AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

77ರ ಹರೆಯದಲ್ಲೂ ಸ್ಕೇಟಿಂಗ್​ ಕಲಿಯುತ್ತಿರುವ ವೃದ್ಧ: ವೈರಲ್​ ಆದ ವೀಡಿಯೋ

77ವರ್ಷದ ಇಳಿವಯಸ್ಸಿನ ವೃದ್ದ ಸ್ಕೇಟಿಂಗ್​ ಕಲಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇವಲ ಇಳಿ ವಯಸ್ಸು ಮಾತ್ರವಲ್ಲದೆ ಇವರಿಗೆ ಕ್ಯಾನ್ಸರ್​ ರೋಗ ಕೂಡ ಇದೆ.

77ರ ಹರೆಯದಲ್ಲೂ ಸ್ಕೇಟಿಂಗ್​ ಕಲಿಯುತ್ತಿರುವ ವೃದ್ಧ: ವೈರಲ್​ ಆದ ವೀಡಿಯೋ
ಸ್ಕೇಟಿಂಗ್​ ಮಾಡುತ್ತಿರುವ ವೃದ್ಧ
TV9 Web
| Edited By: |

Updated on: Dec 11, 2021 | 5:55 PM

Share

ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುವುದು ತಿಳಿದಿರುವ ವಿಚಾರ. ಆದರೆ ಇಳಿ ವಯಸ್ಸಿನಲ್ಲಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವಾಗಲೂ ಜೀವನೋತ್ಸಾಹದಿಂದ ಹೊಸದೊಂದು ವಿಚಾರವನ್ನು ಕಲಿಯಬೇಕು ಎನ್ನುವ ಹುಮ್ಮಸ್ಸು ನಿಜಕ್ಕೂ ಎಲ್ಲರಿಗೂ ಮಾದರಿ. ಹೌದು, ಇಲ್ಲೊಬ್ಬರು 77ವರ್ಷದ ಇಳಿವಯಸ್ಸಿನ ವೃದ್ದ ಸ್ಕೇಟಿಂಗ್​ ಕಲಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಕೇವಲ ಇಳಿ ವಯಸ್ಸು ಮಾತ್ರವಲ್ಲದೆ ಇವರಿಗೆ ಕ್ಯಾನ್ಸರ್​ ರೋಗ ಕೂಡ ಇದೆ. 4ನೇ ಹಂತದ ಪ್ರಾಸ್ಟೇಟ್​ಕ್ಯಾನ್ಸರ್​ ರೋಗ ಇದ್ದರೂ ಇವರಿಗೆ ಸ್ಕೇಟಿಂಗ್​ ಕಲಿಯುವ ಹಂಬಲ.

ಒನ್​ ​ಟ್ರಯಲ್​ ಸಂಸ್ಥೆಯ ಸಿಇಒ ರೆಬೆಕಾ ಬೆಸ್ಟಾಯಿನ್​ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ಕೇಟಿಂಗ್​ ಕಲಿಯುತ್ತಿರುವವರು ರೆಬೆಕಾ ಅವರ ತಂದೆ. ರೆಬೆಕಾ ಅವರ ತಂದೆಗೆ 77 ವರ್ಷ. ಈ ಕುರಿತು ಅವರು ಟ್ವಿಟರ್​ನಲ್ಲಿ ಐಸ್​ ಸ್ಕೇಟಿಂಗ್​ ತರಬೇತಿ ನೀಡುವ ಶಿಕ್ಷಕನೊಂದಿಗೆ ಸ್ಕೇಟಿಂಗ್​ ಮಾಡುವ ವೀಡಿಯೊ ಹಂಚಿಕೊಂಡು, ನನ್ನ ತಂದೆ ತನಗಿರುವ ಮಾರಣಾಂತಿಕ ಕಾಯಿಲೆಯನ್ನು ಮರೆತು ಸಂತಸದಿಂದ ಇದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನಗೆದ್ದಿದೆ. ವಯಸ್ಸಾದರೂ ಕುಂದದ ಜೀವನ ಪ್ರೀತಿ ಕಂಡು ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ವೀಡಿಯೋ 2.5ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದಿದೆ.

ಇದನ್ನೂ ಓದಿ:

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?