AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾವಿ ಹೆಂಡತಿ ಮೈದಾನದಲ್ಲಿದ್ದರೆ ಯುಜಿಗೆ ಅದೇ ಸ್ಫೂರ್ತಿಯ ಚಿಲುಮೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯಲ್ಲಿ ಆಡಿರುವ ಇತ್ತೀಚಿನ ಪಂದ್ಯಗಳಲ್ಲಿ ಸುಂದರವಾದ ಯುವತಿಯೊಬ್ಬರು ಸ್ಟ್ಯಾಂಡ್​ನಲ್ಲಿ ಕೂತು ಟೀಮಿನ ಆಟಗಾರರು ಬೌಂಡರಿ ಇಲ್ಲವೇ ಸಿಕ್ಸರ್ ಬಾರಿಸಿದಾಗ, ಅಥವಾ ವಿಕೆಟ್ ಪಡೆದಾಗ ಚಪ್ಪಾಳೆ ತಟ್ಟಿ ಅಭಿನಂದಿಸುವ ದೃಶ್ಯ ಮನೆಗಳಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರುವವರಿಗೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಆರ್​ಸಿಬಿಯ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್ ವಿಕೆಟ್ ಪಡೆದ ಕೂಡಲೇ ಈ ಯುವತಿ ಕುಣಿಯಲಾರಂಭಿಸುತ್ತಾರೆ. ಅಂದ ಹಾಗೆ ಆಕೆ ಯಾರು ಅಂತ ನಿಮಗೆ ಗೊತ್ತಾಗಿದೆಯೇ? ಆಕೆಯ ಹೆಸರು, ಧನಶ್ರೀ ವರ್ಮ, ವೃತ್ತಿಯಲ್ಲಿ ಡೆಂಟಿಸ್ಟ್ […]

ಭಾವಿ ಹೆಂಡತಿ ಮೈದಾನದಲ್ಲಿದ್ದರೆ ಯುಜಿಗೆ ಅದೇ ಸ್ಫೂರ್ತಿಯ ಚಿಲುಮೆ!
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Oct 23, 2020 | 6:52 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯಲ್ಲಿ ಆಡಿರುವ ಇತ್ತೀಚಿನ ಪಂದ್ಯಗಳಲ್ಲಿ ಸುಂದರವಾದ ಯುವತಿಯೊಬ್ಬರು ಸ್ಟ್ಯಾಂಡ್​ನಲ್ಲಿ ಕೂತು ಟೀಮಿನ ಆಟಗಾರರು ಬೌಂಡರಿ ಇಲ್ಲವೇ ಸಿಕ್ಸರ್ ಬಾರಿಸಿದಾಗ, ಅಥವಾ ವಿಕೆಟ್ ಪಡೆದಾಗ ಚಪ್ಪಾಳೆ ತಟ್ಟಿ ಅಭಿನಂದಿಸುವ ದೃಶ್ಯ ಮನೆಗಳಲ್ಲಿ ಕುಳಿತು ಟಿವಿ ವೀಕ್ಷಿಸುತ್ತಿರುವವರಿಗೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಆರ್​ಸಿಬಿಯ ಸ್ಟಾರ್ ಬೌಲರ್ ಯುಜ್ವೇಂದ್ರ ಚಹಲ್ ವಿಕೆಟ್ ಪಡೆದ ಕೂಡಲೇ ಈ ಯುವತಿ ಕುಣಿಯಲಾರಂಭಿಸುತ್ತಾರೆ.

ಅಂದ ಹಾಗೆ ಆಕೆ ಯಾರು ಅಂತ ನಿಮಗೆ ಗೊತ್ತಾಗಿದೆಯೇ? ಆಕೆಯ ಹೆಸರು, ಧನಶ್ರೀ ವರ್ಮ, ವೃತ್ತಿಯಲ್ಲಿ ಡೆಂಟಿಸ್ಟ್ ಮತ್ತು ಕೊರಿಯೊಗ್ರಾಫರ್. ಯುಜಿಯನ್ನು ನೋಡಿ ಆಕೆ ಕುಣಿಯೋದು ಯಾಕೆಂದರೆ ಅವರನ್ನ ಇಷ್ಟರಲ್ಲೇ ಮದುವೆಯಾಗಲಿದ್ದಾರೆ!

ಹೌದು, ಈ ಧನಶ್ರೀ ಯುಜಿಯ ಭಾವಿ ಪತ್ನಿ. ಅವರಿಬ್ಬರ ನಿಶ್ಚಿತಾರ್ಥ ಆಗಿದೆ ಮತ್ತು ಪ್ರಾಯಶಃ ಭಾರತದ ಆಸ್ಟ್ರೇಲಿಯ ಪ್ರವಾಸ ಮುಗಿದ ನಂತರ ಅವರು ಮದುವೆಯಾಗುವ ನಿರೀಕ್ಷೆಯಿದೆ.

ಧನಶ್ರೀ, ಅಕ್ಟೋಬರ್ 11ರಂದೇ ಯುನೈಡೆಡ್ ಅರಬ್ ಎಮಿರೇಟ್ಸ್​ನಲ್ಲಿ ಬಂದಿಳಿದಿದ್ದಾರೆ. ಆದರೆ ಶಿಷ್ಟಾಚಾರದ ಪ್ರಕಾರ ಆಕೆ 5 ದಿನ ಕ್ವಾರಂಟೈನ್​ಗೊಳಗಾಗಬೇಕಿತ್ತು. ಆ ಅವಧಿ 17ರಂದು ಮುಗಿಯಿತು. ಅಂದು ಆರ್​ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಪಂದ್ಯವಿತ್ತು. ಅಸಲಿಗೆ ಧನಶ್ರೀ ಪಂದ್ಯ ಮುಗಿದ ನಂತರ ಯುಜಿಯನ್ನು ಸೇರಿಕೊಳ್ಳುವ ನಿರ್ಧಾರ ಮಾಡಿದ್ದರು. ಆದರೆ, ಅಷ್ಟು ಹೊತ್ತು ಕಾಯುವ ತಾಳ್ಮೆ ಆಕೆಗಿರಲಿಲ್ಲ. ಆಕೆಯ ಆಗಮನದ ಬಗ್ಗೆ ಯುಜಿಗೆ ಮಾಹಿತಿಯಿತ್ತು ಹಾಗೂ ಪಂದ್ಯ ಮುಗಿದ ನಂತರವೇ ಆಕೆ ಹೊಟೆಲ್​ಗೆ ಇಲ್ಲವೇ ಸ್ಟೇಡಿಯಂಗೆ ಬರುತ್ತಾರೆ ಅಂತ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಯುಜಿ ಅಂದುಕೊಂಡಿದ್ದರು.

ಆದರೆ, ಯುಜಿಗೆ ಸರ್ಪ್ರೈಸ್ ನೀಡುವ ಉದ್ದೇಶದಿಂದ ಆಕೆ ಪಂದ್ಯ ಶುರುವಾಗುವ ಮೊದಲೇ ಹೊಟೆಲ್​ಗೆ ತೆರಳಿದಾಗ ಯುಜಿಯ ಮುಖ ಊರಗಲವಾಗಿತ್ತು ಎಂದು ಅವರ ಜೊತೆ ಆಟಗಾರರು ಹೇಳಿದ್ದಾರೆ ಮತ್ತು ಆರ್​ಸಿಬಿಯ ಅಧಿಕೃತ ಟ್ವಿಟ್ಟರ್​ನಲ್ಲಿ ಧನಶ್ರೀ, ಮೆತ್ತಗೆ ಹೋಗಿ ಯುಜಿ ರೂಮಿನ ಬಾಗಿಲು ಬಡಿಯುವ, ಅವರು ಬಾಗಿಲು ತೆರೆದು ಹಸನ್ಮುಖರಾಗುವ ದೃಶ್ಯವನ್ನು ವಿಡಿಯೋ ಮಾಡಿ ಅಪ್​ಲೋಡ್ ಮಾಡಲಾಗಿದೆ. 

ಆಕೆಯ ಆಗಮನದ ನಂತರ ಯುಜಿಯ ಬಾಡಿ ಲ್ಯಾಂಗ್ವೇಜ್ ಸಂಫೂರ್ಣವಾಗಿ ಬದಲಾಗಿದೆ ಅಂತ ಕೊಹ್ಲಿ ಪಡೆಯ ಇತರ ಆಟಗಾರರು ಹೇಳುತ್ತಿದ್ದಾರೆ. ಅವತ್ತು ರಾಯಲ್ಸ್ ವಿರುಧ್ಧ ಆಡಿದ ಪಂದ್ಯದಲ್ಲಿ ಯುಜಿ 34 ರನ್ ನೀಡಿ 2 ವಿಕೆಟ್ ಪಡೆದರು. ಆ ಪಂದ್ಯದಲ್ಲಿ ಅತ್ಯಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ 360 ಡಿಗ್ರಿ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ರೋಮಾಂಚಕ ಜಯ ದೊರಕಿಸಿದರು.

ನಂತರ ಕೆಕೆಆರ್ ವಿರುದ್ಧ ಅಡಿದ ಪಂದ್ಯದಲ್ಲಿ ಮತ್ತೂ ಶ್ರೇಷ್ಠಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದ ಯುಜಿ 4ಓವರ್​ಗಳಲ್ಲಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದರು.

‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ’ ಅಂತ ಹಳೆಯ ಕನ್ನಡ ಹಾಡೊಂದಿದೆ, ಇಲ್ಲಿ ಹೆಂಡತಿಯಾಗುವವಳು ಮೈದಾನದಲ್ಲಿದ್ದಾಳೆ, ಹಾಗಾಗಿ ಯುಜಿಗೆ ಅದು ಎಷ್ಟು ಕೋಟಿ ರೂಪಾಯಿಯೋ?

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು