AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ವಿಲಿಯಮ್ಸನ್​ನನ್ನು ಪೆವಿಲಿಯನ್​ಗೆ ಕಳುಹಿಸಿ! ಸೋನು ಸೂದ್ ಬಳಿ ಮನವಿ ಮಾಡಿದ ಅಭಿಮಾನಿ.. ಸೋನು ಉತ್ತರ ಹೀಗಿತ್ತು

WTC Final: ಅಭಿಮಾನಿಯ ಈ ಮನವಿಗೆ ಉತ್ತರಿಸಿದ ಸೋನು, ನಮ್ಮ ತಂಡದಲ್ಲಿ ಅನೇಕ ಅನುಭವಿಗಳು ಇದ್ದಾರೆ. ಖಂಡಿತವಾಗಿಯೂ ವಿಲಿಯಮ್ಸನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

WTC Final: ವಿಲಿಯಮ್ಸನ್​ನನ್ನು ಪೆವಿಲಿಯನ್​ಗೆ ಕಳುಹಿಸಿ! ಸೋನು ಸೂದ್ ಬಳಿ ಮನವಿ ಮಾಡಿದ ಅಭಿಮಾನಿ.. ಸೋನು ಉತ್ತರ ಹೀಗಿತ್ತು
ಸೋನು ಸೂದ್, ಕೇನ್ ವಿಲಿಯಮ್ಸನ್
ಪೃಥ್ವಿಶಂಕರ
|

Updated on: Jun 23, 2021 | 7:28 PM

Share

ಡಬ್ಲ್ಯುಟಿಸಿ ಫೈನಲ್ ಪಂದ್ಯದ ಐದನೇ ದಿನದಂದು ಭಾರತೀಯ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು 249 ಕ್ಕೆ ಆಲೌಟ್ ಮಾಡಿದ್ದರು. ಒಟ್ಟಾರೆಯಾಗಿ, ಭಾರತೀಯ ಬೌಲರ್‌ಗಳು ಬೆವರು ಸುರಿಸಿ ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಸೇರಿಸಿದರು. ಆದಾಗ್ಯೂ, ಸೌತಾಂಪ್ಟನ್‌ನಂತಹ ಪರಿಸ್ಥಿತಿಗಳಲ್ಲಿ ಕಿವಿಸ್ ನಾಯಕ ವಿಲಿಯಮ್ಸನ್‌ರನ್ನು ಔಟ್​ ಮಾಡಿ ಪೆವಿಲಿಯನ್​ಗೆ ಕಳುಹಿಸುವುದು ಸುಲಭದ ಮಾತಾಗಿರಲಿಲ್ಲ.

ವಿಲಿಯಮ್ಸನ್ ಬೆಸ್ಟ್ ಬ್ಯಾಟಿಂಗ್ ನ್ಯೂಜಿಲೆಂಡ್ ನಾಯಕ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಇತರ ವೇಗಿಗಳ ವಿರುದ್ಧ ದೃಢವಾಗಿ ನಿಂತು ಆಡಿದರು. ಕೆಟ್ಟ ಚೆಂಡುಗಳನ್ನು ಬೌಂಡರಿಗೆ ಅಟ್ಟುವುದರೊಂದಿಗೆ ಸ್ಕೋರ್ ಬೋರ್ಡ್‌ ಹೆಚ್ಚಿಸುತ್ತಿದ್ದರು. ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೆ .. ಅವರು ಯಾವುದೇ ಹಿಂಜರಿಕೆಯಿಲ್ಲದೆ ರನ್ ಗಳಿಸಿದರು. ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಲಿಯಮ್ಸನ್ ಬ್ಯಾಟಿಂಗ್ ನೋಡಿದಾಗ ಆತಂಕಗೊಂಡರು. ಇದರಿಂದ ಆತಂಕಗೊಂಡಿದ್ದ ಒಬ್ಬ ಅಭಿಮಾನಿ ಮಾತ್ರ ಸೋನು ಸೂದ್ ಗೆ ಟ್ವೀಟ್ ಮಾಡಿ ವಿಲಿಯಮ್ಸನ್‌ನನ್ನು ಪೆವಿಲಿಯನ್‌ಗೆ ಕಳುಹಿಸುವಂತೆ ನಟನನ್ನು ಮನವಿ ಮಾಡಿದ್ದಾನೆ. ಹಲೋ ಸೋನುಸೂದ್, ದಯವಿಟ್ಟು ವಿಲಿಯಮ್ಸನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿ” ಎಂದು ಆತ ಟ್ವೀಟ್ ಮಾಡಿದ್ದಾನೆ.

ಸೋನು ಉತ್ತರ ಏನಾಗಿತ್ತು? ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಟ್ವಿಟ್ಟರ್ನಲ್ಲಿ ಸಹಾಯ ಕೇಳಿದವರಿಗೆ ಸೋನು ಸೂದ್ ತಕ್ಷಣವೇ ಪ್ರತಿಕ್ರಿಯಿಸುತ್ತಿದ್ದರು ಮತ್ತು ಸೂಕ್ತವಾಗಿ ಸಹಾಯವನ್ನು ನೀಡಿದರು. ಅಭಿಮಾನಿಯ ಈ ಮನವಿಗೆ ಉತ್ತರಿಸಿದ ಸೋನು, ನಮ್ಮ ತಂಡದಲ್ಲಿ ಅನೇಕ ಅನುಭವಿಗಳು ಇದ್ದಾರೆ. ಖಂಡಿತವಾಗಿಯೂ ವಿಲಿಯಮ್ಸನ್ ಅವರನ್ನು ಪೆವಿಲಿಯನ್ ಕಳುಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ವಿಲಿಯಮ್ಸನ್ 49 ರನ್ ಗಳಿಸಿ ಔಟಾದರು. ಇಶಾಂತ್, ಕೇನ್ ಅರ್ಧಶತಕ ಮಾಡುವುದನ್ನು ತಪ್ಪಿಸಿದರು. ನಂತರ ಶಮಿ (ನಾಲ್ಕು ವಿಕೆಟ್‌ಗಳೊಂದಿಗೆ) ನ್ಯೂಜಿಲೆಂಡ್‌ನ್ನು 249 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂ
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್