AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ

ಬಾಲಕ ಸಂದೇಶ ಬರೆಯುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದ್ದು, ಬಾಲಕನ ಪ್ರಾರ್ಥನೆಗೆ ಮತ್ತು ಸೋಂಕಿತರು ಬೇಗ ಚೇತರಿಸಿಕೊಳ್ಳಲಿ ಎಂಬ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ
ಕೊರೊನಾ ಸೋಂಕಿತರಿಗೆ ಬಾಲಕನ ಸಂದೇಶ
shruti hegde
|

Updated on:May 19, 2021 | 3:42 PM

Share

ಕೊರೊನಾ ಸೋಂಕಿತರಿಗಾಗಿ ತನ್ನ ತಾಯಿ ಸಿದ್ಧಪಡಿಸಿದ ಊಟದ ಡಬ್ಬಿಯ ಮೇಲೆ ಬಾಲಕ ಬರೆದ ವಿಶೇಷ ಸಂದೇಶ ಇದೀಗ ನೆಟ್ಟಿಗರ ಹೃದಯ ಗೆದ್ದಿದೆ. ಬಾಲಕ ಸಂದೇಶ ಬರೆಯುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗುತ್ತಿದ್ದು, ಬಾಲಕನ ಪ್ರಾರ್ಥನೆಗೆ ಮತ್ತು ಸೋಂಕಿತರು ಬೇಗ ಚೇತರಿಸಿಕೊಳ್ಳಲಿ ಎಂಬ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪುಟ್ಟ ಬಾಲಕನಿಗೆ ಸಮಾಜದಲ್ಲಿ ಎದುರಾಗುತ್ತಿರುವ ಸಮಸ್ಯೆಯ ಕುರಿತು ಅರಿವಿದೆ. ಆತನೂ ಕೂಡಾ ಈ ಕುರಿತಂತೆ ಚಿಂತಿಸಿದ್ದಾನೆ. ಏನೂ ಅರಿಯದ ಆ ತಿಳಿ ವಯಸ್ಸಿನಲ್ಲಿ ಸೋಂಕಿನಿಂದ ಬಳಲುತ್ತಿರುವವರ ಕಷ್ಟದ ಅರಿವು ಆ ಬಾಲಕಿನಿಗೆ ಆಯಿತಲ್ಲಾ ಎಂಬುದು ಆಶ್ಚರ್ಯವೆನಿಸುತ್ತದೆ. ಆ ಬಾಲಕನ ಮನಸ್ಸಿನಿಂದ ಬಂದ ಸಂದೇಶ ಎಲ್ಲರ ಮನಮುಟ್ಟುವಂತಿದೆ.

ಹಚ್ಚಹಸಿರು ಶರ್ಟ್​ ಧರಿಸಿದ ಬಾಲಕ, ತನ್ನ ಅಮ್ಮ ಕೊರೊನಾ ಸೋಂಕಿತರಿಗಾಗಿ ತಯಾರಿಸಿದ ಊಟದ ಡಬ್ಬಿಯ ಮೇಲೆ ‘ ಖುಷ್​ ರಹೀಯೆ’ (ಖುಷಿಯಾಗಿರಿ) ಎಂಬ ಸಂದೇಶವನ್ನು ಬರೆಯುತ್ತಾನೆ. ಮೇಜಿನ ಮೇಲಿರುವ ಎಲ್ಲಾ ಡಬ್ಬಿಯ ಮೇಲೂ ಈ ಎರಡು ಪದಗಳನ್ನು ಬರೆದು ನಗುಮುಖದ ಇಮೋಜಿ ಚಿತ್ರವನ್ನು ಬಿಡಿಸುತ್ತಾನೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಆದ ಈ ಬಾಲಕನ ವಿಡಿಯೋ 12,000ಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ನೂರಾರು ಕಾಮೆಂಟ್ಸ್​ಗಳು ಕೂಡಾ ಬಂದಿವೆ. ಬಾಲಕನ ವಿಶೇಷ ಸಂದೇಶ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ವಾಹ್​.. ಎಂತಹ ಮುದ್ದಾದ ಬಾಲಕ, ಸುಂದರವಾದ ಕೈ ಬರಹ’ ಎಂದು ಶ್ಲಾಘಿಸಿದ್ದಾರೆ. ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದು, ‘ಸೋ ಸ್ವೀಟ್​.. ಇವನ ಮುಂದಿನ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಈ ಪುಟ್ಟ ಬಾಲಕನ ಮಾನವೀಯತೆ ಎಲ್ಲಾ ಸುದ್ದಿ ವಾಹಿನಗಳಲ್ಲಿ ಮುಖ್ಯಾಂಶವಾಗಿದೆ.!

Published On - 3:37 pm, Wed, 19 May 21

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ