AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೋಲ್​ಗಳಿಗೆ ಪ್ರತಿಕ್ರಿಯಿಸಿ ವಿರಾಟ್ ಕೊಹ್ಲಿ ಟ್ವೀಟ್; ಟ್ವಿಟರ್​ನಲ್ಲಿ ಶುರು ಆಯ್ತು ವೆಜ್-ನಾನ್ ವೆಜ್ ಚರ್ಚೆ

Virat Kohli: ವಿರಾಟ್ ಅವರ ಉಪಾಹಾರವು "ಸಸ್ಯಾಹಾರ" ಅಲ್ಲದ ಮೊಟ್ಟೆಗಳನ್ನು ಒಳಗೊಂಡಿರುವುದರಿಂದ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಟ್ವಿಟರ್ ನಲ್ಲಿ #vegetarian ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಟ್ರೋಲ್​ಗಳಿಗೆ ಪ್ರತಿಕ್ರಿಯಿಸಿ ವಿರಾಟ್ ಕೊಹ್ಲಿ ಟ್ವೀಟ್; ಟ್ವಿಟರ್​ನಲ್ಲಿ ಶುರು ಆಯ್ತು ವೆಜ್-ನಾನ್ ವೆಜ್ ಚರ್ಚೆ
ವಿರಾಟ್ ಕೊಹ್ಲಿ
TV9 Web
| Edited By: |

Updated on:Jun 01, 2021 | 8:55 PM

Share

ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚೆಗೆ ನಡೆದ ‘Ask Me Anything’ ಸೆಷನ್​ನಲ್ಲಿ ಅಭಿಮಾನಿಗಳು ಡಯಟ್ ಬಗ್ಗೆ ಕೇಳಿದಾಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊಟ್ಟೆ ತಮ್ಮ ಆಹಾರದ ಭಾಗವಾಗಿದೆ ಎಂದು ಎಂದು ಹೇಳಿದ್ದರು. “ಸಾಕಷ್ಟು ತರಕಾರಿಗಳು, ಮೊಟ್ಟೆಗಳು, 2 ಕಪ್ ಕಾಫಿ, ಕ್ವಿನೋವಾ,  ಪಾಲಕ್, ದೋಸೆ ಕೂಡಾ ಇಷ್ಟ. ಆದರೆ ಎಲ್ಲಾ ನಿಯಂತ್ರಿತ ಪ್ರಮಾಣದಲ್ಲಿರುತ್ತದೆ ಎಂದಿದ್ದರು ಕೊಹ್ಲಿ. ಆದಾಗ್ಯೂ, ಇದು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಭಾರಿ ಆಘಾತವನ್ನುಂಟು ಮಾಡಿತು. ಅವರಲ್ಲಿ ಕೆಲವರು ವಿರಾಟ್ ಸಂಪೂರ್ಣವಾಗಿ ವೀಗನ್ ಎಂದು ವಾದಿಸಿದರು. ಆದರೆ, ತಾನು ಸಸ್ಯಾಹಾರಿ ಎಂದು ಕ್ರಿಕೆಟಿಗ ಈ ಹಿಂದೆ ಟ್ವಿಟರ್‌ನಲ್ಲಿ ಹೇಳಿದ್ದರು.

ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಮಂಗಳವಾರ ಕೊಹ್ಲಿ, “ನಾನು ವೀಗನ್ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. ನಾನು ಸದಾ ಸಸ್ಯಾಹಾರಿಯಾಗಿದ್ದೇನೆ. ದೀರ್ಘ ಉಸಿರು ತೆಗೆದುಕೊಂಡು ನಿಮ್ಮ ತರಕಾರಿಗಳನ್ನು ತಿನ್ನಿರಿ (ನೀವು ಬಯಸಿದರೆ) ಎಂದು ಟ್ವೀಟ್ ಮಾಡಿದ್ದಾರೆ.

ಕೊಹ್ಲಿಯನ್ನು ಟ್ರೋಲ್ ಮಾಡಿದ ನೆಟ್ಟಿಗರು ವಿರಾಟ್ ಅವರ ಉಪಾಹಾರವು “ಸಸ್ಯಾಹಾರ” ಅಲ್ಲದ ಮೊಟ್ಟೆಗಳನ್ನು ಒಳಗೊಂಡಿರುವುದರಿಂದ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಟ್ವಿಟರ್​ನಲ್ಲಿ #vegetarian ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಹಿಂದಿನ ಸಂದರ್ಶನವೊಂದರಲ್ಲಿ, ವಿರಾಟ್ ಕೊಹ್ಲಿ ಅವರು ತಮ್ಮ ಬೆನ್ನುಮೂಳೆ ಸಮಸ್ಯೆಗಳನ್ನು ಎದುರಿಸಿದ ನಂತರ ಮಾಂಸಾಹಾರ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. “ನನಗೆ ಸೆರ್ವಿಕಲ್ ಸ್ಪೈನ್ ಸಮಸ್ಯೆ ಇದ್ದು, ಇದರಿಂದಾಗಿ ನನ್ನ ಕಿರುಬೆರಳಿನಲ್ಲಿ ಜುಮ್ಮೆನಿಸುವಿಕೆ ಉಂಟಾಯಿತು, ನನಗೆ ಬ್ಯಾಟಿಂಗ್ ಮಾಡಲು ಕಷ್ಟವಾಯಿತು. ಇದು 2018 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸೆಂಚುರಿಯನ್ ಟೆಸ್ಟ್ ವೇಳೆ ಹೀಗಾಗಿತ್ತು. ಇದಲ್ಲದೆ, ನನ್ನ ಹೊಟ್ಟೆಯಲ್ಲಿ ಸ್ವಲ್ಪ ಅಸಿಡಿಟಿ ಉಂಟಾಯಿತು. ಯೂರಿಕ್ ಆಮ್ಲ ನನ್ನ ಹೊಟ್ಟೆಯು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಎಳೆಯಲು ಪ್ರಾರಂಭಿಸಿತು, ಅದು ಬೆನ್ನುಮೂಳೆಯ ಸಮಸ್ಯೆಗೆ ಕಾರಣವಾಯಿತು. ಆದ್ದರಿಂದ, ನಾನು ಮಾಂಸಾಹಾರ ತ್ಯಜಿಸಿದ್ದು ಈಗ ನಾನು ಎಂದಿಗಿಂತಲೂ ಉತ್ತಮವಾಗಿದ್ದೇನೆ “ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರೊಂದಿಗಿನ ಚಾಟ್‌ನಲ್ಲಿ ಕೊಹ್ಲಿ ಹೇಳಿದ್ದಾರೆ.

ವೀಗನ್ ಅಂದ್ರೆ? ವೀಗನ್ ಅಂದರೆ  ನೈತಿಕತೆಯಿಂದ ಪ್ರಾಣಿ ಉತ್ಪನ್ನಗಳನ್ನು ಅಥವಾ ಆರೋಗ್ಯ ಅಥವಾ ಪರಿಸರ ಕಾರಣಗಳಿಗಾಗಿ ಪ್ರಾಣಿ ಉತ್ಪನ್ನಗಳನ್ನು ಸೇವಿಸದೇ ಇರುವ ವ್ಯಕ್ತಿ. ಅಂದರೆ ಪ್ರಾಣಿಜನ್ಯ ಪದಾರ್ಥಗಳನ್ನು ಇವರು ಸೇವಿಸುವುದಿಲ್ಲ. ವೀಗನ್ ಆಹಾರ ಪದ್ದತಿ  ಪಾಲಿಸುವವರು ಮೊಟ್ಟೆ, ಹಾಲಿನ ಪದಾರ್ಥಗಳನ್ನು ಕೂಡಾ ವರ್ಜಿಸುತ್ತಾರೆ.  ಮಾಂಸ ಮತ್ತು ಪ್ರಾಣಿ ಜನ್ಯ ಆಹಾರದ ಬದಲು, ವೀಗನ್ಸ್ ತಮ್ಮ ಆಹಾರದಲ್ಲಿ ಹಣ್ಣು, ತರಕಾರಿಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಕಾಳುಗಳು ಮತ್ತು ಬೀಜದ ಉತ್ಪನ್ನಗಳನ್ನು ಬಯಸುತ್ತಾರೆ.

ಇದನ್ನೂ ಓದಿ: Virat Kohli: ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ; ವಿರಾಟ್ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್!

ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ

Published On - 8:46 pm, Tue, 1 June 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ