AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ

Viral Video : ಅತ್ಯಂತ ವಿಜೃಂಭಣೆಯಿಂದ ಆ ಮದುವೆಗೆ ತಯಾರಿ ಮಾಡಿದ್ದರು. ಭಕ್ಷ್ಯ-ಪಾನೀಯಗಳು ಅತಿಥಿಗಳಿಗಾಗಿ ಕಾಯುತ್ತಿದ್ದವು. ಅದೆಲ್ಲಿಂದ ಬಂದರೋ ನಾಲ್ಕುಕಾಲಿನ ಈ ಅಭ್ಯಾಗತರು! ನೋಡಿ ಹೇಗಿದೆ 15 ಸೆಕೆಂಡುಗಳ ಈ ವಿಡಿಯೋ.

ಹೇಳಿ ಕೇಳಿ ಗೂಳಿ, ಆಮಂತ್ರಣ ಬೇಕೇ ಮದುವೆಗೆ? ವೈರಲ್ ಆದ ವಿಡಿಯೋ ನೋಡಿ
ಮದುವೆಗೆ ಬಂದ ಗೂಳಿ
TV9 Web
| Edited By: |

Updated on:Dec 10, 2022 | 2:58 PM

Share

Viral Video : ಮದುವೆಮನೆಗೆ ಬೆಕ್ಕು, ನಾಯಿಯಂಥ ಸಾಕುಪ್ರಾಣಿಗಳು ನುಗ್ಗುವುದನ್ನು ನೋಡಿದ್ದೇವೆ. ಆದರೆ ಗೂಳೀ!? ಮದುವೆ ನಡೆಯುವ ಸ್ಥಳವನ್ನು ಅತ್ಯಂತ ವೈಭವಯುತವಾಗಿ ಅಲಂಕರಿಸಲಾಗಿದೆ. ಶಿಸ್ತಾಗಿ ಪಾನೀಯ, ಆಹಾರದ ಕೌಂಟರುಗಳನ್ನು ಜೋಡಿಸಲಾಗಿದೆ. ಅತಿಥಿಗಳ ಆಗಮನದಲ್ಲಿ ಎಲ್ಲರೂ ಇದ್ದಾರೆ. ಆದರೆ ಇದೆಲ್ಲಿಂದ ಬಂದಿತೋ ಗೂಳಿ? ಗೂಳಿ ಎಂದಮೇಲೆ ಆಮಂತ್ರಣ ಬೇಕೇ? ಹದಿನೈದು ಸೆಕೆಂಡುಗಳ ಈ ವಿಡಿಯೋ ಅನ್ನು ನೆಟ್ಟಿಗರು ಅವಾಕ್ಕಾಗಿ ನೋಡುತ್ತಿದ್ದಾರೆ. ಎಲ್ಲಿ ನುಗ್ಗಿ ಏನು ಹಾನಿ ಮಾಡುತ್ತದೆಯೋ ಎಂಬ ಆತಂಕ ಉಂಟಾಗದೇ ಇರದು.

ಇದು ಒಳಬರುತ್ತಿದ್ದಂತೆ ಯಾರೋ ಒಬ್ಬರು ಕೈಸನ್ನೆಯಿಂದ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅದನ್ನು ಓಡಿಸುವುದಕ್ಕಿಂತ ತನ್ನನ್ನು ತಾ ರಕ್ಷಿಸಿಕೊಳ್ಳುವುದೇ ಮೇಲು ಎನ್ನಿಸಿದಂತಿದೆ. ಗಾಜಿನಿಂದ ಅಲಂಕರಿಸಿದ ಕೌಂಟರಿನ ಕಡೆ ಓಡುತ್ತದೆ. ನೆಟ್ಟಿಗರಂತೂ ಈ ವಿಡಿಯೋ ಅನ್ನು ಉಸಿರು ಬಿಗಿಹಿಡಿದು ನೋಡಿದ್ದಾರೆ. ಸದ್ಯ ಬೇಗ ಇದು ಮರಳಿದೆ. ಇಲ್ಲವಾದಲ್ಲಿ ಧ್ವಂಸ ಮಾಡದೇ ಇದು ಜಾಗ ಖಾಲಿ ಮಾಡುವ ಜಾಯಮಾನದ್ದು ಅಲ್ಲ ಎಂದಿದ್ದಾರೆ ಹಲವರು.

ಅದೃಷ್ಟ ಚೆನ್ನಾಗಿದೆ ಮದುವೆ ಮನೆಯವರದು. ಗೂಳಿಯೊಳಗೂ ಸಂಭಾವಿತತನ ಇದ್ದಹಾಗಿದೆ. ಸದ್ಯ ಎಲ್ಲಾ ಬಚಾವ್​ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:58 pm, Sat, 10 December 22

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ