AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ವಿಲಿಯಮ್ಸನ್​ನನ್ನು ಪೆವಿಲಿಯನ್​ಗೆ ಕಳುಹಿಸಿ! ಸೋನು ಸೂದ್ ಬಳಿ ಮನವಿ ಮಾಡಿದ ಅಭಿಮಾನಿ.. ಸೋನು ಉತ್ತರ ಹೀಗಿತ್ತು

WTC Final: ಅಭಿಮಾನಿಯ ಈ ಮನವಿಗೆ ಉತ್ತರಿಸಿದ ಸೋನು, ನಮ್ಮ ತಂಡದಲ್ಲಿ ಅನೇಕ ಅನುಭವಿಗಳು ಇದ್ದಾರೆ. ಖಂಡಿತವಾಗಿಯೂ ವಿಲಿಯಮ್ಸನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

WTC Final: ವಿಲಿಯಮ್ಸನ್​ನನ್ನು ಪೆವಿಲಿಯನ್​ಗೆ ಕಳುಹಿಸಿ! ಸೋನು ಸೂದ್ ಬಳಿ ಮನವಿ ಮಾಡಿದ ಅಭಿಮಾನಿ.. ಸೋನು ಉತ್ತರ ಹೀಗಿತ್ತು
ಸೋನು ಸೂದ್, ಕೇನ್ ವಿಲಿಯಮ್ಸನ್
ಪೃಥ್ವಿಶಂಕರ
|

Updated on: Jun 23, 2021 | 7:28 PM

Share

ಡಬ್ಲ್ಯುಟಿಸಿ ಫೈನಲ್ ಪಂದ್ಯದ ಐದನೇ ದಿನದಂದು ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು 249 ಕ್ಕೆ ಆಲೌಟ್ ಮಾಡಿದ್ದರು. ಒಟ್ಟಾರೆಯಾಗಿ, ಭಾರತೀಯ ಬೌಲರ್‌ಗಳು ಬೆವರು ಸುರಿಸಿ ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಸೇರಿಸಿದರು. ಆದಾಗ್ಯೂ, ಸೌತಾಂಪ್ಟನ್‌ನಂತಹ ಪರಿಸ್ಥಿತಿಗಳಲ್ಲಿ ಕಿವಿಸ್ ನಾಯಕ ವಿಲಿಯಮ್ಸನ್‌ರನ್ನು ಔಟ್​ ಮಾಡಿ ಪೆವಿಲಿಯನ್​ಗೆ ಕಳುಹಿಸುವುದು ಸುಲಭದ ಮಾತಾಗಿರಲಿಲ್ಲ.

ವಿಲಿಯಮ್ಸನ್ ಬೆಸ್ಟ್ ಬ್ಯಾಟಿಂಗ್ ನ್ಯೂಜಿಲೆಂಡ್ ನಾಯಕ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಇತರ ವೇಗಿಗಳ ವಿರುದ್ಧ ದೃಢವಾಗಿ ನಿಂತು ಆಡಿದರು. ಕೆಟ್ಟ ಚೆಂಡುಗಳನ್ನು ಬೌಂಡರಿಗೆ ಅಟ್ಟುವುದರೊಂದಿಗೆ ಸ್ಕೋರ್ ಬೋರ್ಡ್‌ ಹೆಚ್ಚಿಸುತ್ತಿದ್ದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೆ .. ಅವರು ಯಾವುದೇ ಹಿಂಜರಿಕೆಯಿಲ್ಲದೆ ರನ್ ಗಳಿಸಿದರು. ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಲಿಯಮ್ಸನ್ ಬ್ಯಾಟಿಂಗ್ ನೋಡಿದಾಗ ಆತಂಕಗೊಂಡರು. ಇದರಿಂದ ಆತಂಕಗೊಂಡಿದ್ದ ಒಬ್ಬ ಅಭಿಮಾನಿ ಮಾತ್ರ ಸೋನು ಸೂದ್ ಗೆ ಟ್ವೀಟ್ ಮಾಡಿ ವಿಲಿಯಮ್ಸನ್‌ನನ್ನು ಪೆವಿಲಿಯನ್‌ಗೆ ಕಳುಹಿಸುವಂತೆ ನಟನನ್ನು ಮನವಿ ಮಾಡಿದ್ದಾನೆ. ಹಲೋ ಸೋನುಸೂದ್, ದಯವಿಟ್ಟು ವಿಲಿಯಮ್ಸನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿ” ಎಂದು ಆತ ಟ್ವೀಟ್ ಮಾಡಿದ್ದಾನೆ.

ಸೋನು ಉತ್ತರ ಏನಾಗಿತ್ತು? ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಟ್ವಿಟ್ಟರ್ನಲ್ಲಿ ಸಹಾಯ ಕೇಳಿದವರಿಗೆ ಸೋನು ಸೂದ್ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದರು ಮತ್ತು ಸೂಕ್ತವಾಗಿ ಸಹಾಯವನ್ನು ನೀಡಿದರು. ಅಭಿಮಾನಿಯ ಈ ಮನವಿಗೆ ಉತ್ತರಿಸಿದ ಸೋನು, ನಮ್ಮ ತಂಡದಲ್ಲಿ ಅನೇಕ ಅನುಭವಿಗಳು ಇದ್ದಾರೆ. ಖಂಡಿತವಾಗಿಯೂ ವಿಲಿಯಮ್ಸನ್ ಅವರನ್ನು ಪೆವಿಲಿಯನ್ ಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ವಿಲಿಯಮ್ಸನ್ 49 ರನ್ ಗಳಿಸಿ ಔಟಾದರು. ಇಶಾಂತ್, ಕೇನ್ ಅರ್ಧಶತಕ ಮಾಡುವುದನ್ನು ತಪ್ಪಿಸಿದರು. ನಂತರ ಶಮಿ (ನಾಲ್ಕು ವಿಕೆಟ್‌ಗಳೊಂದಿಗೆ) ನ್ಯೂಜಿಲೆಂಡ್‌ನ್ನು 249 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ