AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್​ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ ‘ಬಾಬಾ ಕಾಲಭೈರವ’

ರಿಜಿಸ್ಟಾರ್​ ಹಿಡಿದು ಬಂದ ಕಾಲ ಭೈರವ ಯಾರ ಅಹವಾಲನ್ನೂ ಕೇಳುವುದಿಲ್ಲ. ಕೊರೋನಾ ಸಂಕ್ರಾಮಿಕದಂತಹ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಬಂದಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ.

ಪೊಲೀಸ್​ ಅವತಾರದ ಮೂಲಕ ಭಕ್ತರಿಗೆ ದರ್ಶನ ನೀಡಿದ ಕಾಶಿಯ ಕೊತ್ವಾಲ 'ಬಾಬಾ ಕಾಲಭೈರವ'
ಬಾಬಾ ಕಾಲಭೈರವ ದೇವರು
TV9 Web
| Updated By: Pavitra Bhat Jigalemane|

Updated on:Jan 10, 2022 | 11:17 AM

Share

ಕಾಶಿಯ ಕೊತ್ವಾಲ್​ ಎಂದು ಕರೆಸಿಕೊಳ್ಳುವ ವಾರಣಾಸಿಯ ಬಾಬಾ ಕಾಲಭೈರವ ದೇವರಿಗೆ ಇದೇ ಮೊದಲ ಬಾರಿಗೆ ಪೊಲೀಸ್​ ಯುನಿಫಾರ್ಮ್​ ಉಡುಪಿನ ಮೂಲಕ ಅಲಂಕರಿಸಲಾಗಿದೆ. ದೇವರ ತಲೆಯ ಮೇಲೆ ಪೊಲೀಸ್​ ಟೋಪಿ ಇಡಲಾಗಿದ್ದು, ಪೊಲೀಸ್​ ಬ್ಯಾಡ್ಜ್​, ಎಡಗೈಯಲ್ಲಿ ಬೆಳ್ಳಿಯ ಲಾಠಿ ಹಾಗೂ ಬಲಗೈಯಲ್ಲಿ ರಿಜಿಸ್ಟರ್​ ಪುಸ್ತಕವನ್ನು ಹಿಡಿದ ರೀತಿ ಅಲಂಕರಿಸಲಾಗಿದೆ. ಕಾಶಿಯಲ್ಲಿರುವ ನೂರಾರು ಜನ ಭಕ್ತಿಯಿಂದ ಪೂಜಿಸುವ ಕಾಲ ಭೈರವ ದೇವರು ಪೊಲೀಸ್​ ಉಡುಪನ್ನು ಧರಿಸಿದ ವಿಷಯ ತಿಳಿದು ಭಕ್ತರ ದಂಡೇ ಹರಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ  ಕಾಲ ಭೈರವ ದೇವರ ಪೊಲೀಸ್​ ಅವತಾರದ ಫೋಟೋಗಳು ವೈರಲ್​ ಆಗಿದೆ.

ಬಾಬಾ ಅವತಾರವನ್ನು ನೋಡಿ ಭಕ್ತರು ರಿಜಿಸ್ಟಾರ್​ ಹಿಡಿದು ಬಂದ ಕಾಲ ಭೈರವ ಯಾರ ಅಹವಾಲನ್ನೂ ಕೇಳುವುದಿಲ್ಲ. ಕೊರೋನಾ ಸಂಕ್ರಾಮಿಕದಂತಹ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಬಂದಿದ್ದಾರೆ ಎಂದು ಭಕ್ತರು ಹೇಳುತ್ತಿದ್ದಾರೆ. ಇನ್ನು ದೇವಸ್ಥಾನದ ಮಹಂತ್​ ಅನಿಲ್​ ದುಬೆ ಎನ್ನುವವರು ಮಾತನಾಡಿ, ಇದೇ ಮೊದಲ ಬಾರಿಗೆ ದೇವರಿಗೆ ಪೊಲೀಸ್​ ಸಮವಸ್ತ್ರದಿಂದ ಅಲಂಕರಿಸಲಾಗಿದೆ. ದೇಶದ ಸರ್ವಜನರ ಪರವಾಗಿ, ಎಲ್ಲರ ಒಳಿತಿಗಾಗಿ ವಿಶೇಷ ಪೂಜೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ದೇಶದ ಜನರ ರಕ್ಷಣೆಗಾಗಿ ಕೋರಿ, ಎಲ್ಲರಿಗೂ ಆರೋಗ್ಯ ಮತ್ತು ಸಂತೋಷವನ್ನು ನೀಡುವಂತೆ ಕೋರಿ ಪೂಜೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾಲ ಭೈರವ ದೇವರ ಬಗ್ಗೆ ಮಾತನಾಡಿದ ಭಕ್ತರೊಬ್ಬರು, ಬಾಬಾ ಹಲವು ಅವತಾರಗಳಲ್ಲಿ ಭಕ್ತಿರಿಗೆ ದರ್ಶನ ನೀಡುತ್ತಾರೆ. ಪೊಲೀಸ್​​ ಅವತಾರದಲ್ಲಿ ಬಂದ ಅವರು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾರೆ. ಪೊಲೀಸರಂತೆ ಹದ್ದಿನ ಕಣ್ಣು ಇರಿಸಿ ಭೂಮಿಯ ಮೇಲೆ ನಡೆಯುತ್ತಿರುವ ಒಳಿತು ಕೆಡುಕನ್ನು ಗ್ರಹಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು

Published On - 10:30 am, Mon, 10 January 22

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ