AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರೈನ್ ಬೌಲಿಂಗ್​ನಲ್ಲಿ ಧೋನಿ ಇಂದು ಬೌಂಡರಿ ಬಾರಿಸುವರೆ?

ಇಂಡಿಯನ್ ಪ್ರಿಮೀಯರ್ ಲೀಗ್ 21ನೇ ಪಂದ್ಯ ಅಬು ಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಚೆನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಸತತ ಮೂರು ಸೋಲುಗಳನ್ನು ಅನುಭವಿಸಿ ಕಂಗೆಟ್ಟಿದ್ದ ಚೆನೈ, ಕಳೆದ ವಾರ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್​ಗಳ ಅಧಿಕಾರಯುತ ಗೆಲುವು ಸಾಧಿಸಿ ಕಳೆದುಕೊಂಡಿದ್ದ ವಿಶ್ವಾಸವನ್ನು ವಾಪಸ್ಸು ಪಡೆದಿದೆ. ಮತ್ತೊಂದೆಡೆ ಆಡಿರುವ 5 ಪಂದ್ಯಗಳಲ್ಲಿ ಮೂರನ್ನು ಸೋತು ಎರಡರಲ್ಲಿ ಗೆದ್ದಿರುವ […]

ನರೈನ್ ಬೌಲಿಂಗ್​ನಲ್ಲಿ ಧೋನಿ ಇಂದು ಬೌಂಡರಿ ಬಾರಿಸುವರೆ?
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​|

Updated on:Oct 07, 2020 | 5:13 PM

Share

ಇಂಡಿಯನ್ ಪ್ರಿಮೀಯರ್ ಲೀಗ್ 21ನೇ ಪಂದ್ಯ ಅಬು ಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಚೆನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ಸತತ ಮೂರು ಸೋಲುಗಳನ್ನು ಅನುಭವಿಸಿ ಕಂಗೆಟ್ಟಿದ್ದ ಚೆನೈ, ಕಳೆದ ವಾರ ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ 10 ವಿಕೆಟ್​ಗಳ ಅಧಿಕಾರಯುತ ಗೆಲುವು ಸಾಧಿಸಿ ಕಳೆದುಕೊಂಡಿದ್ದ ವಿಶ್ವಾಸವನ್ನು ವಾಪಸ್ಸು ಪಡೆದಿದೆ. ಮತ್ತೊಂದೆಡೆ ಆಡಿರುವ 5 ಪಂದ್ಯಗಳಲ್ಲಿ ಮೂರನ್ನು ಸೋತು ಎರಡರಲ್ಲಿ ಗೆದ್ದಿರುವ ಕೊಲ್ಕತಾ ನೈಟ್​ ರೈಡರ್ಸ್ ಇವತ್ತಿನ ಪಂದ್ಯವನ್ನು ಗೆಲ್ಲಲು ತೀವ್ರವಾಗಿ ಶ್ರಮಿಸಬೇಕಿದೆ.

[yop_poll id=”7″] ಕೊಲ್ಕತಾ ಟೀಮಿನ ನಾಯಕ ದಿನೇಶ್ ಕಾರ್ತೀಕ್ ಅವರ ಬ್ಯಾಟಿಂಗ್ ಕ್ರಮಾಂಕ ಬಗ್ಗೆಯಿರುವ ಗೊಂದಲ ಮುಂದುವರಿದಿದೆ. ಮಾಜಿ ಆಟಗಾರರು ಕಾರ್ತೀಕ್ ಆರಂಭ ಆಟಗಾರನಾಗಿ ಕಣಕ್ಕಿಳಿಯುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ, ಟೀಮ್ ಮ್ಯಾನೇಜ್​ಮೆಂಟ್ ಸತತ ವೈಫಲ್ಯಗಳ ಹೊರತಾಗಿಯೂ ಸುನಿಲ್ ನರೈನ್ ಅವರನ್ನೇ ಓಪನರ್ ಆಗಿ ಆಡಿಸಲು ನಿರ್ಧರಿಸಿದಂತಿದೆ. ನರೈನ್ ವೈಫಲ್ಯ ಮತ್ತೊಬ್ಬ ಓಪನರ್ ಶುಭ್​ಮನ್ ಗಿಲ್ ಮೇಲೆ ಒತ್ತಡ ಹೇರುತ್ತಿದೆ. ಗಿಲ್, ಪ್ರಸಕ್ತ ಸೀಸನ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ನರೈನ್ ಶ್ರೇಷ್ಠ ಸ್ಪಿನ್ ಬೌಲರ್ ಅನ್ನುವುದು ಸರ್ವವಿದಿತ. ಅವರ ಬ್ಯಾಟ್​ನಿಂದ ರನ್ ಬಂದರೆ ಅದನ್ನು ಬೋನಸ್ ಅಂತ ಪರಿಗಣಿಸಬಹುದೆ ಹೊರತು ನೆಚ್ಚಿಕೊಳ್ಳಬಹುದಾದ ಬ್ಯಾಟ್ಸ್​ಮನ್ ಅವರು ಖಂಡಿತ ಅಲ್ಲ. 

ಮೂರನೇ ಕ್ರಮಾಂಕಲ್ಲಿ ಆಡುತ್ತಿರುವ ನಿತಿಶ್ ರಾಣಾ ಉತ್ತಮ ಸ್ಟಾರ್ಟ್​ಗಳನ್ನು ಬಿಗ್ ಇನ್ನಿಂಗ್ಸ್​ಗಳಲ್ಲಿ ಪರಿವರ್ತಿಸುವಲ್ಲಿ ಫೇಲಾಗುತ್ತಿದ್ದಾರೆ. ಕೊಲ್ಕತಾ ಟೀಮು ಅವರಿಂದ ಅದನ್ನು ನಿರೀಕ್ಷಿಸುತ್ತಿದೆ. ಇಂಗ್ಲೆಂಡ್​ಗೆ ಕಳೆದ ವರ್ಷ ವಿಶ್ವಕಪ್ ಗೆದ್ದುಕೊಟ್ಟ ಅಯಾನ್ ಮೊರ್ಗನ್ ಈ ಸೀಸನ್​ನಲ್ಲಿ ಇನ್ನೂ ಅರ್ಧಶತಕ ಬಾರಿಸಿಲ್ಲವಾದರೂ, ಉಪಯುಕ್ತ ಮತ್ತು ಮ್ಯಾಚ್ ವಿನ್ನಿಂಗ್ ಕಾಂಟ್ರಿಬ್ಯೂಷನ್​ಗಳನ್ನು ನೀಡುತ್ತಿದ್ದಾರೆ.

ಕೊಲ್ಕತಾದ ಬಿಗ್ ಹಿಟ್ಟರ್ ಆಂದ್ರೆ ರಸ್ಸೆಲ್ ಕೊಲ್ಲಿ ರಾಷ್ಟ್ರಗಳ ಮೈದಾನಗಳಲ್ಲಿ ಇನ್ನೂ ಕಿಚ್ಚು ಹೊತ್ತಿಸಿಲ್ಲ. ಅವರು ಫಾರ್ಮ್​ನಲ್ಲಿಲ್ಲ ಅಂತೇನೂ ಇಲ್ಲ, ಆದರೆ ಸಿಕ್ಕಿರುವ ಅವಕಾಶಗಳು ಕಡಿಮೆ ಮತ್ತು ಸಿಕ್ಕ ಅವಕಾಶಗಳಲ್ಲಿ ಅವರು ತಮ್ಮ ಖ್ಯಾತಿಗೆ ತಕ್ಕ ಆಟವಾಡಿಲ್ಲ.

ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಕೆಕೆಆರ್ ವೇಗದ ದಾಳಿ ಪರಿಣಾಮಕಾರಿಯಾಗಿದೆ. ಯುವ ಬೌಲರ್​ಗಳಾದ ಶಿವಮ್ ಮಾವಿ ಮತ್ತು ಕಮ್ಲೇಶ್ ನಾಗರ್​ಕೋಟಿ ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹಾಗೂ ನರೈನ್ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ.

ಮೂರು ಬಾರಿ ಐಪಿಎಲ್ ಚಾಂಪಿಯನ್​ಶಿಪ್ ಗೆದ್ದಿರುವ ಚೆನೈ ಈ ಸಲದ ಅಭಿಯಾನವನ್ನು ಕಳೆದ ಬಾರಿಯ ಮತ್ತು ಇದುವರೆಗೆ ಅತ್ಯಧಿಕ (4) ಬಾರಿ ಟ್ರೋಫಿ ಗೆದ್ದಿರುವ ಮುಂಬೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರಂಭಿಸಿದರೂ ನಂತರ ಸೋಲಿನ ಸರಪಳಿಗೆ ಸಿಕ್ಕಿಕೊಂಡು ಒದ್ದಾಡಿತು. ಆದರೆ, ಪಂಜಾಬ್ ವಿರುದ್ಧ ದಾಖಲಿಸಿದ ಭರ್ಜರಿ ಗೆಲುವು ಟೀಮಿನ ಉತ್ಸಾಹವನ್ನು ಹೆಚ್ಚಿಸಿದೆ.

ಫಫ್ ಡು ಪ್ಲೆಸ್ಸಿ ಸದರಿ ಸೀಸನ್​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಅವರ ಬ್ಯಾಟ್​ನಿಂದ ಮೂರು ಅರ್ಧ ಶತಕಗಳು ಸಿಡಿದಿರುವುದು ಇದಕ್ಕೆ ಸಾಕ್ಷಿ. ಆದರೆ, ಅವರ ಜೊತೆಗಾರ ಶೇನ್ ವಾಟ್ಸನ್ ಮಾತ್ರ ವೈಫಲ್ಯಗಳ ಸುಳಿಗೆ ಸಿಕ್ಕಿದ್ದರು. ಅವರನ್ನು ಆಡುವ ಎಲೆವೆನ್​ನಿಂದ ಕೈಬಿಡುವ ಮಾತು ಸಹ ತೇಲಿಬಂದಿತ್ತು. ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿಗೆ ವ್ಯಾಟೊ ಮೇಲೆ ಅತೀವ ವಿಶ್ವಾಸ. ಹಾಗಾಗೇ, ಅವರನ್ನು ಮುಂದುವರಿಸಿ, ಪಂಜಾಬ್ ವಿರುದ್ಧ ಆಡಿಸಿದರು. 53 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿ ತನ್ನ ಜೊತೆಗಾರ ಡು ಪ್ಲೆಸ್ಸಿಯೊಂದಿಗೆ ಮುರಿಯದ ಮೊದಲ ವಿಕೆಟ್​ಗೆ 182 ರನ್ ಸೇರಿಸಿ ಟೀಮಿಗೆ ಸುಲಭ ಜಯ ದೊರಕಿಸಿದರಲ್ಲದೆ ಧೋನಿಯ ವಿಶ್ವಾಸವನ್ನು ಉಳಿಸಿಕೊಂಡರು. ಇವರಿಬ್ಬರಿಂದ ಮತ್ತೊಂದು ಉತ್ತಮ ಜೊತೆಯಾಟವನ್ನು ಚೆನೈ ಇಂದು ನಿರೀಕ್ಷಿಸುತ್ತಿದೆ.

ಐಪಿಎಲ್ 13 ನೇ ಆವೃತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಅಮೋಘ ಆರ್ಧ ಶತಕ ಬಾರಿಸಿ ಚೆನೈ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಂಬಟಿ ರಾಯುಡು, ಮುಂದಿನ ಎರಡು ಪಂದ್ಯಗಳನ್ನು ಗಾಯಗೊಂಡ ಕಾರಣ ತಪ್ಪಿಸಿಕೊಂಡರು. ನಂತರ ಆಡಿದ ಪಂದ್ಯಗಳಲ್ಲಿ ರಾಯುಡು ಮುಂಬೈ ವಿರುದ್ಧ ತೋರಿದ ಸ್ಪರ್ಶವನ್ನು ಪುನರಾವರ್ತಿಸುವಲ್ಲಿ ವಿಫಲರಾಗಿದ್ದಾರೆ.

ಮಧ್ಯಮ ಕ್ರಮಾಂಕದ ಆಟಗಾರ ಕೇದಾರ್ ಜಾಧವ್​ರನ್ನು ಯಾಕೆ ಆಡುವ ಎಲೆವೆನ್​ನಲ್ಲಿ ಮುಂದುವರಿಸಲಾಗುತ್ತಿದೆ ಅಂತ ಸಿಎಸ್​ಕೆ ಅಭಿಮಾನಿಗಳಲ್ಲಿ ಗೊಂದಲ ಹುಟ್ಟಿದೆ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಸಹ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ. ಚೆನೈ ತಂಡಕ್ಕೆ ಸುರೇಶ್ ರೈನಾ ಅವರ ಕೊರತೆ ನಿಸ್ಸಂದೇಹವಾಗಿ ಕಾಡುತ್ತಿದೆ, ಅದಕ್ಕೆ ಪುಟವಿಟ್ಟಂತೆ ಧೋನಿಯ ಬ್ಯಾಟಿಂಗ್ ವೈಫಲ್ಯಗಳು.

ಇಂದಿನ ಪಂದ್ಯದಲ್ಲಿ ಧೋನಿ ಮತ್ತು ನರೈನ್ ನಡುವಿನ ವೈಯಕ್ತಿಕ ಸೆಣಸಾಟ ಕುತೂಹಲ ಕೆರಳಿಸಲಿದೆ. ನಿಮಗೆ ಇದನ್ನು ಅರಿತು ಆಶ್ಚರ್ಯವಾಗಬಹುದು. ಐಪಿಎಲ್​ನಲ್ಲಿ ಧೋನಿ ಇದುವರೆಗೆ ನರೈನ್ ಬೌಲಿಂಗ್​ನಲ್ಲಿ ಒಂದು ಬೌಂಡರಿ ಕೂಡ ಬಾರಿಸಿಲ್ಲ! ಹೌದು, ಇದು ಸತ್ಯ. ಅವರಿಬ್ಬರು 12 ಸಲ ಪರಸ್ಪರ ಎದುರಾಗಿದ್ದು, ನರೈನ್ ಅವರ 59 ಎಸೆತಗಳನ್ನು ಎದುರಿಸಿರುವ ಧೋನಿ ಬೌಂಡರಿರಹಿತ ಕೇವಲ 29 ರನ್ ಗಳಿಸಿದ್ದಾರೆ. ಇಂದು ಈ ಸಮೀಕರಣವನ್ನು ಧೋನಿ ಬದಲಿಸುವರೆ ಎನ್ನುವುದು ಕುತೂಹಲಕಾರಿ ಅಂಶ.

ಚೆನೈ ಟೀಮಿನಲ್ಲಿ ಮೂವರು ಅತ್ಯುತ್ತಮ ಆಲ್​ರೌಂಡರ್​ಗಳಿದ್ದಾರೆ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ ಮತ್ತು ಸ್ಯಾಮ್ ಕರನ್. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಾಹರ್, ಶಾರ್ದಲ್ ಠಾಕುರ್ ಮತ್ತು ಪಿಯುಷ್ ಚಾವ್ಲಾ ಇದ್ದಾರೆ.

Published On - 5:12 pm, Wed, 7 October 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ