ಹೀಗೊಂದು ಒಂಟೆ ಉತ್ಸವ: ಸೌಂದರ್ಯವರ್ಧಕ ಚುಚ್ಚುಮದ್ದು ಬಳಕೆಯಿಂದ ಡಿಸ್​ಕ್ವಾಲಿಫೈ ಆದ 40 ಒಂಟೆಗಳು

ಒಂಟೆ ಉತ್ಸವದಲ್ಲಿ ಗೆದ್ದ ಒಂಟೆಯ ಮಾಲೀಕನಿಗೆ 66 ಮಿಲಿಯನ್​ ಡಾಲರ್​ ಬಹುಮಾನ ನೀಡಲಾಗುತ್ತದೆ. ಈ ಉತ್ಸವದಲ್ಲಿ ಒಂಟೆಗೆ ತಲೆ, ಕುತ್ತಿಗೆ, ಗೂನಿಗೆ ಹಾಕಲಾದ ಉಡುಗೆ ಹಾಗೂ ಒಂಟೆಯನ್ನು ಅಲಂಕರಿಸಿದ ರೀತಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಹೀಗೊಂದು ಒಂಟೆ ಉತ್ಸವ: ಸೌಂದರ್ಯವರ್ಧಕ ಚುಚ್ಚುಮದ್ದು ಬಳಕೆಯಿಂದ ಡಿಸ್​ಕ್ವಾಲಿಫೈ ಆದ 40 ಒಂಟೆಗಳು
ಸಾಂದರ್ಭಿಕ ಚಿತ್ರ
Follow us
| Updated By: Pavitra Bhat Jigalemane

Updated on: Dec 11, 2021 | 4:20 PM

ಸೌದಿ ಅರೆಬಿಯಾ: ಸಾಮಾನ್ಯವಾಗಿ ಮನುಷ್ಯರ ಸೌಂದರ್ಯ ಸ್ಪರ್ಧೇಯಲ್ಲಿ ಕ್ವಾಲಿಫೈ ಅಥವ ಡಿಸ್​ಕ್ವಾಲಿಫೈ ಎನ್ನುವುದನ್ನು ಕೇಳಿರುತ್ತೀರಾ. ಆದರೆ ಸೌದಿ ಅರೇಬಿಯಾದಲ್ಲಿ ಪ್ರತೀ ವರ್ಷ ಒಂಟೆಗಳ ಸೌಂದರ್ಯ ಉತ್ಸವ ನಡೆಯುತ್ತದೆ. ಸೌದಿಯ ಖ್ಯಾತ ರಾಜನ ಹೆಸರಿನಲ್ಲಿ ಅಬ್ದುಲಜೀಜ್​ಕ್ಯಾಮಲ್​ ಫೆಸ್ಟಿವಲ್ ನಡೆಯುತ್ತದೆ. ಈ ಬಾರಿ ಈ ಉತ್ಸವದಲ್ಲಿ 40 ಒಂಟೆಗಳನ್ನು ಸ್ಪರ್ಧೆಯಿಂದ ಹೊರಹಾಕಲಾಗಿದೆ. ಬೊಟೋಕ್ಸ್ ಎನ್ನುವ ಸೌಂದರ್ಯವರ್ಧಕ ಚುಚ್ಚುಮದ್ದು ಪಡೆದ ಹಾಗೂ ಕೃತಕ ಮೇಕಪ್​ಗಳನ್ನು ಮಾಡಿ ಸ್ಪರ್ಧೆಗೆ ಕರೆತಂದಿದ್ದ 40 ಒಂಟೆಗಳನ್ನು ಸ್ಪರ್ಧೆಯಿಂದ ಹೊರಹಾಕಲಾಗಿದೆ. ಈ ಒಂಟೆ ಉತ್ಸವದಲ್ಲಿ ಗೆದ್ದ ಒಂಟೆಯ ಮಾಲೀಕನಿಗೆ 66 ಮಿಲಿಯನ್​ ಡಾಲರ್​ ಬಹುಮಾನ ನೀಡಲಾಗುತ್ತದೆ. ಈ ಉತ್ಸವದಲ್ಲಿ ಒಂಟೆಗೆ ತಲೆ, ಕುತ್ತಿಗೆ, ಗೂನಿಗೆ ಹಾಕಲಾದ ಉಡುಗೆ ಹಾಗೂ ಒಂಟೆಯನ್ನು ಅಲಂಕರಿಸಿದ ರೀತಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸೌದಿ ರಾಜಧಾನಿ ರಿಯಾದ್​ನಲ್ಲಿ ಒಂದು ತಿಂಗಳುಗಳ ಕಾಲ ಈ ಒಂಟೆ ಉತ್ಸವ ನಡೆಯುತ್ತದೆ. ಬೊಟೋಕ್ಸ್ ಚುಚ್ಚುಮದ್ದನ್ನು ಒಂಟೆಗಳ ಸೌಂದರ್ಯ ಹೆಚ್ಚಿಸಲು ಬಳಸುತ್ತಾರೆ. ಒಂಟೆಯ ತಲೆ ಮತ್ತು ತುಟಿಗಳನ್ನು ದೊಡ್ಡದಾಗಿಸಲು ಈ ಚುಚ್ಚುಮದ್ದನ್ನು ಬಳಸುತ್ತಾರೆ. ಇದರ ಜೊತೆಗೆ ಒಂಟೆ ಸುಂದರವಾಗಿ ಕಾಣಲು ದೇಹಕ್ಕೆ ಅಲ್ಲಲ್ಲಿ ರಬ್ಬರ್​ಬ್ಯಾಂಡ್​ಗಳಿಂದ ಸುತ್ತುತ್ತಾರೆ. ಇದರಿಂದ ಒಂಟೆಯ ದೇಹ ಒಂದು ಮಿತಿಯಲ್ಲಿ ಮಾತ್ರ ಬೆಳೆದು ಸುಂದರವಾಗಿ ಕಾಣುತ್ತದೆ.

ಸೌದಿ ಅರೇಬಿಯಾದಲ್ಲಿ ಮರುಭೂಮಿ ಪ್ರದೇಶ ಅಧಿಕವಾಗಿರುವ ಇರುವ ಕಾರಣ ಸಂಚಾರಕ್ಕೆ ಹೆಚ್ಚು ಒಂಟೆಗಳನ್ನೇ ಅಲ್ಲಿಯ ಜನ ಅವಲಂಬಿಸಿದ್ದಾರೆ. ಸೌದಿಯಲ್ಲಿ ಒಂಟೆಗಳ ಉತ್ಸವದ ಜತೆಗೆ ಒಂಟೆ ಸಾಕಾಣಿಕೆ ಹಾಗೂ ಮಾರಾಟದ ಉದ್ಯಮವೂ ನಡೆಯುತ್ತದೆ. ಸೌದಿಯಲ್ಲಿ ಒಂಟೆ ಉದ್ಯಮ ಅತೀ ಲಾಭದಾಯಕ ಉದ್ಯಮವಾಗಿದೆ. ತೈಲ ಸಮೃದ್ಧ ದೇಶ ಸೌದಿ ಅರೇಬಿಯಾದಲ್ಲಿ ಬೆಡೋಯಿನ್​ ಎಂಬ ಸಂಪ್ರದಾಯವನ್ನು ಉತ್ತೇಜಿಸಲು ಹಾಗೂ ಒಂಟೆಗಳ ಬಳಕೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತೀ ವರ್ಷ ಒಂದು ತಿಂಗಳುಗಳ ಕಾಲ ಈ ಒಂಟೆ ಉತ್ಸವ ನಡೆಯುತ್ತದೆ.

ಇದನ್ನೂ ಓದಿ:

ಗೋವಾದ ಬುಡಕಟ್ಟು ಮಹಿಳೆಯರೊಂದಿಗೆ ಜಾನಪದ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ; ನಾಚಿಕೆಯಾಗಲ್ವ? ಎಂದ ಬಿಜೆಪಿ

Viral Video: ಬೆಟ್ಟದಿಂದ ಬೈಕ್ ಸಮೇತ ಜಂಪ್ ಮಾಡಿದ ಸವಾರ; ಡೇಂಜರಸ್ ವಿಡಿಯೋ ಹೇಗಿತ್ತು ನೀವೇ ನೋಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ