AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಗೆದ್ದಿರುವ ಚಿನ್ನದ ಪದಕ ಕೇವಲ ನನಗೆ ಮಾತ್ರ ಅಲ್ಲ ಸಮಸ್ತ ಭಾರತೀಯರಿಗೆ ಸೇರಿದ್ದು: ನೀರಜ್ ಚೋಪ್ರಾ

ಎರಡನೇ ಎಸೆತದಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದಾಗಲೇ ತಾನೊಂದು ವಿಶಿಷ್ಟ ಸಾಧನೆ ಮಾಡಿದ ಭಾವನೆ ಮೂಡಿತ್ತು ಎಂದು ಹೇಳಿದರು. ಅದು ತನಗೆ ಚಿನ್ನದ ಪದಕ ಗೆದ್ದು ಕೊಡುವ ಭಾವನೆ ಮನಸ್ಸಿನಲ್ಲಿ ಮೂಡಿಸಿತ್ತು ಎಂದು ಚೋಪ್ರಾ ಹೇಳಿದರು.

ನಾನು ಗೆದ್ದಿರುವ ಚಿನ್ನದ ಪದಕ ಕೇವಲ ನನಗೆ ಮಾತ್ರ ಅಲ್ಲ ಸಮಸ್ತ ಭಾರತೀಯರಿಗೆ ಸೇರಿದ್ದು: ನೀರಜ್ ಚೋಪ್ರಾ
ಹೌದು, ಮಂಗಳವಾರ ನಡೆದ ಎಎಫ್​ಐ ಸಭೆಯಲ್ಲಿ ನೀರಜ್ ಚೋಪ್ರಾ ಅವರ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತಿವರ್ಷ 7 ಆಗಸ್ಟ್ ಅನ್ನು ಜಾವೆಲಿನ್ ಥ್ರೋ ದಿನವನ್ನಾಗಿ ಆಚರಿಸಲಾಗುತ್ತದೆ. ಆಗಸ್ಟ್​ 7 ರಂದು ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದ ಸ್ಮರಣಾರ್ಥವಾಗಿ ಅದೇ ದಿನವನ್ನು ಜಾವೆಲಿನ್ ಥ್ರೋ ಡೇ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಈ ದಿನದಂದು ದೇಶದಾದ್ಯಂತ ಜಾವೆಲಿನ್ ಥ್ರೋ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಅಥ್ಲೆಟಿಕ್ಸ್ ಫೆಡರೇಶನ್ ತಿಳಿಸಿದೆ.
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 09, 2021 | 11:18 PM

Share

ಅಭೂತಪೂರ್ವ ಸಾಧನೆಯೊಂದಿಗೆ ಸ್ವದೇಶಕ್ಕೆ ಮರಳಿದ ನೀರಜ್ ಚೋಪ್ರಾ ಅವರು ತಾನು ಗೆದ್ದ ಬಂಗಾರದ ಪದಕ ತನಗೆ ಮಾತ್ರ ಅಲ್ಲ ಇಡೀ ದೇಶಕ್ಕೆ ಸೇರಿದ್ದು ಅಂತ ಹೇಳಿದರು. ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್ಗಳಲ್ಲಿ ಭಾರತಕ್ಕೆ ಮೊದಲ ಪದಕ ದೊರಕಿಸಿ ಕೊಟ್ಟು ಇತಿಹಾಸ ನಿರ್ಮಿಸಿದ ಚೋಪ್ರಾ ಸೋಮವಾರದಂದು ದೆಹಲಿಯಲ್ಲಿ ಒಲಂಪಿಕ್ಸ್ನಲ್ಲಿ ದೇಶಕ್ಕೆ ಪದಕ ಗೆದ್ದುಕೊಟ್ಟ ಅಥ್ಲೀಟ್ಗಳಿಗೆ ಕೇಂದ್ರ ಸರ್ಕಾರ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತಾಡಿ, ಅಂತಮ ಸುತ್ತಿನಲ್ಲಿ ಪದಕಕ್ಕಾಗಿ ಸೆಣಸು ಮುಗಿದ ನಂತರ ತಾನು ನೋವಿನಲ್ಲಿದ್ದೆ ಎಂದರು. ಆದರೆ ಜಾವೆಲಿನ್ ಎಸೆತದಲ್ಲಿ ಮಾಡಿದ ಅವಿಸ್ಮರಣೀಯ ಸಾಧನೆ ಎಲ್ಲ ನೋವುಗಳನ್ನು ಮರೆಸಿತು ಎಂದು ಚೋಪ್ರಾ ಹೇಳಿದರು.

ತನ್ನ ಎರಡನೇ ಎಸೆತದಲ್ಲಿ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದಾಗಲೇ ತಾನೊಂದು ವಿಶಿಷ್ಟ ಸಾಧನೆ ಮಾಡಿದ ಭಾವನೆ ಮೂಡಿತ್ತು ಎಂದು ಹೇಳಿದರು. ಅದು ತನಗೆ ಚಿನ್ನದ ಪದಕ ಗೆದ್ದು ಕೊಡುವ ಭಾವನೆ ಮನಸ್ಸಿನಲ್ಲಿ ಮೂಡಿಸಿತ್ತು ಎಂದು ಚೋಪ್ರಾ ಹೇಳಿದರು.

‘ಒಂದು ವಿಶಿಷ್ಟವಾದ ಸಾಧನೆ ಮಾಡಿದ್ದೇನೆ ಅಂತ ನಾನು ಅಂದುಕೊಳ್ಳಲಾರಂಭಿಸಿದ್ದೆ. ನನ್ನ ಅತ್ತುತ್ತಮ ಅಂದರೆ ಗರಿಷ್ಠ ಎಸೆತವನ್ನು ದಾಖಲಿಸಿದ್ದೇನೆ ಎಂಬ ಭಾವನೆ ಮೂಡಿತ್ತು. ಆ ಎಸೆತವನ್ನು ನಿಜಕ್ಕೂ ಒಂದು ಅಧ್ಭುತ ಲಯದೊಂದಿಗೆ ಎಸೆದಿದ್ದೆ,’ ಎಂದು ಚೋಪ್ರಾ ಹೇಳಿದರು.

ಮರುದಿನ ಆ ಎಸೆತ ಎಷ್ಟು ಮಹತ್ವದ್ದು ಅಂತ ನನ್ನ ದೇಹಕ್ಕೂ ಗೊತ್ತಾಯಿತು. ಎಲ್ಲ ನೋವುಗಳನ್ನು ನೀಗಿಸುವ ಎಸೆತ ಅದಾಗಿತ್ತು. ಈ ಪದಕ ಸಮಸ್ತ ದೇಶದ್ದು,’ ಎಂದು ಚೋಪ್ರಾ ಹೇಳಿದರು.

ಯಾವುದಕ್ಕೂ ಹೆದರಬಾರದು ಎಂಬ ಸಂದೇಶವನ್ನು ಪ್ರತಿಯೊಬ್ಬ ಭಾರತೀಯನಿಗೆ ತಾನು ನೀಡಬಯಸುವುದಾಗಿ ಸೇನೆಯಲ್ಲಿ ಕೆಲಸ ಮಾಡುವ 23 ವರ್ಷ ವಯಸ್ಸಿನ ಚೋಪ್ರಾ ಹೇಳಿದರು.

‘ನಿಮ್ಮ ಪ್ರತಿಸ್ಫರ್ಧಿಯ ಸಾಮರ್ಥ್ಯದ ಬಗ್ಗೆ ನೀವು ಯೋಚಿಸಲೇ ಬೇಡಿ. ನಿಮ್ಮ ಗರಿಷ್ಟ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪ್ರಯತ್ನಿಸಿರಿ. ನೀವು ಮಾಡಬೇಕಿರುವುದು ಅಷ್ಟು ಮಾತ್ರ ಮತ್ತು ಆ ಧೋರಣೆಯೇ ಬಂಗಾರದ ಪದಕಗಳನ್ನು ಗೆಲ್ಲಿಸುತ್ತದೆ. ಪ್ರತಿಸ್ಪರ್ಧಿಯ ಬಗ್ಗೆ ಕಿಂಚಿತ್ತೂ ಭಯ, ಆತಂಕ ಬೇಡ,’ ಎಂದು ಅವರು ಹೇಳಿದರು.

ನೀರಜ್ ಚೋಪ್ರಾ ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನ ಗೆಲ್ಲುವುದರೊಂದಿಗೆ 13 ವರ್ಷಗಳ ನಂತರ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದು ಕೊಟ್ಟರು.

ಟೋಕಿಯೋನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿ ಒಟ್ಟು 7 ಪದಕ ಗಳಿಸಿದ ಭಾರತ ಒಲಂಪಿಕ್ಸ್ ಇತಿಹಾಸದಲ್ಲೇ ತನ್ನ ಅತ್ಯುತ್ತಮ ಸಾಧನೆ ತೋರಿತು.

ಇದನ್ನೂ ಓದಿ: Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ

Follow Us
Web contact
Web contact

TV9 Kannada

Read More
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು