AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್​ ಮಾಡಿದ ಆನಂದ್​ ಮಹೀಂದ್ರಾ

ಟ್ವೀಟ್​ ಅನ್ನು ರೀಟ್ವಿಟ್​ ಮಾಡಿದ ಮಹಿಂದ್ರಾ ಕಂಪನಿಯ ಚೇರ್​ಮನ್​ ಆನಂದ್​ ಮಹೀಂದ್ರಾ ಎರಿಕ್, ನನ್ನ ಸ್ವಂತ ದೇಶದ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ತೋರಿಸಿದ್ದೀರಿ. ಇದು ಅದ್ಭುತವಾಗಿದೆ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ನಾನು ಕಂಡುಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ.

Viral Photo: ಹಸಿರು ತುಂಬಿದ ತಮಿಳುನಾಡಿನ ರಸ್ತೆಯ ಫೋಟೋವನ್ನು ರೀ ಟ್ವೀಟ್​ ಮಾಡಿದ ಆನಂದ್​ ಮಹೀಂದ್ರಾ
ಕೊಲ್ಲಿ ಹಿಲ್ಸ್ ರಸ್ತೆ
TV9 Web
| Edited By: |

Updated on:Jan 10, 2022 | 11:13 AM

Share

ಸುತ್ತಲೂ ಹರಡಿರುವ ಹಸಿರು ಮರಗಳ ನಡುವೆ ಸೀಳಿಕೊಂಡು ಸಾಗುವ ದಾರಿಯಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ.  ವಿದೇಶಗಳಲ್ಲಿ ಪ್ರಯಾಣಿಸುವಾಗ ಸುತ್ತಲೂ ಕಾಣುವ ಹಸಿರು ಪರಿಸರವನ್ನು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಅದಕ್ಕಿಂತಲೂ ಅದ್ಭುತ ವಾದ ಪ್ರಯಾಣದ ಹಾದಿ ಭಾರತದಲ್ಲಿಯೇ ಸಾಕಷ್ಟಿದೆ. ಹಚ್ಚ ಹಸಿರ ಹೊದಿಕೆಯಿಂದ ಸಮೃದ್ಧವಾಗಿ ಆವರಿಸಿಕೊಂಡ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟೂ ತಿರುವುಗಳನ್ನು ಕಾಣಬಹುದು ಅಂತಹ ಮಾರ್ಗವನ್ನು ಹೊಂದಿರುವ ಸುಂದರ ರಸ್ತೆಯನ್ನು ತಮಿಳುನಾಡಿನಲ್ಲಿ ಕಾಣಬಹುದು. ಸುಂದರ ಪ್ರಕೃತಿಯ ನಡುವೆ 70 ತಿರುವುಗಳನ್ನು ಹೊಂದಿರುವ ಅದ್ಭುತ ರಸ್ತೆ ಮಾರ್ಗದ ಫೋಟೊವೊಂದನ್ನು ಆನಂದ್​ ಮಹೀಂದ್ರಾ ರೀಟ್ವೀಟ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಫೊಟೋವನ್ನು ನಾರ್ವೇಜಿಯನ್​​ ರಾಜತಾಂತ್ರಿಕ ಮತ್ತು ಮಾಜಿ ರಾಜಕಾರಣಿ ಎರಿಕ್ ಸೋಲ್ಹೈಮ್ ಎನ್ನುವವರು ಹಂಚಿಕೊಂಡಿದ್ದರು. ಈ ಫೋಟೋಗೆ ಎರಿಕ್​ ಅದ್ಭುತ ಭಾರತ!, ಅತ್ಯಂತ ಭಯಾನಕ ಹಾಗೂ ಅದ್ಭುತವಾದ 70 ತಿರುವುಗಳನ್ನು ಹೊಂದಿರುವ ತಮಿಳುನಾಡಿನ ನಾಮಕ್ಕಲ್​ನ ಕೊಲ್ಲಿ ಹಿಲ್ಸ್ ರಸ್ತೆಯ ನೋಟ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ ಅನ್ನು ರೀಟ್ವಿಟ್​ ಮಾಡಿದ ಮಹಿಂದ್ರಾ ಕಂಪನಿಯ ಚೇರ್​ಮನ್​ ಆನಂದ್​ ಮಹೀಂದ್ರಾ ಎರಿಕ್, ನನ್ನ ಸ್ವಂತ ದೇಶದ ಬಗ್ಗೆ ನನಗೆ ಎಷ್ಟು ಕಡಿಮೆ ತಿಳಿದಿದೆ ಎಂದು ತೋರಿಸಿದ್ದೀರಿ. ಇದು ಅದ್ಭುತವಾಗಿದೆ. ಈ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆಂದು ನಾನು ಕಂಡುಹಿಡಿಯಬೇಕು ಎಂದು ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಸಿರು ತುಂಬಿದ ರಸ್ತೆಯ ಫೋಟೋ ವೈರಲ್​ ಆಗಿದೆ.  ಪೋಟೋ ನೋಡಿದ ನೆಟ್ಟಿಗರು ಭಾರತದ ಸೌಂದರ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ 9 ರಂದು ಆನಂದ್​ ಮಹೀಂದ್ರಾ ಹಂಚಿಕೊಂಡ ಪೋಟೋ 12 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು ಹಲವಾರು ಮಂದಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಪೊಲೀಸ್​ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ’ಬಾಬಾ ಕಾಲಭೈರವ’

Published On - 11:11 am, Mon, 10 January 22

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್