AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಇನ್​ಸ್ಟಾದಲ್ಲಿ ಏನೇ ಅಪ್ಲೋಡ್ ಮಾಡಿದ್ರೂ ಅದು ಫೇಸ್​ಬುಕ್​ನಲ್ಲಿ ಬರುತ್ತಾ?: ಬಾರದಿರಲು ಹೀಗೆ ಮಾಡಿ

ನೀವು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಅಥವಾ ಪೋಸ್ಟ್ ಅನ್ನು ಏನೇ ಹಂಚಿಕೊಂಡಾಗ, ಅದು ಇನ್ಸ್ಟಾಗ್ರಾಮ್ ಜೊತೆಗೆ ಫೇಸ್ಬುಕ್ನಲ್ಲಿ ಕೂಡ ಹಂಚಿಕೊಳ್ಳಲಾಗುತ್ತದೆ. ಈ ರೀತಿಯ ಸಮಸ್ಯೆ ಅನೇಕರು ಎದುರಿಸುತ್ತಿದ್ದಾರೆ. ಹೀಗಾಗಿ ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ನಿಮ್ಮ ಇನ್ಸ್ಟಾಗ್ರಾಮ್ ಅನ್ನು ಫೇಸ್‌ಬುಕ್‌ನಿಂದ ಸಂಪರ್ಕ ಕಡಿತಗೊಳಿಸಲು ಬಯಸಿದರೆ ಇಲ್ಲಿದೆ ನೋಡಿ ಸರಳ ಟ್ರಿಕ್.

Tech Tips: ಇನ್​ಸ್ಟಾದಲ್ಲಿ ಏನೇ ಅಪ್ಲೋಡ್ ಮಾಡಿದ್ರೂ ಅದು ಫೇಸ್​ಬುಕ್​ನಲ್ಲಿ ಬರುತ್ತಾ?: ಬಾರದಿರಲು ಹೀಗೆ ಮಾಡಿ
Insta And Facebook
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Jan 27, 2025 | 12:56 PM

Share

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಇನ್​ಸ್ಟಾಗ್ರಾಮ್​ ಮತ್ತು ಫೇಸ್​ಬುಕ್ ಖಾತೆಗಳನ್ನು ಒಟ್ಟಿಗೆ ಲಿಂಕ್ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಈಗಾಗಲೇ ಅನೇಕರು  ಈ ರೀತಿ ಲಿಂಕ್ ಮಾಡಿ ಉಪಯೋಗಿಸುತ್ತಿದ್ದಾರೆ. ಆದರೆ ಈ ಪ್ರಯೋಜನಗಳು ಸಾಮಾನ್ಯವಾಗಿ ಕೆಲವರಿಗೆ ತೊಂದರೆಗಳಿಗೆ ಕಾರಣವಾಗಬಹುದು. ಏಕೆಂದರೆ ನೀವು ಇನ್​ಸ್ಟಾಗ್ರಾಮ್​ ನಲ್ಲಿ ಸ್ಟೋರಿ ಅಥವಾ ಪೋಸ್ಟ್ ಅನ್ನು ಏನೇ ಹಂಚಿಕೊಂಡಾಗ, ಅದು ಇನ್​ಸ್ಟಾಗ್ರಾಮ್​ ಜೊತೆಗೆ ಫೇಸ್​ಬುಕ್​ನಲ್ಲಿ ಕೂಡ ಹಂಚಿಕೊಳ್ಳಲಾಗುತ್ತದೆ. ಈ ರೀತಿಯ ಸಮಸ್ಯೆ ಅನೇಕರು ಎದುರಿಸುತ್ತಿದ್ದಾರೆ.

ಹೀಗಾಗಿ ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ನಿಮ್ಮ ಇನ್​ಸ್ಟಾಗ್ರಾಮ್​ ಅನ್ನು ಫೇಸ್‌ಬುಕ್‌ನಿಂದ ಸಂಪರ್ಕ ಕಡಿತಗೊಳಿಸಲು ಬಯಸಿದರೆ ಇಲ್ಲಿದೆ ನೋಡಿ ಸರಳ ಟ್ರಿಕ್.

ದಾಖಲೆಯ ಡಿಸ್ಕೌಂಟ್: ಫ್ಲಿಪ್‌ಕಾರ್ಟ್‌ನಲ್ಲಿ ಈ ಮಡಚುವ ಫೋನ್ ಮೇಲೆ ಶೇ. 54 ರಷ್ಟು ರಿಯಾಯಿತಿ

  • ಮೊದಲು ನಿಮ್ಮ ಫೋನ್‌ನಲ್ಲಿ ಇನ್​ಸ್ಟಾಗ್ರಾಮ್​ ತೆರೆದು ಪ್ರೊಫೈಲ್​ಗೆ ಹೋಗಿ.
  • ನಂತರ, ಮೇಲೆ ನೀಡಲಾದ 3 ಲೈನ್​ ಮೇಲೆ ಕ್ಲಿಕ್ ಮಾಡಿ, ನಂತರ ನೀವು ಅಕೌಂಟ್ ಸೆಂಟರ್ ಆಯ್ಕೆಯನ್ನು ನೋಡುತ್ತೀರಿ.
  • ಅದರ ಮೇಲೆ ಕ್ಲಿಕ್ ಮಾಡಿ, ಇಲ್ಲಿ ನಿಮ್ಮ ಖಾತೆಯನ್ನು ತೋರಿಸುತ್ತದೆ, ನಿಮ್ಮ ಖಾತೆಯು ಯಾವ ಇತರ ಅಪ್ಲಿಕೇಶನ್‌ಗಳಲ್ಲಿ ಸಕ್ರಿಯವಾಗಿದೆ ಎಂಬುದನ್ನು ಸಹ ತೋರಿಸುತ್ತದೆ.
  • ಇಲ್ಲಿ ಕ್ಲಿಕ್ ಮಾಡಿ. ಇದರಲ್ಲಿ ನಿಮ್ಮ ಫೇಸ್​ಬುಕ್ ಮತ್ತು ಇನ್​ಸ್ಟಾ ಖಾತೆ ಎರಡನ್ನೂ ತೋರಿಸುತ್ತದೆ.
  • ಈಗ ನೀವು ಫೇಸ್‌ಬುಕ್‌ ಕ್ಲಿಕ್ ಮಾಡಿ ಇಲ್ಲಿ ಕೆಂಪು ಅಕ್ಷರದ ಕೆಳಗೆ ಖಾತೆಗಳ ಕೇಂದ್ರದಿಂದ ತೆಗೆದುಹಾಕಿ ಕ್ಲಿಕ್ ಮಾಡುವುದನ್ನು ನೀವು ನೋಡುತ್ತೀರಿ.
  • ನಿಮ್ಮ ಖಾತೆಗಾಗಿ ಸಂಪರ್ಕಿತ ಅನುಭವಗಳನ್ನು ನಿಷ್ಕ್ರಿಯಗೊಳಿಸಲು ಬಯಸುವಿರಾ ಎಂದು ಹೇಳುವ ಪುಟವನ್ನು ನೀವು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.
  • ಇದನ್ನು ಮಾಡಿದ ನಂತರ, ನಿಮ್ಮ ಫೆಸ್​ಬುಕ್ ಖಾತೆಯನ್ನು ತೆಗೆದುಹಾಕಲು ನಿಮ್ಮನ್ನು ಕೇಳಲಾಗುತ್ತದೆ, ಬಳಿಕ ಕೆಳಗೆ ತೋರಿಸಿರುವ ನಿಮ್ಮ ಖಾತೆಯನ್ನು ತೆಗೆದುಹಾಕಿ ಕ್ಲಿಕ್ ಮಾಡಿ, ಇದನ್ನು ಮಾಡಿದರೆ ನಿಮ್ಮ ಎಫ್​ಬಿ ಮತ್ತು ಇನ್​ಸ್ಟಾ ಖಾತೆಯು ಪ್ರತ್ಯೇಕಗೊಳ್ಳುತ್ತದೆ.

ಇತ್ತೀಚೆಗೆ, ಇನ್​ಸ್ಟಾಗ್ರಾಮ್ ಕೆಲವು ಹೊಸ ಅಪ್ಡೇಟ್​ಗಳನ್ನು ಪ್ರಾರಂಭಿಸಿದೆ, ಟಿಕ್‌ ಟಾಕ್ ಬಳಕೆದಾರರನ್ನು ಆಕರ್ಷಿಸುವುದು ಇದರ ಉದ್ದೇಶ. ಕಳೆದ ವಾರ ಇನ್​ಸ್ಟಾದ ಮೂಲ ಕಂಪನಿ ಮೆಟಾ ಹೊಸ ವಿಡಿಯೋ ರಚನೆ ಅಪ್ಲಿಕೇಶನ್ ಎಡಿಟ್ಸ್ ಅನ್ನು ಪರಿಚಯಿಸಿತು. ಇದು ಕ್ಯಾಪ್‌ಕಟ್‌ನಂತೆ ಕಾಣುತ್ತದೆ. ಕ್ಯಾಪ್‌ಕಟ್ ಎಂಬುದು ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್‌ನಿಂದ ರಚಿಸಲಾದ ಅಪ್ಲಿಕೇಶನ್ ಆಗಿದೆ. ಟಿಕ್‌ ಟಾಕ್ ವಿಡಿಯೋಗಳನ್ನು ಮಾಡಲು ಅನೇಕ ರಚನೆಕಾರರು ಇದನ್ನು ಬಳಸುತ್ತಾರೆ. ಇದು ವಿಡಿಯೋಗಳನ್ನು ರಚಿಸಲು ಮತ್ತು ಸಂಪಾದಿಸಲು ಇದು ಸಹಕಾರಿ ಆಗಿದೆ. ಈ ಅಪ್ಲಿಕೇಶನ್ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗುವುದು. ಸಾಮಾಜಿಕ ಮಾಧ್ಯಮ ರಚನೆಕಾರರಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಹಾಗೆಯೆ ಈಗ ಇನ್​ಸ್ಟಾದಲ್ಲಿ ಪ್ರೊಫೈಲ್ ಫೋಟೋ ಗ್ರಿಡ್‌ನಲ್ಲಿ, ಸ್ಕ್ವಾರ್ ಚಿತ್ರಗಳ ಬದಲಿಗೆ ಆಯತ ಆಕಾರಗಳು ಗೋಚರಿಸುತ್ತವೆ. ಈ ಬದಲಾವಣೆಯು ಟಿಕ್ ಟಾಕ್​ನ ಪ್ರೊಫೈಲ್ ಪುಟವನ್ನು ಹೋಲುತ್ತದೆ. ಜೊತೆಗೆ ಇನ್​ಸ್ಟಾ ರೀಲ್ಸ್ ವಿಡಿಯೋದ ಗರಿಷ್ಠ ಮಿತಿಯನ್ನು 90 ಸೆಕೆಂಡುಗಳಿಂದ 3 ನಿಮಿಷಗಳಿಗೆ ಹೆಚ್ಚಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ಯಾವತ್ತೂ ಚರ್ಚೆ ಮಾಡಲ್ಲ: ಅಶೋಕ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಕುಮಟಾ: ದೇವಿಮನೆ ಘಟ್ಟ ಭಾಗ ಕುಸಿತ, ಹೆದ್ದಾರಿಯಲ್ಲಿ ಏಕಮುಖ ಸಂಚಾರ
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಜನ ಅಧಿಕಾರ ಕೊಟ್ಟಿರೋದು ಹೋಲಿಕೆ ಮಾಡಲಲ್ಲ, ಕೆಲಸ ಮಾಡಲು: ಯದುವೀರ್
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
ಬೆಂಗಳೂರಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾದ ಬಗ್ಗೆ ಸಚಿವರಲ್ಲಿ ಮಾಹಿತಿ ಕೊರತೆ
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು