Tokyo Olympics: ‘ಭಾರತಕ್ಕೆ ತನ್ನ ಆಟಗಾರರ ಕುರಿತು ಹೆಮ್ಮೆಯಿದೆ’ ಎಂದು ಹಾಕಿ ತಂಡದ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್​ಗಳ ಮೂಲಕ ಭಾರತ ಪುರುಷರ ಹಾಕಿ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಸೆಮಿಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ ಸೋತರೂ ಸಹ, ಕಂಚಿನ ಪದಕವನ್ನು ಭಾರತ ಜಯಿಸಿಲಿ ಎಂದು ಅವರು ಶುಭಹಾರೈಸಿದ್ದಾರೆ.

Tokyo Olympics: ‘ಭಾರತಕ್ಕೆ ತನ್ನ ಆಟಗಾರರ ಕುರಿತು ಹೆಮ್ಮೆಯಿದೆ’ ಎಂದು ಹಾಕಿ ತಂಡದ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ
ಬೆಲ್ಜಿಯಂ ವಿರುದ್ಧ ಪಂದ್ಯ ಮುಕ್ತಾಯವಾದ ನಂತರ ಭಾರತದ ಆಟಗಾರರು ಸುತ್ತುವರೆದು ಪ್ರಾರ್ಥಿಸುತ್ತಿರುವುದು (ಚಿತ್ರ: ಪಿಟಿಐ)
Follow us
| Updated By: shivaprasad.hs

Updated on:Aug 03, 2021 | 11:12 AM

ಟೊಕಿಯೊ ಒಲಂಪಿಕ್ಸ್: ಇಂದು (ಆಗಸ್ಟ್ 3ರ ಮಂಗಳವಾರ) ನಡೆದ ಟೊಕಿಯೊ ಒಲಂಪಿಕ್ಸ್​ನ ಪುರುಷರ ಹಾಕಿ ಸೆಮಿಫೈನಲ್​ನಲ್ಲಿ ಭಾರತ ತಂಡವು ಬೆಲ್ಜಿಯಂ ತಂಡಕ್ಕೆ ಶರಣಾಯಿತು. ಇದರಿಂದಾಗಿ 41 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ ಚಿನ್ನ ಗೆಲ್ಲುವ ಭಾರತದ ಬಯಕೆ ಸಾಕಾರವಾಗಲಿಲ್ಲ. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಪಂದ್ಯ ಸೋತ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದು, ಮುಂದೆ ನಡೆಯುವ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವಂತೆ ಹಾರೈಸಿದ್ದಾರೆ.

ಸರಣಿ ಟ್ವೀಟ್​ಗಳ ಮೂಲಕ ಆಟಗಾರರಿಗೆ ಸಮಾಧಾನದ ಮಾತುಗಳನ್ನು ಹೇಳಿರುವ ನರೇಂದ್ರ ಮೋದಿ, ‘ಸೋಲು ಗೆಲುವುಗಳು ಆಟದ ಒಂದು ಭಾಗ. ಒಲಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಭಾರತ ಹಾಕಿ ತಂಡವು ಟೊಕಿಯೊ ಒಲಂಪಿಕ್ಸ್​ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ’ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತ ತಂಡದ ಮುಂದಿನ ಪಂದ್ಯಕ್ಕೂ ಶುಭ ಹಾರೈಸಿ, ‘ತಂಡದ ಮುಂದಿನ ಪಂದ್ಯಕ್ಕೆ ಶುಭ ಹಾರೈಕೆಗಳು. ದೇಶಕ್ಕೆ ತನ್ನ ಆಟಗಾರರ ಕುರಿತು ಬಹಳ ಹೆಮ್ಮೆಯಿದೆ’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್:

ಭಾರತಕ್ಕೆ ಕಂಚಿನ ಪದಕದ ಹೋರಾಟಕ್ಕೆ ಎದುರಾಳಿ ಯಾರು?

ಭಾರತವು ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ವೀರೋಚಿತ ಹೋರಾಟ ನಡೆಸಿಯೂ ಗೆಲುವು ದಕ್ಕಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ 2-1 ಗೋಲುಗಳಿಂದ ಮುಂದಿದ್ದ ಭಾರತ, ಕೊನೆಗೆ ಪೆನಾಲ್ಟಿಗಳ ಮೂಲಕ ಗೋಲು ಬಿಟ್ಟುಕೊಟ್ಟಿತು. ಅದರಿಂದಾಗಿ ಮನ್ಪ್ರೀತ್ ಸಿಂಗ್ ನಾಯಕತ್ವದ ತಂಡಕ್ಕೆ 2-5 ಅಂತರದಲ್ಲಿ ಸೋಲು ಎದುರಾಯಿತು. ಬೆಲ್ಜಿಯಂ ತಂಡದ ಪರ ಅಲೆಕ್ಸಾಂಡರ್ ಹೆನ್ರಿಕ್ಸ್ ಹ್ಯಾಟ್ರಿಕ್ ಗೋಲು ಬಾರಿಸಿದರು. ಕಂಚಿನ ಪದಕಕ್ಕಾಗಿ ಭಾರತ ಮತ್ತೊಂದು ಸೆಮಿಫೈನಲ್​ನಲ್ಲಿ(ಆಸ್ಟ್ರೇಲಿಯಾ- ಜರ್ಮನಿ) ಸೋತ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:

Tokyo Olympics: ಭಾರತ ಪುರುಷರ ಹಾಕಿ ತಂಡದ ಫೈನಲ್ ಕನಸು ಭಗ್ನ; ಇನ್ನು ಕಂಚಿಗಾಗಿ ಹೋರಾಟ

Tokyo Olympics: ಕೊನೆಯ 15 ಸೆಕೆಂಡ್​ಗಳಲ್ಲಿ 2 ಅಂಕ ಬಿಟ್ಟುಕೊಟ್ಟು ಸೋತ ಭಾರತದ ವನಿತಾ ಕುಸ್ತಿಪಟು ಸೋನಮ್ ಮಲಿಕ್

(Prime Minister Narendra Modi supports Indian Men’s Hockey Team and wished them for bronze medal match)

Published On - 11:07 am, Tue, 3 August 21

ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ