AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಬೆಂಗಳೂರಿನಲ್ಲೂ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ. ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ.

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್
ರಾಜೇಶ್ ದುಗ್ಗುಮನೆ
|

Updated on:Apr 25, 2023 | 9:35 AM

Share

ಮುಖ್ಯಾಂಶಗಳು

  • ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ
  • ಬೆಂಗಳೂರಿನ ಮೆಕೋ ಕಾರ್ಟೋಪಿಯಾದಲ್ಲಿ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ
  • ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಕಾರ್ಟ್ ರೇಸಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಕಾರ್ಟಿಂಗ್ ರೇಸ್ ನಡೆಯುತ್ತಿದೆ. ಈ ಮೂಲಕ ಭಾರತದ ಮುಂದಿನ ಕಾರ್ಟಿಂಗ್ (Karting) ಚಾಂಪಿಯನ್​ನ ಹುಡುಕಲು ತಯಾರಿ ನಡೆದಿದೆ. ಈ ವಾರದಿಂದಲೇ ಸ್ಪರ್ಧೆ ಆರಂಭ ಆಗಲಿದೆ. ಇದನ್ನು ಆರಂಭಿಸಿದ ಆರ್​ಪಿಪಿಎಲ್​ (ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್) ಈ ಬಗ್ಗೆ ಸೋಮವಾರ (ಏಪ್ರಿಲ್ 24) ಅಧಿಕೃತ ಘೋಷಣೆ ಮಾಡಿದೆ. ಇದಕ್ಕೆ ಕಾರ್ಟಿಂಗ್ ಸೂಪರ್ ಸೀರಿಸ್ ಎಂದು ಹೆಸರು ಇಡಲಾಗಿದೆ. ಮೋಟಾರ್​ಸ್ಪೋರ್ಟ್​​ನ ವೃತ್ತಿ ಆಗಿ ತೆಗೆದುಕೊಳ್ಳಬೇಕು ಎಂದು ಆಲೋಚಿಸಿದವರಿಗೆ ಆರ್​ಪಿಪಿಎಲ್ ರೇಸ್ ಸಹಕಾರಿ ಆಗಲಿದೆ.

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಚೆನ್ನೈನ ನಗರದಲ್ಲಿ ಮೊದಲು ಈ ರೇಸ್ ನಡೆಯಲಿದೆ. ಜೂನ್​ 4ರಂದು ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ. ಚೆನ್ನೈನಲ್ಲಿ ಏಪ್ರಿಲ್ 20-30ರವರೆಗೆ ರೇಸ್ ಇರಲಿದೆ. ಬಳಿಕ ಬೆಂಗಳೂರು, ತ್ರಿಶೂರ್, ಮುಂಬೈ, ದೆಹಲಿ ಹಾಗೂ ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ ಮೆಕೋ ಕಾರ್ಟೋಪಿಯಾದಲ್ಲಿ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ.

ಇಲ್ಲಿ ಸ್ಪರ್ಧಿಸುವವರ ವಯಸ್ಸು 15 ದಾಟಿರಬೇಕು. ಫಿನಾಲೆಯಲ್ಲಿ ಗೆದ್ದವರು ಜುಲೈನಲ್ಲಿ ಪ್ರಾರಂಭವಾಗುವ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ 1.5-2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ಪಡೆಯುತ್ತಾರೆ. ಸ್ಕಾಲರ್​ಶಿಪ್ ಹೊಸ ಕಾರ್ಟ್​ ಸಿದ್ಧಪಡಿಸುವುದು ಸೇರಿ ಅನೇಕ ತರಬೇತಿಗಳನ್ನು ಒಳಗೊಂಡಿದೆ.

ವಿವಿಧ ನಗರಗಳಿಂದ 36 ರೇಸರ್​ಗಳ ಆಯ್ಕೆ ಮಾಡಲಾಗುತ್ತದೆ. ಹೈದರಾಬಾದ್​ನಲ್ಲಿ ನಡೆಯುವ ಫಿನಾಲೆಯಲ್ಲಿ ಇವರು ಭಾಗಿ ಆಗಲಿದ್ದಾರೆ. ಪ್ರತಿ ಬ್ಯಾಚ್​ನಲ್ಲಿ 9 ಮಂದಿ ಇರುತ್ತಾರೆ. ಅಭ್ಯಾಸ ಹಾಗೂ ಅರ್ಹತಾ ಸುತ್ತು ಇರಲಿದೆ. ಪ್ರತಿ ನಗರದಲ್ಲಿ ಆಯ್ಕೆ ಆದ ಟಾಪ್ 3 ರೇಸರ್​ಗಳಿಗೆ ಟ್ರೋಫಿ ಸಿಗಲಿದೆ. ಇನ್ನು ಫಿನಾಲೆಯಲ್ಲಿ ಟಾಪ್ 6 ಡ್ರೈವರ್​ಗಳಿಗೆ ಎಫ್​ಎಂಎಸ್​ಸಿಐನಿಂದ ಸ್ಕಾಲರ್​ಶಿಪ್ ಸಿಗಲಿದೆ.  (Source)

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು

ಆರ್​ಪಿಪಿಎಲ್​ನ ಮುಖ್ಯಸ್ಥ ಹಾಗೂ ಎಂಡಿ ಅಖಿಲ್ ರೆಡ್ಡಿ ಮಾತನಾಡಿ, ‘ಈ ಹೊಸ ಕಾರ್ಟಿಂಗ್ ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ನಮಗೆ ಖುಷಿ ಇದೆ. ಯುವ ರೇಸರ್​​ಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಮೋಟಾರ್‌ಸ್ಪೋರ್ಟ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತೇವೆ. ಭಾರತದಲ್ಲಿ ಕ್ರೀಡೆಯನ್ನು ಬೆಳೆಸಲು ನಾವು ಒತ್ತು ನೀಡುತ್ತಿದ್ದೇವೆ. ಇದರ ಭಾಗವಾಗಿ ಈ ರೇಸ್​ನಲ್ಲಿ ಗೆದ್ದವರಿಗೆ ಸ್ಕಾಲರ್​ಶಿಪ್ ನೀಡುತ್ತಿದ್ದೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Tue, 25 April 23

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ