Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ಅಮೇರಿಕಾದ ಬಿಲಿಯನೇರ್ ಮಹಿಳೆಯೊಬ್ಬರು  ಸಂದರ್ಶನವೊಂದರಲ್ಲಿ,  ತನ್ನ 17 ನೇ ವಯಸ್ಸಿನಲ್ಲಿ ತಮ್ಮದೇ ಸ್ವಂತ  ಕಂಪೆನಿಯಲ್ಲಿ ಉದ್ಯೋಗವನ್ನು ಪಡೆಯಲು ಸಂದರ್ಶನಕ್ಕಾಗಿ ಎರಡು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ತಮ್ಮ ಸಾಧನೆಯ ಕಠಿಣ ಹಾದಿಯನ್ನು ಕ್ರಮಿಸಿದ ಕಥೆಯನ್ನು  ಹೇಳಿಕೊಂಡಿದ್ದಾರೆ.  

Viral: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2024 | 5:22 PM

ಅಮೇರಿಕದ ಇನ್-ಎನ್-ಔಟ್ ಬರ್ಗರ್ ಕಂಪೆನಿಯ   ಉತ್ತರಾಧಿಕಾರಿಯಾದ  ಬಿಲಿಯನೇರ್ ಲಿನ್ಸಿ ಸ್ನೈಡರ್  ಇತ್ತೀಚಿಗೆ ಸಂದರ್ಶನೊಂದರಲ್ಲಿ ತಮ್ಮ ಸಾಧನೆಯ ಕಠಿಣ ಹಾದಿಯ ಬಗ್ಗೆ ಹಂಚಿಕೊಂಡಿದ್ದು, ತನ್ನ ಹದಿಹರೆಯದ ವಯಸ್ಸಿನಲ್ಲಿ ತಮ್ಮದೇ ಸ್ವಂತ ಕಂಪನಿಯಲ್ಲಿ ಉದ್ಯೋಗವನ್ನು  ಗಿಟ್ಟಿಸಿಕೊಳ್ಳಲು ಜಾಬ್ ಸಂದರ್ಶನಕ್ಕಾಗಿ 2 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಫೋರ್ಬ್ಸ್ ವರದಿಯ ಪ್ರಕಾರ ಪ್ರಸ್ತುತ 41 ವರ್ಷ ವಯಸ್ಸಿನ ಲಿನ್ಸಿ ಸ್ನೈಡರ್ 2024 ರಲ್ಲಿ $6.7 ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಮೇರಿಕಾದ ಬಿಲಿಯನೇರ್ ಗಳಲ್ಲಿ  ಒಬ್ಬರಾದ್ದಾರೆ. ಆದರೆ ಇವರ ಈ ಸಾಧನೆಯ ಹಾದಿಯು ತುಂಬಾನೇ ಕಠಿಣವಾಗಿತ್ತು. ಅಜ್ಜನ ಕಂಪನಿಯ ಮಾಲೀಕರಾಗಿ ತನ್ನ ಯೋಗ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ಲಿನ್ಸಿ 17 ನೇ ವಯಸ್ಸಿನಲ್ಲಿ ತನ್ನ ಸ್ವಂತ ಕಂಪೆನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ತನ್ನ ಉಪನಾಮವನ್ನು ಮರೆಮಾಚಿ ಉದ್ಯೋಗವನ್ನು ಗಿಟ್ಟಿಸಿಕೊಂಡ ಸ್ನೈಡರ್  ಈರುಳ್ಳಿಯನ್ನು ಕತ್ತರಿಸುವುದರಿಂದ ಹಿಡಿದು ಸೊಪ್ಪುಗಳನ್ನು ವಿಂಗಡಿಸುವುದರವರೆಗೆ ತನ್ನ ಸ್ವಂತ ಕಂಪನಿಯಲ್ಲಿ ಸಣ್ಣ ಪುಟ್ಟ ಕೆಲಸವನ್ನು ಸಹ ಮಾಡಿದ್ದಾರೆ.  ನಂತರ 2010 ರಲ್ಲಿ ತನ್ನ 27 ವಯಸ್ಸಿನಲ್ಲಿ ಸ್ನೈಡರ್ ತನ್ನ ಅಜ್ಜ 1948 ರಲ್ಲಿ ಪ್ರಾರಂಭಿಸಿದ ಕಂಪೆನಿಯ ನಾಯಕತ್ವವನ್ನು ವಹಿಸಿಕೊಂಡರು.

ಇದನ್ನೂ ಓದಿ: ವಿಷಕಾರಿ ಸರ್ಪದೊಂದಿಗೆ ಗೆಳೆಯನಿಗಾಗಿ ಹೋರಾಟ ಮಾಡಿದ ಅಳಿಲು , ಮುಂದೇನಾಯ್ತು ನೋಡಿ

ಸ್ನೈಡರ್ ಅವರ ಅಜ್ಜ ಹ್ಯಾರಿ ಸ್ನೈಡರ್ ಡಿಸೆಂಬರ್ 1976 ರಲ್ಲಿ ನಿಧನರಾದರು, ನಂತರ ಅವರ ಪುತ್ರರಾದ ರಿಚ್ ಮತ್ತು ಗೈ ಕಂಪನಿಯನ್ನು ನಡೆಸಲು ಆರಂಭಿಸಿದರು. ಲಿನ್ಸಿಯ ಚಿಕ್ಕಪ್ಪ ರಿಚ್ ಸ್ನೈಡರ್, 1993 ರಲ್ಲಿ ಆರೆಂಜ್ ಕೌಂಟಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಮತ್ತು ಆಕೆಯ ತಂದೆ 1999 ರಲ್ಲಿ ನಿಧನರಾದರು. ಬಳಿಕ ಕುಟುಂಬದ ಏಕೈಕ ಕುಡಿಯಾಗಿದ್ದ ಲಿನ್ಸಿ ತಮ್ಮ ಬರ್ಗರ್ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂಬ ಕಾರಣದಿಂದ ತನ್ನ 17 ನೇ ವಯಸ್ಸಿನಲ್ಲಿ ತಮ್ಮದೇ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಇಗೀಗ ಆಕೆ ಕಠಿಣ ಹಾದಿಯನ್ನು ಕ್ರಮಿಸಿ ಅಮೇರಿಕಾದ ಬಿಲಿಯನೇರ್ ಗಳಲ್ಲಿ ಒಬ್ಬರಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಲಿಂಗಾಯತರು ಬಿಜೆಪಿನ ಪುನಃ ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದರು: ಸ್ವಾಮೀಜಿ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್