AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್

ಕನ್ಕಶನ್ ಸಬ್​ಸ್ಟಿಟ್ಯೂಟ್ ವಿಷಯ ಚರ್ಚೆಗೊಳಗಾಗಿದೆ. ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಯುಜ್ವೇಂದ್ರ ಚಹಲ್ ಅವರನ್ನು ಕನ್ಕಶನ್ ಸಬ್ ಆಗಿ ಉಪಯೋಗಿಸಿದ್ದನ್ನುಅಸ್ಟ್ರೇಲಿಯನ್ನರು ವಿರೋಧಿಸುತ್ತಿದ್ದಾರೆ. ಆದರೆ ಭಾರತೀಯರು ನಿಯಮದನುಸಾರ ಆಡಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 04, 2020 | 8:52 PM

Share

ತೊಡೆನೋವಿನಿಂದ ಬಳಲುತ್ತಿರುವ ರವೀಂದ್ರ ಜಡೇಜಾ

ಟೀಮ್ ಇಂಡಿಯ ಮೊದಲ ಟಿ20ಐ ಪಂದ್ಯದಲ್ಲಿ ಕನ್ಕಶನ್ ಸಬ್​ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಲ್ ಅವರನ್ನು ಉಪಯೋಗಿಸಿದ್ದು ಭಾರೀ ಚರ್ಚೆಗೊಳಗಾಗಿದೆ. ಇಂದು ನಡೆದ ಪಂದ್ಯದಲ್ಲಿ ಆಸ್ಸೀ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಬೌನ್ಸರೊಂದು ರವೀಂದ್ರ ಜಡೇಜಾ ಅವರ ಹೆಲ್ಮೆಟ್​ಗೆ ಅಪ್ಪಳಿಸಿತು. ಭಾರತೀಯ ಬ್ಯಾಟ್ಸ್​ಮನ್ ಕುಸಿದು ಬಿದ್ದರಾದರೂ ಕೂಡಲೇ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಅವರು ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದ್ದು, ಭಾರತದ ಗೆಲುವಿನಲ್ಲಿ ದೊಡ್ಡ ಕಾಣಿಕೆ ಎನಿಸಿತು. ಹಾಗೆಯೇ ಅವರು ತೊಡೆನೋವಿನಿಂದ ಬಳಲುತ್ತಿದ್ದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಹಾಗಾಗಿ, ಆಸ್ಟ್ರೇಲಿಯ ಬ್ಯಾಟ್ ಮಾಡುವಾಗ ಜಡೇಜಾ ಫೀಲ್ಡ್​ಗೆ ಬರಲಿಲ್ಲ.

ಅವರ ಸ್ಥಾನದಲ್ಲಿ ಮೈದಾನಕ್ಕಿಳಿದ ಯುಜ್ವೇಂದ್ರ ಚಹಲ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ದಕ್ಕಲು ನೆರವಾದರು. ಆದರೆ ಅವರಿಗೆ ಆಡಲು ಅವಕಾಶ ನೀಡಿದ್ದು ಆಸ್ಟ್ರೇಲಿಯನ್ನರಿಗೆ ಅದರಲ್ಲೂ ವಿಶೇಷವಾಗಿ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಸರಿಯೆನಿಸಲಿಲ್ಲ. ಅವರು ಬಹಳ ಹೊತ್ತಿನವರೆಗೆ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರೊಂದಿಗೆ ಬಹಳ ಗಹನವಾಗಿ ವಿಷಯವನ್ನು ಚರ್ಚಿಸಿದ್ದು ಟಿವಿಯಲ್ಲಿ ತೋರಿಸಲಾಯಿತು.

ಲ್ಯಾಂಗರ್, ಬೌಂಡರಿ ಲೈನ್ ಬಳಿ ಬೂನ್ ಅವರೊಂದಿಗೆ ಏನನ್ನು ಚರ್ಚಿಸಿದರು ಎಂದು ಪಂದ್ಯ ಮುಗಿದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಸ್ಟ್ರೇಲಿಯ ಟೀಮಿನ ನಾಯಕ ಆರನ್ ಫಿಂಚ್, ‘‘ಜಡೇಜಾ ಕನ್ಕಶನ್ ಒಳಗಾಗಿದ್ದಾರೆಂದು ಭಾರತೀಯರು ನಮಗೆ ಹೇಳಿದರು, ಅದನ್ನೇ ಲ್ಯಾಂಗರ್ ಚರ್ಚಿಸಿದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೆಡಿಕಲ್ ಎಕ್ಸ್​ಪರ್ಟ್​ನನ್ನು ಪ್ರಶ್ನಿಸುವಂತಿಲ್ಲ’’ ಎಂದರು.

ಹಾಗೆಯೇ ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದಾಗ ಫಿಂಚ್, ‘‘ಕೊನೆಯ ಓವರ್​ಗಳಲ್ಲಿ ಜಾಸ್ತಿ ರನ್​ಗಳನ್ನು ಸೋರಿಸಿದ್ದು ನಮಗೆ ಮಾರಕವಾಯಿತು. ಹಾಗೆಯೇ ನಾವು ಬ್ಯಾಟ್​ ಮಾಡುವಾಗ ಮಧ್ಯದ ಓವರ್​ಗಳ ಹಂತದಲ್ಲಿ ಮತ್ತು ಕೊನೆಯಲ್ಲಿ ನಾವು ಹೆಚ್ಚು ಬೌಂಡರಿಗಳನ್ನು ಬಾರಿಸಲಿಲ್ಲ,’’ ಎಂದರು.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ