಿಕೆಟ್ ಪಂದ್ಯ ಯಾವುದೇ ಆಗಿರಲಿ, ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಕ್ರಿಕೆಟ್​ ಪ್ರೇಮಿಗಳ ಕುತೂಹಲ ಮತ್ತು ರೋಮಾಂಚನವನ್ನು ಹುಟ್ಟಿಸುತ್ತವೆ. ಇನ್ನು ಐಪಿಎಲ್ ಅಂದರೆ ಕೇಳಬೇಕಾ? ಸೀಸನ್ ಜಾರಿಯಲ್ಲಿರುವಾಗ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತವೆ.

ಓಕೆ, ನಾವಿಲ್ಲಿ ಎಲ್ಲ ಐಪಿಎಲ್ ದಾಖಲೆಗಳನ್ನು ಚರ್ಚಿಸುವುದು ಬೇಡ, ಕೇವಲ ಆರ್​ಸಬಿ ಮತ್ತು ಎಮ್​ಐ ಪಂದ್ಯದ ಮೇಲೆ ಮಾತ್ರ ಫೋಕಸ್ ಮಾಡೋಣ. ಈ ತಂಡಗಳ ಪರ ಅತಿಹೆಚ್ಚು ವಿಕೆಟ್​ ಪಡೆದಿರುವ, ಕ್ಯಾಚ್​ ಹಿಡಿದಿರುವವರು ಯಾರೆಂದು ನಿಮಗೆ ಗೊತ್ತಿದೆಯಾ? ಸರಿ, ಆ ಸಂಗತಿಗಳನ್ನೇ ನಾವು ನೋಡೋಣ.

ಮೊದಲು ನಮ್ಮ ಬೆಂಗಳೂರು ತಂಡದಿಂದಲೇ ವಿಷಯ ಆರಂಭಿಸುವ. ಕೊಹ್ಲಿ ಪಡೆಗೆ ಇದುವರೆಗೆ ಅತಿ ಹೆಚ್ಚು ವಿಕೆಟ್​ ಪಡೆದಿರುವವರು ಯುಜ್ವೇಂದ್ರ ಚಹಲ್. ವಿಕೆಟ್​ಗಳ ಶತಕ ಪೂರೈಸಿರುವ ಏಕೈಕ್ ಬೌಲರ್ ಚಹಲ್. ಅವರು 82 ಇನ್ನಿಂಗ್​​ಗಳಲ್ಲಿ ಬೌಲ್ ಮಾಡಿ ಬರೋಬ್ಬರಿ 100 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿರುವವರು ಮೊನ್ನೆಯಷ್ಟೇ ಎಲ್ಲ ಬಗೆಯ ಕ್ರಿಕೆಟ್​ಗೆ ವಿದಾಯ ಹೇಳಿದ ಕರ್ನಾಟಕದ ಮಾಜಿ ಕ್ಯಾಪ್ಟನ್ ಆರ್​ ವಿನಯ್​ ಕುಮಾರ್. ಇವರು 63 ಇನ್ನಿಂಗ್ಸ್​ಗಳಿಂದ 72 ವಿಕೆಟ್​ ಪಡೆದಿದ್ದಾರೆ, 3, 4, ಮತ್ತು 5 ನೇ ಸ್ಥಾನಗಳಲ್ಲಿ ಕ್ರಮವಾಗಿ ಜಹೀರ್ ಖಾನ್ (49 ವಿಕೆಟ್​, 43 ಇನ್ನಿಂಗ್ಸ್), ಶ್ರೀನಾಥ್ ಅರವಿಂದ್ ( 45 ವಿಕೆಟ್​, 38 ಇನ್ನಿಂಗ್) ಮತ್ತು ಭಾರತದ ಲೆಜಂಡರಿ ಬೌಲರ್ ಅನಿಲ್ ಕುಂಭ್ಳೆ (45 ವಿಕೆಟ್​, 42 ಇನ್ನಿಂಗ್ಸ್) ಇದ್ದಾರೆ.

ಲಸಿತ್ ಮಲಿಂಗ ಮುಂಬೈ ಇಂಡಿಯನ್ಸ್ ಪರ ಅತಿಹೆಚ್ಚು ವಿಕೆಟ್​ ಪಡೆದಿದ್ದಾರೆ. ಅವರ ಟ್ಯಾಲಿ 122 ಇನ್ನಿಂಗ್ಸ್​​ಗಳಿಂದ 170 ವಿಕೆಟ್, ಎರಡನೇ ಸ್ಥಾನದಲ್ಲಿ 122 ಇನ್ನಿಂಗ್ಸ್​ಗಳಿಂದ 172 ವಿಕೆಟ್​ ಪಡೆದಿರುವ ಹರ್ಭಜನ್ ಸಿಂಗ್ ಇದ್ದಾರೆ. ಹಾಗೆಯೇ 3, 4 ಮತ್ತು 5 ನೇ ಸ್ಥಾನದಲ್ಲಿ ಕ್ರಮವಾಗಿ, ಜಸ್ಪ್ರೀತ್ ಬುಮ್ರಾ (82, 77), ಮಿಚೆಲ್ ಮ್ಯಾಕ್ಲಿನಘನ್ (76, 56) ಮತ್ತು ಕೈರನ್ ಪೊಲ್ಲಾರ್ಡ್ (56, 81) ಇದ್ದಾರೆ.

ಬ್ಯಾಟ್ಸ್​ಮನ್​ಗಳು ಸಿಕ್ಸ್ ಬಾರಿಸುವುದು ನಿಸ್ಸಂದೇಹವಾಗಿ ಮೈದಾನದಲ್ಲಿ ಕುಳಿತು ಆಟ ನೋಡುವ ಪ್ರೇಕ್ಷಕರಿಗೆ ಮತ್ತು ಮನೆಗಳಲ್ಲಿ ಟಿವಿ ಸೆಟ್​ಗಳ ಮುಂದೆ ಕೂತು ಪಂದ್ಯ ನೋಡುವವರಿಗೆ ರೋಮಾಂಚನ ಹುಟ್ಟಿಸುವ ಅಂಶ, ಹಾಗಾದರೆ, ಆರ್​ಸಿಬಿ ಯಾವ ಬ್ಯಾಟ್ಟ್​ಮನ್ ಪ್ರೇಕ್ಷರಲ್ಲಿ ಅತಿಹೆಚ್ಚು ಬಾರಿ ಅಂಥ ರೋಮಾಂಚನ ಹುಟ್ಟಿಸಿದ್ದಾರೆ? ನಿಮ್ಮ ಊಹೆ ಶತಪ್ರತಿದಷ್ಟು ಸರಿ.

360 ಡಿಗ್ರಿ ಕ್ರಿಕೆಟರ್ ಎಂದು ಕರೆಸಿಕೊಳ್ಳುವ ಎಬಿಡಿ ವಿಲಿಯರ್ಸ್​ 163 ಪಂದ್ಯಗಳಲ್ಲಿ 235 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವವರು ನಾಯಕ ಕಿಂಗ್ ಕೊಹ್ಲಿ, ಅವರ ಬ್ಯಾಟ್​ನಿಂದ ಇದುವರೆಗೆ 201 (192 ಇನ್ನಿಂಗ್ಸ್) ಸಿಕ್ಸರ್​ಗಳು ಸಿಡಿದಿವೆ.

ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್ ಶರ್ಮ 195 ಇನ್ನಿಂಗ್ಸ್​ಗಳಲ್ಲಿ 213 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕೈರನ್ ಪೊಲ್ಲಾರ್ಡ್​ 147 ಇನ್ನಿಂಗ್ಸ್​ಗಳಲ್ಲಿ 198 ಸಿಕ್ಸರ್​ ಬಾರಿಸಿದ್ದಾರೆ.

ಒಟ್ಟಾರೆಯಾಗಿ ನೋಡಿದ್ದೇಯಾದರೆ, ಮುಂಬೈ ತಂಡ 1,378 ಸಿಕ್ಸ್​ಗಳನ್ನು ಪ್ರತಿ ಇನ್ನಿಂಗ್ಸ್​ಗೆ 6.12 ಸರಾಸರಿಯಲ್ಲಿ ಮತ್ತು ಆರ್​ಸಿಬಿ 1,295 ಸಿಕ್ಸ್​ಗಳನ್ನು 6.14 ಸರಾಸರಿಯಲ್ಲಿ ದಾಖಲಿಸಿವೆ.

ಓಕೆ, ಕ್ಯಾಚ್​ಗಳ ವಿಷಯವನ್ನೂ ಒಮ್ಮೆ ನೋಡಿ ಬಿಡುವ, ಅರ್​ಸಿಬಿ ಪರ ಕೊಹ್ಲಿ 76 ಕ್ಯಾಚ್​ ಹಿಡಿದಿದ್ದರೆ, ಡಿ ವಿಲಿಯರ್ಸ್ 83 ಹಿಡಿದಿದ್ದಾರೆ. ಮುಂಬೈ ಪರ ಪೊಲ್ಲಾರ್ಡ್ 90 ಮತ್ತು ರೋಹಿತ್ 89 ಕ್ಯಾಚ್​ ಹಿಡಿದಿದ್ದಾರೆ.

ನಾಳೆ ಆಡುವ ಸಂಭಾವ್ಯ ತಂಡಗಳು ಹೀಗಿರಬಹುದು

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್​ ಕೊಹ್ಲಿ, ಜೋಷ್ ಫಿಲಿಪ್, ಎ ಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸಚಿನ್ ಬೇಬಿ, ಯುಜ್ವೇಂದ್ರ ಚಹಲ್, ವಾಷಿಂಗ್ಟನ್​ ಸುಂದರ್, ಕೈಲ್ ಜೇಮಿಸನ್ ಮತ್ತು ಮೊಹಮ್ಮದ್ ಸಿರಾಜ್

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಇಶಾನ್ ಕಿಷನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕ್ರಿಸ್​ ಲಿನ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಟ್ರೆಂಟ್​ ಬೌಲ್ಟ್, ರಾಹುಲ್ ಚಹರ್, ನೇಥನ್ ಕೌಲ್ಟರ್ ನೈಲ್ ಮತ್ತು ಆಡಂ ಮಿಲ್ನೆ

ಇದನ್ನೂ ಓದಿ: IPL 2021: 49ಬಾಲ್​ಗಳಲ್ಲಿ 104ರನ್! ದೇಸಿ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿರುವ ರಜತ್​ಗೆ ಆರ್​ಸಿಬಿ ತಂಡದಲ್ಲಿ ಸಿಗುತ್ತಾ ಅವಕಾಶ?

(Rohit’s 5 time champions MI to lock horns with yet to win Virat Kohli’s RCB in season’s opene)

Published On - 6:48 am, Fri, 9 April 21

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ