Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿ ಜೀವನ, ಸತ್ತ ಪ್ರಾಣಿಯನ್ನು ತಿನ್ನುವ ಮಹಿಳೆ

ತಮ್ಮ ಆಲೋಚನೆಗೆ ತಕ್ಕಂತೆ ಜೀವನ ನಡೆಸುವ ಹಲವು ಮಂದಿಯನ್ನು ನಾವು ಜಗತ್ತಿನಲ್ಲಿ ನೋಡುತ್ತಿರುತ್ತೇವೆ. ಕೆಲವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಆದರೆ ಕೆಲವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಕೆಲವು ಮಂದಿ ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸರಳವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿ ಜೀವನ, ಸತ್ತ ಪ್ರಾಣಿಯನ್ನು ತಿನ್ನುವ ಮಹಿಳೆ
ಮ್ಯಾಂಡರ್ಸ್​Image Credit source: News 18
Follow us
ನಯನಾ ರಾಜೀವ್
|

Updated on: Dec 07, 2023 | 11:20 AM

ತಮ್ಮ ಆಲೋಚನೆಗೆ ತಕ್ಕಂತೆ ಜೀವನ ನಡೆಸುವ ಹಲವು ಮಂದಿಯನ್ನು ನಾವು ಜಗತ್ತಿನಲ್ಲಿ ನೋಡುತ್ತಿರುತ್ತೇವೆ. ಕೆಲವರು ಐಷಾರಾಮಿ ಜೀವನವನ್ನು ಬಯಸುತ್ತಾರೆ ಆದರೆ ಕೆಲವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ ಮತ್ತು ಕಡಿಮೆ ಸಂಪನ್ಮೂಲಗಳೊಂದಿಗೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಕೆಲವು ಮಂದಿ ಸಾಕಷ್ಟು ಸಂಪತ್ತನ್ನು ಹೊಂದಿದ್ದರೂ ಸರಳವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ಕಾರಣವಾಗಿದೆ. ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.

ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಕಾಡಿನಲ್ಲಿ ಹೋಗಿ ವಾಸಿಸುವವರನ್ನು ನೀವು ಎಲ್ಲಾದರೂ ನೋಡಿದ್ದೀರಾ. ಈ ಮಹಿಳೆಗೆ ಬಡತನವಿಲ್ಲ ಆದರೂ ಕಾಡಿನಲ್ಲಿ ಅಲೆಮಾರಿಯಂತೆ ಕುದುರೆಯ ಮೇಲೆ ಸುತ್ತಾಡುತ್ತಿರುತ್ತಾಳೆ. ಸತ್ತ ಪ್ರಾಣಿಗಳನ್ನೇ ತಿನ್ನುತ್ತಾಳೆ.

ಮಹಿಳೆ ತನ್ನದೇ ಆದ ಮನೆಯನ್ನು ಕೂಡ ಮಾಡಿಕೊಂಡಿಲ್ಲ, ದಿನದ 24 ಗಂಟೆಯೂ ಸುತ್ತಾಡುತ್ತಲೇ ಇರುತ್ತಾಳೆ. ಆಕೆಯ ಪ್ರಕಾರ ಇದೇ ಸುಖಕರವಾದ ಜೀವನ. ಮಹಿಳೆಯ ಹೆಸರು ಮ್ಯಾಂಡರ್ಸ್ ಬರ್ನೆಟ್ ಮತ್ತು ಆಕೆಯ ವಯಸ್ಸು 32. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಮಾಂಡರ್ಸ್ ಕಳೆದ 4 ವರ್ಷಗಳಿಂದ ಇದೇ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಆಕೆ ಆಧುನಿಕ ಜೀವನದಿಂದ ಬೇಸರಗೊಂಡಿದ್ದಾಳೆ ಮತ್ತು ಅವಳ ಹೃದಯ ಮತ್ತು ಆತ್ಮವು ಪ್ರಕೃತಿಯಲ್ಲಿ ನೆಲೆಸಿದೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ಓದಿ: Viral Video: ಈ ರೆಸ್ಟೋರೆಂಟ್​​ನಲ್ಲಿ ಕಪಾಳಮೋಕ್ಷ ಸ್ಪೆಷಲ್​​ ಮೆನು

ಜುಲೈ 2019ರಲ್ಲಿ ಮನೆ ಬಿಟ್ಟು ಕುದುರೆ ಮೇಲೆ ಓಡಾಟ ಆರಂಭಿಸಿದ್ದಾರೆ, ಮುಂದಿನ 6 ವರ್ಷಗಳನ್ನು ಹೀಗೆ ಕಳೆಯಲು ಬಯಸಿದ್ದಾರೆ. ಒಂದು ದಿನ, ಇಡಾಹೊ ನಿವಾಸಿಯಾದ ಮಾಂಡರ್ಸ್, ವರ್ಷಗಳಿಂದ ಕುದುರೆಯ ಮೇಲೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾದರು. ಅವರ ಜೀವನಶೈಲಿಯಿಂದ ಅವಳು ತುಂಬಾ ಪ್ರಭಾವಿತಳಾಗಿದ್ದರು, ಅಂದೇ ತಮ್ಮ ಕೆಲಸವನ್ನು ತೊರೆದಿದ್ದರು.

ಸತ್ತ ಪ್ರಾಣಿಗಳನ್ನು ತಿನ್ನುತ್ತಾರೆ ಮ್ಯಾಂಡರ್ಸ್ ಬರ್ನೆಟ್ ಇಡಾಹೋದಿಂದ ಒರೆಗಾನ್‌ಗೆ 500 ಮೈಲುಗಳಷ್ಟು ಪ್ರಯಾಣಿಸಿದರು. ಆದಾಗ್ಯೂ, ಅವರು ನಂತರ ಬೇರ್ಪಟ್ಟರು ಮತ್ತು ಈಗ ಮಾಂಡರ್ಸ್ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ.

ದಾರಿಯಲ್ಲಿ ಸತ್ತ ಪ್ರಾಣಿಗಳ ಮಾಂಸವನ್ನು ಆಹಾರಕ್ಕಾಗಿ ಬಳಸುತ್ತಾರೆ ಮತ್ತು ಅಡುಗೆಗಾಗಿ ಸೌದೆ ಒಲೆ ಬಳಸುತ್ತಾರೆ. ಸ್ನಾನಕ್ಕೆ, ಬಟ್ಟೆ ಒಗೆಯಲು ಬಾವಿಯ ನೀರನ್ನು ಬಳಸುತ್ತಾರೆ. ಸೋಲಾರ್ ಬ್ಯಾಟರಿಯಿಂದ ಫೋನ್ ಅನ್ನು ಚಾರ್ಜ್ ಮಾಡುತ್ತಾರೆ ಮತ್ತು ಮೊಬೈಲ್‌ನಲ್ಲಿ ಚಾನೆಲ್​ಗಳನ್ನು ಯಾವುದನ್ನೂ ನೋಡುವುದಿಲ್ಲ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !