AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಳ್ಳೆಯವರಿಗೆ ಕೊಟ್ಟರೆ ಕೆಟ್ಟವರೂ ಬರುತ್ತಾರೆ’- ಕೇಜ್ರಿವಾಲ್​ರ ಐಫೋನ್ ಲಾಕ್ ತೆರೆಯಲು ಆ್ಯಪಲ್ ನಿರಾಕರಿಸಲು ಇದು ಕಾರಣ

Arvind Kejriwal, iPhone Unlocking and Apple: ಇಡಿ ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ತಮ್ಮ ಐಫೋನ್ ಅನ್ನು ಅನ್​ಲಾಕ್ ಮಾಡಿಕೊಡಲು ನಿರಾಕರಿಸಿದ್ದಾರೆ. ಚುನಾವಣೆಯ ಆಪ್ ತಂತ್ರಗಾರಿಕೆಗಳ ಸೂಕ್ಷ್ಮ ಮಾಹಿತಿ ತಮ್ಮ ಫೋನ್​ನಲ್ಲಿ ಇರುವುದರಿಂದ ಪಾಸ್​ಕೋಡ್ ಕೊಡಲು ಕೇಜ್ರಿವಾಲ್ ನಿರಾಕರಿಸಿರುವುದು ತಿಳಿದುಬಂದಿದೆ. ಕುತೂಹಲವೆಂದರೆ ಸ್ವತಃ ಆ್ಯಪಲ್ ಕಂಪನಿಯೇ ಈ ಐಫೋನ್ ಅನ್​ಲಾಕ್ ಮಾಡಲು ನಿರಾಕರಿಸಿದೆ.

‘ಒಳ್ಳೆಯವರಿಗೆ ಕೊಟ್ಟರೆ ಕೆಟ್ಟವರೂ ಬರುತ್ತಾರೆ’- ಕೇಜ್ರಿವಾಲ್​ರ ಐಫೋನ್ ಲಾಕ್ ತೆರೆಯಲು ಆ್ಯಪಲ್ ನಿರಾಕರಿಸಲು ಇದು ಕಾರಣ
ಐಫೋನ್ ಅನ್​ಲಾಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 03, 2024 | 3:51 PM

ನವದೆಹಲಿ, ಏಪ್ರಿಲ್ 3: ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಸ್ವಿಚ್ ಆಫ್ ಆಗಿರುವ ತಮ್ಮ ಐಫೋನ್​ನ ಲಾಕ್ ತೆರೆಯಲು ಅಥವಾ ಪಾಸ್​ಕೋಡ್ ತಿಳಿಸಲು ನಿರಾಕರಿಸಿದ್ದಾರೆ. ಯಾವುದೇ ಪ್ರಕರಣದ ತನಿಖೆ ನಡೆಸುವ ಇಡಿ ಅಧಿಕಾರಿಗಳು ಆರೋಪಿಗಳ ಫೋನ್ ಮತ್ತಿತರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಸಹಜ. ಅಂತೆಯೇ ಲಿಕ್ಕರ್ ಹಗರಣದ (Delhi liquor case) ಅವ್ಯವಹಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED- enforcement directorate), ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ರೇಡ್ ಮಾಡಿದಾಗ, ನಾಲ್ಕು ಮೊಬೈಲ್ ಫೋನ್ ಹಾಗೂ 70,000 ರೂ ನಗದು ಹಣ ಸಿಕ್ಕಿತ್ತು. ಆಗ ದೆಹಲಿ ಸಿಎಂ ತಮ್ಮ ಐಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದರು. ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಎಷ್ಟು ಕೇಳಿದರೂ ಕೇಜ್ರಿವಾಲ್ ತಮ್ಮ ಐಫೋನ್ ಅನ್​ಲಾಕ್ ಮಾಡಲು ಒಪ್ಪುತ್ತಿಲ್ಲ. ಐಫೋನ್ ತಯಾರಕ ಸಂಸ್ಥೆ ಆ್ಯಪಲ್ ಕೂಡ ಇಡಿ ಮನವಿಗೆ ಸ್ಪಂದಿಸುತ್ತಿಲ್ಲ. ಬಹಳ ಮಂದಿಗೆ ಇದು ಅಚ್ಚರಿ ಎನಿಸಬಹುದಾದರೂ ಆ್ಯಪಲ್ ಕಂಪನಿಯ ನೀತಿಯನ್ನು ತಿಳಿದವರಿಗೆ ಇದು ಅಚ್ಚರಿ ಅನಿಸುವುದಿಲ್ಲ.

ಕೇಜ್ರಿವಾಲ್ ಐಫೋನ್ ಅನ್​ಲಾಕ್ ಮಾಡದೇ ಇರಲು ಏನು ಕಾರಣ?

ಆಮ್ ಆದ್ಮಿಯ ಚುನಾವಣಾ ತಂತ್ರಗಾರಿಕೆಗಳು ಮತ್ತು ಚುನಾವಣಾ ಪೂರ್ವ ಮೈತ್ರಿಗಳ ಮಾಹಿತಿ ತಮ್ಮ ಐಫೋನ್​ನಲ್ಲಿ ಇದೆ. ತಾನು ಐಫೋನ್ ಅನ್​ಲಾಕ್ ಮಾಡಿದರೆ ಆ ಮಹತ್ವದ ಮಾಹಿತಿಯು ಎದುರಾಳಿ ರಾಜಕೀಯ ಪಕ್ಷಗಳಿಗೆ ತಿಳಿದುಹೋಗಬಹುದು. ಇದು ಅರವಿಂದ್ ಕೇಜ್ರಿವಾಲ್ ಕೊಟ್ಟಿರುವ ಕಾರಣ.

ಇದನ್ನೂ ಓದಿ: ಸುಳ್ಳು ಹೇಳಿ ತಪ್ಪಿಸಿಕೊಳ್ಳಲಾಗದು, ಅತಿಶಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಬಿಜೆಪಿ

ಆ್ಯಪಲ್ ಕಂಪನಿ ಯಾಕೆ ಐಫೋನ್ ಅನ್​ಲಾಕ್ ಮಾಡಲು ಒಪ್ಪುತ್ತಿಲ್ಲ?

ಕೇಜ್ರಿವಾಲ್ ಅವರ ಐಫೋನ್ ಅನ್ನು ಅನ್​ಲಾಕ್ ಮಾಡಿಕೊಡಿ ಎಂದು ಇಡಿ ಅಧಿಕಾರಿಗಳು ಮಾಡಿಕೊಂಡ ಮನವಿಯನ್ನು ಅ್ಯಪಲ್ ಸಂಸ್ಥೆ ತಿರಸ್ಕರಿಸಿದೆ ಎನ್ನುವ ಸುದ್ದಿ ಇದೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್ ಅನ್​ಲಾಕ್ ಮಾಡಲು ಒಪ್ಪಿಲ್ಲ. ಭಯೋತ್ಪಾದನೆಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲೂ ಆ್ಯಪಲ್ ಐಫೋನ್ ಪಾಸ್​ಕೋಡ್ ಕೊಡಲು ಒಪ್ಪಿಲ್ಲ.

ಐಫೋನ್​ನ ವಿಶೇಷತೆ ಎಂದರೆ ಬಳಕೆದಾರರ ಖಾಸಗಿತ್ವದ ರಕ್ಷಣೆ ಇರುವುದು. ಅದನ್ನು ಬಳಸುವ ಗ್ರಾಹಕರಿಗೆ ಅದರ ಸಂಪೂರ್ಣ ನಿಯಂತ್ರಣ ಇರುತ್ತದೆ. ಒಂದು ವೇಳೆ ಒಂದು ಐಫೋನ್ ಅನ್ನು ಅನ್​ಲಾಕ್ ಮಾಡಲು ಯತ್ನಿಸಿದರೆ, ಸತತ 10 ವಿಫಲಯತ್ನಗಳಾಗಿ ಹೋದರೆ ಫೋನ್ ಪೂರ್ಣ ಬಂದ್ ಆಗುತ್ತದೆ. ಅದರಲ್ಲಿರುವ ಡಾಟಾ ಎಲ್ಲವೂ ಹೊರಟುಹೋಗುತ್ತದೆ. ಹೀಗಾಗಿ, ಐಫೋನ್ ಅನ್ನು ಹ್ಯಾಕ್ ಮಾಡುವುದು ಕಷ್ಟ.

ಇದನ್ನೂ ಓದಿ: ವಿಮಾನದಲ್ಲಿ ಹೋಗೋವಾಗ ಏರ್‌ಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು: ಮಾಡದಿದ್ದರೆ ಏನಾಗುತ್ತೆ?

ಒಳ್ಳೆಯವರಿಗೆ ಕೊಟ್ಟರೆ ಕೆಟ್ಟವರೂ ಬರುತ್ತಾರೆ…

ಒಂದು ವೇಳೆ ಐಫೋನ್​ನ ಮಾಹಿತಿ ಪಡೆಯಲು ಪೊಲೀಸ್, ಇಡಿಯಂತಹ ಒಳ್ಳೆಯ ಜನರಿಗೆ ಅವಕಾಶ ಕೊಡಲು ಹೋದರೆ, ಆಗ ಸೈಬರ್ ಕ್ರಿಮಿನಲ್ಸ್, ಹ್ಯಾಕರ್ಸ್ ಇತ್ಯಾದಿ ಕೆಟ್ಟ ಜನರಿಗೂ ಒಳನುಸುಳಲು ಅವಕಾಶ ಸಿಕ್ಕಂತಾಗುತ್ತದೆ ಎಂಬುದು ಆ್ಯಪಲ್​ನ ವಾದ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು