- Kannada News Sports Tokyo olympics 2020 21 Mirabai chanu silver medalist of tokyo olympics 2020 celebrates her bithday
Mirabai Chanu: ಟ್ರಕ್ ಚಾಲಕರ ಸಹಾಯ, ಪಠ್ಯದಿಂದ ಪ್ರೇರಣೆ; ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಇಂದು ಹುಟ್ಟುಹಬ್ಬ
Mirabai Chanu: 8 ನೇ ತರಗತಿಯಲ್ಲಿ ಕುಂಜ್ರಾನಿಯ ಯಶೋಗಾಥೆಯನ್ನು ಓದಿದ ಮೀರಾಬಾಯಿ ತಾನು ವೇಟ್ ಲಿಫ್ಟರ್ ಆಗಬೇಕೆಂದು ನಿರ್ಧರಿಸಿದರು. ಇಂದು ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ.
Updated on: Aug 08, 2021 | 3:53 PM

ಮೀರಾಬಾಯಿ ಚಾನು ಹೆಸರು ಇಂದು ದೇಶದ ಎಲ್ಲರಿಗೂ ತಿಳಿದಿದೆ ಏಕೆಂದರೆ ಮಣಿಪುರದ ಈ ವೇಟ್ ಲಿಫ್ಟರ್ ಪುರುಷರು ಮಾಡಲಾಗದ ಕೆಲಸವನ್ನು ಮಾಡಿದ್ದಾರೆ. ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ ಮತ್ತು ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗಿಂತ ಮೊದಲು, ಕರ್ಣಂ ಮಲ್ಲೇಶ್ವರಿ ಸಿಡ್ನಿ ಒಲಿಂಪಿಕ್ಸ್ -2000 ರಲ್ಲಿ ಈ ಸಾಧನೆ ಮಾಡಿದರು. ಮೀರಾಬಾಯಿ ಜುಲೈ 24 ರಂದು ದೇಶಕ್ಕೆ ಪದಕವನ್ನು ನೀಡಿದ್ದರು. ಆದರೆ ಅವರ ಬಗ್ಗೆ ನಾವು ಇಂದು ಏಕೆ ಮಾತನಾಡುತ್ತಿದ್ದೇವೆ? ಅದಕ್ಕೆ ಕಾರಣ ಇಂದು ಮೀರಾಬಾಯಿ ಅವರ ಜನ್ಮದಿನ.

ಮೀರಾಬಾಯಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮೀರಾಬಾಯಿಯೊಂದಿಗೆ ಕೇಕ್ ಕತ್ತರಿಸಿ ಅಭಿನಂದಿಸಿದರು. ಅದೇ ಸಮಯದಲ್ಲಿ, ಈ ಒಲಿಂಪಿಕ್ ಪದಕ ವಿಜೇತರಿಗೆ ದೇಶದ ಅನೇಕ ಪ್ರಖ್ಯಾತರು ಶುಭಾಶಯ ಸಲ್ಲಿಸುತ್ತಿದ್ದಾರೆ. ಮೀರಾಬಾಯಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಹಜವಾಗಿ, ಇಂದು ಇಡೀ ದೇಶಕ್ಕೆ ಅವರ ಬಗ್ಗೆ ತಿಳಿದಿದೆ ಮತ್ತು ಆಕೆಯ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತದೆ. ಆದರೆ ಮೀರಾಬಾಯಿ ಯಾರೆಂಬುದು ತಿಳಿಯದೇ ಇದ್ದ ಸಮಯವೊಂದಿತ್ತು. ಪದಕ ಗೆದ್ದ ನಂತರ ಅವರ ಮೇಲೆ ಹಣದ ಸುರಿಮಳೆಯಾಯಿತು, ಆದರೆ ಅವರ ಆರಂಭಿಕ ದಿನಗಳಲ್ಲಿ ತರಬೇತಿ ಕೇಂದ್ರಕ್ಕೆ ಹೋಗಲು ಅವರ ಬಳಿ ಹಣವಿರಲಿಲ್ಲ ಎಂಬುದು ವಿಪರ್ಯಾಸ.

ಮೀರಾಬಾಯಿ ಟ್ರಕ್ ಚಾಲಕರ ಸಹಾಯದಿಂದ ತನ್ನ ಗ್ರಾಮದಿಂದ 22 ಕಿಮೀ ದೂರದಲ್ಲಿರುವ ತರಬೇತಿ ಕೇಂದ್ರಕ್ಕೆ ಹೋಗುತ್ತಿದ್ದರು. ಮೀರಾಬಾಯಿಯ ಗ್ರಾಮ, ನಾಂಗ್ಪಾಕ್ ಕಾಕ್ಚಿಂಗ್, ಮಣಿಪುರದ ರಾಜಧಾನಿ ಇಂಫಾಲ್ನಲ್ಲಿರುವ ಕ್ರೀಡಾ ಸಂಕೀರ್ಣದಿಂದ 22 ಕಿಲೋಮೀಟರ್ಗಿಂತ ಹೆಚ್ಚು ದೂರದಲ್ಲಿದೆ. ಅಲ್ಲಿಗೆ ಹೋಗಲು ಅವರು ಟ್ರಕ್ ಚಾಲಕರ ಸಹಾಯವನ್ನು ಪಡೆಯುತ್ತಿದ್ದರು. ಪದಕವನ್ನು ಗೆದ್ದ ನಂತರ ಅವರು ಇತ್ತೀಚೆಗೆ ಈ ಟ್ರಕ್ ಚಾಲಕರಿಗೆ ಧನ್ಯವಾದ ಅರ್ಪಿಸಿದರು.

ಮೀರಾಬಾಯಿ ಆಗಸ್ಟ್ 8, 1994 ರಂದು ಜನಿಸಿದರು. ಅವರಿಗೆ ಐದು ಜನ ಒಡಹುಟ್ಟಿದವರು ಇದ್ದಾರೆ. ಬಡತನದಿಂದಾಗಿ ತಮ್ಮ ಮನೆಯಲ್ಲಿ ಅಡುಗೆ ಮಾಡಲು ಆಗಾಗ್ಗೆ ಕಟ್ಟಿಗೆ ತರಬೇಕಿತ್ತು. ಮೀರಾಬಾಯಿ ತನ್ನ ಭುಜದ ಮೇಲೆ ಭಾರವಾದ ಮರದ ಕಟ್ಟುಗಳನ್ನು ಸುಲಭವಾಗಿ ಒಯ್ಯುತ್ತಿದ್ದರು. ಆದರೆ ಅವರ ಸಹೋದರ ಅದರಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಇಲ್ಲಿಂದಲೇ ಮೀರಾಬಾಯಿ ತನ್ನ ಶಕ್ತಿಯನ್ನು ಅರಿತುಕೊಂಡರು.

ಭಾರತದ ಶ್ರೇಷ್ಠ ವೇಟ್ ಲಿಫ್ಟರ್ ಕುಂಜರಾಣಿ ದೇವಿ ಅವರಿಂದ ಮೀರಾಬಾಯಿ ಪ್ರಚೋದಿಸಲ್ಪಟ್ಟರು. 8 ನೇ ತರಗತಿಯಲ್ಲಿ ಕುಂಜ್ರಾನಿಯ ಯಶೋಗಾಥೆಯನ್ನು ಓದಿದ ಮೀರಾಬಾಯಿ ತಾನು ವೇಟ್ ಲಿಫ್ಟರ್ ಆಗಬೇಕೆಂದು ನಿರ್ಧರಿಸಿದರು. ಇಂದು ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ.

ಮೀರಾಬಾಯಿ ರಿಯೋ ಒಲಿಂಪಿಕ್ಸ್ -2016 ರಲ್ಲೂ ಭಾಗವಹಿಸಿದರು ಆದರೆ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದಾದ ನಂತರ ಅವರ ಗಾಯಗಳೂ ಅವರನ್ನು ತೊಂದರೆಗೊಳಿಸಿದವು. ಆದಾಗ್ಯೂ, ಅವರು ಮರಳಿ ಯತ್ನವ ಮಾಡಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ದೇಶದ ಪದಕದ ಭರವಸೆಯನ್ನು ಪೂರೈಸಿದರು.
