ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್ ಪಂದ್ಯಾವಳಿಯ ಆರ್ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಡಿಕೆ ಶಿವಕುಮಾರ್ಗೆ ಛತ್ರಿ ಹಿಡಿದ ಮೇಲೆ ಆರ್ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!?
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರ ಬಳಿ ಪ್ರಚಾರ ನಡೆಸುವ ವೇಳೆ ದಿಢೀರಾಗಿ ತುಂತುರು ಮಳೆ ಬಂದ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಆರ್.ಸಿ.ಬಿ ಕೊಡೆಯನ್ನು ತಂದು ಡಿಕೆ ಶಿವಕುಮಾರ್ಗೆ ಹಿಡಿದಿದ್ದರು.
ಸದ್ಯ ಈಗ ಈ ಫೋಟೋ ವೈರಲ್ ಆಗಿದೆ. ಆರ್ಸಿಬಿ ಅಭಿಮಾನಿಗಳು, ಡಿಕೆ ಶಿವಕುಮಾರ್ಗೆ ಛತ್ರಿ ಹಿಡಿದ ಮೇಲೆ ಆರ್ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ ಅಂತ ಟೈಟಲ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದ್ದಾರೆ.