AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಕುಲ್ದೀಪ್​ರನ್ನು ಟೀಮಿನಿಂದ ಹೊರಗಿಟ್ಟಿರುವುದು ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ: ಹರ್ಭಜನ್ ಸಿಂಗ್

ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಮತ್ತು ವಾಷಿಂಗ್ಟನ್ ಸುಂದರ್ ಕೇವಲ ಒಂದು ಟೆಸ್ಟ್​ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತ ಮೊದಲ ಟೆಸ್ಟ್​ನಲ್ಲಿ ಮೂರು ಸ್ಪಿನ್ನರ್​ಗಳನ್ನು ಆಡಿಸುವ ನಿರ್ಧಾರ ಮಾಡಿದ್ದರೆ, ಕುಲ್ದೀಪ್ ಅವರಲ್ಲೊಬ್ಬರಾಗಬೇಕಿತ್ತು ಎಂದು ಭಜ್ಜಿ ಹೇಳಿದ್ದಾರೆ.

India vs England Test Series: ಕುಲ್ದೀಪ್​ರನ್ನು ಟೀಮಿನಿಂದ ಹೊರಗಿಟ್ಟಿರುವುದು ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ: ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2021 | 10:54 PM

Share

ಚೈನಾಮನ್​ಗಳನ್ನು ಬೌಲ್ ಮಾಡುವ ಎಡಗೈ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್​ರನ್ನು ಇಂಗ್ಲೆಂಡ್ ವಿರುದ್ಧ ಚೆನೈಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಿಂದ ಹೊರಗಿಟ್ಟಿರುವುದು ಭಾರತದ ವಿಖ್ಯಾತ ಆಫ್-ಸ್ಪಿನ್ನರ್ ಹರಭಜನ್ ​ಸಿಂಗ್​ಗೆ ದಿಗ್ಭ್ರಮೆ ಮೂಡಿಸಿದೆ.

ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ ಮತ್ತು ವಾಷಿಂಗ್ಟನ್ ಸುಂದರ್ ಕೇವಲ ಒಂದು ಟೆಸ್ಟ್​ ಪಂದ್ಯವನ್ನು ಮಾತ್ರ ಆಡಿದ್ದಾರೆ. ಭಾರತ ಮೊದಲ ಟೆಸ್ಟ್​ನಲ್ಲಿ ಮೂರು ಸ್ಪಿನ್ನರ್​ಗಳನ್ನು ಆಡಿಸುವ ನಿರ್ಧಾರ ಮಾಡಿದ್ದರೆ, ಕುಲ್ದೀಪ್ ಅವರಲ್ಲೊಬ್ಬರಾಗಬೇಕಿತ್ತು ಎಂದು ಭಜ್ಜಿ ಹೇಳಿದ್ದಾರೆ. ಅವರ ಸ್ಥಾನದಲ್ಲಿ ಸುಂದರ್​ ಅವರನ್ನು ಆಡಿಸಿರುವುದು ಆಘಾತಕಾರಿ ನಿರ್ಣಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ನನ್ನಲ್ಲಿ ಅಕ್ಷರಶಃ ದಿಗ್ಭ್ರಮೆ ಮೂಡಿಸಿದೆ. ಟೀಮಿನ ಭಾಗವಾಗಿದ್ದರೂ ಕುಲ್ದೀಪ್​ರನ್ನು ಆಡಸದಿರುವುದು ಅವರು ಹೇಗೆ ವಿಶ್ಲೇಷಿಸುತ್ತಾರೆ ಅಂತ ನನಗರ್ಥವಾಗುತ್ತಿಲ್ಲ, ಅಕ್ಸರ್ ಪಟೇಲ ಗಾಯಗೊಂಡ ಕಾರಣ ಅವರಂತೆಯೇ ಎಡಗೈ ಸ್ಪಿನ್ನರ್ ಆಗಿರುವ ನದೀಮ್ ಅವರನ್ನು ಬದಲೀ ಆಟಗಾರನಾಗಿ ಆಡುವ ಇಲೆವೆನ್​ನಲ್ಲಿ ಸ್ಥಾನ ನೀಡಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಇಬ್ಬಿಬ್ಬರು ಆಫ್-ಸ್ಪಿನ್ನರ್​ಗಳನ್ನು ಆಡಿಸುವುದು ಯಾವ ಸೀಮೆ ನ್ಯಾಯ? ಅವರ ನಿರ್ಧಾರ ನನ್ನ ವಿವೇಚನಗೆ ನಿಲುಕುತ್ತಿಲ್ಲ,’ ಎಂದು ಭಜ್ಜಿ ಕ್ರಿಕೆಟ್ ವೆಬ್​ಸೈಟೊಂದರ ಜೊತೆ ಮಾತಾಡುವಾಗ ಹೇಳಿದ್ದಾರೆ.

ಕುಲ್ದೀಪ್ ಯಾದವ್

ಕುಲ್ದೀಪ್ ಬಹಳ ಸಮಯದಿಂದ ಬೆಂಚ್ ಕಾಯಿಸುತ್ತಿದ್ದಾರೆ. ಅವರನ್ನು ಸೀಮಿತ ಓವರ್​ಗಳ ಪಂದ್ಯಗಳಿಗೆ ಪರಿಗಣಿಸುವುದಿಲ್ಲ ಮತ್ತು ಟೆಸ್ಟ್ ಪಂದ್ಯವೊಂದರಲ್ಲಿ ಅವರು ಕಾಣಿಸಿಕೊಂಡು ಈಗ್ಗೆ 2 ವರ್ಷಗಳಾಯಿತು. ತಾನಾಡಿದ ಕೊನೆಯ ಟೆಸ್ಟ್​ ಪಂದ್ಯದಲ್ಲಿ (ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ) ಅವರು ವಿಕೆಟ್ 5 ಪಡೆಯುವ ಸಾಧನೆ ಮಾಡಿದಾಗ್ಯೂ ನಂತರ ನಡೆದಿರುವ ಟೆಸ್ಟ್​ಗಳಿಗೆ ಅವರನ್ನು ಪರಿಗಣಿಸದಿರುವುದು ಆಶ್ಚರ್ಯಕರ ವಿಷಯವಾಗಿದೆ ಎಂದು ಭಜ್ಜಿ ಹೇಳಿದ್ದಾರೆ.

ಎಡಗೈ ರಿಸ್ಟ್ ಸ್ಪಿನ್ನ​ರ್​ನ ಉಪಸ್ಥಿತಿ ಭಾರತದ ದಾಳಿಗೆ ಒಂದು ವಿಶಿಷ್ಟ ಆಯಾಮ ಒದಗಿಸುತ್ತಿತ್ತು ಮತ್ತು ಹೀಗೆಯೇ ಕಡೆಗಣಿಸುತ್ತಿದ್ದರೆ ಅವರ ಆತ್ಮವಿಶ್ವಾಸಕ್ಕೆ ಭಾರಿ ಧಕ್ಕೆಯಾಗಲಿದೆ ಎಂದು ಹರ್ಭಜನ್ ಹೇಳಿದ್ದಾರೆ.

‘ಕುಲ್ದೀಪ್​ರನ್ನು ಅಡಿಸಿದ್ದರೆ ಭಾರತದ ಬೌಲಿಂಗ್ ದಾಳಿಗೆ ವೈವಿಧ್ಯತೆ ದೊರೆಯುತ್ತಿತ್ತು. ತಾನಾಡಿದ ಕೊನೆಯ ಎರಡು ಟೆಸ್ಟ್​ಗಳಲ್ಲೂ ಅವರು 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. ಅವರನ್ನು ಅಯ್ಕೆಗೆ ಪರಿಗಣಿಸದಿರುವುದು ನನ್ನಲ್ಲಿ ಆಘಾತವನ್ನುಂಟು ಮಾಡಿದೆ. ಇದು ಅವರ ಮನಸ್ಥಿಯ ಮೇಲೆ ಭಾರಿ ಅಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಟೀಮಿನ ಭಾಗವಾಗಿದ್ದರೂ ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸದಿರುವುದು ಬಹಳ ಯಾತನಾಮಯ ಸಂಗತಿ,’ ಎಂದು ಭಜ್ಜಿ ಹೇಳಿದ್ದಾರೆ.

India vs England Test Series | ಮೊದಲ ಟೆಸ್ಟ್​ನಲ್ಲಿ ಕುಲ್​ದೀಪ್​​ ಕಡೆಗಣನೆ: ಗೌತಮ್ ಗಂಭೀರ್ ಆಕ್ಷೇಪ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ