AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್

ಶವೋಮಿ, ಹುವೈ, ಹಾನರ್ ಮತ್ತು ಕೆಲವು ಸ್ಯಾಮ್ಸಂಗ್ ಮಾದರಿಗಳಂತಹ ಅನೇಕ ಹಳೆಯ ಆಂಡ್ರಾಯ್ಡ್ ಫೋನ್‌ಗಳು IR ಬ್ಲಾಸ್ಟರ್ ಅನ್ನು ಹೊಂದಿವೆ. ಇಲ್ಲದಿದ್ದರೆ, ನೀವು ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ನಿಮ್ಮ ಹಳೆಯ ಫೋನ್ ಅನ್ನು AC ಅಥವಾ ಟಿವಿ ರಿಮೋಟ್ ಆಗಿ ಬಳಸಲು, ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

Tech Tips: ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಎಸಿ ರಿಮೋಟ್ ಆಗಿ ಮಾಡಿ: ಇಲ್ಲಿದೆ ಟ್ರಿಕ್
Old Smartphone Into A Tv Or Ac Remote
Vinay Bhat
|

Updated on: Apr 24, 2025 | 3:29 PM

Share

ಬೆಂಗಳೂರು (ಏ. 24): ಇಂದು ಅನೇಕ ಜನರು ಬಳಿ ಬಳಸದೇ ಇರುವ ಹಳೆಯ ಫೋನ್‌ಗಳನ್ನು (Old Smartphones) ಇದ್ದೇ ಇರುತ್ತದೆ. ಅವು ಎಲ್ಲೋ ಮೂಲೆಯಲ್ಲಿ ಬಿದ್ದಿರುತ್ತದೆ. ಆದಾಗ್ಯೂ, ಈ ಹಳೆಯ ಫೋನ್‌ಗಳು ಅದ್ಭುತವಾದ ಉಪಯೋಗಗಳನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ; ನಿಮ್ಮ ಹಳೆಯ ಫೋನ್ ಅನ್ನು ಟಿವಿ ಅಥವಾ ಏರ್ ಕಂಡಿಷನರ್ (AC) ರಿಮೋಟ್ ಆಗಿ ಪರಿವರ್ತಿಸಬಹುದು. ಇದಕ್ಕಾಗಿ, ನಿಮ್ಮ ಫೋನ್ IR ಬ್ಲಾಸ್ಟರ್ ಅನ್ನು ಬೆಂಬಲಿಸುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಿ?. ಟಿವಿ ಅಥವಾ ಎಸಿಯಂತಹ ಎಲೆಕ್ಟ್ರಾನಿಕ್ ಸಾಧನಗಳು ಅತಿಗೆಂಪು (IR) ಸಂಕೇತಗಳಿಂದ ನಿಯಂತ್ರಿಸಲ್ಪಡುತ್ತವೆ.

ಶವೋಮಿ, ಹುವೈ, ಹಾನರ್ ಮತ್ತು ಕೆಲವು ಸ್ಯಾಮ್​ಸಂಗ್ ಮಾದರಿಗಳಂತಹ ಅನೇಕ ಹಳೆಯ ಆಂಡ್ರಾಯ್ಡ್ ಫೋನ್‌ಗಳು IR ಬ್ಲಾಸ್ಟರ್ ಅನ್ನು ಹೊಂದಿವೆ. ಇಲ್ಲದಿದ್ದರೆ, ನೀವು ಅಪ್ಲಿಕೇಶನ್‌ಗಳ ಸಹಾಯದಿಂದ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ನಿಮ್ಮ ಹಳೆಯ ಫೋನ್ ಅನ್ನು AC ಅಥವಾ ಟಿವಿ ರಿಮೋಟ್ ಆಗಿ ಬಳಸಲು, ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು.

ಸಾಮಾನ್ಯವಾಗಿ, ಫೋನ್ ಬ್ರ್ಯಾಂಡ್ ಅನ್ನು ಅವಲಂಬಿಸಿ ಡೀಫಾಲ್ಟ್ ರಿಮೋಟ್ ಅಪ್ಲಿಕೇಶನ್ ಅನ್ನು ಮೊದಲೇ ಅದರಲ್ಲಿ ಅಳವಡಿಸಲಾಗಿರುತ್ತದೆ. ಉದಾಹರಣೆಗೆ, Mi Remote ನಂತಹ ಅಪ್ಲಿಕೇಶನ್‌ಗಳು ಶವೋಮಿ ನಲ್ಲಿ ಲಭ್ಯವಿದೆ ಮತ್ತು ಸ್ಮಾರ್ಟ್ ರಿಮೋಟ್ ಹುವೈ ನಲ್ಲಿ ಲಭ್ಯವಿದೆ. ಇದಲ್ಲದೆ, ಫೋನ್‌ನಲ್ಲಿ ರಿಮೋಟ್ ಅಪ್ಲಿಕೇಶನ್ ಇಲ್ಲದಿದ್ದರೆ, ನೀವು ಅದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಮಿ ರಿಮೋಟ್ ಕಂಟ್ರೋಲರ್, ಪೀಲ್ ಸ್ಮಾರ್ಟ್ ರಿಮೋಟ್ ಮತ್ತು ಎನಿಮೋಟ್ ಸ್ಮಾರ್ಟ್ ಐಆರ್ ರಿಮೋಟ್‌ನಂತಹ ಅಪ್ಲಿಕೇಶನ್‌ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ
Image
ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷ ಬಾಳಿಕೆ ಬರುತ್ತೆ?: ಯಾವಾಗ ಬದಲಾಯಿಸಬೇಕು?
Image
Tech Utility: ನೀವು ಸ್ಟೆಬಿಲೈಜರ್ ಇಲ್ಲದೆ ಫ್ರಿಡ್ಜ್ ಬಳಸುತ್ತೀರಾ?
Image
ಹಳೆಯ ಫೋನ್‌ ಮೇಲೆ ಸ್ಟಿಕ್ಕರ್‌ ಅಂಟಿಸಿ ಹೊಸದೆಂದು ಅಂಗಡಿಗಳಲ್ಲಿ ಮಾರಾಟ
Image
ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದರೆ, ತಕ್ಷಣ ಹೀಗೆ ಮಾಡಿ

Tech Utility: ಇನ್ವರ್ಟರ್ ಬ್ಯಾಟರಿ ಎಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತದೆ?: ಅದನ್ನು ಯಾವಾಗ ಬದಲಾಯಿಸಬೇಕು?

  • ಇದಕ್ಕಾಗಿ, ಮೊದಲು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ನಂತರ, ಆ ಅಪ್ಲಿಕೇಶನ್ ತೆರೆಯಿರಿ ಮತ್ತು “ಆ್ಯಡ್ ರಿಮೋಟ್” ಅಥವಾ “+” ಅನ್ನು ಟ್ಯಾಪ್ ಮಾಡಿ.
  • ಈಗ ಸಾಧನದ ಪ್ರಕಾರವನ್ನು ಆಯ್ಕೆಮಾಡಿ – ಉದಾಹರಣೆಗೆ ಟಿವಿ, ಎಸಿ, ಸೆಟ್ ಟಾಪ್ ಬಾಕ್ಸ್, ಇತ್ಯಾದಿ. ಇದರ ನಂತರ, ಸೋನಿ, ಎಲ್‌ಜಿ, ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.
  • ನಂತರ ಅಪ್ಲಿಕೇಶನ್ ಕೆಲವು ಬಟನ್‌ಗಳನ್ನು ಒತ್ತಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಫೋನ್ ಸಾಧನಕ್ಕೆ ಪ್ರತಿಕ್ರಿಯಿಸಿದರೆ, ನಿಮ್ಮ ಫೋನ್ ಸಂಪೂರ್ಣವಾಗಿ ರಿಮೋಟ್ ಕಂಟ್ರೋಲ್ ಆಗಿ ಮಾರ್ಪಟ್ಟಿದೆ.
  • ನಿಮ್ಮ ಫೋನ್‌ನಲ್ಲಿ ಐಆರ್ ಇಲ್ಲದಿದ್ದರೂ ಸಹ, ನೀವು ಸ್ಮಾರ್ಟ್ ಟಿವಿಗಳು ಮತ್ತು ಕೆಲವು ಎಸಿಗಳನ್ನು ವೈಫೈ ಅಥವಾ ಬ್ಲೂಟೂತ್ ಮೂಲಕ ನಿಯಂತ್ರಿಸಬಹುದು – ಆದರೆ ಅವು ‘ಸ್ಮಾರ್ಟ್’ ಆಗಿದ್ದರೆ ಮಾತ್ರ.

ನೀವು ವೈಫೈ ಆಧಾರಿತ ರಿಮೋಟ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನೀವು Chromecast ಅಥವಾ ಆಂಡ್ರಾಯ್ಡ್ ಟಿವಿ ಹೊಂದಿದ್ದರೆ, ಈ ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸಬಹುದು. ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್ (ಸ್ಯಾಮ್‌ಸಂಗ್ ಟಿವಿಗಳಿಗಾಗಿ), ಎಲ್‌ಜಿ ಟಿವಿ ಪ್ಲಸ್ (ಎಲ್‌ಜಿ ಸ್ಮಾರ್ಟ್ ಟಿವಿಗಳಿಗಾಗಿ), ಸೋನಿ ಬ್ರಾವಿಯಾ ಟಿವಿ ಅಪ್ಲಿಕೇಶನ್, ಹಾಗೆಯೇ ಎಲ್‌ಜಿ ಥಿನ್‌ಕ್ಯೂ, ಡೈಕಿನ್ ಮೊಬೈಲ್ ಕಂಟ್ರೋಲರ್, ವೋಲ್ಟಾಸ್ ಸ್ಮಾರ್ಟ್ ಎಸಿ ಅಪ್ಲಿಕೇಶನ್‌ಗಳು ಎಸಿ ಬ್ರಾಂಡ್ ಅಪ್ಲಿಕೇಶನ್‌ಗಳಿಗೆ ಲಭ್ಯವಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!