AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christian Eriksen: ಪಂದ್ಯದ ವೇಳೆ ಕುಸಿದು ಬಿದ್ದ ಡೆನ್ಮಾರ್ಕ್ ಫುಟ್​ಬಾಲ್ ತಾರೆ ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಕೆ; ಅಭಿಮಾನಿಗಳು ನಿರಾಳ

UEFA Euro 2020: ಪಂದ್ಯ ನಡೆಯುತ್ತಿದ್ದಂತೆ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದು ತಕ್ಷಣವೇ ಸಹ ಆಟಗಾರರು ರಕ್ಷಣೆಗೆ ಧಾವಿಸಿದ್ದಾರೆ. ವೈದ್ಯಕೀಯ ಸಹಾಯ ತಂಡ ಮೈದಾನಕ್ಕೆ ಓಡಿ ಬರುತ್ತಿದ್ದಂತೆ ಡೆನ್ಮಾರ್ಕ್ ತಂಡದ ಆಟಗಾರರು ಕುಸಿದು ಬಿದ್ದಿರುವ ಎರಿಕ್ಸೆನ್​ಗೆ ಅಡ್ಡವಾಗಿ ನಿಂತು ಅಲ್ಲಿನ ಯಾವುದೇ ದೃಶ್ಯ  ಫೋಟೊದಲ್ಲಿ ಸೆರೆಯಾಗದಂತೆ ತಡೆದಿದ್ದರು.

Christian Eriksen: ಪಂದ್ಯದ ವೇಳೆ ಕುಸಿದು ಬಿದ್ದ ಡೆನ್ಮಾರ್ಕ್ ಫುಟ್​ಬಾಲ್ ತಾರೆ ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಕೆ; ಅಭಿಮಾನಿಗಳು ನಿರಾಳ
ಡೆನ್ಮಾರ್ಕ್ ಫುಟ್ಬಾಲ್ ತಾರೆ ಕ್ರಿಸ್ಟಿಯನ್ ಎರಿಕ್ಸೆನ್
TV9 Web
| Edited By: |

Updated on:Jun 13, 2021 | 5:07 PM

Share

ಕೊಪನ್ ಹೇಗನ್: ಕೊಪನ್ ಹ್ಯಾಗನ್​ನ ಟೆಲಿಯಾ ಪಾರ್ಕೆನ್ ಸ್ಟೇಡಿಯಂನಲ್ಲಿ ಶನಿವಾರ ಯುಇಎಫ್ಎ ಯುರೋ 2020 ಫುಟ್​ಬಾಲ್  ಪಂದ್ಯಾಟದಲ್ಲಿ ಫಿನ್ಲೆಂಡ್ ವಿರುದ್ಧ  ಡೆನ್ಮಾರ್ಕ್ ತಂಡ ಪಂದ್ಯದ ವೇಳೆ ಕುಸಿದು ಬಿದ್ದ ಡೆನ್ಮಾರ್ಕ್ ತಂಡದ ಆಟಗಾರ ಕ್ರಿಶ್ಚಿಯನ್ ಎರಿಕ್ಸೆನ್ ಚೇತರಿಸಿಕೊಂಡಿದ್ದಾರೆ. ಅವರ  ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಎರಿಕ್ಸೆನ್ ತಂಡದ ಆಟಗಾರರಿಗೆ ಶುಭಕಾಮನೆ ಕಳಿಸಿದ್ದಾರೆ ಎಂದು ಬಿಬಿಸಿ  ವರದಿ ಮಾಡಿದೆ.

ಪಂದ್ಯ ನಡೆಯುತ್ತಿದ್ದಂತೆ ಕ್ರಿಶ್ಚಿಯನ್ ಎರಿಕ್ಸೆನ್ ಕುಸಿದು ಬಿದ್ದಿದ್ದು ತಕ್ಷಣವೇ ಸಹ ಆಟಗಾರರು ರಕ್ಷಣೆಗೆ ಧಾವಿಸಿದ್ದಾರೆ. ವೈದ್ಯಕೀಯ ಸಹಾಯ ತಂಡ ಮೈದಾನಕ್ಕೆ ಓಡಿ ಬರುತ್ತಿದ್ದಂತೆ ಡೆನ್ಮಾರ್ಕ್ ತಂಡದ ಆಟಗಾರರು ಕುಸಿದು ಬಿದ್ದಿರುವ ಎರಿಕ್ಸೆನ್​ಗೆ ಅಡ್ಡವಾಗಿ ನಿಂತು ಅಲ್ಲಿನ ಯಾವುದೇ ದೃಶ್ಯ  ಫೋಟೊದಲ್ಲಿ ಸೆರೆಯಾಗದಂತೆ ತಡೆದಿದ್ದರು. ಕ್ರೀಡಾಂಗಣದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗದ ಪರಿಸ್ಥಿತಿ. ಸಹ ಆಟಗಾರರು ಕಣ್ಣಲ್ಲಿ ನೀರು ತುಂಬಿ ನಿಂತಿದ್ದರೆ ಇಡೀ ಕ್ರೀಡಾಂಗಣ ಸ್ತಬ್ಧವಾಗಿತ್ತು. ಡೆನ್ಮಾರ್ಕ್ ಅಭಿಮಾನಿಗಳು ಪ್ರಾರ್ಥಿಸುತ್ತಿರುವ ದೃಶ್ಯ ಒಂದೆಡೆಯಾದರೆ ಇಡೀ ಫುಟ್​ಬಾಲ್ ಜಗತ್ತು ಎರಿಕ್ಸೆನ್​ಗಾಗಿ ಪ್ರಾರ್ಥಿಸುತ್ತಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ #prayforerikson ಹ್ಯಾಶ್ ಟ್ಯಾಗ್ ಟ್ರೆಂಡ್ಆಗಿತ್ತು.

ಎರಿಕ್ಸೆನ್​ಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಅಡ್ಡವಾಗಿ ನಿಂತ ಡೆನ್ಮಾರ್ಕ್ ತಂಡದ ಆಟಗಾರರು

ಕ್ರೀಡಾಂಗಣದಲ್ಲಿ ಎರಿಕ್ಸೆನ್ ಅವರಿಗೆ ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರೂ ಸ್ಪಂದನೆ ಕಂಡು ಬರದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಛಾಯಾಗ್ರಾಹಕರೊಬ್ಬರು ಎರಿಕ್ಸೆನ್ ಅವರನ್ನು ಮೈದಾನದಿಂದ ಸ್ಟ್ರೆಚರ್‌ನಲ್ಲಿ ಕೊಂಡೊಯ್ಯುತ್ತಿದ್ದಂತೆ ಕೈ ಎತ್ತುವುದನ್ನು ನೋಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದಾಗ ಫುಟ್​ಬಾಲ್ ಅಭಿಮಾನಿಗಳಿಗೆ ನಿಟ್ಟುಸಿರು.

ಪತ್ರಕರ್ತ ಫ್ಯಾಬ್ರಿಜಿಯೊ ರೊಮಾನೊ ಅವರು ಎರಿಕ್ಸೆನ್ ಅವರು ಸ್ಪಂದಿಸುತ್ತಿದ್ದಾರೆ ಮತ್ತು ಅವರಗಿ ಪ್ರಜ್ಞೆ ಮರಳಿದೆ ಎಂಬ ಸುದ್ದಿಯನ್ನು ಹಂಚಿಕೊಂಡರು.

ಪಂದ್ಯದ ಸಮಯದಲ್ಲಿ ಎಡ ಟಚ್‌ಲೈನ್ ಬಳಿ ಓಡುತ್ತಿರುವಾಗ ಎರಿಕ್ಸೆನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಗ್ರೂಪ್ ಬಿ ನಡುವಿನ ಪಂದ್ಯಾಟದ ಹಾಫ್ ಟೈಮ್ ಮೊದಲು ಎರಿಕ್ಸೆನ್ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ‘ಆರೋಗ್ಯ ತುರ್ತುಸ್ಥಿತಿ’ ಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಇಎಫ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

ಆಟಗಾರರು  ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಾಗ ಕ್ರೀಡಾಂಗಣದಲ್ಲಿದ್ದ ಫಿನ್ನಿಷ್ ಅಭಿಮಾನಿಗಳು “ಕ್ರಿಶ್ಚಿಯನ್” ಎಂದು ಕೂಗಿದರೆ, ಡ್ಯಾನಿಶ್ ಅಭಿಮಾನಿಗಳು “ಎರಿಕ್ಸೆನ್” ಎಂದು ಕೂಗಿದರು.

ಎರಿಕ್ಸೆನ್ ಕುಸಿದು ಬಿದ್ದ ಸಂಭವದ ಒಂದು ಗಂಟೆಯ ನಂತರ, ಡೆನ್ಮಾರ್ಕ್ ಎಫ್‌ಎಯಿಂದ ತಮ್ಮ ಆಟಗಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದಾಗ ಫುಟ್​ಬಾಲ್ ಜಗತ್ತು ನಿಟ್ಟುಸಿರು ಬಿಟ್ಟಿತು.

“ಕ್ರಿಶ್ಚಿಯನ್ ಎರಿಕ್ಸೆನ್ ಅವರಿಗೆ ಪ್ರಜ್ಞೆ ಮರಳಿದೆ. ರಿಗ್ಶೋಸ್ಪಿಟಲೆಟ್​ನಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ” ಎಂದು ಡೆನ್ಮಾರ್ಕ್ ಎಫ್ಎ ಪ್ರಕಟಣೆಯಲ್ಲಿ ತಿಳಿಸಿದೆ.

ಡೆನ್ಮಾರ್ಕ್ ತಂಡದ 29 ವರ್ಷದ ಸೃಜನಾತ್ಮಕ ಮಿಡ್‌ಫೀಲ್ಡರ್ ಎರಿಕ್ಸೆನ್, ಅಜಾಕ್ಸ್, ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಮತ್ತು ಇಂಟರ್ ಮಿಲನ್‌ನಾದ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಸ್ಪರ್ಸ್ ಜೊತೆ ಪ್ರೀಮಿಯರ್ ಲೀಗ್​ನಲ್ಲಿ ಎರಡನೇ ಸ್ಥಾನ ಪಡೆದರು ಮತ್ತು ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಆಡಿದ್ದಾರೆ.

ಕ್ರಾಸ್ ಗಳನ್ನು ಡೆಲಿವರಿ ಮಾಡುವಲ್ಲಿ ನಿಖರತೆಗೆ ಹೆಸರುವಾಸಿಯಾದ ಫ್ರೀ-ಕಿಕ್ ತಜ್ಞ ಎರಿಕ್ಸೆನ್ ಅವರು ಜಾನ್ ಡಹ್ಲ್ ಟಾಮಾಸ್ಸನ್‌ರ ನಂತರ ಡೆನ್ಮಾರ್ಕ್‌ನಿಂದ ಹೆಚ್ಚು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಫುಟ್​ಬಾಲ್ ಆಟಗಾರರಾಗಿದ್ದಾರೆ.

ಇದನ್ನೂ ಓದಿ:  UEFA Euro 2020: ಯೂರೋ 2020 ಫುಟ್​ಬಾಲ್ ಸರಣಿಯನ್ನು ವಿಶೇಷ ಡೂಡಲ್​ನೊಂದಿಗೆ ಸಂಭ್ರಮಿಸಿದ ಗೂಗಲ್

Published On - 5:01 pm, Sun, 13 June 21

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು