AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ?

Android - iPhone: ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ.

Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ಟ್ರಾನ್ಫರ್ ಮಾಡುವುದು ಹೇಗೆ?
Android to iOS
TV9 Web
| Updated By: Vinay Bhat|

Updated on:Oct 23, 2022 | 12:26 PM

Share

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಈ ವರ್ಷ ಅತಿ ಹೆಚ್ಚು ಫೀಚರ್​ಗಳನ್ನು ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್​ಗಳು ಬರಲು ಸಾಲು ನಿಂತಿದ್ದು ಪರೀಕ್ಷಾ ಹಂತದಲ್ಲಿದೆ. ವಾಟ್ಸ್​ಆ್ಯಪ್ ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್ ಮತ್ತು ಐಫೋನ್ ಎರಡಕ್ಕೂ ಸಪೋರ್ಟ್ ಮಾಡುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಐಫೋನ್ ಎಂದರೆ ದುಬಾರಿ ಎನ್ನುತ್ತಿದ್ದ ಜನರು ಈಗ ಇದನ್ನೇ ಖರೀದಿ ಮಾಡುತ್ತಿದ್ದಾರೆ. ಯಾಕೆಂದರೆ ಮೊದಲು ಐಫೋನ್ ಖರೀದಿಸುವಷ್ಟು ಮೊತ್ತ ಅಥವಾ ಈಗಿರುವ ಹಾಗೆ ಆಫರ್​ಗಳು, ಡಿಸ್ಕೌಂಟ್ ಆಯ್ಕೆ ಇರಲಿಲ್ಲ. ಜೊತೆಗೆ ಆಂಡ್ರಾಯ್ಡ್​ ಬಳಕೆ ಮಾಡುತ್ತಿದ್ದವರಿಗೆ ಐಫೋನ್ ಉಪಯೋಗುಸುವುದು ಕಷ್ಟವಾಗುತ್ತಿತ್ತು. ಆದರೀಗ ಐಫೋನ್ (iPhone) ಹಿಂದಿನ ರೀತಿ ಇಲ್ಲ. ಅನೇಕ ವಿಚಾರಗಳಲ್ಲಿ ಗ್ರಾಹಕರ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ.

ಮುಖ್ಯವಾಗಿ ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ. ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಿಂದ ತಮ್ಮ ಐಫೋನ್​ಗೆ ಯಾವುದೇ ಫೈಲ್ ಅನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.

ಈ ಬಗ್ಗೆ ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದು, ಐಫೋನ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ಡಾಟಾವನ್ನು ಐಫೋನ್​ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿತ್ತು. ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್​ ಕೂಡ ವರ್ಗಾವಣೆ ಆಗುತ್ತಿದೆ.

ಇದನ್ನೂ ಓದಿ
Image
Tech Tips: ಕಿರಿ ಕಿರಿ ಎನಿಸುವ ಅನಗತ್ಯ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್
Image
PDF File: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ಮರೆತು ಹೋಗಿದ್ದರೆ ಈ ಟ್ರಿಕ್ ಮೂಲಕ ಓಪನ್ ಮಾಡಿ
Image
iQoo Neo 7: 120W ಫಾಸ್ಟ್ ಚಾರ್ಜರ್​ನ ಹೊಸ ಐಕ್ಯೂ ನಿಯೋ 7 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Moto E22s: ಮೋಟೋ E32s ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ: ಜಿಯೋ ಸಿಮ್ ಇದ್ರೆ ಸಿಗುತ್ತೆ ಬಂಪರ್ ಡಿಸ್ಕೌಂಟ್

ಆಂಡ್ರಾಯ್ಡ್​ನಿಂದ ಐಫೋನ್​ಗೆ ಡೇಟಾ ವರ್ಗಾವಣೆ ಹೇಗೆ?:

  • ಇದಕ್ಕಾಗಿ ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ Move to iOS ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.
  • ನಿಮ್ಮ ಐಫೋನ್​ನಲ್ಲಿ ಒಂದು ಕೋಡ್ ಡಿಸ್ ಪ್ಲೇ ಆಗುತ್ತದೆ. ಆಂಡ್ರಾಯ್ಡ್ ಫೋನಲ್ಲಿ ಕೋಡ್ ಕೇಳಿದಾಗ ಅದನ್ನು ಹಾಕಬೇಕು.
  • ಈಗ ವಾಟ್ಸ್​ಆ್ಯಪ್​ನಲ್ಲಿ ಕಾಣಿಸುವ ಟ್ರಾನ್ಫರ್ ಡೇಟಾ ಆಯ್ಕೆಯನ್ನು ಒತ್ತಿರಿ.
  • ನಂತರ ನಿಮ್ಮ ಆಂಡ್ರಾಯ್ಡ್​ ಫೋನನ್ನಲ್ಲಿ START ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡೇಟಾ ವರ್ಗಾವಣೆಗೆ ತಯಾರಾಗಲು ವಾಟ್ಸ್​ಆ್ಯಪ್ ಕೆಲ ಸಮಯ ತೆಗೆದುಕೊಳ್ಳುತ್ತದೆ.
  • ಡೇಟಾ ಟ್ರಾನ್ಫರ್ ಆಗಲು ತಯಾರಾಗಿದೆ ಎಂಬೊತ್ತಿಗೆ ನಿಮ್ಮ ಆಂಡ್ರಾಯ್ಡ್​ ಫೋನ್​ನಿಂದ ವಾಟ್ಸ್​ಆ್ಯಪ್ ಸೈನ್​ಔಟ್ ಆಗುತ್ತದೆ. ನಂತರ ಅಲ್ಲೆ ಕಾಣಿಸುವ NEXT ಮತ್ತು CONTINUE ಬಟನ್ ಆಯ್ಕೆ ಮಾಡಿ.
  • ನಂತರ ನಿಮ್ಮ ಐಫೋನ್​ನಲ್ಲಿ ಆ್ಯಪ್ ಸ್ಟೋರ್​ಗೆ ತೆರಳಿ ವಾಟ್ಸ್ಆ್ಯಪ್ ಹೊಸ ವರ್ಷನ್ ಅನ್ನು ಡೌನ್​ಲೋಡ್ ಮಾಡಬೇಕು.
  • ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್​ಆ್ಯಪ್ ಓಪನ್ ಮಾಡಿ ಆಂಡ್ರಾಯ್ಡ್ ಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ.
  • ನಂತರ ಸ್ಟಾರ್ಟ್​ ಬಟನ್ ಒತ್ತಿ ಮುಂದಿನ ಸವಾಲವನ್ನು ಓದಿ ಮುಂದುವರೆಯಿರಿ. ಎಲ್ಲ ಅಧಿಸೂಷನೆಗಳು ಮುಗಿದ ನಂತರ ವಾಟ್ಸ್​ಆ್ಯಪ್ ಪೂರ್ಣವಾಗಿ ತೆರೆದು ನಿಮ್ಮ ಹಳೆಯ ಚಾಟ್​ಗಳು ಕಾಣಿಸಲು ಪ್ರಾರಂಭವಾಗುತ್ತದೆ.

Published On - 12:26 pm, Sun, 23 October 22

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ