AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿ ಫಸ್ಟ್​ನೈಟ್​ ದಿನ ಬೆಡ್​ರೂಮ್​ನಲ್ಲಿ ನವ ದಂಪತಿಯೊಂದಿಗೆ ವಧುವಿನ ತಾಯಿಯೂ ಇರಬೇಕು, ವಿಚಿತ್ರವಾದರೂ ಸತ್ಯ

ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುವ ಸಂಪ್ರದಾಯವೊಂದು ಇದೆ. ಇಂತಹ ವಿಚಿತ್ರ ವಿವಾಹ ಸಂಪ್ರದಾಯ ಇರುವುದು ಆಫ್ರಿಕಾದಲ್ಲಿ.

ಇಲ್ಲಿ ಫಸ್ಟ್​ನೈಟ್​ ದಿನ ಬೆಡ್​ರೂಮ್​ನಲ್ಲಿ ನವ ದಂಪತಿಯೊಂದಿಗೆ ವಧುವಿನ ತಾಯಿಯೂ ಇರಬೇಕು, ವಿಚಿತ್ರವಾದರೂ ಸತ್ಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 14, 2022 | 7:07 PM

Share

ಪ್ರಪಂಚದ ಅನೇಕ ದೇಶಗಳಲ್ಲಿ ಅನೇಕ ರೀತಿಯ ಮದುವೆ ಸಂಪ್ರದಾಯಗಳು ಚಾಲ್ತಿಯಲ್ಲಿದೆ. ಕೆಲವೊಂದು ಸಂಪ್ರದಾಯಗಳು ವಿಭಿನ್ನವಾಗಿದ್ದರೆ ಕೆಲವೊಂದು ಅಸಂಬದ್ಧತೆಯಿಂದ ಕೂಡಿರುತ್ತದೆ. ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಇಂತಹ ಅಸಂಬದ್ಧತೆಯ ವಿವಾಹ ಆಚರಣೆಯನ್ನು ಅನುಸರಿಸಲಾಗುತ್ತದೆ. ಈ ಆಚರಣೆಯ ಪ್ರಕಾರ, ಮದುವೆಯ ನಂತರದ ಮೊದಲ ರಾತ್ರಿಯಲ್ಲಿ ವಧುವಿನ ತಾಯಿ ನವ ದಂಪತಿಯೊಂದಿಗೆ ಇರುತ್ತಾರೆ. ವಧುವಿನ ತಾಯಿ ಇಲ್ಲದಿದ್ದರೆ ಅವರ ಕುಟುಂಬದ ವಯಸ್ಸಾದ ಮಹಿಳೆ ಅವರೊಂದಿಗೆ ಇರಲೇಬೇಕು. ಇದು ಅಚ್ಚರಿಯಾದರೂ ಸತ್ಯ.

ನವ ದಂಪತಿಯೊಂದಿಗೆ ಮದುವೆಯ ಆಚರಣೆಯು ಯಾವ ವಿಶೇಷ ಉದ್ದೇಶವನ್ನು ಪೂರೈಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ವರದಿಯ ಪ್ರಕಾರ, ವಧುವಿನ ತಾಯಿ ಅಥವಾ ವಯಸ್ಸಾದ ಮಹಿಳೆ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಅವರು ತಮ್ಮ ಜೀವನವನ್ನು ಹೇಗೆ ಸಂತೋಷದಿಂದ ಕಳೆಯಲಿದ್ದಾರೆ ಎಂಬುದನ್ನು ವಿವರಿಸುತ್ತಾರೆ. ಅಲ್ಲದೆ ಮೊದಲ ರಾತ್ರಿಯನ್ನು ಕಳೆಯುವ ವಿಧಾನವನ್ನು ಕೂಡ ವಧುವಿಗೆ ವಿವರಿಸಲಾಗುತ್ತದೆ. ಮೊದಲ ರಾತ್ರಿ ಕಳೆದ ನಂತರ ವಧುವಿನ ತಾಯಿ ಅಥವಾ ಹಿರಿಯ ಮಹಿಳೆ ದಂಪತಿ ಸಂತೋಷದ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದಾರೆ ಎಂದು ಖಚಿತಪಡಿಸುತ್ತಾರೆ.

ಇನ್ನು, ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯವಿದೆ. ನವ ದಂಪತಿಗಳು ವಾಶ್‌ರೂಮ್‌ಗೆ ಹೋಗದೆ ಮೂರು ದಿನಗಳವರೆಗೆ ಇರಬೇಕು ಎನ್ನುವುದು ಈ ಸಂಪ್ರದಾಯ ಹೇಳುತ್ತದೆ. ವರದಿಯ ಪ್ರಕಾರ, ವಿವಾಹಿತ ದಂಪತಿಗಳು ಸಂತೋಷ ಮತ್ತು ದೀರ್ಘಾವಧಿಯ ದಾಂಪತ್ಯವನ್ನು ಆನಂದಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ದಂಪತಿಗಳು ಪರೀಕ್ಷೆಯಲ್ಲಿ ವಿಫಲರಾದರೆ ದಂಪತಿಗಳು ಬೇರೆಬೇರೆಯಾಗುತ್ತಾರೆ.

ಜನರ ಗುಂಪು ದಂಪತಿಯನ್ನು ಮೇಲ್ವಿಚಾರಣೆ ಮಾಡುತ್ತದೆ, ದಂಪತಿಗೆ ವಾಶ್ ರೂಂ ಬಳಸುವ ಬಯಕೆ ಬರದಂತೆ ಅವರು ಸ್ವಲ್ಪ ಪ್ರಮಾಣದ ಆಹಾರ ಮತ್ತು ನೀರನ್ನು ನೀಡುತ್ತಾರೆ. ಅಷ್ಟಕ್ಕೂ ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿರುವವರು ಟಿಡಾಂಗ್ ಬುಡಕಟ್ಟು ಜನಾಂಗದವರು. ಈ ಜನಾಂಗವು ಇಂಡೋನೇಷ್ಯಾ ಮತ್ತು ಮಲೇಷ್ಯಾ ನಡುವಿನ ಗಡಿಯ ಸಮೀಪವಿರುವ ಬೋರ್ನಿಯೊದ ಈಶಾನ್ಯ ಪ್ರದೇಶಕ್ಕೆ ಸೇರಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?