AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಬೆಂಗಳೂರಿನಲ್ಲೂ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ. ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ.

ಕಾರ್ಟಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ; ಗೆದ್ದವರಿಗೆ ಸಿಗಲಿದೆ 2 ಕೋಟಿ ರೂಪಾಯಿ ಸ್ಕಾಲರ್​ಶಿಪ್
ರಾಜೇಶ್ ದುಗ್ಗುಮನೆ
|

Updated on:Apr 25, 2023 | 9:35 AM

Share

ಕಾರ್ಟ್ ರೇಸಿಂಗ್ ಉತ್ಸಾಹಿಗಳಿಗೆ ಬಂಪರ್ ಅವಕಾಶ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಆರು ನಗರಗಳಲ್ಲಿ ಕಾರ್ಟಿಂಗ್ ರೇಸ್ ನಡೆಯುತ್ತಿದೆ. ಈ ಮೂಲಕ ಭಾರತದ ಮುಂದಿನ ಕಾರ್ಟಿಂಗ್ (Karting) ಚಾಂಪಿಯನ್​ನ ಹುಡುಕಲು ತಯಾರಿ ನಡೆದಿದೆ. ಈ ವಾರದಿಂದಲೇ ಸ್ಪರ್ಧೆ ಆರಂಭ ಆಗಲಿದೆ. ಇದನ್ನು ಆರಂಭಿಸಿದ ಆರ್​ಪಿಪಿಎಲ್​ (ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್) ಈ ಬಗ್ಗೆ ಸೋಮವಾರ (ಏಪ್ರಿಲ್ 24) ಅಧಿಕೃತ ಘೋಷಣೆ ಮಾಡಿದೆ. ಇದಕ್ಕೆ ಕಾರ್ಟಿಂಗ್ ಸೂಪರ್ ಸೀರಿಸ್ ಎಂದು ಹೆಸರು ಇಡಲಾಗಿದೆ. ಮೋಟಾರ್​ಸ್ಪೋರ್ಟ್​​ನ ವೃತ್ತಿ ಆಗಿ ತೆಗೆದುಕೊಳ್ಳಬೇಕು ಎಂದು ಆಲೋಚಿಸಿದವರಿಗೆ ಆರ್​ಪಿಪಿಎಲ್ ರೇಸ್ ಸಹಕಾರಿ ಆಗಲಿದೆ.

ಏಪ್ರಿಲ್ 19ರಿಂದ ಕಾರ್ಟಿಂಗ್ ರೇಸ್ ಆರಂಭ ಆಗಲಿದೆ. ಚೆನ್ನೈನ ನಗರದಲ್ಲಿ ಮೊದಲು ಈ ರೇಸ್ ನಡೆಯಲಿದೆ. ಜೂನ್​ 4ರಂದು ಹೈದರಾಬಾದ್​ನಲ್ಲಿ ಫೈನಲ್ ನಡೆಯಲಿದೆ. ಚೆನ್ನೈನಲ್ಲಿ ಏಪ್ರಿಲ್ 20-30ರವರೆಗೆ ರೇಸ್ ಇರಲಿದೆ. ಬಳಿಕ ಬೆಂಗಳೂರು, ತ್ರಿಶೂರ್, ಮುಂಬೈ, ದೆಹಲಿ ಹಾಗೂ ಹೈದರಾಬಾದ್​ನಲ್ಲಿ ಸ್ಪರ್ಧೆ ನಡೆಯಲಿದೆ. ಬೆಂಗಳೂರಿನ ಮೆಕೋ ಕಾರ್ಟೋಪಿಯಾದಲ್ಲಿ ಕಾರ್ಟಿಂಗ್ ರೇಸ್ ಆಯೋಜಿಸಲಾಗಿದೆ.

ಇಲ್ಲಿ ಸ್ಪರ್ಧಿಸುವವರ ವಯಸ್ಸು 15 ದಾಟಿರಬೇಕು. ಫಿನಾಲೆಯಲ್ಲಿ ಗೆದ್ದವರು ಜುಲೈನಲ್ಲಿ ಪ್ರಾರಂಭವಾಗುವ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್‌ಗಾಗಿ 1.5-2 ಕೋಟಿ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನ ಪಡೆಯುತ್ತಾರೆ. ಸ್ಕಾಲರ್​ಶಿಪ್ ಹೊಸ ಕಾರ್ಟ್​ ಸಿದ್ಧಪಡಿಸುವುದು ಸೇರಿ ಅನೇಕ ತರಬೇತಿಗಳನ್ನು ಒಳಗೊಂಡಿದೆ.

ವಿವಿಧ ನಗರಗಳಿಂದ 36 ರೇಸರ್​ಗಳ ಆಯ್ಕೆ ಮಾಡಲಾಗುತ್ತದೆ. ಹೈದರಾಬಾದ್​ನಲ್ಲಿ ನಡೆಯುವ ಫಿನಾಲೆಯಲ್ಲಿ ಇವರು ಭಾಗಿ ಆಗಲಿದ್ದಾರೆ. ಪ್ರತಿ ಬ್ಯಾಚ್​ನಲ್ಲಿ 9 ಮಂದಿ ಇರುತ್ತಾರೆ. ಅಭ್ಯಾಸ ಹಾಗೂ ಅರ್ಹತಾ ಸುತ್ತು ಇರಲಿದೆ. ಪ್ರತಿ ನಗರದಲ್ಲಿ ಆಯ್ಕೆ ಆದ ಟಾಪ್ 3 ರೇಸರ್​ಗಳಿಗೆ ಟ್ರೋಫಿ ಸಿಗಲಿದೆ. ಇನ್ನು ಫಿನಾಲೆಯಲ್ಲಿ ಟಾಪ್ 6 ಡ್ರೈವರ್​ಗಳಿಗೆ ಎಫ್​ಎಂಎಸ್​ಸಿಐನಿಂದ ಸ್ಕಾಲರ್​ಶಿಪ್ ಸಿಗಲಿದೆ.  (Source)

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ನಡೆದ ಫಾರ್ಮುಲಾ ಇ-ರೇಸ್ ಗೆದ್ದ ಜೀನ್ ಎರಿಕ್; ಸ್ಪರ್ಧೆಗೆ ಮೆರಗು ತಂದ ಸೆಲೆಬ್ರಿಟಿಗಳು

ಆರ್​ಪಿಪಿಎಲ್​ನ ಮುಖ್ಯಸ್ಥ ಹಾಗೂ ಎಂಡಿ ಅಖಿಲ್ ರೆಡ್ಡಿ ಮಾತನಾಡಿ, ‘ಈ ಹೊಸ ಕಾರ್ಟಿಂಗ್ ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ನಮಗೆ ಖುಷಿ ಇದೆ. ಯುವ ರೇಸರ್​​ಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಮೋಟಾರ್‌ಸ್ಪೋರ್ಟ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಸಮರ್ಥವಾಗಿ ಕಟ್ಟಿಕೊಳ್ಳಲು ಇದು ವೇದಿಕೆಯನ್ನು ಒದಗಿಸುತ್ತೇವೆ. ಭಾರತದಲ್ಲಿ ಕ್ರೀಡೆಯನ್ನು ಬೆಳೆಸಲು ನಾವು ಒತ್ತು ನೀಡುತ್ತಿದ್ದೇವೆ. ಇದರ ಭಾಗವಾಗಿ ಈ ರೇಸ್​ನಲ್ಲಿ ಗೆದ್ದವರಿಗೆ ಸ್ಕಾಲರ್​ಶಿಪ್ ನೀಡುತ್ತಿದ್ದೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Tue, 25 April 23

ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಮಾತೃ ಭಾಷೆ ತೆಲುಗು, ಜೀವನದ ಭಾಷೆ ಕನ್ನಡ: ಸಾಯಿಕುಮಾರ್
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಕೋಗಿಲು ಲೇಔಟ್ ಒತ್ತುವರಿದಾರರಿಗೆ ಭರ್ಜರಿ ಶಾಕ್​​: 80 ಅರ್ಜಿಗಳು ರಿಜೆಕ್ಟ್​
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ಗಣರಾಜ್ಯೋತ್ಸವ 2026: ಕೈದಿಗಳು ತಯಾರಿಸಿದ ಬೇಕರಿ ಉತ್ಪನ್ನಗಳ ಉಪಹಾರ ವಿತರಣೆ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ರೈತರ ಪ್ರತಿಭಟನೆ ವೇಳೆ ಕುಮಾರಸ್ವಾಮಿ ಬಳಿ ಸೆರಗೊಡ್ಡಿ ಮಹಿಳೆ ಮನವಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಚೋರ್ಲಾ ಘಾಟ್‌ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್​​ ವರಿಷ್ಠಾಧಿಕಾರಿ
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ಬಿಬಿಎಲ್​ನಲ್ಲಿ ದಾಖಲೆಯ 6ನೇ ಬಾರಿಗೆ ಪ್ರಶಸ್ತಿ ಗೆದ್ದ ಪರ್ತ್ ಸ್ಕಾರ್ಚರ್ಸ್
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ರಾಜ್ಯಪಾಲರ ಭಾಷಣದ ಕುರಿತು ಸಿದ್ದರಾಮಯ್ಯ ರಿಯಾಕ್ಷನ್ ಹೀಗಿತ್ತು!
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
ಹೌಸ್​ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ