AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು

ಈಕೆ ಬಾಕ್ಸಿಂಗ್​ ತರಬೇತುದಾರ ರುಸ್ಟ್ರುಮ್​ ಸಾದ್ವಾಕಾಸ್​ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ  ತನ್ನ ತಂದೆಯಿಂದ ಬಾಕ್ಸಿಂಗ್​ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು.

Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು
ಎವ್ನಿಕಾ ಸಾದ್ವಾಕಾಸ್​
TV9 Web
| Edited By: |

Updated on:Jan 10, 2022 | 9:49 AM

Share

ಸಾಧನೆಗೆ ವಯಸ್ಸಿನ ಹಂಗಿಲ್ಲ. ಶ್ರದ್ಧೆ, ಇಚ್ಛಾ ಶಕ್ತಿ ಇದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಯಾವ ವಯಸ್ಸಿನಲ್ಲಿ ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ 12 ವರ್ಷದ ಬಾಲಕಿಯೇ ಸಾಕ್ಷಿ. ರಷ್ಯಾದ 12 ವರ್ಷದ ಬಾಲಕಿಯೊಬ್ಬಳು ಮರದೊಂದಿಗೆ ಬಾಕ್ಸಿಂಗ್​ ಮಾಡುತ್ತಾಳೆ. ತನ್ನ ಕೈಯಲ್ಲಿ ಬಾಕ್ಸಿಂಗ್​ ಗ್ಲೌಸ್​ ಹಾಕಿಕೊಂಡು ಮರಕ್ಕೆ ಪಂಚ್​ ಮಾಡುವ ಮೂಲಕ ಮರವನ್ನೇ ಒಡೆಯುವಷ್ಟು ಶಕ್ತಿ ಹೊಂದಿದ್ದಾಳೆ. ಈಕೆಯ ಸಾಧನೆಗೆ ಈಗ ಇಡೀ ಜಗತ್ತು ತಿರುಗಿ ನೋಡುತ್ತಿದೆ.  

ಈ 12 ವರ್ಷದ ಬಾಲಕಿಯ ಹೆಸರು ಎವ್ನಿಕಾ ಸಾದ್ವಾಕಾಸ್​. ತನ್ನ ಬಾಕ್ಸಿಂಗ್​ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದಾಳೆ. ಈಕೆ ಬಾಕ್ಸಿಂಗ್​ ತರಬೇತುದಾರ ರುಸ್ಟ್ರುಮ್​ ಸಾದ್ವಾಕಾಸ್​ ಅವರ ಪುತ್ರಿ. ಎವ್ನಿಕಾ 4 ವರ್ಷದವಳಿದ್ದಾಗಲೇ  ತನ್ನ ತಂದೆಯಿಂದ ಬಾಕ್ಸಿಂಗ್​ ತರಬೇತಿ ಪಡೆಯುತ್ತಿದ್ದಳು. ಆಕೆಯ ಶಕ್ತಿ ಮತ್ತು ಪರಿಶ್ರಮವನ್ನು ನೋಡಿ ಸ್ವತಃ ತಂದೆಯೇ ಬೆರಗಾಗಿದ್ದರು. ಎವ್ನಿಕಾ ತನ್ನ 7 ಜನ ಸಹೋರರೊಂದಿಗೆ ರಷ್ಯಾದ ವೊರೊನೆಜ್​ ಪ್ರದೇಶದಲ್ಲಿ ವಾರದ ಐದು ದಿನ ಬಾಕ್ಸಿಂಗ್​ ತರಬೇತಿ ಪಡೆಯುತ್ತಾಳೆ. ಈಕೆಯ ತಾಯಿ ಅನಿಯಾ ಸಾದ್ವಿಕಾಸ್​ ಮಾಜಿ ಜಿಮ್ನಾಸ್ಟಿಕ್​ ಆಗಿದ್ದರು. ಎವ್ನಿಕಾ ತಾಯಿ ಹೊರತುಪಡಿಸಿ ಇವರ ಇಡೀ ಕುಟುಂಬ ಬಾಕ್ಸಿಂಗ್​ ತರಬೇತುದಾರರಾಗಿದ್ದಾರೆ. ಈಕೆಯನ್ನು ಜಗತ್ತಿನ ಶಕ್ತಿಶಾಲಿ ಬಾಲಕಿ ಎಂದೂ ಕರೆಯುತ್ತಾರೆ.

ಎವ್ನಿಕಾ 2020ರಲ್ಲಿ 80 ಕೆಜಿ ಭಾರ ಎತ್ತುವ ಮೂಲಕ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ್ದಳು. ಈ ಮೂಲಕ ಯುಎಸ್​ಎಯ ವೇಟ್​ಲಿಪ್ಟಿಂಗ್​ ಯೂತ್​ ನ್ಯಾಷನಲ್​ ಚಾಂಪಿಯನ್​ಶಿಪ್​ ಗೆದ್ದ ಅತಿ ಕಿರಿಯ ಬಾಲಕಿ ಎಂಬ ಪಟ್ಟ ಗಳಿಸಿದ್ದಳು. ಸದ್ಯ ಎವ್ನಿಕಾ ಬಾಕ್ಸಿಂಗ್​ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Published On - 9:48 am, Mon, 10 January 22

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ