AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್

ಕನ್ಕಶನ್ ಸಬ್​ಸ್ಟಿಟ್ಯೂಟ್ ವಿಷಯ ಚರ್ಚೆಗೊಳಗಾಗಿದೆ. ರವೀಂದ್ರ ಜಡೇಜಾ ಅವರ ಸ್ಥಾನದಲ್ಲಿ ಯುಜ್ವೇಂದ್ರ ಚಹಲ್ ಅವರನ್ನು ಕನ್ಕಶನ್ ಸಬ್ ಆಗಿ ಉಪಯೋಗಿಸಿದ್ದನ್ನುಅಸ್ಟ್ರೇಲಿಯನ್ನರು ವಿರೋಧಿಸುತ್ತಿದ್ದಾರೆ. ಆದರೆ ಭಾರತೀಯರು ನಿಯಮದನುಸಾರ ಆಡಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ವೈದ್ಯಕೀಯ ಪರಿಣಿತ ಹೇಳಿದ್ದನ್ನು ನಾವು ಪ್ರಶ್ನಿಸುವಂತಿರಲಿಲ್ಲ: ಆರನ್ ಫಿಂಚ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 04, 2020 | 8:52 PM

Share

ತೊಡೆನೋವಿನಿಂದ ಬಳಲುತ್ತಿರುವ ರವೀಂದ್ರ ಜಡೇಜಾ

ಟೀಮ್ ಇಂಡಿಯ ಮೊದಲ ಟಿ20ಐ ಪಂದ್ಯದಲ್ಲಿ ಕನ್ಕಶನ್ ಸಬ್​ಸ್ಟಿಟ್ಯೂಟ್ ಆಗಿ ಯುಜ್ವೇಂದ್ರ ಚಹಲ್ ಅವರನ್ನು ಉಪಯೋಗಿಸಿದ್ದು ಭಾರೀ ಚರ್ಚೆಗೊಳಗಾಗಿದೆ. ಇಂದು ನಡೆದ ಪಂದ್ಯದಲ್ಲಿ ಆಸ್ಸೀ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಬೌನ್ಸರೊಂದು ರವೀಂದ್ರ ಜಡೇಜಾ ಅವರ ಹೆಲ್ಮೆಟ್​ಗೆ ಅಪ್ಪಳಿಸಿತು. ಭಾರತೀಯ ಬ್ಯಾಟ್ಸ್​ಮನ್ ಕುಸಿದು ಬಿದ್ದರಾದರೂ ಕೂಡಲೇ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಅವರು ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸಿದ್ದು, ಭಾರತದ ಗೆಲುವಿನಲ್ಲಿ ದೊಡ್ಡ ಕಾಣಿಕೆ ಎನಿಸಿತು. ಹಾಗೆಯೇ ಅವರು ತೊಡೆನೋವಿನಿಂದ ಬಳಲುತ್ತಿದ್ದಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಹಾಗಾಗಿ, ಆಸ್ಟ್ರೇಲಿಯ ಬ್ಯಾಟ್ ಮಾಡುವಾಗ ಜಡೇಜಾ ಫೀಲ್ಡ್​ಗೆ ಬರಲಿಲ್ಲ.

ಅವರ ಸ್ಥಾನದಲ್ಲಿ ಮೈದಾನಕ್ಕಿಳಿದ ಯುಜ್ವೇಂದ್ರ ಚಹಲ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ದಕ್ಕಲು ನೆರವಾದರು. ಆದರೆ ಅವರಿಗೆ ಆಡಲು ಅವಕಾಶ ನೀಡಿದ್ದು ಆಸ್ಟ್ರೇಲಿಯನ್ನರಿಗೆ ಅದರಲ್ಲೂ ವಿಶೇಷವಾಗಿ ಟೀಮಿನ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಸರಿಯೆನಿಸಲಿಲ್ಲ. ಅವರು ಬಹಳ ಹೊತ್ತಿನವರೆಗೆ ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರೊಂದಿಗೆ ಬಹಳ ಗಹನವಾಗಿ ವಿಷಯವನ್ನು ಚರ್ಚಿಸಿದ್ದು ಟಿವಿಯಲ್ಲಿ ತೋರಿಸಲಾಯಿತು.

ಲ್ಯಾಂಗರ್, ಬೌಂಡರಿ ಲೈನ್ ಬಳಿ ಬೂನ್ ಅವರೊಂದಿಗೆ ಏನನ್ನು ಚರ್ಚಿಸಿದರು ಎಂದು ಪಂದ್ಯ ಮುಗಿದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಆಸ್ಟ್ರೇಲಿಯ ಟೀಮಿನ ನಾಯಕ ಆರನ್ ಫಿಂಚ್, ‘‘ಜಡೇಜಾ ಕನ್ಕಶನ್ ಒಳಗಾಗಿದ್ದಾರೆಂದು ಭಾರತೀಯರು ನಮಗೆ ಹೇಳಿದರು, ಅದನ್ನೇ ಲ್ಯಾಂಗರ್ ಚರ್ಚಿಸಿದರು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೆಡಿಕಲ್ ಎಕ್ಸ್​ಪರ್ಟ್​ನನ್ನು ಪ್ರಶ್ನಿಸುವಂತಿಲ್ಲ’’ ಎಂದರು.

ಹಾಗೆಯೇ ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದಾಗ ಫಿಂಚ್, ‘‘ಕೊನೆಯ ಓವರ್​ಗಳಲ್ಲಿ ಜಾಸ್ತಿ ರನ್​ಗಳನ್ನು ಸೋರಿಸಿದ್ದು ನಮಗೆ ಮಾರಕವಾಯಿತು. ಹಾಗೆಯೇ ನಾವು ಬ್ಯಾಟ್​ ಮಾಡುವಾಗ ಮಧ್ಯದ ಓವರ್​ಗಳ ಹಂತದಲ್ಲಿ ಮತ್ತು ಕೊನೆಯಲ್ಲಿ ನಾವು ಹೆಚ್ಚು ಬೌಂಡರಿಗಳನ್ನು ಬಾರಿಸಲಿಲ್ಲ,’’ ಎಂದರು.

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು